Saturday 5 December 2015

ರಾತ್ರಿ ೮ ಘಂಟೆ ಹತ್ತಿರ ಆಗಿತ್ತು. ಮಂಜು ಟಿವಿ ನೋಡ್ತಾ ಇದ್ರು  ಅವರ ಪಕ್ಕ ಎಂದಿನಂತೆ ನಾನೂ ಪೇಪರ್ ಓದ್ತಾ  ಕೂತ್ತಿದ್ದೆ . ಕಾರ್ತಿ ಅವನ ಕಾಲೇಜ್ ಇಂದ industrial ವಿಸಿಟ್ ಅಂತ ಮೈಸೂರಿನ ಒಂದು ಕಾರ್ಖಾನೆಗೆ ಹೋಗಿದ್ದವನು ಬಂದ.  ಬಂದು ಅವರಪ್ಪನ ಹೆಗಲಿಗೆ ತಲೆ ಒರಗಿಸಿ ಕೂತ. ಯಾಕೋ ಆಯಾಸದಿಂದ ಇರೋ ಹಾಗೆ ಕಾಣ್ತಾ ಇದ್ದ. 'ಯಾಕ್  ಮಗ ಸುಸ್ತಾಯ್ತ ' ಅಂತ ಮಂಜು ಮಗನ ತಲೆ ಸವರ್ತಾ ಕೇಳಿದ್ರು . 'ಏನಿಲ್ಲಪ್ಪ' ಅಂದ. ಒಂದೆರದು ನಿಮಿಷ ಸುಮ್ಮನಿದ್ದು ಮತ್ತೆ ದಿನದ ಪ್ರವರ ಶುರು ಮಾಡಿದ . 'ಮಾ, ಎಷ್ಟ್ ದೊಡ್ಡ ಫ್ಯಾಕ್ಟರಿ ಗೊತ್ತಾಮ ಅದು. ಒಳಗೆ ಹೋದ್ವ , ಅಲ್ಲಿನ ಟೆಕ್ ಗಳು ನೀವು ಇನ್ನು ಚಿಕ್ಕವರು ಮುಂದಿನ ವರ್ಷ ಬರ್ಬೇಕಿತ್ತು ಅಂತ ಶುರು ಮಾಡಿದ್ರು . ಎಲ್ಲಾ ಮಷೀನ್ಗಳ ಬಗೆ ಹೇಳ್ತಾ ಹೋದ್ರು . ಕೆಲವು ಕಡೆ (ಡಿವಿಷನ್) ಒಳಗೂ ಬಿಡಲಿಲ್ಲ . ಏನ್ ಗೊತ್ತ ಮಾ, ನಮಗೆ ಹೇಳಿಕೊಟ್ಟ ಯಾರೂ ಇಂಜಿನಿಯರ್ಗಳಲ್ಲ . ಎಲ್ಲಾ ಡಿಪ್ಲೋಮಾ ಮತ್ತು ITI ಅವರೇ' 'ಇಂಗ್ಲಿಷ್ ಅಲ್ಲಿ ಹೇಳಿದ್ರಾ ಮಗ'  ' ಏ ಮಾ, ಅವರಿಗೆ ಗೊತ್ತಿದ್ದ ಇಂಗ್ಲಿಷ್ ಅಲ್ಲೇ ಹೇಳಿದ್ರು , ಆದ್ರೂ ಅಪ್ಪ , ಅವರಿಗೆ ಇರೋ ಅಷ್ಟು ಪ್ರಾಕ್ಟಿಕಲ್ ಜ್ಞಾನ ನಮಗೆ ಇಲ್ವೆ ಇಲ್ಲ ಬಿಡು . ಎಲ್ಲಾ ನನ್ನ ವಯಸ್ಸಿಗಿಂತ ಜಾಸ್ತಿ ವರ್ಷ ಸರ್ವಿಸ್ ಆಗಿರೋರು , ಅದೆಷ್ಟ್ knowledge ಇದೆ ಅಂತೀಯ ಸಬ್ಜೆಕ್ಟ್ ಅಲ್ಲಿ ಏನಾದ್ರೂ ಪ್ರಶ್ನೆ ಇದ್ರೆ ಕೇಳಿ ಅಂದ್ರು , ನಾವೂ ಏನೇನೋ ಕೇಳಿದ್ವಿ ' ಅಂತೆಲ್ಲ ಹೇಳ್ತಾ ಹೋದ. ನಾವೂ ಕೇಳ್ತಾನೆ ಹೋದ್ವಿ
'ಅಪ್ಪ , ನಾನೂ ಇಂಜಿನಿಯರಿಂಗ್ ಬದ್ಲು ಡಿಪ್ಲೋಮೊ ಮಾಡಬೇಕಿತ್ತೇನೋ ಕಣಪ್ಪ , ತಪ್ ಮಾಡಿಬಿಟ್ಟೆ' ಅಂದ. ವರುಷಗಳಿಂದ ಬಲು ಆಸೆ ಪಟ್ಟು ಅವನೇ ಸೇರಿದ ಕೋರ್ಸ್!!! ಈಗ ಹೀಗಂದ್ರೆ ಅಂತ ಯಾಕೋ ಒಂದ್ ತರ ಆಯ್ತು 'ಯಾಕ್ ಮಗ' 'ಮಾ  ಆ ಫ್ಯಾಕ್ಟರಿ ಅಲ್ಲಿ ಒಂದ್ ಮಾತು ಹೇಳಿದ್ರು ಕಣಮ್ಮ placement ಬಗ್ಗೆ ಕೇಳಿದಕ್ಕೆ , ಇಂಜಿನಿಯರ್ಗಳನ್ನ ತಗೊಳೋ ಬದ್ಲು ಡಿಪ್ಲೋಮಾ ಅಥವಾ ITI ಅವರನ್ನ ತಗೊಂಡ್ರೆ ೫ ಸಾವಿರದಲ್ಲಿ ಅದೇ ಕೆಲ್ಸ ಆಗೋಗುತ್ತೆ. ನಾವು ಡೈಲಿ ವೇಜ್ ಆಗಿ ತಗೊಂಡರು  ನಡಿತದೆ , ಅದೇ ಇಂಜಿನಿಯರ್ಗಳಾದರೆ ಜಾಸ್ತಿ ಕೊಡಬೇಕು... (ಮತ್ತೊಂದೆರಡು ಸೆನ್ಸಿಟಿವ್ ವಿಷ್ಯ ) ನಿಮ್ಗಳಿಗೆ  ಪ್ರಾಕ್ಟಿಕಲ್ ಆಗಿ ಏನೂ ಗೊತ್ತಿರೋದಿಲ್ಲ, ಜೊತೆಗೆ ಅವರುಗಳಾದ್ರೆ ಏನ್ ಹೇಳಿದ್ರೂ ಮಾಡ್ತಾರೆ. ನೀವ್ಗಳು ನಾ ಇಂಜಿನಿಯರ್ ಅದನ್ನ ಮಾಡ್ಲ ಅಂತೀರಾ , ಇತ್ಯಾದಿ ಇತ್ಯಾದಿ' ಹೇಳ್ತಾ ಹೋದ .ಅವನು ಹೇಳಿದ್ದನ್ನೆಲ್ಲ ಕೇಳಿದ ಮೇಲೆ ಮಂಜು  ' ಮಗ, ನೀ ತಗೊಂಡಿರೋದು ನಿನ್ನ ಪ್ರೀತಿಯ ವಿಷ್ಯ. ಅದನ್ನೇ ತುಂಬಾ ಚೆನ್ನಾಗಿ ಕಲಿ, ಮನಸಿಟ್ಟು  ಕಲಿ. ಆಮೇಲೆ ಮುಂದೆ ಓದೋದೋ ಕೆಲ್ಸಕ್ಕೆ ಸೇರೊದೊ ನೋಡಿದರೆ ಆಯ್ತು, ಸುಮ್ಸುಮ್ನೆ ಈಗಲೇ ಬೇಡದ್ದು ತಲೆಗೆ ತಗೋಬೇಡ, ....etc, etc ' ಅಂದ್ರು. ಅದೆಷ್ಟ್ ತಲೆಗೆ ಹೋಯ್ತೋ ಗೊತ್ತಿಲ್ಲ . 'ಅಲ್ಲ ಕಣಪ್ಪ , ನೋಡು ಈವತ್ತು ನನ್ನ ಹಾಗೆ  ನನ್ನ classmates ಕೂಡ ಯೋಚಿಸಿರ್ತಾರೆ ಅಲ್ವ , ಅದೆಷ್ಟ್ competition ಅಲ್ವ' ಅಂದ.
ಅವನು ಊಟ ಮಾಡಿ ಹೋದ ಮೇಲೆ ಮಂಜು ಕಣ್ಣು ತುಂಬಿಕೊಂಡರು 'ಇನ್ನು ಈಗ ಹುಟ್ಟಿದ ಅನ್ನೋ  ಹಾಗೆ ಸುನಿ ಇವ್ನು .. ಅದೆಷ್ಟಲ್ಲಾ  ಇದೆ ಅಲ್ವ ಈ ಪುಟ್ಟ ತಲೆಯಲ್ಲಿ.. ಅಪ್ಪ ಅಮ್ಮ ಕಲಿಸದೆ ಇರೋದನ್ನ ಪ್ರಪಂಚ(ಬದುಕು) ಕಲಿಸ್ತಾ ಹೋಗುತ್ತೆ ' ಅಂದ್ರು ..
ಮನಸ್ಸು ಒಂದ್ ತರ ಮೂಡದ ಮರೆಯಲ್ಲಿ ಇಣುಕೋ ಸೂರ್ಯನ ಮೇಲೆ ಭರವಸೆ ಇಡು ಅನ್ನೋ ಹಾಗೆ ..........
Proud of bleeding Angry of bleeding .... ಇವೆಲ್ಲ ನನಗ ಅರ್ಥ ಆಗೋದಿಲ್ಲ . ನಾ ಒಬ್ಬಹೆಣ್ಣಾಗಿ, ಹೆಂಡತಿಯಾಗಿ , ತಾಯಿಯಾಗಿ, ವೈದ್ಯೆಯಾಗಿ ಋತುಚಕ್ರ ಅಂದ್ರೆ ಒಂದು ಹೆಣ್ಣಿನ ಸ್ವಾಭಾವಿಕ ಆರೋಗ್ಯದ ಸೂಚಕ ಎಂಬ ಅರಿವಿದೆ ..ತವರಿನಲ್ಲಿ ತುಂಬಾನೇ ಲಿಬರಲ್ ಆಗಿ ಬೆಳೆದ ನಾನು ಮದ್ವೆ ಆಗಿ ಹೋದಾಗ ಅವರ ಮನೆಯ ನಂಬಿಕೆಯಂತೆ 'ಆ ೩ ದಿನ' ದೇವರ ಮನೆಗೆಲ್ಲ ಹೋಗ್ತಾ ಇರಲಿಲ್ಲ, and i never opposed it also.. ನನಗೆ ಅದರ ಬಗ್ಗೆ ಯಾವ್ದೇ ಇಶ್ಯೂಸ್ ಇರಲಿಲ್ಲ. ಮಂಜುಗೆ ಇಂತಹ ವಿಷಯದಲ್ಲಿ ತುಂಬಾನೇ ನಂಬಿಕೆ . ಆದ್ರೆ ಪುಟ್ಟಿಯ ಜೊತೆ ಹಾಗಾಗಲಿಲ್ಲ . 'ಹಂಗೆಲ್ಲ ಯಾಕಮ್ಮ ' ಅಂತ ಪುಟ್ಟಿ ಕೇಳೋವಾಗ ಹಿಂಸೆ ಅನಿಸ್ತ ಇತ್ತು ಒಬ್ಬ ವೈದ್ಯೆಯಾಗಿ , ನಾ ಅವಳಿಗೆ ಎಲ್ಲಾ ತಿಳಿಸಿ ಕೊಟ್ಟೆ . ಹಾಗೆ ಒಬ್ಬ ಅಮ್ಮನಾಗಿ ಮನೆಯ ಸಾಮರಸ್ಯಕ್ಕೆ ಧಕ್ಕೆ ಬಾರದಂತೆ ಅವರಪ್ಪನ ನಂಬಿಕೆಯನ್ನ ಕೂಡ ಹೇಳಿದೆ . ಮನವರಿಕೆ ಮಾಡೋಕೆ ಪ್ರಯತ್ನಿಸಿದೆ.. 'ನೋಡು ಮಗ, This is just a physiological phenomenon ,u wil know how healthy yr genitourinary system is when u bleed ನನಗೆ ನೀನು ಏನು ಮಾಡಿದ್ರು ಬೇಸರ ಇಲ್ಲ ನಿನಗೆ guilt ಇರಬಾರದು ಅಷ್ಟೇ. ನೀ ಇಲ್ಲ ನಾ ಹೋಗೆ ಹೋಗ್ತೀನಿ ದೇವರ ಮನೆಗೆ, ಮುಟ್ತೀನಿ ಅಂದ್ರೆ ನನಗೆ ಬೇಸರ ಇಲ್ಲ. ನಾ ನಿನ್ನ ಜೊತೆ ಇರ್ತೀನಿ , ಆದ್ರೆ ಅಪ್ಪನಿಗೆ ಅನವಶ್ಯಕ ನೋವು v cannot change him and we need not hurt him. becoz he is our own...' ಅಂದೆ . ಪುಟ್ಟಿ ಈಗ ಸಂತೃಪ್ತೆ ಈ ವಿಷಯದಲ್ಲಿ . ಮಾನಸಿಕವಾಗಿ ಅವಳು ಆರೋಗ್ಯವಾಗಿದ್ದಾಳೆ . ನನಗೆ ಬೇಕಾಗಿದ್ದಿದ್ದೂ ಕೂಡ ಅವಳ ಸ್ಥಿರತೆ , ಸಂಯಮ, ಮತ್ತು ಖುಷಿ... ಮತ್ತೆ ಅಪ್ಪ ಮಗಳ ಮಧ್ಯೆ ಈ ಅನವಶ್ಯಕ ವಿಷಯಕ್ಕೆ ಮಾತು ಬೇಡ ಅನ್ನೋದು ನನ್ನ ಇಚ್ಛೆಯಾಗಿತ್ತು ಕೂಡ , ಹಾಗೆ ಮಂಜು ಕೂಡ ಬೇಸರಗೊಳ್ಳಬಾರದೆಂಬ ಇಚ್ಛೆ ಇತ್ತು .. ನಾ ಅದೆಷ್ಟು ಸರಿ ಅದೆಷ್ಟು ತಪ್ಪು ಅನ್ನೋದು ನನಗೆ ತಿಳಿಯದು . ಆದ್ರೆ ಒಬ್ಬ ಅಮ್ಮನಾಗಿ, ಒಬ್ಬ ವೈದ್ಯೆಯಾಗಿ, ಒಬ್ಬ ಹೆಂಡತಿಯಾಗಿ ನನಗೆ ನಾ ಏನು ಮಾಡಿದೆ ಮತ್ತು ಯಾಕೆ ಮಾಡಿದೆ ಅನ್ನೋ ಅರಿವಿದೆ . moreover, menstruation ಅನ್ನೋದು ಒಂದು ದೈಹಿಕ, ಮಾನಸಿಕ, ಅಥವಾ ದೈವಿಕ ಖಾಯಿಲೆ ಅಲ್ಲ ಅನ್ನೋ ಅರಿವಿದೆ .....
 ಹೀಗೊಂದಷ್ಟು ಸಣ್ಣ ಕಥೆಗಳು 
1.'ಪ್ರೀತಿಗೆ ನಾಳೆಗಳಿಲ್ಲ ' ಅಂದ್ಲು ಅವಳು .. 
'ಆದರೂ ನಾಳೆಗಳಿಲ್ಲದ ಪ್ರೀತಿಯೂ ಇದೆ , ನಮ್ಮದರಂತೆ ' ಅಂದ್ಲು ಇವಳು...
ನಿಜವೇನೋ !!!!!

2.'ನಿನ್ನ ಭುಜದ ಮೇಲೆ ತಲೆಯಿಟ್ಟು ಒಂದಷ್ಟು ಹೊತ್ತು ಕೂರಬೇಕು '
'ಅಷ್ಟೇನಾ ' ಕಣ್ಣಲ್ಲಿ ಅದೇ ತುಂಟತನ 
'ಹೂಂ, ಅಷ್ಟೇ .. ಅದೆಷ್ಟೋ ವರ್ಷಗಳಾಗಿತ್ತು ಅಲ್ವ ನಾವಿಬ್ಬರೇ ಹೀಗೆ ಏಕಾಂತವಾಗಿ ಇದ್ದು '
'ಮದ್ವೆಗೆ ಮೊದಲೇನೋ ....."
ಮಕ್ಕಳ ಜವಾಬ್ದಾರಿ ಮುಗಿಸಿ ನಿರಾಳವಾಗಿ ಕುಳಿತ ಇಬ್ಬರ ಮೊಗದಲ್ಲೂ ನಗು...

3. 'ಈಗ ನಾ ಸರಿ ಇದ್ದೀನಿ ಕಣೆ , ಎಲ್ಲಾ ಮರೆತು .....' ಅಂದ್ಲು ಅವಳು
'ಒಳ್ಳೆಯದಾಯ್ತು ಬಿಡು , ನಿನ್ನ ಬದುಕು ನೀ ನೋಡಿಕೋ ಇನ್ನು ...' ಅಂದೆ
'ಟೀ ಮಾಡ್ತೀನಿ ನಿನಗೆ ...' ಅಂದ್ಲು ಅವಳು
'ಸ್ವಲ್ಪ ಶುಂಠಿ ಹಾಕು, ...... ' ಅಂದೆ
'ಅವನಿಗೂ ಶುಂಠಿ ಟೀ ಅಂದ್ರೆ ಇಷ್ಟ !!!!!!!!!!!!!"
ಅಂದ್ಲು
ಅವಳು ಅಂದ್ರೆ ಅವಳು ಅಷ್ಟೇ .........

4. 
'ಬದುಕಲ್ಲಿ ಮಾಡಿದ ಅತೀ ದೊಡ್ಡ ತಪ್ಪೊಂದಿದೆ ಕಣೋ '
'ಅದೇನ್ ಹೇಳು ಮತ್ತೆ ..'
'ಬೇಡ ಬಿಡು ... '
'ಹೇಳು ಪ್ಲೀಸ್ '
'ಏನಿಲ್ಲ ಬಿಡು , ಆದ್ರೆ ಬದುಕಲ್ಲಿ ಯಾವತ್ತು ನನ್ನ ಮುಂದೆ ಬರಬೇಡ , ಬಂದ್ರೆ ನಿನ್ನ ಕಾಲರ್ ನನ್ನ ಕೈಲಿರುತ್ತೆ '
'ಓಯ್ , ಟೀ ಶರ್ಟ್ ಹಾಕೊಂಡ್ ಬರ್ತೀನಿ ಬಿಡು .. !!!'
'ಏನ್ ಮಹರಾಯ ಬೈದ್ರೂ ನಗ್ತೀಯ ...'
'ಕೋಪದ ಹಿಂದಿರೋ ಅಗಾಧ ಪ್ರೀತಿಯ ಅರಿವಿದೆ , ಪರಿಸ್ಥಿತಿಗಳ ಅರಿವಿದೆ ಅದಕ್ಕೆ ನಗ್ತೀನಿ ... ಲವ್ ಯು ಎಂದಿನಂತೆ ...ಅಂದ ಹಾಗೆ ನಿನ್ನೆದುರು ಬರೋದಿಲ್ಲ ಬಿಡು, ಬಂದ್ರೆ ಕರಡಿ ಕೈ ಸಿಕ್ಕಂತೆ .!!!!!'
ಅದೆಷ್ಟೋ ವರುಷಗಳ ಗೆಳೆತನ ಪ್ರೀತಿ ... ಬಂಧನವಿಲ್ಲ ಅಷ್ಟೇ !!!!

5.ಈವತ್ತು ನಮ್ಮ ಗೆಳೆತನದ ವಾರ್ಷಿಕೋತ್ಸವ,ನನಗೆ ಏನ್ ಕೊಡ್ತೀಯ ಅಂದ್ಳು 'ನನ್ನಿಂದ ಈ ನಗು ಮಾಸದಂತೆ ನೋಡಿಕೊಳ್ತೀನಿ' ಎಂದ 
'ಬೇರೆಯವರಿಂದ ಮಾಸಿದರೆ' ಅಂದ್ಳು 
'ಮತ್ತೆ ನಗು ತರಿಸ್ತೀನಿ' ಅಂದ . 
ಅಷ್ಟು ಸಾಕು ವಾಸ್ತವ ಬದುಕಿಗೆ.....!!!

6. 'ಒಹ್ ಅದಾ!!! ಆ ನೋವೆ ಮರೆತು ಹೋಯ್ತು ಕಣೆ ಈ ನೋವಲ್ಲಿ ' ಅಂದ್ಲು... 
ಕಣ್ಣಂಚಲ್ಲಿ ಹನಿ ನೀರು ......... 
ನೋವು ಅಂತ್ಯವಾದ ಖುಷಿಗಾ ಅಥವಾ ಹೊಸ ನೋವಿನ ಉದಯಕ್ಕಾ .!?
ಅವಳು ಅವಳೇ !!!
ಬಲು ಅಪರೂಪಕ್ಕೆ ನೆನ್ನೆ ಮಗಮಗಳಿಗೆ ಇಬ್ಬರಿಗೂ ಮಂಜು ಚೆನ್ನಾಗಿ ಬೈದಿದ್ದರು. ಹಳೆಯ ಎಂದೋ ಬೈಯದೆ ಉಳಿದಿದ್ದ ವಿಷಯವನ್ನೆಲ್ಲ ತೆಗೆದು ಬೈದ್ರು .. ಸಂಜೆ ಎಂದಿನಂತೆ ಊಟ ಆಯ್ತು . ಎಲ್ಲಾ ಸ್ವಲ್ಪ ಕಡಿಮೆ ತಿಂದ್ರು , ಕಡಿಮೆ ಮಾತಾಡಿದ್ರು , ಮತ್ತೆ ಮಲಗಿದರು. ಬೆಳಿಗ್ಗೆ ಮಂಜು ಎದ್ರು . ಟೀ ಕುಡಿದು ಡ್ಯೂಟಿಗೆ ಹೋದ್ರು. ಪುಟ್ಟಿ ಎದ್ದು ರೆಡಿ ಆಗೋವಾಗ 'ಅಪ್ಪ ಏನಾದ್ರು ಅಂತ ಮಾ' ಅಂದ್ಲು. 'ಇಲ್ಲಾ ಮಗ, ಆದರೂ ಅಪ್ಪನಿಗೆ ಬೇಜಾರಾಗಿದೆ ಬಿಡು. ನೀವು ಸ್ವಲ್ಪ ರೆಕ್ಟಿಫ್ಯ್ ಮಾಡಿಕೊಳ್ಳಿ , ಸುಮ್ಸುಮ್ನೆ ಅಪ್ಪನ ತನಕ ಯಾಕೆ ಬೇಡದ್ದು'. ಅಂದೆ. 'ಹ್ಞೂ ಮಾ, ಸರಿ '.. ಶಾಲೆಗೆ ಹೋದ್ಲು. ಆಮೇಲೆ ಕಾರ್ತಿ ಕೇಳ್ದ 'ಅಪ್ಪ ಏನಾದ್ರೂ ಅಂತೆನಮ್ಮ ?' 'ಇಲ್ಲ ಮಗ, ಆದರೂ ನೀ ನಿನ್ನ ರೆಕ್ಟಿಫ್ಯ್ ಮಾಡ್ಕೊಬೇಕಲ್ವ, ನೀ ದೊಡ್ಡೋನು' ಅಂದೆ . ಅವನು 'ಸರಿ ಮಾ , ಸಾರಿ ' ಅಂದ. ಮಂಜು ಸಂಜೆ ಡ್ಯೂಟಿಯಿಂದ ಬಂದ್ರು . ಬಂದಿದ್ದೆ ಕೇಳಿದ್ರು 'ಪುಟ್ಟಿ ಕಾರ್ತಿ ಏನಾದ್ರು ಹೇಳಿದ್ರಾ ?' 'ಯಾಕಪ್ಪ?' ಅಂದೆ . 'ಅಲ್ಲ ನೆನ್ನೆ ಬೈದಿದ್ದಕ್ಕೆ ಏನಾದ್ರು ಹೇಳಿದ್ರಾ ಅಂತ ಕೇಳ್ದೆ' ಅಂದ್ರು.. 'ನೆನ್ನೆ ನೀ ಬೈದದಕ್ಕೆ ಖುಷಿಯಾಗಿದೆ ಅಂದ್ರು !!' ಅಂದೆ ನಗ್ತಾ . 'ನೀನೊಂದು , ತುಂಬಾ ಬೈದ್ ಬಿಟ್ಟೆ ಮಕ್ಕಳನ್ನ, ಅದ್ಯಾಕೋ ಸಿಟ್ ಬಂದಿತ್ತು ಸಾರಿ. " ಅಂದ್ರು... ಸಂಜೆ ಮಕ್ಕಳಿಬ್ಬರು ಬಂದ ಮೇಲೆ ಮೂರು ಜನಕ್ಕೂ ಮಾತಾಡೋಕೆ ಒಂದ್ ತರ ..'ಸಾರಿ ಕೃತು, ಸಾರಿ ಕಾರ್ತಿ ' ಅಂತ ಮಂಜು ಹೇಳಿದ ಕೂಡ್ಲೇ 'ಅಪ್ಪೋ ನೀನೆನಪ್ಪ ನೀ ಬೈದೆ ಮತ್ತೇನು ಎದುರು ಮನೆಯವರು ಬೈತಾರ?; ಅಂತ ಇವರಿಬ್ಬರು. 'ಆ ಮಗ ಯಾಕ್ ಬೈತಾನೆ ನಿಮ್ನ ಏನಿಲ್ಲ ಅವನಿಗೆ ' ಅಂತ ಮಂಜು ...
ಅಲ್ಲೆಲ್ಲೋ ಮೋಡ ಕರಗಿದಂತೆ... ನಗುವಿನ ಮಳೆ ಸುರಿದಂತೆ ......
Be it sorrows after happiness r or vice versa.........Life is ..........ಮೋಡ and ಮಳೆ:))))
ಬಹಳಷ್ಟು ಸಾರಿ ಹೀಗಾಗುತ್ತೆ . ನಾವು ತುಂಬಾ ಪ್ರೀತಿಸೋರು ಏನೋ ಕೇಳ್ತಾರೆ , ನಾವು ಅದನ್ನ ಒಪ್ಪಿಕೊಳ್ಳೋದಿಲ್ಲ , ಹೋಗ್ಲಿ ಬಿಡಮ್ಮ ನಿನಗೆ ಇಷ್ಟ ಇಲ್ದೆ ಇದ್ರೆ ಬೇಡ ಬಿಡು ಅಂತ 'ಒಂದ್ ತರಾ ' ಹೇಳ್ತಾರೆ, ನಾವು ಅದಕ್ಕೆ ಕರಗಿ ಹೋಗಿ 'ಹೋಗ್ಲಿ ಬಿಡು ಮಾಡ್ತೀನಿ, ಹೋಗ್ಲಿ ಬಿಡು ಬರ್ತೀನಿ , ಬೇಡ ಬಿಡು ನೀ ಹೇಳಿದ್ದೆ ಆಗ್ಲಿ' ಅಂತೆಲ್ಲಾ ಅವರು ಹೇಳಿದಕ್ಕೆ ಒಪ್ಪಿಬಿಡ್ತಿವಿ ಕೆಲವೊಮ್ಮೆ ಅಭಿಮಾನಕ್ಕೆ ನೋವಾದ್ರು ಹಾಗೆ 'ಸಾವರಿಸಿಕೊಂಡು' ಬಿಡ್ತೀವಿ . 'ಪ್ರೀತಿಗಾಗಿ , ಪ್ರೀತಿಸುವವರಿಗಾಗಿ ತಾನೇ ಬಿಡು, ಖುಷಿ ಇದ್ರೆ ಸರಿ ' ಅಂತ ಅಂದ್ಕೊಳ್ತಾ ಹೋಗ್ತೀವಿ. ನಾನಂತೂ ಬಹಳ ಸಾರಿ ಹೀಗೆ ಮನೆಯವರಿಗಾಗಿ ಅಂತಲೋ , ಪ್ರೀತಿಸುವವರಿಗಾಗಿ ಅಂತಲೋ , ಅವರೇನು ಬೇರೆಯವರ ಬಿಡು ಅಂತಲೋ , ಸುಮ್ಸುಮ್ನೆ ಯಾಕೆ ಅನಗತ್ಯ ಕಿರಿಕಿರಿ ಅಂತಲೋ , ಕಟ್ಟು ಬೀಳ್ತೀನಿ.
ಮೊನ್ನೆ ಹೀಗೆ ಒಂದ್ functionge ಹೋಗಬೇಕಿತ್ತು . ನನಗೆ ಇಷ್ಟ ಇರಲಿಲ್ಲ ಸರಿ ಮಂಜುಗೆ ಹೇಳ್ದೆ 'ನೀ ಹೋಗ್ಬಾ ಪ್ಲೀಸ್'. ಮಂಜು ಎಂದಿನಂತೆ 'ನೀ ಬರದೆ ಇದ್ರೆ ನಾನೂ ಹೋಗೋದಿಲ್ಲ ಬಿಡಮ್ಮ ' ಅಂತ ಅಂದ್ರು ಸಪ್ಪಗೆ . ತುಂಬಾ ಇಕ್ಕಟಿನ ಹಿಂಸೆ . ಪುಟ್ಟಿ ಪಕ್ಕದಲ್ಲೇ ಇದ್ಲು . ಥಟ್ ಅಂತ 'ಬೇಡ ಬಿಡಪ್ಪ ಯಾರೂ ಹೋಗೋದು , ಅವರು ಮಾಡಿರೋದು ಅಷ್ಟರಲ್ಲೇ ಇದೆ. ಅಮ್ಮನಿಗೆ ಮನಸ್ಸಿಗೆ ಹಿಂಸೆ ಅಂದ್ರೆ ಯಾಕೆ ಹೋಗೋದು' ಅಂದ್ಲು . ಮಂಜು ಮುಖ ಒಮ್ಮೆಲೇ ಒಂದ್ ತರ ಆಗಿಹೋಯ್ತು . ಹೋಗದೆ ಇರುವಂತಿಲ್ಲ ಬಿಡುವಂತಿಲ್ಲ ಅನ್ನೋ ಹಾಗೆ 'ಅಲ್ಲ ಕಣಪ್ಪ ನಿನಗೆ ಇಷ್ಟ ಇದ್ರೆ ಹೋಗಿ ಬಾ , ಯಾವಾಗ್ಲೂ ಹಿಂಗೆ ಅಮ್ಮನ್ನ ಯಾಕೆ ಸೆಂಟರ್ ಅಲ್ಲಿ ತರ್ತೀಯ' ... ಪರಿಸ್ಥಿತಿಯ ತುಂಬಾ ಜಟಿಲವಾಗೋದು ಬೇಡ ಅಂತ ನಾನೇ 'ಬಿಡು ಪುಟ್ಟಿ ಹೋಗ್ಬರ್ತೀನಿ 'ಅಂದೆ. ಪುಟ್ಟಿ 'ನೀ ಉದ್ದಾರ ಆಗೋದಿಲ್ಲ ಬಿಡು ನೀನು ನಿನ್ ಗಂಡನ ಕಡೆನೇ ಯಾವಾಗ್ಲು , ನಾವ್ ಹಿಂಗೆಲ್ಲ ಆಗೋದಿಲ್ಲ ಬಿಡು' ಅಂದ್ಲು
ತಪ್ಪೋ ಸರಿಯೋ ಗೊತ್ತಿಲ್ಲ .... ಆದ್ರೂ ಕೆಲವೊಮ್ಮೆ, ಕೆಲವೊಂದು ಬಂಧುತ್ವ ಉಳಿಸಿಕೊಳ್ಳಲು ನಾವೇ (ಮಂಜು ಮತ್ತು ನಾನು)ಕಮಿಟ್ ಆಗ್ತಾ ಹೋಗ್ತೀವಿ . ಇಷ್ಟವಿರಲಿ ಬಿಡಲಿ ಹೊಂದಿಕೊಂಡು ಹೋಗ್ತೀವಿ.... ಅಭಿಮಾನಕ್ಕೆ ಪೆಟ್ಟಾಗೋವರೆಗೂ ...ಪೆಟ್ಟಾದರೆ ಹಗ್ಗ ಕಿತ್ತು ಬೀಸಡೋದೇ
ಬದುಕೇ ಹಾಗೆ ಬಿಸಿಲು ಮಳೆಯ ಹಾಗೆ................

Tuesday 8 September 2015

ಕುರುಕ್ಷೇತ್ರ ಯುದ್ದ ಮುಗಿದು ಅದೆಷ್ಟೋ ವರ್ಷಗಳ ನಂತರ, ಎಲ್ಲಾ ತಣ್ಣಗಾಗಿ ಅವರವರ ಕೆಲಸದಲ್ಲಿ ಇದ್ದಾಗ , ಕೃಷ್ಣ ಏಕಾಂತದಲ್ಲಿದ್ದಾಗ ಒಂದು ದಿನ ಅರ್ಜುನ ಬರ್ತಾನೆ.
'ಬಾ ಅರ್ಜುನ ಏನ್ ವಿಷ್ಯ ' ಅಂತಾನೆ ಕೃಷ್ಣ.
ಅರ್ಜುನ "ದೇವ ನಿನ್ನ ಹತ್ತಿರ ಕೇಳಬೇಕು ಅಂತ ಅದೆಷ್ಟೋ ಪ್ರಶ್ನೆಗಳು ವರುಷಗಳಿಂದ ಹಾಗೆ ಇದೆ. ಈವತ್ತು ನನಗೆ ಉತ್ತರ ಬೇಕು " ಅಂತಾನೆ .
ಕೃಷ್ಣ 'ಅದೇನು ಕೇಳು ಪಾರ್ಥ ' ಅಂತಾನೆ .
ಅರ್ಜುನ ಶುರು ಮಾಡ್ತಾನೆ  "ಪರಮಾತ್ಮ,, ನೀನು ನಮಗೆ ಅತ್ಯಂತ ಆಪ್ತನಾಗಿದ್ದೆ.ನಾವೂ ನಿನ್ನನ್ನು ತುಂಬಾ ನಂಬಿದ್ದೆವು. ಆದರೆ ಬಹಳಷ್ಟು ಸಾರಿ ಬೇಕೆಂದಾಗ ನೀನು ನಮ್ಮ ಕೈ ಹಿಡಿಯಲಿಲ್ಲ . ಧರ್ಮರಾಯ ಜೂಜಾಡುವುದ ತಪ್ಪಿಸಬಹುದಿತ್ತು , ನೀ ತಪ್ಪಿಸಲಿಲ್ಲ. ದಾಳ ನಮ್ಮ ಕಡೆ ಉರುಳಿಸಲು ಯತ್ನಿಸಲೂ ಇಲ್ಲ.ಅಣ್ಣ ಸೋಲುತ್ತಾ ತಮ್ಮ೦ದಿರ , ಹೆಂಡತಿಯ ಪಣ ಇಡುವಾಗ ಕೂಡ ನೀ ಅಡ್ಡ ಬರಲಿಲ್ಲ. ದ್ರೌಪದಿ ನಿನ್ನ ಅಣ್ಣ ಅಂತ ಅದೆಷ್ಟು ಪ್ರೀತಿಸ್ತಾ ಇದ್ಲು; ಆದರು ನೀ ಅವಳ ವಸ್ತ್ರಾಪಹರಣ ಆಗೋವರೆಗೂ ನೀ ಸಹಾಯಕ್ಕೆ ಬರಲಿಲ್ಲ . ಸಭೆಯಲ್ಲಿ ಅವಳ ಎಳೆದಾಡಿದಾಗಲೂ ನಿನಗೆ ಕನಿಕರ ಬರಲಿಲ್ಲ ... ನಾವು ನಿನ್ನನ್ನ ಗೆಳೆಯ ಅಂತ ನಂಬುತ್ತಲೇ ಬಂದೆವು . ನೀನು ಯಾವ ಆಪತ್ಭಾಂಧವ?? ನಾವು ನಾಚಿ ತಲೆ ತಗ್ಗಿಸಿದಾಗ ಕೂಡ ಬರದವ  !!!?"
ಕೃಷ್ಣ ನಕ್ಕು ಬಿಡ್ತಾನೆ ... ಅರ್ಜುನ ಅವನನ್ನೇ ನೋಡ್ತಾನೆ ವಿಸ್ಮಯದಿಂದ .."ಪಾರ್ಥ, ದುರ್ಯೋಧನನಿಗೆ ಜೂಜು ಅಂದ್ರೆ ಏನು ಅಂತ ಕೂಡ ತಿಳಿದಿರಲಿಲ್ಲ. ಅದಕ್ಕೆ ಅವನು ತನ್ನ ಸೋದರಮಾವನನ್ನ ಕೂರಿಸಿಕೊಂಡ . ಆ ಕಾಲಕ್ಕೆ ಶಕುನಿ ದೊಡ್ಡ ಪಗಡೆ ಆಟಗಾರ . ನಿಮಗೆ ತಿಳಿದಂತೆ ನನಗೂ ಪಗಡೆ ಅಂದ್ರೆ ಪ್ರಾಣ , ಅವರು ಶಕುನಿಯನ್ನ ಕರೆದಂತೆ ನೀವೂ ನನ್ನನ್ನು ಕರೆಯಬಹುದಿತ್ತು, ಶಕುನಿ ನನ್ನ ಮುಂದೆ ಗೆಲ್ಲುತ್ತಲೇ ಇರಲಿಲ್ಲ!! ಆದರೆ ಧರ್ಮರಾಯ ದುರಭಿಮಾನಿ , ನಾನೇ ಗೆಲ್ಲಬಲ್ಲೆ ಅಂತ ಆಡುತ್ತಲೇ ಹೋದ . ಸೋಲುವಾಗ ಕೂಡ ಅವನು ಮನದಲ್ಲೇ 'ಇದು ಕೃಷ್ಣನಿಗೆ ತಿಳಿಯದೆ ಹೋಗಲಿ, ನಮ್ಮ ಬಗ್ಗೆ ಏನು ತಿಳಿದಾನು ನಾ ಹೀಗೆ ಸೋತಾಗ' ಅನ್ನುತ್ತಲೇ ಇದ್ದ, ನಾನಾದರು ಈಗ ಕರಿತಾನೆ ಆಗ ಕರಿತಾನೆ ಯಾರಾದ್ರೂ ಒಬ್ಬರು ಕರೆದರೂ ಸಾಕು ಅಂತ ಕಾಯುತ್ತಲೇ ಇದ್ದೆ. ಯಾರೂ ಕರೆಯಲಿಲ್ಲ. ಇನ್ನು ದ್ರೌಪದಿ ಕೂಡ ಕೋಪ ಅಹಂ ಇಂದ ನನ್ನನ್ನ ಕರೆಯಲೇ ಇಲ್ಲ , ನಿಮ್ಮೆಲ್ಲರಿಂದ ಸಹಾಯ ಬರದಿದ್ದಾಗ ಮಾತ್ರ 'ಅಣ್ಣ' ಅಂತ ನನ್ನ ಕರೆದಳು. ತಕ್ಷಣ ಬಂದು ವಸ್ತ್ರ ನೀಡಿದೆ . ಅರ್ಜುನ, ನಾ ಯಾವಾಗ್ಲೂ ಅಲ್ಲೇ ಇದ್ದೆ ನೀವೇ ನನ್ನ ಕರೆಯಲಿಲ್ಲ, ಕರೆದಾಗೆಲ್ಲ ಬಂದಿದ್ದೇನೆ " ಅಂದ
"ಹಾಗಾದ್ರೆ ಕರೆಯದೆ ಇದ್ರೆ ನಿನ್ನವರಿಗೆ ನೀನು ಸಹಾಯವನ್ನೇ ಮಾಡೋದಿಲ್ವ ಕೃಷ್ಣ!!!??"
"ಅರ್ಜುನ, ಮನುಷ್ಯ ಹಾಗು ಅವನಿಗೆ ಸಂಭವಿಸೋ ಎಲ್ಲಾ ಘಟನೆಗಳೂ ಅವನದೇ ಕ್ರಿಯೆಗಳ, ಒಳ್ಳೆತನ ಕೆಟ್ಟತನ , ದುರಭಿಮಾನ , ಹೊಂದಾಣಿಕೆ, ಪ್ರೀತಿ, ಸ್ವಾರ್ಥ, ಆಸೆ, ಹಾಗು ಅವನದೇ ಸ್ವಭಾವಗಳ  ಪ್ರತಿಫಲ . ನನಗೆ ಯಾವುದನ್ನು ನಡೆಸೋ ಹಾಗು ನಿಲ್ಲಿಸೋ ಹಕ್ಕಿಲ್ಲ . ಎಲ್ಲಕ್ಕೂ ಸಾಕ್ಷಿಯಾಗಿರುತ್ತೇನೆ ಅಷ್ಟೇ" ಅಂದ
'ಅದರಿಂದ ನಮಗೇನು ಉಪಯೋಗ ಪರಮಾತ್ಮ , ನಾವು  ನಮ್ಮದೇ ಕೆಟ್ಟ ಸ್ವಾರ್ಥ, ಮೋಸಗಳಿಂದ ಕಡೆಗೆ ಕುರುಕ್ಷೀತ್ರಗಳಿಗೆ ದಾರಿ ಮಾಡುತ್ತೀವಲ್ಲ , ಅದಕ್ಕೂ ನೀ ಮೂಕ ಸಾಕ್ಷಿ ಆಗಿರೋದಾದರೆ ಮತ್ತೆ ನೀ ಯಾಕೆ!!?"
ಕೃಷ್ಣ ನಕ್ಕ" ಅರ್ಜುನ, ನಾ ಇದ್ದೀನಿ ಅಂತ ಎಲ್ಲಾರಿಗೂ ಅರಿವಿದ್ದ ಮೇಲೆ ಯಾರೂ ಇಂತಹ ಕುಕೃತ್ಯಗಳ ಮಾಡೋದಿಲ್ಲ . ನನ್ನನ್ನ ಮರೆತಾಗಲೇ ಅಥವ ಮರೆತಂತೆ ನಟಿಸಿದಾಗಲೇ ಇವೆಲ್ಲಾ ಘಟಿಸೋದು' ಅಂದ !!!!!
ಹೌದೇನೋ ಅಲ್ವೇ 

Saturday 5 September 2015

ಈ ಗೌರಿ ಹಬ್ಬ ಅಂದ್ರೆ ಹೆಣ್ಣು ಮಕ್ಕಳಿಗೆ ಎಂತ ಸಂಭ್ರಮ ಅಂತೀರಾ , ಗಂಡ ಎಷ್ಟೇ ಚೆನ್ನಾಗಿ ನೋಡಿ ಕೊಂಡ್ರು ಅಮ್ಮನ ಮನೆಯ ಸ್ವಾತಂತ್ರ್ಯ (!) ಸಿಗೋಲ್ಲ ಬಿಡ್ರಿ . ಅತ್ತೆ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಅಂತ ಅಲ್ಲ ಈ 'small famili nuclear famili ಅಲ್ಲಿ ಇರೋ ಹೆಣ್ಣು ಮಕ್ಕಳಿಗೆ ಕೂಡ ಅಮ್ಮನ ಮನೆ ಅಂದ್ರೆ ಅಮ್ಮನ ಮನೇನೆ . ... ಅಮ್ಮ ಅಂದ್ರೆ ಅಮ್ಮನೇ ಅಲ್ವೇ....
ಅದು ಬಿಡಿ ಈ ಗೌರಿ ಅಂದ್ರೆ ಬಿಟ್ಟುಹೋದ ಬಂಧ ಕೂಡ ಬೆಸೆಯುತ್ತೆ ಅಂತ ಇದ್ರು ಅತ್ತೆ , ಯಾವುದೊ ಕಾರಣಕ್ಕೆದೂರಾದ ಬಂಧುತ್ವ ಏನಿಲ್ಲ ಅಂದ್ರು ಗೌರಿ ಹಬ್ಬದ ಬಳೆಗೆ ದುಡ್ಡು ಕೊಡೋಕೆ ಹತ್ತಿರ ಆಗುತ್ತೆ .. ನೆನಪುಗಳ ಹಸಿರಾಗಿಸುತ್ತೆ .. ಕಣ್ಣುಗಳ ತುಂಬಿಸಿ ಮನಸ್ಸನ್ನ ಹಗುರಾಗಿಸುತ್ತದೆ ....
ಬಳೆಗೆ ದುಡ್ಡು ಕೊಡೋಕೆ ಮೈದುನ ಬಂದಿದ್ದ ,ಬಹಳ ದಿನಗಳಿಂದ ಬಂದಿರಲಿಲ್ಲ ಅಂತ ಚೆಂದ ಬೈದೆ. ಬೈಸಿಕೊಂಡ ಮೇಲೆ ಪಕ್ಕ ಕೂತು ಕೈ ಹಿಡಿದು 'ಆಯ್ತಾ ಅತ್ಗೆ , ಈಗ ನಾನು ಹೇಳ್ಲಾ ' ಅಂತ ಅವನ ಮನದ ಮಾತು ಹಂಚಿಕೊಂಡ , ಇನ್ಯಾರ ಹತ್ತಿರ ಹೇಳಲಿ ಅಂತ ಮೌನವಾದ... ಇಬ್ಬರು ಹೊಟ್ಟೆ ತುಂಬಾ ಮಾತಾಡಿ ಮನದ ಭಾರ ಇಳಿಸಿಕೊಂಡೆವು........ ಮೈದುನ ಮಗ ಕೂಡ ಅಂತಾರೆ .... ಮಗ, ಅಣ್ಣ, ತಮ್ಮ, ಗೆಳೆಯ, ಎಲ್ಲಾ ಒಂದೇ .. ಸಂತಸದ ಹಂಚಿವಿಕೆಗೆ , ದುಃಖದ ಇಳಿಸುವಿಕೆಗೆ ..
...ಬಹುಶಃ ನಮ್ಮ ಭಾರತೀಯ ಸಂಸ್ಕೃತಿ ಹೀಗೆ ಏನೋ ... ಒಂದು ಹಬ್ಬ, ಒಂದು ಸಮಾರಂಭ, ಒಂದು ದೇವರ ಕಾರ್ಯ .... ಇವೆಲ್ಲ ಮನಸ್ಸುಗಳ (ಮರು)ಬೆಸೆಯುವಿಕೆಗೆ ಹಾದಿಯಾಗಿ ಹೋಗುತ್ತವೆ ... ಅದಕ್ಕೆ ಏನೋ Indian Culture and heritage ಅನ್ನೋದು ಅಷ್ಟೊಂದು ಹೆಮ್ಮೆ ತರುವುದು .........felt like sharing
'ಕ್ಷಮಿಸು 'ಎಂದು 
ಅದೆಷ್ಟು ಸುಲಭವಾಗಿ ಹೇಳಿ 
ನಾ ಕೈ ಒರೆಸಿಕೊಂಡು ಬಿಟ್ಟಿದ್ದೆ ಅಲ್ಲವೇ ಗೆಳೆಯ ......... 
ಕ್ಷಮಿಸಲು ನೀನು 
ಅದೆಷ್ಟು ದೊಡ್ಡ (ಗಟ್ಟಿ) ಮನಸ್ಸು ಮಾಡಿದ್ದೆ ನನಗರಿವಿದೆ ..... 
ಆದರೂ
ಗೆದ್ದ ನಗುವೂ ಅಲ್ಲದ ಸೋತ ಬೇಸರವೂ ಅಲ್ಲದ
ಕ್ಷಮಿಸು ಎಂದು ಕೇಳಿಸುವ ಪರಿಸ್ಥಿತಿಯ
ಬಗ್ಗೆ ಬಲು ತಿರಸ್ಕಾರವಿದೆ ನನಗೆ ..............

Friday 4 September 2015

ಕಲಾಂ ಸರ್ ಇನ್ನಿಲ್ಲ. ಸ್ವಾಮಿ ವಿವೇಕಾನಂದ ಅವರನ್ನ ಬಿಟ್ಟು ಮನಕ್ಕೆ ತುಂಬಾ ಸ್ಫೂರ್ತಿ ನೀಡಿದ ವ್ಯಕ್ತಿ ಅಂದ್ರೆ ಕಲಾಂ ಸರ್ . ಅವರನ್ನ ಮತ್ತೆ ರಾಷ್ಟ್ರಪತಿ ಹುದ್ದೆಗೆ ಆರಿಸಲಿ ಅಂತ ಹರಕೆ ಕೂಡ ಹೊತ್ತ ಮೂರ್ಖ ಮನಸ್ಸು ನಮ್ಮ ಕೆಲವರದು . ಆದರೆ ಇಂದಿನ ಭಾರತಕ್ಕೆ ಅವರಂತಹ ರಾಷ್ಟ್ರಪತಿ ಬೇಕಿರಲಿಲ್ಲವೇನೋ,ಹರಕೆ ಹಾರೈಕೆ ಫಲಿಸಲೇ ಇಲ್ಲ. 
ಬದುಕಲ್ಲಿ ಕರ್ತವ್ಯಕ್ಕೆ ಇರೋ ನಾ ಮಹತ್ವ ಅರಿತದ್ದು ಕಲಾಂ ಸರ್ ಅವರಿಂದಲೇ . ಕೈಲಾಗುವಾಗ ಅಂದಿನ ಕೆಲಸ ಮುಗಿಸಬೇಕು. ನಾಳೆ ನನ್ನ ಅರ್ಧ ಉಳಿದ ಕೆಲಸದಿಂದ ಮತ್ಯಾರಿಗೋ ತೊಂದರೆಯಾಗೋದು ಬೇಡ ಎಂದು ಕಲಿತದ್ದು ಅವರ ಮಾತುಗಳಿಂದಲೇ. ದೇಶ ಅಂದ್ರೆ ಅಭಿಮಾನದ ಬೀಜ ಬಿತ್ತಿದ್ದು ವಿವೇಕಾನಂದರಾದರೆ ಅದು ಮರವಾಗೋದಕ್ಕೆ ನೀರೆರೆದದ್ದು ಈ ಕಲಾಂ ಸರ್ .
ಕಲಾಂ ಸರ್ ಅವರನ್ನ ಒಮ್ಮೆ ಒಬ್ಬ ಸಂದರ್ಶಕ ಕೇಳಿದರಂತೆ ;ನಿಮ್ಮ ಅತಿ ಮೆಚ್ಚಿನ ಆವಿಷ್ಕಾರ ಯಾವುದು ಅಂತ .. ಎಲ್ಲಾ ಊಹಿಸಿದ್ದು ಕ್ಷಿಪಣಿಗಳ ಬಗ್ಗೆ ಹೇಳುತ್ತಾರೆ ಎಂದು . ಆದ್ರೆ ಕಲಾಂ ಸರ್ ಹೇಳಿದ್ದೆ ಬೇರೆ . 'ಒಮ್ಮೆ ನಾನೊಂದು ಆಸ್ಪತ್ರೆಗೆ ಆಸ್ಪತ್ರೆಗೆ ಬೇಟಿಯಿತ್ತಾಗ , ಅಲ್ಲಿನ ಮಕ್ಕಳಿಗೆ prosthetic(ಕೃತಕ ಕಾಲುಗಳನ್ನ)ಅಳವಡಿಸಲಾಗಿತ್ತು. ಆ ಸುಮಾರು ೪ ಕೆಜಿ ತೂಕದ ಕಾಲು ಎಳೆದುಕೊಂಡು ಮಕ್ಕಳು ಓಡಾಡುವುದ ಕಂಡಾಗ ಅಲ್ಲಿನ ವೈದ್ಯರನ್ನ ಕೇಳಿದೆ . ಅವರು' ಸದ್ಯಕ್ಕೆ ಇರೋದು ಇಂತಹದೆ ಸರ್' ಎಂದರು . ನಮ್ಮ ರಾಕೆಟ್ ತಂತ್ರಜ್ಞಾನ ಉಪಯೋಗಿಸಿ ಸುಮಾರು ೪೦೦ ಗ್ರಾಂ ತೂಕದ ಕಾಲುಗಳನ್ನ ನಮ್ಮ ಟೀಂ ತಯಾರು ಮಾಡಿದ್ವಿ . ಈಗ ಆ ಮಕ್ಕಳು ಆಟ ಆಡ್ತಾರೆ , ಸೈಕಲ್ ಕೂಡ ತುಳಿತಾರೆ ' ಅಂತ ಹೇಳೋವಾಗ ಅವರ ಕಣ್ಣಲ್ಲಿ ಇದ್ದದ್ದು ಬರಿ ಮುಗ್ದಮಗುವಿನ ನಗು ಅಂತೆ .
ಮೊದಲೆಲ್ಲ ಕಾಂಪೌಂಡ್ ಗೋಡೆಗಳ ಮೇಲೆ ಗಾಜಿನ ಚೂರುಗಳನ್ನ ಹಾಕ್ತ ಇದ್ರು . ಯಾರೂ ಬರದೆ ಇರ್ಲಿ ಅನ್ತ. ಅದರ ಬಗ್ಗೆ ಕೂಡ ಅವರಿಗೆ ಸಹಮತ ಇರಲಿಲ್ಲ DRDO ಗೋಡೆಯ ಮೇಲೆ ಗಾಜಿನ ಚೂರುಗಳನ್ನ ಹಾಕೋಕೆ ಬಿಡದ ಅವರು ಕೊಟ್ಟ ಕಾರಣ 'ಹಕ್ಕಿಗಳು ಹೆದರುತ್ತವೆ !"..
ಕಲಾಂ ಮಾನವೀಯ ಮುಖದ ಬಗ್ಗೆ ನೂರಾರು ಕಥೆಗಳಿವೆ . ಆದರೆ ಕಲಾಂ ಸರ್, ನೀವು ನೆನಪಾಗೋದು ನಿಮ್ಮ ಮಾನವೀಯತೆ ಹಾಗು ದೇಶಪ್ರೇಮದ ಪ್ರತೀಕವಾಗಿ .
rather than verbal tribute I promise you to pay my tribute by my making my Kids good citizens and patriotic ... Thanks for building our nation as a Strong One Sir.........


ಸೂರ್ಯ ಮುಳುಗಿತೆ ??
ಇಲ್ಲವಲ್ಲ
ಮನದಲ್ಲಿ ಅವರು ಹಚ್ಚಿದ ಹಣತೆ ಇದೆಯಲ್ಲ ..
ತಮವ ಬೆದರಿಸಲು ..
ಇರವ ಬೆಳಗಿಸಲು ...
ಒಬ್ಬ ಶಿಷ್ಯ ಗುರುವಿಗೆ "ಗುರುಗಳೇ, ಒಬ್ಬ ವ್ಯಕ್ತಿ ಆಶ್ರಮಕ್ಕೆ ಒಂದು ಹಸು ದಾನ ಮಾಡಿದ್ದಾರೆ "
ಗುರು: ಒಳ್ಳೆಯದಾಯ್ತು ಮಗು , ಆಶ್ರಮವಾಸಿಗಳಿಗೆ ಹಾಲು ಸಿಕ್ಕಂತಾಯ್ತು " ಅಂತಾನೆ 
ಒಂದಷ್ಟು ದಿನ ಕಳೆದ ಮೇಲೆ ಶಿಷ್ಯ ಬಂದು: ಗುರುಗಳೇ, ಆವತ್ತು ಹಸು ಬಿಟ್ಟು ಹೋಗಿದ್ದ ವ್ಯಕ್ತಿ ಈವತ್ತು ಮತ್ತೆ ವಾಪಸ್ ತೆಗೆದುಕೊಂಡ್ ಹೋದ್ರು"
ಗುರು: ಒಳ್ಳೆಯದಾಯ್ತು ಮಗು , ಆಶ್ರಮವಾಸಿಗಳಿಗೆ ಹಸುವಿನ ಕೆಲಸ ತಪ್ಪಿತು ' ಅಂತಾನೆ ... 
ಪರಿಸ್ಥಿತಿಗೆ ತಕ್ಕಂತೆ ಮನಸ್ಥಿತಿ ಹೊಂದಿಸಿಕೊಳ್ಳೋ ಕಲೆ ಹೇಳಿಕೊಟ್ಟ ಅನೇಕ ಮಾನಸಗುರುಗಳಿಗೆ ನಮನ ...... :))))))
ಪುಟ್ಟ ಶಾಲೆ ಇಂದ ಬಂದ..ಅಮ್ಮ ಅಡುಗೆ ಮನೆಯಲ್ಲಿ ಇದ್ಲು.ನಾಳೆ ಅವನ ಹುಟ್ಟುಹಬ್ಬ.ಅಮ್ಮನ ಬಳಿ ಹೋದ."ಅಮ್ಮ ನನ್ನ birthdayಗೆ ನಾಳೆ ಸೈಕಲ್ ಕೊಡಿಸು "ಅಂತ ದುಂಬಾಲು ಬಿದ್ದ.ಅಮ್ಮ ಹೇಳಿದಳು'ಹೋಗಿ ಕೃಷ್ಣನ್ನ ಕೇಳು.ನೀನು ಮಾಡಿದ ತಪ್ಪನೆಲ್ಲ ಒಂದು ಕಾಗದದಲ್ಲಿ ಬರೆದು, ಕ್ಷಮಿಸು ಅಂತ ಕೇಳಿಕೊಂಡು ಮತ್ತೆ ಮಾಡೋಲ್ಲ ಅಂತ ಕೇಳಿಕೊಂಡು ಬರಿ.ಕೃಷ್ಣ ತಪ್ಪದೆ ನೀನು ಕೇಳಿದೆಲ್ಲ ಕೊಡಿಸ್ತಾನೆ"ಅಂದ್ಲು..
ಪುಟ್ಟ ರೂಮ್ಗೆ ಹೋದ,ಪೇಪರ್ ಪೆನ್ನು ತಗೊಂಡ, ಬರೆಯೋಕೆ ಶುರು ಮಾಡಿದ..
"ಕೃಷ್ಣ ನಾನು ಇವತ್ತು ಏನೂ ತಪ್ಪು ಮಾಡಿಲ್ಲ.ನಾಳೆ ನನ್ನ ಹುಟ್ಟುಹಬ್ಬ ನನಗೆ ಸೈಕಲ್ ಕೊಡಿಸು"..
ಬರಿತಾ ಬರಿತಾ ಶಾಲೆಯಲ್ಲಿ ಅವನು ಮಾಡಿದ ತರ್ಲೆ ನೆನಪಾಯ್ತು,ಪತ್ರ ಹರಿದ ಮತ್ತೆ ಬರೆಯೋಕೆ ಶುರು ಮಾಡಿದ."ಕೃಷ್ಣ ಈವತ್ತು ಟೀಚರ್ ಗೆ ತೊಂದ್ರೆ ಕೊಟ್ಟೆ..ನನ್ನ ಕ್ಷಮಿಸು ಮತ್ತೆ ತಪ್ಪು ಮಾಡೋಲ್ಲ ಸೈಕಲ್ ಕೊಡಿಸು.."
ಅಷ್ಟರಲ್ಲಿ ದಾರಿಯಲ್ಲಿ ಬರ್ತಾ ಬೀದಿ ಬದಿಯ ನಾಯಿಗೆ ತೊಂದ್ರೆ ಕೊಟ್ಟಿದ್ದು ನೆನಪಾಯ್ತು.ಮತ್ತೆ ಪತ್ರ ಹರಿದ.ಇನ್ನೊ0ದು ಶುರು ಮಾಡಿದ....
ಅಮ್ಮ ಮಗನ ಸದ್ದು ಕೇಳದೆ ಅವನ ರೂಂ ಕಡೆ ಇಣುಕಿ ನೋಡಿದ್ಲು.ಮಗ ಬರಿತಾನೆ ಇದ್ದ..ನಸುನಕ್ಕು ಒಳ ಹೋದಳು...
ಅಷ್ಟರಲ್ಲಿ ಪುಟ್ಟ ಒಡ್ಡಿ ಬಂದ.
ಸ್ವಲ್ಪ confused ಆಗಿ ಕಂಡ.
"ಅಮ್ಮ ನಾನು ದೇವಸ್ಥಾನಕ್ಕೆ ಹೋಗ್ಬರ್ತೀನಿ " ಅಂದ...
ಅಮ್ಮ ಮಗನ ಮಾತು ಕೇಳಿ ಖುಷಿಯಾದ್ಲು..."ಹೂ " ಅಂದ್ಲು...
ಪುಟ್ಟ ದೇವಸ್ಥಾನಕ್ಕೆ ಓಡಿದ.ದೇವಸ್ಥಾನದ ಒಳಗೆ ಯಾರು ಕಾಣಲಿಲ್ಲ...
ಕೃಷ್ಣನ ಮುಂದೆ ಕುಳಿತ,.ಥಟ್ ಅಂತ ರಾದೆಯ ವಿಗ್ರಹ ತೆಗೆದು ಕೊಂಡ."ಕೃಷ್ಣ, ನನಗೆ ಪತ್ರಗಿತ್ರ ಎಲ್ಲ ಬರೆಯೋಕೆ ಬರೋಲ್ಲ...ನಿನ್ನ girlfriendನ ಕಿಡ್ನಾಪ್ ಮಾಡಿದ್ದೀನಿ...ಸೈಕಲ್ ತಂದು ಕೊಟ್ಟು ಅವಳನ್ನ ಬಿಡಿಸಿ ಕೊಂಡುಹೋಗು"!!!!!!!!!!
ಪುಟ್ಟಿ ಶಾಲೆಗೆ ತಯಾರಾಗ್ತಾ ಇದ್ಲು . ಜಡೆ ಹಾಕ್ತಾ ಇದ್ದೆ. ಸುಮ್ನೆ ಜಡೆ ಹಾಕಿಸಿಕೊಳ್ತಾ ಇದ್ಲು . (ಸುಮ್ನೆ ಕೂತು ಜಡೆ ಹಾಕಿಸಿಕೊಳ್ಳೋ ಜಾಯಮಾನವೇ ಅಲ್ಲ ಅವಳದು . ಜಡೆ ಹೀಗಿದೆ ಹಾಗಿದೆ ಅಂತಲೋ , ಶಾಲೆಯಲ್ಲಿ ಹುಡುಗರ ಇವಳು ಕೆಣಕಿದ್ದೋ , ಇವಳನ್ನ ಅವರು ರೇಗಿಸಿದ್ದೋ.. ಏನೋ ಒಂದು ಹೇಳ್ತಾನೆ ಇರ್ಬೇಕು ಇಲ್ಲಾ ಅಂದ್ರೆ ನನಗೇ 'ಇದ್ಯಾಕ್ ಹಿಂಗೆ ಈವತ್ತು " ಅನಿಸೋ ಹಾಗೆ) ಕೇಳ್ದೆ 'ಇದ್ಯಾಕೆ ಮಗ ಏನೂ ಮಾತಾಡ್ತಾ ಇಲ್ಲ ?' 'ಏನಿಲ್ಲ ಮಾ, ಎಲ್ಲಾ ಅಕ್ತಂಗೀರು ಹೋದ್ರಲ್ಲ ಅದಕ್ಕೆ ಬೇಜಾರು ಅಷ್ಟೆ' ಮೊನ್ನೆ ಎಲ್ಲಾ ಎರಡುಮೂರು ದಿನ ರಜಾ ಅಂತ ಎಲ್ಲಾ ಇಲ್ಲೇ ಇದ್ರು .. ಒಂದೆರಡು ದಿನ ರಜ ಇದ್ರೆ ಎಲ್ಲರೂ ಒಂದೆಡೆ ಸೇರೋದು ವಾಡಿಕೆ .. ಮಕ್ಕಳಿಗೂ ಸಂಭ್ರಮ . ಅದೇನ್ ತಿನ್ತಾವೋ, ಅದೇನ್ ಮಾತಾಡ್ತಾವೋ , ಅದೇನ್ ಆಟ ಆಡ್ತಾವೋ, ನಗ್ತಾವೋ, ಕಚ್ಚಾಡ್ತಾವೋ..exhibition ಹಾಗೆ ಎಲ್ಲಿಲ್ಲಿ ಇಟ್ಟ ವಸ್ತುಗಳೆಲ್ಲ ಅಲ್ಲಲ್ಲೇ ಒಂದು ಇಂಚೂ ಕದಲದ ಹಾಗಿದ್ದ ಮನೆ ಒಂದೆರಡು ದಿನದಲ್ಲಿ ಅದೆಲ್ಲಿದೆ ಅಂತ ಹುಡುಕೋ ಹಾಗೆ .. ಮಕ್ಕಳ ನಗು , ತರ್ಲೆ, ಅಣ್ಣ ತಮ್ಮಂದಿರ ಗೊರಕೆ ಸದ್ದ ನಡುವೆಯೇ ರಾತ್ರಿ ೧೨-೧ ಘಂಟೆವರೆಗೂ ಅಮ್ಮನೋ ಅತ್ತೆಯೋ ಬೈಯೋವರೆಗೂ ನಮ್ಮ ಮಾತುಗಳು, ಒಂದು ಸಣ್ಣ ಸುತ್ತಾಟ , ಹಚ್ಚಿದ ಸ್ಟವ್ ಆರದ ಹಾಗೆ ಏನಾದ್ರೂ ಮಾಡಿ ತಿನ್ನೋ ಆಟ .. ಮೆಕ್ಯಾನಿಕಲ್ ಜೀವನದ ನಡುವಿನ ಟಾನಿಕ್ .. ಇವೆಲ್ಲದರ ನಡುವೆ ಮಕ್ಕಳು ಒಂದು ಮಾತು ಕೇಳಿದ್ರು "ದೊಡ್ಡಮ್ಮ ಎಲ್ಲಾ ಒಟ್ಟಿಗೆ ಇದ್ರೆ ಎಷ್ಟ್ ಚೆಂದ ಅಲ್ವ !!??' "ಹ್ಞೂ ಮಗ " ಅಂದೆ ಅಷ್ಟೇ ... ಆದರೆ ಆ ಪ್ರಶ್ನೆಗೆ ಉತ್ತರವಿರಲಿಲ್ಲ ನನ್ನ ಬಳಿ..ಮುಂದೆಂದೋ ದೊಡ್ಡವರಾದ ಮೇಲೆ ಅವರಿಗೇ ತಿಳಿಯಬಹುದೇನೋ ... ಆದರೂ ಬಂಧುತ್ವಕ್ಕೆ ಅರ್ಥ ಕೊಡೋ ಒಂದು ಸಣ್ಣ "being together' ಮನೆ(ನ)ಗಳ ನಡುವೆ ಬೆಸುಗೆಯ ಬಿಗಿ ಮಾಡಿದರೆ ಅದೆಷ್ಟ ಚೆಂದ ....... ನೀಲಿ ಬಾನಿನ ಹಾಗೆ :)) Life is beautiful with all errs..
ಪ್ರೀತಂ ನಮ್ಮ ಮನೆ ಹತ್ತಿರದ ಹುಡುಗ. ಕಾರ್ತಿಯ ಗೆಳೆಯ. ಸುಮಾರು ೧೦ ವರ್ಷಗಳ ಗೆಳೆತನ ಇಬ್ಬರದು. ಶಾಲೆ ಬೇರೆಯಾದ್ರು ಸಂಜೆ ಮನೆಗೆ ಬಂದ ಕೂಡ್ಲೆ ಅವ್ನು 'ಕಾರ್' ಅಂತಲೋ ಇಲ್ಲ ಇವನು 'ಪೀಚ್ ' ಅಂತಲೋ ಒಬ್ಬರನ್ನೊಬ್ಬರು ಮಾತನಾಡಿಸದೆ ಇದ್ರೆ ಸಮಾಧಾನವೇ ಇರೋದಿಲ್ಲ ಹಾಗಿದ್ರು . ಹತ್ತನೇ ತರಗತಿ ಆದ ಮೇಲೆ ಅವನು ಡಿಪ್ಲಮೋ ಸೇರಿದ . ಇವನು ಪಿಯು ಸೇರಿದ . ಮತ್ತೆ ಕಾರ್ತಿ CET ಬರೆದಾಗ,ಮಂಡ್ಯದಲ್ಲಿ ಎಂಜಿನಿಯರಿಂಗ್ ಸೀಟ್ ಸಿಕ್ಕಾಗ ಪ್ರೀತಂ 'ಆಂಟಿ ಕಾರ್ತಿನ ಹಾಸ್ಟೆಲ್ ಗೆ ಹಾಕ್ಬೇಡಿ ' ಅಂತೆಲ್ಲ ಹೇಳ್ತಾ ಇದ್ದ . ಹೋದ ತಿಂಗಳು ಅವನು ಡಿಪ್ಲಮೋ CET ಬರೆದ . ಹಾಸನದ ಕಾಲೇಜಲ್ಲಿ ಸೀಟ್ ಸಿಕ್ತು . ಹಾಸನದಲ್ಲಿ ಅವನ ಅಜ್ಜಿ ಮನೆ ಇದೆ . ಮೊನ್ನೆ ಮೊನ್ನೆ ಹಾಸನದ ಕಾಲೇಜ್ಗೆ ಹೋಗಿ ಸೇರಿದ .
ಬೆಳಿಗ್ಗೆ ಮಗನೊಟ್ಟಿಗೆ ದೇವಸ್ತಾನಕ್ಕೆ ಹೋಗಿದ್ದೆ . ಎಂದಿನಂತೆ ಮಕ್ಕಳ ಹೆಸರಲ್ಲಿ ಅರ್ಚನೆಗೆ ಹೇಳಿದೆ . ಮಗ ಪ್ರೀತಂ ಹೆಸರೂ ಸೇರಿಸಿದ . ಮನೆಗೆ ಹಿಂದಿರುಗುವಾಗ ಹೇಳ್ದ 'ಅಮ್ಮ ಪ್ಲೀಸ್ ಅಮ್ಮ ಶನಿವಾರ ಪ್ರೀತಂ ನೋಡ್ಕೊಂಡ್ ಬರ್ತೀನಿ , ಮಗ ದಿನಾ ನನಗೆ ರೋಶನ್ ಗೆ ೫-೬ ಸಾರಿ ಫೋನ್ ಮಾಡ್ತಾನೆ . ಏನ್ ಮಾಡ್ತಿದ್ದೀಯ ಕಾರ್ ಅಂತಾನೆ . ಅಳುನೆ ಬರುತ್ತೆ ಅಮ್ಮ . ಅವನೂ ಹಂಗೆ ಅಳೋ ಹಂಗೇ ಮಾತಾಡ್ತಾನೆ .ಇನ್ನ ಮೂರು ವರ್ಷ ಹೆಂಗಿರೋದು ಗೊತ್ತಿಲ್ಲ ' ಅಂದ .
ಮನಸ್ಸೆಲ್ಲ ಆ ನೀಲಿ ಬಾನಂತೆ , ಈ ಮಕ್ಕಳು ದೂಡ್ಡವರಾಗೋದೆ ಬೇಡ . ಸ್ವಾರ್ಥ, ಮೋಸ, ವಂಚನೆಗಳಿಂದ ದೂರ ಹೀಗೆ ಇದ್ದುಬಿಡಲಿ ಅನ್ನೋ ಹಾಗೆ .... :)))
ಅಪರೂಪಕ್ಕೆ ಟಿವಿ ನೋಡ್ತಾ ಇದ್ದೆ . ಯಾವುದೊ ಚಾನೆಲ್ ಅಲ್ಲಿ ಕಪಿಲ್ ದೇವ್ ಬಗ್ಗೆ ಹೇಳ್ತಾ ಇದ್ರು . ಆ ಕಾಲಕ್ಕೆ ಕಪಿಲ್ ದೇವ್ ಅಂದ್ರೆ ಅದೆಷ್ಟು ಹುಚ್ಚು ಅಂದ್ರೆ ಕಾಲೇಜ್ಗೆ ಕದ್ದು ಮುಚ್ಚಿಪುಟ್ಟ transistor ಬ್ಯಾಗ್ ಅಲ್ಲಿ ಇಟ್ಟು ಒಂದು ಬೆಲ್ ಆದ ಒಡನೆ commentary ಕೇಳೋ ಅಷ್ಟು ... ಆ ವೇಗ ಹೆಚ್ಚಿಸುತ್ತಾ ಬಂದು ಬೌಲ್ ಮಾಡೋ ರೀತಿ ಅದೆಷ್ಟು ಚೆಂದ ಅಂದ್ರೆ , ಬೌಲ್ ಮಾಡಿದಾಗೆಲ್ಲ ಒಂದು ವಿಕೆಟ್ ಸಿಗಲಿ ಅಂತ ಬಯಸೋ ಹುಚ್ಚುತನ, ಅವನು ವಿಕೆಟ್ ಬಳಿ ನಿಂತರೆ ಒಂದು ಸಿಕ್ಸರ್ ಬರಲಿ ಅಂತ ಕಾಯೋ ಹುಚ್ಚುತನ .. ಪೇಪರ್ ಅಲ್ಲಿ ಬರೋ ಅವನ ಫೋಟೋನ ಪುಸ್ತಕಕ್ಕೆ ಅಟ್ಟೆ ಹಾಕೋ ಹುಚ್ಚುತನ .. ನಾ ಅವನ ಫ್ಯಾನ್ ಅಂತ ಗೊತ್ತಿದ್ದೂ ಬೇಕಂತಲೇ 'ಅವನೊಬ್ಬ ಕಪಿಲ್ ದೇವ್ ಅಂತೆ ಕಪಿ ದೇವ್' ಅಂತ ರೇಗಿಸ್ತಾ ಇದ್ದ ತಮ್ಮ .. ಅದೆಷ್ಟು ಚೆಂದ ಆಗಿನ ಆಟಗಾರರ ಸಮರ್ಪಣ ಭಾವ .. ಅದ್ಯಾಕೋ ಈಗಿನ ಆಟಗಾರರ ಆಟ ಮೆಚ್ಚುತ್ತೇನಾದರೂ ಲೆಜೆಂಡ್ ಅಂತ ಅನಿಸಿಕೊಳ್ಳೋರು ಕೈ ಬೆರಳಲ್ಲಿ ಏಣಿಸಬಹುದೇನೊ .. ಸಿನಿ ತಾರೆಯರಿಗೂ ಈಗಿನ ಆಟಗಾರರಿಗೂ ಅಂತಹ ವ್ಯತ್ಯಾಸಾನೆ ಕಾಣೋದಿಲ್ಲ ಅನಿಸೋ ಹಾಗೆ .. A legend is a legend ...ಅಂದು ಇಂದು ಮುಂದು ಅನಿಸೋ ಹಾಗೆ ...
ನಾವು ಈಗಿರೋ ಮನೆಗೆ ಬಂದು ೧೦ ವರ್ಷ ..ಚೆಂದದ ಪುಟ್ಟ ಮನೆ, ಚೆಂದದ ಬಡಾವಣೆ ..ಅದ್ ಹೇಗೆ ೧೦ ವರ್ಷ ಆಯ್ತೋ ಗೊತ್ತಿಲ್ಲ ಅನಿಸೋ ಹಾಗೆ . ಇರೋ ಮನೆಗಳವರೆಲ್ಲ ಮನೆಯ ಮುಂದೆ ಒಂದಷ್ಟು ಗಿಡಗಳನ್ನ ಹಾಕಿಕೊಂಡಿದ್ದಾರೆ .. ಮನೆಯ ಹತ್ತಿರ ಇರೋ ಗ್ರಾಮೀಣ ಭಾಗದಿಂದ ಹಸುಗಳನ್ನ ಮೇಯೋಕೆ ಬಿಟ್ ಬಿಡ್ತಾರೆ .. ಹಸುಗಳಿಗೆ ಊಟ ಸಿಕ್ಕರೆ ಸಾಕು ಅನ್ನೋ ಹಾಗೆ ಆಗಿರುತ್ತದೇನೋ . ಪಾಪ ಸಿಕ್ಕ ಹಸುರಿಗೆಲ್ಲ ಬಾಯಿ ಹಾಕೋ ಆಸೆ .ಮನೆಯವರಿಗೆ ತಾವು ಹಾಕಿದ ಗಿಡದ ಮೇಲೆ ಆಸೆ. ಒಂದು ದೊಡ್ಡ ದೊಣ್ಣೆ ಹಿಡಿದು ಕೆಲವೊಮ್ಮೆ ಹೆದರಿಸಿ ಕೆಲವೊಮ್ಮೆ ಹೊಡೆದು ಓಡಿಸ್ತಾರೆ . ಅದೇನ್ ಹಸುವಿನ ಯಜಮಾನನ ತಪ್ಪೋ , ಇಲ್ಲಾ ರಸ್ತೆಯಲ್ಲಿ ಗಿಡ ಹಾಕಿ ಹಸುವಿಗೆ ಹೊಡೆಯೋರ ತಪ್ಪೋ , ಇಲ್ಲ ಏನೂ ಗೊತ್ತಿಲ್ಲದೇ ಹಸುರು ಕಂಡ ಕೂಡಲೇ ಬಾಯೋ ಹಾಕೋ ಹಸುವಿನ ತಪ್ಪೋ, ಗೊತ್ತಾಗೋದಿಲ್ಲ .. ನಾನೂ ಒಂದಷ್ಟು ಹೂವಿನ ಗಿಡ ಹಾಕಿದ್ದೀನಿ , ನೀರೂ ಹಾಕ್ತೀನಿ , ಆದ್ರೆ ಹಸು ಬಂದ್ರೆ ನಮ್ಮ ಮನೆಯಲ್ಲಿ ಯಾರೂ ಓಡಿಸೋದಿಲ್ಲ . ತಿಂದರೆ ತಿನ್ನಲಿ ಅನ್ಕೊಂಡ್ ಸುಮ್ಮನಾಗ್ತೀವಿ. ಈ ಮನೆಗೆ ಬಂದ ಹೊಸದರಲ್ಲಿ ಬಕೆಟ್ ಅಲ್ಲಿ ನೀರು ಇಡ್ತಾ ಇದ್ವಿ . ಅಕ್ಕಪಕ್ಕದವರು ಬೈಕೊಳ್ತಾ ಇದ್ರು . ಈಗ ಬೇಸಿಗೆಯಲ್ಲಿ ಬಿಟ್ಟು ಬೇರೆ ಸಮಯದಲ್ಲಿ ನೀರಿಡೋದಿಲ್ಲ.. ಇದು ಪೀಠಿಕೆ
ವಿಷ್ಯ ಏನಪ್ಪಾ ಅಂದ್ರೆ , ಶುಕ್ರವಾರ ಪೂಜೆಗೆ ತಂದ ಹಣ್ಣೆಲ್ಲಾ ಕಳಿತಿತ್ತು ಅಂತ ಬೆಳಿಗ್ಗೆ ಬೆಳಿಗ್ಗೆ ಎಂದಿನಂತೆ ಬಂದ ಹಸುಗೆ ಕೊಡೋಕೆ ಹೋದೆ . ಆಗಷ್ಟೇ ಮುಂದಿನ ಮನೆಯಾತ ದೊಡ್ಡ ದೊಣ್ಣೆಯಿಂದ ಹೂಡೆದಿದ್ರು . ಆ ಕಡೆ ಮನೆಯಿಂದ ಮತ್ತೊಬ್ಬರು ಓಡಿಸ್ತಾ ಇದ್ರು .. ದಿನಾ ಕೈಯಿಂದಲೇ ಹಣ್ಣು ತಿಂದು ಹೋಗ್ತಾ ಇದ್ದ ಹಸು ಈವತ್ತು ಇನ್ನೇನು ತಿವಿದೆ ಬಿಟ್ಟಿತು ಅನ್ನೋ ಹಾಗೆ ಬೆದರಿಹೋಯ್ತು . ಹಣ್ಣು ಅಲ್ಲೇ ಹಾಕಿ ಒಳಗೆ ಬಂದೆ. ಮತ್ತೆ ಮಂಜು ಹೇಳಿದ್ದು 'ಬುದ್ದಿ ಇರೋ ಮನುಷ್ಯನೇ ಎಷ್ಟೋ ಸಮಯದಲ್ಲಿ ತಿಳಿದೂತಿಳಿದೂ ಅಕಾರಣವಾಗಿ ನೋಯಿಸ್ತಾನೆ . ಇನ್ನು ಬುದ್ದಿ ಇರದ ಪ್ರಾಣಿ ಬೆದರಿ ತನ್ನ ರಕ್ಷಣೆಗೆ ಅಂತ ಹಾಗೆ ಆಡಿದೆ, ಹೆದರಕೊ ಬೇಡ .. ಗೊತ್ತಾಯ್ತಲ್ಲ ಇನ್ ಮೇಲೆ ಹಣ್ಣು ಇಟ್ಟು ಬಂದ್ ಬಿಡು ಅದೇ ತಿನ್ಕೊಂಡ್ ಹೋಗ್ಲಿ, etc, etc '...
ನಿಜವೇನೋ .. ಬುದ್ದಿ ಇರೋ ಮನುಷ್ಯನ ಎಷ್ಟೋ ತಪ್ಪುಗಳನ್ನ ಕ್ಷಮಿಸೋ ನಾವು ಪ್ರಾಣಿಗಳ ಮೇಲೆ ಪ್ರತಾಪ ತೋರಿಸೋದು ಅದೆಷ್ಟ್ ಸರಿನೋ ಗೊತ್ತಿಲ್ಲ ...ಮನಸ್ಸು ಮೋಡ ಕವಿದ ಬಾನು ..
ಅವನು ಅವಳು 
ಎಣ್ಣೆ ಮತ್ತು ಬತ್ತಿಯಂತೆ 
ಒಬ್ಬರೊಡನೆ ಒಬ್ಬರು ಬೆರೆತು ಬದುಕಿದರೆ 
ಹಣತೆ ಬೆಳಗುವಂತೆ ... 
ಬೆರೆ(ಅರಿ)ಯದೇ ಹೋದರೆ 
ಬತ್ತಿ ಬತ್ತಿಯಂತೆ.... ಎಣ್ಣೆ ಎಣ್ಣೆಯಂತೆ
ಹಣತೆ ಬರಿದಾದಂತೆ .......


ನೀನಿಲ್ಲದಾಗ 
ಬರುವ ಈ ಮಳೆ ಹನಿ 
ಮನಸ್ಸಿನ ಗೋಡೆಗಳ 
ಹಸಿಯಾಗಿಸಿ 
ಹೋಗುವುದೇಕೆ ನಲ್ಲ ....:))))

Thursday 3 September 2015

ಹಿಡಿದ ಹಾವನ್ನು 
ಬುಟ್ಟಿಯಲ್ಲಿ ಮುಚ್ಚಿಟ್ಟ 
ಹಾವು ಹಿಡಿವಾತ ......... 
'ನೀ ಯಾಕೆ ಬೇಕು ಈ ಜಗದಲ್ಲಿ ಇಂದು 
ಹೊರಟುಬಿಡು ಆ ಕಾಡಿನ ಮೂಲೆಗೆ ... 
ನೀ ಕಚ್ಚಿದರೆ ಏರುವ ವಿಷಕ್ಕಿಂತ
ಮನುಜ ಕಕ್ಕುವ
ಮಾತುಗಳೇ ಹೆಚ್ಚು ಕಾರ್ಕೋಟಕ '
ಎಂದು ಪಿಸುನುಡಿದದ್ದು
ವಿಪರ್ಯಾಸವೇನಲ್ಲ ............
ಒಂದು ಕಥೆ :
ಪರಶುರಾಮ ಕ್ಷತ್ರಿಯರ ಮೇಲಿನ ಕೋಪಕ್ಕೆ ತಾನು ಕ್ಷತ್ರಿಯರಿಗೆ ವಿದ್ಯಾದಾನ ಮಾಡುವುದಿಲ್ಲ ಅಂತ ಶಪಥ ತೊಟ್ಟಿರುತ್ತಾನೆ . ಕರ್ಣ ಬ್ರಾಹ್ಮಣನ ವೇಷದಲ್ಲಿ ಬಂದು ಪರಶುರಾಮನ ಬಳಿ ಶಸ್ತ್ರ ವಿದ್ಯೆ ಕಲಿತಾ ಇರ್ತಾನೆ. ... ಒಂದ್ ದಿನ ಪರಶುರಾಮ ಕರ್ಣನ ತೊಡೆಯ ಮೇಲೆ ತಲೆ ಇಟ್ಟು ಮಲಗಿರ್ತಾನೆ ಒಂದು ಗುಂಗುರು ಹುಳು ಕರ್ಣನ ತೊಡೆಯ ಕಚ್ಚುತ್ತಾ ಇರುತ್ತೆ , ಗುರು ಎಚ್ಚರಗೊಂಡಾನು ಎಂದು ಕರ್ಣ ಅಲುಗಾಡುವುದೂ ಇಲ್ಲ ತೊಡೆಯಿಂದ ರಕ್ತ ಸುರಿಯುತ್ತಾ ಇರುತ್ತದೆ . ಪರಶುರಾಮ ಎಚ್ಚರಗೊಂಡಾಗ ಕರ್ಣನ ತೊಡೆಯಲ್ಲಿ ರಕ್ತ ಕಂಡು ' ನೀನು ನನಗೆ ಸುಳ್ಳು ಹೇಳಿ ವಿಧ್ಯೆ ಕಲಿತಾ ಇದ್ದೀಯ , ನೀನು ಖಂಡಿತ ಬ್ರಾಹ್ಮಣ ಅಲ್ಲ, ನೀನು ಕಲಿತ ವಿದ್ಯೆ ನಿನ್ನ ಸಮಯಕ್ಕೆ ಆಗದೆ ಇರಲಿ' ಅಂತ ಶಾಪ ಕೊಡ್ತಾನೆ .. ಮತ್ತೆ ಕರ್ಣ ತನ್ನ ಹುಟ್ಟಿನ ಬಗ್ಗೆ ತನಗೆ ಅರಿವಿಲ್ಲ ಎಂಬುದ ತಿಳಿಸಿದಾಗ ಮರುಕಗೊಂಡು ಶಿವ ಧನುಸ್ಸು ನೀಡುತ್ತಾನೆ ....ಇದು ಕಥೆ
'ನೀನು ದೊಡ್ಡವಳು ಸೋತು ಬಿಡು ಏನಾಗುತ್ತೆ 'ಅನ್ನೋ ಅಮ್ಮ .. 'ನೀನು ತಪ್ಪು ಮಾಡಿಲ್ಲ ಗೊತ್ತು ಆದರೂ ಅವರು ದೊಡ್ಡವರು ನೀನು ಚಿಕ್ಕವಳು ಅಲ್ವ ಸೋತು ಬಿಡು' ಅನ್ನೋ ಗಂಡ ;' ಅಯ್ಯೋ ಬಿಡಿ ಅಕ್ಕ ನೀವು ಸೋತರೆ ಅದು ಗೆದ್ದಂತೆ ಅಂತ ನಂಗೆ ಗೊತ್ತು ' ಅನ್ನೋ ವಾರಗಿತ್ತಿ ; 'ಬಿಟ್ ಬಿಡಮ್ಮ ಯಾಕೆ ತಲೆ ಕೆಡಿಸಿಕೊಳ್ತೀಯ ನೀನು ಏನು ಅನ್ನೋದು ನಮಗೆ ಗೊತ್ತು ' ಅನ್ನೋ ಮಕ್ಕಳು ; 'ಅದೆಲ್ಲ ಒಂದ್ ವಿಷ್ಯನಾ ಮರೆತುಬಿಡು , ನೀನು ಏನು ಅನ್ನೋದು ಗೊತ್ತು ' ಅನ್ನೋ ಗೆಳತಿಯರು... 'ಇದೊಂದು ಹೆಲ್ಪ್ ಪ್ಲೀಸ್ ' ಅನ್ನೋ ಬಂಧುಗಳು .. ಪ್ರತೀ ಹೆಜ್ಜೆಯಲ್ಲೂ ಪ್ರೀತಿಗಾಗಿ (!) ಸೋಲುತ್ತಾ , ಮನೆಯ ನೆಮ್ಮದಿಗಾಗಿ (!) ಗುಟ್ಟುಗಳ ಒಡಲೊಳಗೆ ಬಚ್ಚಿಡುತ್ತಾ ,....ಕೆಲವರ ತಪ್ಪ ಮುಚ್ಚಿಟ್ಟು , ಕೆಲವರಿಗೆ ಕಣ್ಣಿಗೆ ಒಳ್ಳೆಯವಳಾಗಿ , ಕೆಲವರ ಕಣ್ಣಿಗೆ ಕೆಟ್ಟವಳಾಗಿ , ... ಕೆಲವರ ಬದುಕಿಗೆ ಆಸರೆಯಾಗಿ, ಕೊನೆಗೊಮ್ಮೆ ಯಾರಿಗೂ ಹೇಳದೆ ಕೇಳದೆ ಹೊರಟು ಬಿಡುವುದೇ ಜೀವನದ ಸಾರ್ಥಕ್ಯವೇ ?????
ಮೇಲಿನ ಕಥೆಗೂ ನಂತರದ ಬರಹಕ್ಕೂ ಸಂಬಂಧ ಏನು ಅಂದ್ರಾ........ ಕೆಲವೊಮ್ಮೆ ಹಾಗೆ ಆಗುತ್ತೆ ..... ಕಷ್ಟ ಸಹಿಷ್ಣುತೆ ಕೂಡ ಸಂಕಷ್ಟಕ್ಕೆ ದೂಡುತ್ತದೆ .. ..ಪ್ರೀತಿ, ನೆಮ್ಮದಿ, ಸಾರ್ಥಕ ಅನ್ನೋ ನೆಪದಲ್ಲಿ ಆತ್ಮಾಭಿಮಾನಕ್ಕೆ ಧಕ್ಕೆ ಆಗುತ್ತದೆ .... But Still, the Life moves on for the sake of the Family, for the sake of the secured life, and for the sake of Social Respect(be it a man or woman)............Some say it, same cry and forget it, some just get Adjusted for it...... and Life Goes onnnnnnnnn...............Felt like sharing.....
Zindagi.................................ಬದುಕು ...........Life......
ಬರುವಿಕೆ ಹೋಗುವಿಕೆ 
ಬದುಕಿನ ನಿಯಮ ಗೆಳೆಯ 
ಹೋದವರು ಬರುವರೋ ಇಲ್ಲವೋ ಅರಿಯೆ 
ಬಸಿರಿನ ಬಂಧುತ್ವವಿರಲಿ, ಉಸಿರಿನ ಬಂಧನವಿರಲಿ ... 
ಬಂದವರೆಲ್ಲ ಹೋಗಲೇಬೇಕೆಂದು ಅರಿವಿದೆ ಗೆಳೆಯ ......
ಅದಕ್ಕೆ ನಾ ನಿಶ್ಚಲೆ
ಆ ಹಿಮಪರ್ವತದ ಹಾಗೆ
ಕರಗಿಯೂ ಕರಗದ ಹಾಗೆ .......

Thursday 20 August 2015

'ಎಲ್ಲಾ ಸರಿ ಆದ್ರೆ ನಾಗರಪಂಚಮಿ ದಿನ ಅಣ್ಣತಮ್ಮ೦ದಿರಿಗೆ , ತೌರಿಗೆ ಒಳಿತಾಗಲಿ ಅಂತ್ಲೇ ಪೂಜೆ ಮಾಡೋದು ಯಾಕೆ' ಅಂದೆ..
ಅತ್ತೆ ಒಂದ್ ಕಥೆ ಹೇಳಿದ್ರು :
ಹಿಂದೆ ಒಬ್ಬ ರೈತ ಅವನ ಹೆಂಡತಿ ಮೂರು ಮಕ್ಕಳ ಜೊತೆ ಒಂದ್ ಹಳ್ಳಿಯಲ್ಲಿ ವಾಸವಾಗಿದ್ದ. ಒಂದ್ ದಿನ ಅವನು ಹೊಲ ಉಳ್ತಾ ಇರೋವಾಗ ಅವನಿಗೆ ತಿಳಿಯದೆ ಅವನ ನೇಗಿಲಿಗೆ ಪುಟ್ಟ ಮೂರು ನಾಗರಹಾವಿನ ಮರಿಗಳು ಸಿಲುಕಿ ಸತ್ ಹೋದ್ವು. ಮರಿಗಳ ಅಮ್ಮ ನೊಂದುಬಿಟ್ಲು , ಅವನ ಮೇಲೆ ಹಗೆ ತೊಟ್ಟಳು . ರಾತ್ರಿ ಎಲ್ಲಾ ಮಲಗಿದ್ದಾಗ ರೈತ, ಅವನ ಹೆಂಡತಿ, ಹಾಗು ಇಬ್ಬರು ಗಂಡು ಮಕ್ಕಳ ಕಚ್ಚಿಬಿಡ್ತು . ಹೆಣ್ಣು ಮಗಳ ಕಚ್ಚ ಹೊರಟಾಗ ಆ ಹುಡುಗಿ ಎಚ್ಚರಗೊಂಡು ಕೈ ಮುಗಿದು ಅರಿಯದೆ ಆದ ತಪ್ಪ ಮನ್ನಿಸುವಂತೆ ಕೇಳಿದ್ಲು . ಒಂದಷ್ಟು ಊಟವಿತ್ತಳು . ಹಾವು ಸಮಾಧಾನ ಹೊಂದಿ 'ನಿನಗೇನೂ ಬೇಕೋ ಕೇಳು 'ಅಂತು . ಹುಡುಗಿ "ನನ್ನ ಅಪ್ಪ ಅಮ್ಮ, ಅಣ್ಣಂದಿರ ಉಳಿಸು . ಅರಿಯದೆ ಆಗೋ ತಪ್ಪುಗಳ ಕ್ಷಮಿಸು . ಇಂದಿನ ದಿನ ನಿನ್ನ ಪೂಜೆ ಮಾಡೋರಿಗೆ ಅಭಯ ನೀಡು. " ಅಂದ್ಲು .. ಹಾವು 'ಹಾಗೆ ಆಗಲಿ" ಅಂತ ಹೊರಟಿ ಹೋಯ್ತು ..
"ಅದಕ್ಕೆ ಮಗ, ಅಣ್ಣತಮ್ಮ೦ದಿರ ಒಳಿತಿಗೆ ತೌರಿನ ಒಳಿತಿಗೆ ಈವತ್ತು ಕೇಳಿಕೊಂಡರೆ ಒಳ್ಳೆಯದಾಗುತ್ತದೆ ...ಹಾಗೆ ನೊಗ ಕೂಡ ಕಟ್ಟೋದಿಲ್ಲ ಆವತ್ತು "ಅಂದ್ರು ಅತ್ತೆ ..
ಕಥೆ ಸುಳ್ಳೋ ನಿಜವೋ ಗೊತ್ತಿಲ್ಲ .ಪಂಚಮಿಯಂದೆ ಅಲ್ಲದೆ ಯಾವಾಗ್ಲೂ ಕೇಳೋದು ಎಲ್ಲಾರಿಗೂ ಒಳಿತಾಗಲಿ ಎಂದೇ ....ಎಲ್ಲಾ ಚೆಂದ ಇದ್ರೆ ನೋಡೋಕೂ ಚೆಂದ ಅಲ್ವೇ
ಹಂಚಿಕೊಳ್ಳಬೇಕು ಅನಿಸ್ತು ....:)))))

Friday 14 August 2015



ಎಣ್ಣೆಗಾಯಿ ಮಾಡೋದಕ್ಕೆ ಬದನೆ ಕಾಯಿ ಹೆಚ್ಚುತ್ತಾ ಇದ್ದೆ .. ಚೆಂದ ಚೆಂದ ನೇರಳೆ ಬಣ್ಣದ ಪುಟ್ಟ ಬದನೆಕಾಯಿಗಳು. ಮಗಳು ಪಕ್ಕಇದ್ಲು 'ಏನಾದ್ರೂ ಮಾಡಿಕೊಡ್ಲ ಅಮ್ಮ' ಅಂತ ಹಿಂದೆ ಮುಂದೆ ಸುತ್ತುತ್ತಾ ಇದ್ಲು .... Usually ತಿಂದ ತಟ್ಟೆ ಕೂಡ ಎತ್ತದ ಮಗಳು ಅಮ್ಮನಿಗೆ ಸ್ವಲ್ಪ ಹುಷಾರಿಲ್ಲ ಅಂದ್ರೆ ಬಂದು ಏನಾದ್ರೂ ಮಾಡಿಕೊಡ್ತೀನಿ ನನಗೂ ಕೆಲ್ಸ ಹೇಳು ಅಂತ ಹಿಂದೆ ಬೀಳ್ತಾಳೆ ... ಅವಳು ಮಾಡದೆ ಇದ್ರೂ ಆ concern makes me feel happy.... ' ಏನಿಲ್ಲ ಮಗ ಇಷ್ಟೇ ಆಯ್ತಲ್ಲ ನೀ ನಡಿ ನಾ ಮಾಡಿ ಬರ್ತೀನಿ ' ಅಂದೆ ... ಹಾಗೆ slab ಮೇಲೆ ಕಾಲು ಆಡಿಸ್ತಾ 'ಕಥೆ' ಹೇಳ್ತಾ ಕೂತಿದ್ಲು .... ಬದನೆ ಕಾಯಿ ಹೆಚ್ಚುತ್ತಿದ್ದೆನಲ್ಲ ... ಮೇಲೆಲ್ಲಾ ಅಷ್ಟು ಚೆಂದ ಕಾಣೋ ಬದನೆಯ ಒಳಗೆ ಹುಳುಕು !!!! ಮಗಳು ಕೇಳಿದ್ಲು ... 'ಅಲ್ಲ ಕಣಮ್ಮ ಈ ಕಾಯಿ ಮೇಲೆಲ್ಲಾ ಎಷ್ಟ್ ಚೆನ್ನಾಗಿದ್ಯಲ್ಲ ... ಇದರೊಳಗೆ ಹುಳ ಹೆಂಗ್ ಹೋಯ್ತು' ..... 'ಹೂವಾಗಿದ್ದಾಗ ಸೇರಿಹೋದ ಹುಳು ಇರಬೇಕು ಮಗ' ಅಂದೆ .....
ಹೌದಲ್ಲವೇ .... ಸಣ್ಣವರಿದ್ದಾಗ ಕಲಿತ ಒಳಿತು ಕೆಡುಕು .... ಕಡೆಯವರೆಗೂ ಇರುತ್ತದೆ though we may change in few circumstances ಸಂಸ್ಕಾರ ಅನ್ನೋದು ಬದಲಾಗೊಲ್ಲ ಅಲ್ಲವೇ ..... ....... ಮನಸ್ಸು ಒಂದ್ ತರ ಸಿಹಿ ಸಿಹಿ ... ನಮ್ಮನ್ನ ಬೆಳೆಸಿದ ಹಿರಿಯರ ನೆನೆದು .........:))))

Tuesday 4 August 2015



ಕೆಲವೊಮ್ಮೆ ಹೀಗೆ ಆಗುತ್ತದೆ .ಮನೆಯ ಹಿರಿಯರು ಯಾರ ಜೊತೆನೋ ಏನೋ ಮನಸ್ತಾಪ ಮಾಡಿಕೊಂಡು ಅದರಿಂದ ಮನೆಯ ಇತರರೂ ಕೂಡ ಆ 'ಯಾರೋ" ಜೊತೆ ಮಾತುಕತೆ ನಿಲ್ಲಿಸಬೇಕು ಅನ್ನೋ ಪರಿಸ್ಥಿತಿ ತಂದುಬಿಡುತ್ತಾರೆ. ಮತ್ತ್ಯಾವಾಗಲೋ ಅವರೆಲ್ಲ ಸರಿ ಹೋದಾಗ ಮತ್ತೆ ಮಾತನಾಡುವಾಗ ಕಿರಿಯರು ಅನಿಸಿಕೊಂಡೋರಿಗೆ ಮಾತಾಡಿಸೋಕೆ ಮುಜುಗರ ಅನಿಸಿಬಿಡುತ್ತದೆ . ಮನಸಲ್ಲಿ ಒಂದ್ ತರ ಅಪರಾಧಿ ಪ್ರಜ್ಞೆ . ಯಾಕೆ ಅಂದ್ರೆ 'ಆ ಯಾರೋ ' ಇವರನ್ನ ನೋಯಿಸಿರೊದಿಲ್ಲ. ಆದ್ರೆ ಆಮೇಲೆ ಮಾತಾಡಿಸಿದಾಗ ಕೆಲವರು ಸುಮ್ಮನೆ ಏನೂ ತೋರಿಸದೆ ಮಾತಾಡಿಬಿಡ್ತಾರೆ , ಮತ್ತೆ ಕೆಲವರು 'ಇಷ್ಟ ದಿನ ಎಲ್ಲಿತ್ತು 'ಅನ್ನೋ ತರ ಮಾತಾಡ್ತಾರೆ . ಕೆಲವರು ಒಂದು ತುಂಬು ಕುಟುಂಬದಲ್ಲಿ ಇದೆಲ್ಲ ಸಾಮಾನ್ಯ ಅನ್ನೋ ತರ ಕೆಲವರು ಸುಮ್ಮನಾಗಿಬಿಡ್ತಾರೆ ...ಗೆಳೆತನದಲ್ಲೂ ಕೆಲವೊಮ್ಮೆ ಯಾರದೋ ಇಬ್ಬರ ಮನಸ್ತಾಪಕ್ಕೆ ಸಂಬಂಧವೇ ಇರದ ನಮ್ಮ ಬಂಧುತ್ವ ಕಳೆದುಕೊಂಡ್ಬಿಡ್ತಾರೆ!!..ಈ ರೀತಿಯ ಅನಗತ್ಯ ವಿಷಯಗಳಿಗೆ ನಾನೂ ಬಹಳಷ್ಟು ಸಾರಿ ಹಿಂಸೆಪಟ್ಟಿದ್ದೀನಿ.
ಅದಕ್ಕೆ ಈಗ ಮಕ್ಕಳಿಗೆ ಹೇಳಿದ್ದೀನಿ . ದೊಡ್ಡೋರು ಯಾರ ಜೊತೆ ಹೇಗೆ ಇರಲಿ , ನೀವು ತಲೆ ಕೆಡಿಸ್ಕೊಳ್ಳೋದು ಬೇಡ . ಅವರು ಒಂದ್ ಹೊತ್ತ್ ಇದ್ದಂಗೆ ಮತ್ತೊಂದ್ ಹೊತ್ತಲ್ಲಿ ಇರೊದಿಲ್ಲ. ನಿಮ್ಮ ಪಾಡಿಗೆ ನೀವು ಎಲ್ಲರ ಜೊತೆ ಮಾತಾಡಿ , ಚೆನ್ನಾಗಿರಿ. keep in touch ಅಷ್ಟೇ . ಯಾಕೆ ಅಂದ್ರೆ " 'ಇಷ್ಟ ದಿನ ಎಲ್ಲಿತ್ತು ' ಅನ್ನೋ ಮಾತಿಂದ ಮನಸ್ಸಿಗೆ ನೋವಾಗೋದು ಬೇಡ ಅಂತ. ಸಣ್ಣ ಸಣ್ಣ ಮಾತುಗಳೇ ತುಂಬಾ ನೋವು ತರೋದು .
ಆದ್ರೂ, ನಮ್ಮ ಭಾವನೆಗಳನ್ನ ಇನ್ನೊಬ್ಬರ ಮೇಲೆ ಹೇರೋದು ಎಷ್ಟ್ ಸರಿ?!
ನೆನ್ನೆ ಅಮ್ಮ ಹುಟ್ಟಿದ ದಿನ , ಅಮ್ಮ ಚಿಕ್ಕಮ್ಮ ಜಗಳ ಆಡಿದ್ದಾಗ ನಾ ಚಿಕ್ಕಮ್ಮ ಹತ್ತಿರ ಮಾತಾಡಿರಲಿಲ್ಲ. ಈಗ ಅವರಿಬ್ಬರೂ ಸರಿ ಇದ್ದಾರೆ ನನಗೆ ಮಾತಾಡಿಸೋಕೆ ಮುಜುಗರ . ಚಿಕ್ಕಮ್ಮ ಈಗ ಅಮ್ಮನ ಮನೆಯಲ್ಲಿ ಇದ್ದಾರೆ ಅಂತ ನಾ ಹೋಗಿಲ್ಲ. ಅತ್ತೆ ಮನೆಗೆ ಹೋಗಿ ಬರೋ ಅಷ್ಟರಲ್ಲಿ ಮಕ್ಕಳು ಅವರ ಅಜ್ಜಿಗೆ ಕೇಕ್ ತಗೊಂಡ್ ಹೋಗಿ ವಿಷೆಸ್ ಹೇಳಿ ಬಂದಿದ್ರು . ಅಮ್ಮ ಫೋನ್ ಮಾಡಿ ಖುಷಿಪಟ್ಟರು .. ಮನಸ್ಸು ಮತ್ತದೇ ನೀಲಿ ಬಾನು ... :))

Sunday 2 August 2015

ವಿಧಿ ಎನ್ನುವ
ದ್ರೋಣಾಚಾರ್ಯ...
ದಿನಕ್ಕೊಂದು
ಕ್ಷಣಕ್ಕೊಂದು
ಚಕ್ರವ್ಯೂಹ
ರಚಿಸುತ್ತಿದ್ದರೆ...
ಮನ ಅಭಿಮನ್ಯುವಾಗಿ
ಚಕ್ರವ್ಯೂಹವ ಛೇದಿಸಿ
ಎಷ್ಟೋ ಬಾರಿ
ಸೋತು
ಸತ್ತು
ಮತ್ತೆ ಎದ್ದು ನಿಲ್ಲುತ್ತಿದ್ದೆ
ನನ್ನ ನೀನು ಸೋಲಿಸಲಾರೆ ಎಂದು..:))))

Monday 27 July 2015

ಅದೆಷ್ಟು ಬಾರಿ 
ಬಿದ್ದಲ್ಲೇ ಬಿದ್ದು ಒಡೆದು ಹೋಗುವೆ ಹುಚ್ಚು ಮನವೇ ...... 
ಕಲೆಗಳು ಮಾಗುವ ಮೊದಲೇ ಮೂಡುವ ಹಸಿ ಗಾಯಗಳು 
ಕಣ್ಣಿಗೆ ಕಾಣುವಂತಿದ್ದರೆ 
ಬೀಳದಂತೆ ಎಚ್ಚರಿಸುತ್ತಿದ್ದೆನೇನೋ .......
'ಅಮ್ಮ, ಅವ್ಳೇ ಫಸ್ಟ್ ಮಾತಾಡಿಸಿದ್ದು ನಾನಲ್ಲ , ನಾ ಹೇಳಲಿಲ್ವ ನಾ ಸೋಲೋದಿಲ್ಲ ಅಂತ' ಮಗಳು ನಗುತ್ತಾ ಹೇಳಿದಾಗ ಮನಸ್ಸು ಎತ್ತಲೋ ಹೋಯಿತು ... ಚಿಕ್ಕವಳಿದ್ದಾಗ 'ನಾ ತಪ್ಪೇ ಮಾಡಿಲ್ಲ , ನಾ ಯಾಕೆ ಸೋಲಲಿ , ನಾ ಯಾಕೆ ಫಸ್ಟ್ ಮಾತಾಡಲಿ .......' ಅನ್ನೋ ಹಠ ಈಗೆಲ್ಲ ಇಲ್ಲವೇ ಇಲ್ಲ!! ಪರಿಸ್ಥಿತಿಗೆ ಅನುಗುಣವಾಗಿ ಸೋಲೋದಕ್ಕೆ ಮನಸ್ಸು ಹೊಂದಿಕೊಂಡು ಬಿಟ್ಟಿದೆ....ಅಮ್ಮ, ತಮ್ಮ, ಅತ್ತೆ, ಗಂಡ, ಮಕ್ಕಳು, ಮೈದುನಂದಿರು , ಕೆಲವು ಗೆಳೆಯ ಗೆಳತಿಯರು ....'ನನ್ನ'ನ್ನ ಸೋಲಿಸಿದ ಪಟ್ಟಿಗೆ ಸೇರುತ್ತಾರೆ ....ಅವರು ದೊಡ್ಡವರು ಅಲ್ವ ಅವರ ಹತ್ರ ಏನ್ ನಿನ್ನ ಹಠ ಅಂತ ಒಮ್ಮೆ, ನೀ ದೊಡ್ಡವಳು ಅಲ್ವ ಸಣ್ಣವರ ಹತ್ರ ಏನು ನಿನ್ನ ಹಠ ಅಂತ ಮತ್ತೊಮ್ಮೆ, ನಿನ್ನವರೆ ಅಲ್ವ ಅವರ ಬಳಿ ಏನು ನಿನ್ನ ಹಠ ಅಂತ ಇನ್ನೊಮ್ಮೆ ... ಹೀಗೆ ಸೋಲುತ್ತಾ ಹೋಗುವ ಮನಸ್ಸು ಪ್ರೀತಿಯ ಗೆದ್ದ ಮೇಲೆ ಎಲ್ಲೋ ಒಂದು ಕಡೆ ನಾ ಸೋತಿಲ್ಲ ಅನ್ನೋ ಹಂತ ತಲುಪಿದೆ ! ಕೆಲವೊಮ್ಮೆ ಇಗೋಗೆ ಏಟಾಗಿದ್ದು ನಿಜವಾದರೂ ಅದು ನನ್ನ uprise ಗೆ ಕಾರಣವಾಗಿದ್ದು ಹೌದು !!!
ಗೆದ್ದ ಗೆಲುವೆಲ್ಲ ಗೆಲುವಲ್ಲ ........ ಸೋತ ಸೋಲೆಲ್ಲ ಸೋಲೂ ಅಲ್ಲ ಅನ್ನೋ ಅಮ್ಮನ ಮಾತು ಯಾವಾಗ್ಲೂ ಮನಸ್ಸಲ್ಲಿ ಎವರ್ಗ್ರೀನ್ .... ಆಗೆಲ್ಲ ಮನಸ್ಸು ಮತ್ತದೇ ನೀಲಿ ನೀಲಿ ಬಾನು ......ಹಾಗೆ ಸುಮ್ಸುಮ್ನೆ ಬರೆಯ ಬೇಕು ಅನಿಸಿತು ಪುಟ್ಟಿಯ ಮಾತಿಂದ ...... :)))))
ಕರಿ ಮೋಡ ಸುರಿಸುವ ಬಿರುಮಳೆ
ಬಿಳಿ ಮೋಡ ಸುರಿಸುವ ತುಂತುರು ಹನಿ 
ಎರಡೂ ನಿರಭ್ರ ನಿರ್ಮಲ ...
ಮತ್ತೆ ನಾನೇಕೆ ಹೀಗೆ 
ಹೀಗೊಮ್ಮೆ ಹಾಗೊಮ್ಮೆ ...... 
ವರುಣನನ್ನ ವರುಷಗಳಿಂದ ಪ್ರೀತಿಸಿದರೂ
ಕಲಿಯಲಾರದೆ ಹೋದೆ ಪಾಠ .......
ಕತ್ತಲ ದಿಟ್ಟಿಸುತ್ತಾ ಕುಳಿತ ಮನದಲ್ಲಿ ನುಗ್ಗಿ ಬರುತ್ತಿದ್ದ ಭಾವಗಳ ಅಲೆಯಲ್ಲಿ ತೇಲಲಾರೆ ಎಂಬಂತೆ ಮುಳುಗಿದ್ದಳು ..ಅವನ ಕೈ ಹಿಡಿದಿದ್ದ ತನ್ನ ಕೈಯಲ್ಲಿ ಅವನ ಕೈ ಇದೆಯೇನೋ ಎಂಬಂತೆ ನೋಡುತ್ತಲೇ ಇದ್ದಳು ... ನಿನ್ನ ಬದುಕಿನ ಹೊತ್ತಿಗೆಯಲ್ಲಿ ನನ್ನದೂ ಒಂದು ಪುಟ್ಟ ಪುಟ ಇದೆಯಲ್ಲವೇ ಎಂದು ಕೇಳಬೇಕೆಂದುಕೊಂಡ ಮಾತು ಮರೆತೇಬಿಟ್ಟಿದ್ದಳು ....ಮರೆತೂ ಮರೆಯಲಾರೆ ಎಂಬಂತೆ... ಮತ್ತೆಂದೂ ಸಿಗದೇನೋ ಎಂಬಂತೆ . ಮತ್ತೆ ನಾ ನಿನ್ನ ಹುಡುಕಲಾರೆ ..ಇನ್ನೆಂದೂ ಹುಡುಕಲಾರೆ ಇಲ್ಲೇ ಮನದಾಳದಲ್ಲೇ ಹುದುಗಿರುವ ನಿನ್ನ ಮತ್ತೆಂದೂ ನಾ ಹುಡುಕಲಾರೆ ....ಎಂಬಂತೆ ಕಣ್ಣ ಹನಿಯೊಂದು ಕಣ್ಣ ತುದಿಯಲ್ಲೇ ಇಂಗಿಹೋಯ್ತು .... ಅವಳ ಕಣ್ಣ ಹನಿ ನೋಡಲಾರದ ಕತ್ತಲು ಮತ್ತಷ್ಟು ಗಾಢವಾಯ್ತು ..........


ITI ಓದಿದವರಿಗೆ ಕೆಲ್ಸ ಸಿಗೋದು(ಕೊಡೋದು) ಸುಲಭ , ಅದೇ ಈ MBA M Tec ಮಾಡಿದವರಿಗೆ ಸಿಗೋದು ಕಷ್ಟ ಕಣೆ ಅಂದ ಒಂದು ಶಾಲೆ ನಡೆಸುತ್ತ ಇರೋ ಗೆಳೆಯ .. ನಿಜವೇ , ಸಣ್ಣ ಪುಟ್ಟ ಓದಿಗೆ ಈಗ ಹೇಗಾದ್ರು ಕೆಲ್ಸ ಸಿಗುತ್ತೆ.. ಸಿಗುತ್ತೆ ಅನ್ನೋದಕ್ಕಿಂತ ಅವರಿಗೆ ತಿಳಿದ ಯಾವ ಕೆಲಸ ಆದ್ರೂ ಮಾಡಬಹುದು ... ಆದರೆ ಅದೆಷ್ಟೋ ವರುಷಗಳನ್ನ invest ಮಾಡಿ ಅದೆಷ್ಟೋ ದುಡ್ಡು ಖರ್ಚು ಮಾಡಿ , ಅದಕ್ಕೆ ತಕ್ಕಕೆಲ್ಸ ಸಿಗದೇ ಇದ್ರೆ ಬಲು ಹಿಂಸೆ ಅನಿಸಿಬಿಡುತ್ತದೆ.. ತಮ್ಮ ವಿದ್ಯೆಗೆ ತಕ್ಕ ಕೆಲಸ ಸಿಗದ ಮಕ್ಕಳು ಕೆಲವೊಮ್ಮೆ ಡಿಪ್ರೆಸ್ ಕೂಡ ಆಗ್ತಾರೆ , ಮನೆಯಲ್ಲಿ ಅಪ್ಪ ಅಮ್ಮ ಕೂಡ ತುಂಬಾ ಅಪೇಕ್ಷೆ ಇಟ್ಟು ಓದಿಸಿದ ಮಗ/ಳು ಹೀಗೆ ಮನೆಯಲ್ಲೇ ಉಳಿದರಲ್ಲ ನೋಯುತ್ತಾರೆ .. ಕಣ್ಣ ಮುಂದೆಯೇ ಕೆಲವು ಪೋಷಕರ ಮಕ್ಕಳ ಸಂಕಟ ಕಂಡಾಗ ಯಾಕೋ ತುಂಬಾ ಹಿಂಸೆ .. ಕೆಲವು ಕಡೆ ಓದಿದ್ದಾರೆ ಅಂತಲೇ ಕೆಲಸ ಕೊಡದೆ ಉಳಿದಾಗ ಆ ಮಕ್ಕಳ ಮನಸಲ್ಲಿ ಮೂಡೋ ಅಸಹನೆ ಹೇಳಲು ಅಸಾಧ್ಯ ...ಕ್ಯಾಂಪಸ್ ಸೆಲೆಕ್ಷನ್ ಇರೋ ಕಾಲೇಜ್ ಹುಡುಕು ಅಂತ ಹೇಳೋ ಅನೇಕರಿಗೆ ಕ್ಯಾಂಪಸ್ ಸೆಲೆಕ್ಷನ್ ಇರೋ ಕಾಲೇಜ್ಗಳಲ್ಲಿ ಕೊಡಬೇಕಾದ ಹಣದ ಬಗ್ಗೆ ಅರಿವು ಕಡಿಮೆ .... ಸರಕಾರೀ ಕಾಲೇಜ್ಗಳಲ್ಲಿ ಸಹ ಬಲು ಚೆಂದ ಓದೊ ಹುಡುಗರು ಇರ್ತಾರೆ ... ಸರಕಾರೀ ಕಾಲೇಜ್ಗಳಲ್ಲಿ ಸಹ ಕ್ಯಾಂಪಸ್ ಸೆಲೆಕ್ಷನ್ ಯಾಕೆ ಇಡಬಾರದು??... ಹಾಗೆ ಆದರೆ ಅದೆಷ್ಟೋ ಮಕ್ಕಳ ಭವಿಷ್ಯ ಬರೆದಂತೆ ಆಗುತ್ತದೆ ...ಬೇಡದ ಸಲ್ಲದ ರಾಜಕೀಯ ಮಾಡೋ ನಾಯಕರು ಇಂತಹ ಸಣ್ಣ ಪುಟ್ಟ ವಿಷಯಗಳ ಕಡೆ ಗಮನಿಸಿದ್ರೆ ಅದೆಷ್ಟೋ ಜನಕ್ಕೆ ಉಪಯೋಗವಾಗುತ್ತೆ .......
ಇಬ್ಬರು MBA ಓದಿರೋ ಮಕ್ಕಳು ಒಂದು ಸಣ್ಣ Montessori ಅಲ್ಲಿ ಬರಿ ೭ ಸಾವಿರಕ್ಕೆ ಕೆಲ್ಸಕ್ಕೆ ಒಪ್ಪಿಕೊಂಡರು ಅನ್ನುವಾಗ ಯಾಕೋ ....................
ಸೋದರತ್ತೆಗೆ ತಮ್ಮ ಮಗನಿಗೆ ಸೋದರ ಸೊಸೆಯನ್ನ ತರಬೇಕು ಅನ್ನೋ ಅದಮ್ಯ ಆಸೆ .. ಒಂದು ಕಾಲದಲ್ಲಿ ಏನೂ ಸರಿ ಇಲ್ಲದೆ ಇದ್ದಾಗ ತಿರುಗಿ ಕೂಡ ನೋಡದ ಅತ್ತೆ, ಸೋದರಸೊಸೆ ಚೆಂದ ಓದಿ ಚೆಂದ ಇದ್ದಾಳೆ ಎನಿಸಿದಾಗ ಅವಳನ್ನ ತಮ್ಮ ಮಗನಿಗೆ ಮದುವೆಗೆ ಕೇಳಿದರು .. ನಾದಿನಿ 'ಅವಳ ಓದು ಮುಗಿಯಲಿ ಅತ್ತಿಗೆ . ಆಮೇಲೆ ಅವಳ ಇಷ್ಟ' ಎಂದಾಗ ಸೊಸೆ ತನ್ನ ಮಾತು ತೆಗೆಯಲಾರಳು ಎನಿಸಿ ಸುಮ್ಮನಾದರು . ಆದರೆ ಸೋದರಸೊಸೆ ಮತ್ಯಾರನ್ನೊ ಪ್ರೀತಿಸಿ ಅವನನ್ನೇ ಮದುವೆಯಾಗ ಹೊರಟಾಗ ಕೋಪ ಮಾಡಿಕೊಂಡು ಮತ್ತೆ ಮಾತುಬಿಟ್ಟರು. ಒಂದಷ್ಟು ವರುಷಗಳು ಕಳೆದ ಮೇಲೆ ಮಾವ ತೀರ ಹುಷಾರು ತಪ್ಪಿದಾಗ ಮತ್ತೆ ಕುಟುಂಬಗಳು ಒಂದಷ್ಟು ಹತ್ತಿರವಾದವು . ಮಾವ ತೀರಿಹೋದರು . ಅತ್ತೆ ಒಂದಷ್ಟು ಕುಗ್ಗಿಹೋದರು .. ಮಾವ ಸತ್ತ ಒಂದು ವರ್ಷಕ್ಕೆ ಮಗ ರಸ್ತೆ ಅಪಘಾತದಲ್ಲಿ ತೀರಿಹೋದ. ಸೋದರಸೊಸೆಯ ಕಂಡ ಒಡನೆ ಅವಳನ್ನ ತಬ್ಬಿ ಅತ್ತ ಸೋದರತ್ತೆ 'ನೀ ಮದುವೆ ಆಗಿದ್ದರೆ ನನ್ನ ಮಗ ಸಾಯ್ತಾ ಇರಲಿಲ್ಲ !!!ನಿನ್ನ ಮಾಂಗಲ್ಯ ಅವನನ್ನ ಉಳಿಸಿಕೊಳ್ತಾ ಇತ್ತು ' ಅಂತ ಅತ್ತಾಗ ಅದ್ಯಾಕೋ ದಿಗ್ಬ್ರಮೆ... ನೋವು .... ಅಲ್ಲೇ ಇದ್ದ ಮತ್ತೊಬ್ಬ ಸೋದರತ್ತೆ ಆ ಹುಡುಗಿಯ ತಬ್ಬಿ ಆಚೆ ಕರೆದುಕೊಂಡು 'ಸುಮ್ಮನೆ ಬೇಡದ್ದು ತಲೆ ಕೆಡಿಸಿಕೊಳ್ಳಬೇಡ ತಾಯಿ , ಅವಳು ನೋವಲ್ಲಿ ಇದ್ದಾಳೆ ಏನೋ ಮಾತಾಡ್ತಾಳೆ ..ನಿನ್ನ ಮದುವೆ ಆದಾಗ ಹೀಗೆ ಆಗಿದ್ದರೆ ನಿನ್ನ ಕಾಲುಗುಣ ಅಂತ ಇದ್ರು ... ನೀ ಚೆನ್ನಾಗಿದ್ದೀಯ, ಬಂದಿದ್ದೀಯ ,ಅದೇನು ನಿನ್ನ ಕೆಲಸ ಮುಗಿಸಿ ಹೋಗು' ಅಂದ್ರು ......
ಇಂದಿಗೂ ಅರಿವಿಲ್ಲ ನನಗೆ ಯಾವುದು ಸರಿ ಅಂತ .. ಆ ಅತ್ತೆ ಹೇಳಿದ್ದಾ!? ಇಲ್ಲ ಈ ಅತ್ತೆ ಹೇಳಿದ್ದು ಸರಿಯ ಅಂತ .. ಆದರು ಮಾವನ ಮಗ ಒಳ್ಳೆ ಗೆಳೆಯನಾಗಿದ್ದ ಅವನ ಕಳೆದುಕೊಂಡ ನೋವು ಇನ್ನು ಇದೆ ... ಈ ತಿಂಗಳಿಗೆ ಅವನನ್ನ ಕಳೆದುಕೊಂಡು ೮ ವರ್ಷ .... ಅದ್ಯಾಕೋ ನೆನಪಾದ .............
ಅವಳು ಹೇಳಿದ ಕಥೆ ..... 
ನನಗೇ ತಿಳಿಯದೆ ತುಂಬಾ ಪ್ರೀತಿಸಿಬಿಟ್ಟೆ ಅವನನ್ನ .. ಎಂದೂ ಯಾರನ್ನೂ ಹಚ್ಚಿಕೊಳ್ಳದ ನಾ ಅವನ ಗೆಳೆತನ ಬಯಸಿದೆ, ಅವನ ಸಾಂಗತ್ಯ ಅರಸಿದೆ . ಅವನು ಬರುವ ಎಂದೊಡನೆ ಮನದ ತುಂಬಾ ಬಾನ ನೀಲಿ .. ಅವ ಬಂದ, ನನಗಾಗಿ ಅದೆಷ್ಟೇ ಶ್ರಮವಾದರೂ ಬಂದ ..ಅದೆಷ್ಟು ಮಾತು ... ಆಡಿದ ಅಷ್ಟೆಲ್ಲಾ ಮಾತುಗಳು ಮನದ ಹೊತ್ತಿಗೆಯಲ್ಲಿ ಅಳಿಸಲಾರದೆ ಉಳಿದುಬಿಟ್ಟವು .. ಮತ್ತೆ ಅವನು ಹೋಗಲೇಬೇಕಿತ್ತು.......ಹೊರಟ ... ಆಡದೆ ಉಳಿದ ಮಾತು ಮೌನದ ಮೊರೆ ಹೊಕ್ಕಿತು ...ಮೌನ ಬದುಕಿನ ಅದೆಷ್ಟೋ ವರುಷಗಳವರೆಗು ಯಾರಿಗೂ ಕಾಣದ ಕಂಬನಿಯಾಗೆ ಉಳಿದುಹೋಯ್ತು .......ಹಾಗೆ ಹಾಗೇ ಉಳಿದುಬಿಟ್ಟೆವು ಭೂಮಿಬಾನಿನಂತೆ ... ಕ್ಷಿತಿಜದ ಅಂಚಲ್ಲಿ ತಾಕಿಯೂ ತಾಕದಂತೆ .......
ಪುಟ್ಟಿನ ರಜ ಅಂತ ಒಂದೆರಡು ದಿನ ಮೈದುನನ ಮನೆಗೆ ಕಳಿಸಿದ್ವಿ . ಈವತ್ತು ಬಂದ್ಲು . ಬಂದ ಮೇಲೆ 'mom, ನಿನ್ನ ಸಕ್ಕತ್ ಬೈಕೊಂಡೆ ಕಣೆ ಕುಳ್ಳಿಮಾ' ಅಂದ್ಲು . ಇವಳದ್ದು ಇದ್ದಿದ್ದೆ ಎಲ್ಲೂ ಹೋಗೋದಿಲ್ಲ , ಕಳಿಸಿದ ಸಿಟ್ಟಿಗೆ ಹೇಳ್ತಾ ಇದ್ದಾಳೆ ಅಂತ 'ಅದ್ಯಾಕ್ ಮಗ ' ಅಂದೆ 'ಅಲ್ಲ ಕಣಮ್ಮ ಚಿಕ್ಕಪ್ಪನ ಮನೆಯಲ್ಲಿ ಬೇರೆ ಬಕೆಟ್ಗೆ ನೀರು ಮಿಕ್ಸ್ ಮಾಡಿಕೊಂಡು ಸ್ನಾನ ಮಾಡಬೇಕು , ನನಗೆ ನೀ ಅದೆಲ್ಲ ಹೇಳೇ ಕೊಟ್ಟಿಲ್ಲ , wat maa uu , ಆಮೇಲೆ ಆಂಟಿ ಬಂದು 'ಅಷ್ಟೂ ಬರೋಲ್ವಾ ಪುಟ್ಟಿ ಅಂತ"ನೀರು ಮಿಕ್ಸ್ (ತೋಡಿ) ಮಾಡಿಕೊಟ್ರು " ಅಂದ್ಲು !!!!!!!!!!!!!!!.......ಹಂಡೆ ಓಲೆ ಅಂದ್ರೆ ಏನೂ ಅಂತಲೇ ಮರೆತು ಹೋಗ್ತಾರೇನೋ ಇಂದಿನ generationuuuuu.............!!!!
ಈ ಫೇಸ್ಬುಕ್ ಅನ್ನೋ ಫೇಸ್ಬುಕ್ ಯಾರಿಗೆ ಏನೋ ಗೊತ್ತಿಲ್ಲ ಆದರೆ ತುಂಬಾನೇ home-tied ಆಗಿದ್ದ ನನಗೆ ಒಂದಷ್ಟು ಒಳ್ಳೆ ಗೆಳೆತನಗಳನ್ನ ಕೊಟ್ಟಿದೆ . ಕೆಲವಂತೂ ಅದೆಷ್ಟೋ ವರುಷಗಳ ಬಂಧುತ್ವವೇನೋ ಅನ್ನೋ ಅಷ್ಟು . ಕೆಲವು ಹಿರಿಯರು ಕೆಲವು ಕಿರಿಯರು ಮನೆಗೆ ಸಹ ಬಂದುಹೋಗೊ ಅಷ್ಟು ಆತ್ಮೀಯರಾಗಿದ್ದಾರೆ . ಒಂದು ಕಾಲದಲ್ಲಿ ನನ್ನ ಗಂಡ 'ಮೊಬೈಲ್ ತಗೋಳೋದಿಲ್ಲ ಕಣಮ್ಮ , ನನ್ನ ಫ್ರೆಂಡ್ಸ್ ಫೋನ್ ಮಾಡಿದ್ರೆ ನೀ ಬೇಸರ ಮಾಡಿಕೊಳ್ತೀಯ , ಅಷ್ಟು ಫ್ರೆಂಡ್ಸ್ ನನಗೆ ' ಅಂತ ಇದ್ದವನು ಈಗ ' ಮಗ ಇವಳಿಗೆ ಸೆಲ್ ಕೊಡಿಸಿದ್ದೆ ತಪ್ಪು ನೋಡು, ನನಗಿಂತ ಜಾಸ್ತಿ ಫ್ರೆಂಡ್ಸ್ ಇವಳಿಗೆ ಇದ್ದಾರೆ "ಅನ್ನೋ ಹಾಗೆ ಫೇಸ್ಬುಕ್ ಗೆಳೆತನ ನೀಡಿದೆ , Not that ಕೆಟ್ಟ ಅನುಭವಗಳೇ ಇಲ್ಲ ಅಂತಲ್ಲ . ಕೆಲವನ್ನು ಹಿರಿಯ ಕಿರಿಯ ಮಿತ್ರರು ಮತ್ತೆ ಕೆಲವನ್ನ ನಾನೇ ಬಗೆಹರಿಸಿಕೊಂಡಿದ್ದೇನೆ.
ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರ? ಈ ಫೇಸ್ಬುಕ್ ಒಬ್ಬ ಚೆಂದದ ಮಗನಂತ ಗೆಳೆಯನನ್ನ ಕೊಟ್ಟಿದೆ . ಅದೆಷ್ಟು ಮುಗ್ದ ಚೆಂದ ಅಂದ್ರೆ... i simply admire him. ಒಬ್ಬ ಇಂಜಿನಿಯರ್ ಹುಡುಗ ೨೦-೨೫ ಸಾವಿರ ಸಂಬಳ ತೆಗೆಯೋ ಹುಡುಗ , ಬೆಂಗಳೂರಿನಿಂದ ಅವರ ಅಮ್ಮ ಕೊಟ್ರು ಅಂತ ಉಪ್ಪಿನಕಾಯಿ, ತೊಕ್ಕು ಎಲ್ಲ ಕವರ್ ಅಲ್ಲಿ ಹಿಡಿದು ಬೆಳಿಗ್ಗೆಯಿಂದ ಸಂಜೆಯವರೆಗೂ ಮೈಸೂರಿನ ಅವನ ಕೆಲಸ ಮುಗಿಸಿ , ಸಂಜೆ ಮಳೆಯಲ್ಲಿ ಮನೆಗೆ ಬಂದು 'ಇದು ನೋಡು ನಿನಗೆ ' ಅಂತ ತಂದಾಗ ಮನಸ್ಸು ಆ ಸುರಿದ ಮಳೆಯ ನಂತರದ ಬಾನಿನಂತೆ ... ಇನ್ನು ಸ್ಕೂಲ್ ಕಾಲೇಜ್ ಹೋಗೊ ನನ್ನ ಮಕ್ಕಳು ಸಹ ಹಾಗೆ ಹಿಡಿದು ತರೋದಿಲ್ಲವೇನೋ :)))Feeling Loved and blessed:)))
ನನ್ನ ಮೊಬೈಲ್ ಮಕ್ಕಳು ತೆಗೆದುಕೊಂಡು pattern lock ಜಾಮ್ ಮಾಡಿ ಬಿಟ್ಟಿದ್ರು. ಮಗ ಬೈದ 'ಒಂದು ಮೊಬೈಲ್ ಇಟ್ಕೊಳ್ಳೋಕೆ ಬರೋಲ್ಲ ಏನಮ್ಮ್ಮ ...." ಸುಮ್ಮನೆ ಕೇಳಿಸಿಕೊಂಡೆ , ಅವನೇ ಸರಿ ಮಾಡಿ ಕೊಟ್ಟ.... 
ಮೊದಲೆಲ್ಲ ಒಂದು ಸಣ್ಣ ಕಾರಣಕ್ಕೆ ಸಿಟ್ಟುಗೊಳ್ಳುತ್ತಿದ್ದ ನಾನು ಈಗ 'ಯಾರಾದ್ರೂ ಸರಿ ಮಾಡಿಕೊಡ್ರೋ' ಅಂದೆನೇ ಹೊರತು ಹಾಗೆ ಮಾಡಿದ್ದು ಯಾರು ಅಂತಲೇ ಆಗಲಿ , ಯಾಕೆ ಅಂತಲೇ ಆಗಲಿ ಕೇಳಲಿಲ್ಲ ... ನನಗೇ ಆಶ್ಚರ್ಯ ಬಹುಶಃ,ನನ್ನ ಮನಸ್ಸು ತುಂಬಾ ರೋಸಿರಬೇಕು... ಇಲ್ಲಾ ತುಂಬಾ ಸಮಾಧಾನ ಕಲಿತಿರಬೇಕೆನೊ ...... ಇಲ್ಲಾ ಪ್ರಾಯಶಃ ನನ್ನ ಇಮೇಜ್ ಉಳಿಸಿಕೊಳ್ಳೋ ಯತ್ನವಾ?.... ಇಲ್ಲಾ ಮತ್ತೊಬ್ಬರ (ಮೈದುನ) ಮನೆಯಲ್ಲಿ ಅನಾವಶ್ಯಕ ಗೊಂದಲ ಏಕೆ ಎಂದೋ ..ಇಲ್ಲಾ ವಯಸ್ಸಿನ ಪ್ರಭಾವವ ... ಅಥವ 'ಏನ್ ಮಹಾ ಆಯ್ತು ಬಿಡು ಅನ್ನೋ ' ಮನೋಭಾವವ ??? .......ಗೊತ್ತಿಲ್ಲ ... ಆದರೂ ಅದೇಕೋ ಮನಸ್ಸು ಶಾಂತ ... ಸೋತ ಸೋಲು ಗೆದ್ದ ಗೆಲುವು ಎರಡೂ ನನ್ನದಲ್ಲದ ಹಾಗೆ........ ಮಳೆಯ ನಂತರದ ಆಗಸದ ಹಾಗೆ ......
ಸುಮಾರು ವರ್ಷಗಳ ಹಿಂದೆ ನನ್ನ ಜೊತೆ ಆಡಿ ಬೆಳೆದ ಗೆಳೆಯನೊಬ್ಬ ಮೊನ್ನೆ ಫೋನ್ ಮಾಡಿದ್ದ . ಅವನು ಈಗ ಉತ್ತರ ಭಾರತದಲ್ಲಿ ಕೆಲಸ ಮಾಡ್ತಾ ಇದ್ದಾನೆ .. ಅವನೊಬ್ಬ ಸರ್ಜನ್ .. ಮೊನ್ನೆ ಮೊನ್ನೆ ಭೂಕಂಪ ಆಗಿದ್ದಾಗ 'all r safe' ಅಂತ ಮೆಸೇಜ್ ಕಳಿಸಿದ್ದವನು ಒಂದೆರಡು ದಿನಗಳ ಹಿಂದೆ ಕರೆ ಮಾಡಿದ್ದ .. ಭೂಕಂಪವಾದ ದಿನ OTಅಲ್ಲಿ ಇದ್ವಿ ಸುನಿ . ಜೊತೆಗೆ ಒಂದಷ್ಟು ಡಾಕ್ಟರಗಳು, ನರ್ಸ್ಗಳೂ ಕೂಡ ಇದ್ದರು , ಭೂಮಿ ಕಂಪಿಸಿದಂತೆ ಅನಿಸಿದಾಗ ಆಸ್ಪತ್ರೆಯಲ್ಲಿ ಇದ್ದವರೆಲ್ಲ ಹೊರಗೆ ಓಡಿದ್ರು .. But v were in a dilemma... ಪೇಷಂಟ್ ಗೆ anesthesia ಕೊಟ್ಟಿದ್ದಿವಿ , ಅವನಿಗೆ ಜ್ಞಾನ ಇಲ್ಲ ಹೊರಗೆ ಹೇಗೆ ಹೋಗೋದು ಅನಿಸಿ ಆದದ್ದು ಆಗ್ಲಿ ಅಂತ ನಾನು, ನನ್ನ ಟೀಂ, ಸಿಸ್ಟರ್s, ಎಲ್ಲ ಒಳಗೆ ಉಳಿದ್ವಿ ... ದೇವರನ್ನ ಬೇಡೋದು ಬಿಟ್ಟು ಬೇರೇನೂ ತೋಚಲಿಲ್ಲ ಸುನಿ. But Nothing went wrong!!thank God" ಅಂದ . ಕಡೆಗೊಂದು ಮಾತು ಸೇರಿಸಿದ 'ಇಷ್ಟೆಲ್ಲಾ ಮಾಡಿದ್ರೂ ನಾವು ಎಲ್ಲೂ ನ್ಯೂಸ್ ಆಗೋದಿಲ್ಲ , ಕಾರಣವೇ(ವಾಸ್ತವವೇ) ತಿಳಿಯದ ಜನರ ಆಕ್ರೋಶಕ್ಕೂ ಗುರಿ ಆಗ್ತೀವಿ ಕಣಮ್ಮ ' ಅಂದ ...........
I just want to say....ಯಾರನ್ನೇ ಆಗಲಿ blame ಮಾಡುವ ಮೊದಲು ವಸ್ತು ಸ್ಥಿತಿ ಅರಿತರೆ ಒಳ್ಳೆಯದೇನೋ ..ashte.........................
ಕಥೆ ಹೇಳಿ ಬಹಳ ದಿನಗಳಾಗಿತ್ತು ಅಲ್ವೇ !!
ಇಲ್ಲೊಂದು ಕಥೆ ಇದೆ ಹಂಚಿಕೊಳ್ಳುವಂತಾದ್ದು...
ಒಂದೂರು. ಆ ಊರಲ್ಲಿ ಒಂದು ವಿಚಿತ್ರ ಕಾನೂನು. ಅಲ್ಲಿಯ ರಾಜನನ್ನ ವರ್ಷಕ್ಕೊಮ್ಮೆ ಬದಲಿಸುವ ಕಾನೂನು. ಆ ದಿನ ಯಾರು ಅರಮನೆಯ ಮುಂದೆ ಮೊದಲು ಕಾಣಸಿಗುವರೋ ಅವರೇ ಅಲ್ಲಿನ ರಾಜ. ಹಿಂದಿನ ರಾಜನನ್ನ ದೂರದ ಕಾಡಿನ ಮಧ್ಯೆ ಬಿಟ್ಟು ಬರೋದು. ಅವನು ಹಸಿವಿಗೋ ಕ್ರೂರ ಮೃಗಗಳ ದಾಳಿಗೋ ಸಿಕ್ಕಿ ಸಾಯೋದು ..ಹೀಗೆ ನಡೀತಾ ಇತ್ತು . ಹೀಗೆ ರಾಜನಾಗೊ ಆಸೆಗೆ ಸಿಕ್ಕಿ ಸತ್ತವರೆಷ್ಟೋ ಗೊತ್ತಿಲ್ಲ ....ಮತ್ತೆ ಕೆಲವರು ಆ ಉಸಾಬರಿಯೇ ಬೇಡ ಅನ್ನೋ ಹಾಗೆ ಇದ್ದರು.
ಒಂದ್ ಸಾರಿ ಇದ್ಯಾವುದೂ ತಿಳಿಯದ ಪರ ಊರಿನ ಹುಡುಗನೊಬ್ಬ ಅಲ್ಲಿಗೆ ಬಂದ . ಆ ದಿನ ಅಲ್ಲಿನ ರಾಜನ ಕಡೆಯ ದಿನ . ಸರಿ ಇವನು ಬಂದ ಕೂಡಲೇ ಇವನನ್ನ ಅರಮನೆಗೆ ಕರೆದುಕೊಂಡು ಹೋಗಿ ರಾಜನನ್ನಾಗಿ ಮಾಡಿದರು. ಇವನಿಗೊ ಆಶ್ಚರ್ಯ. ಕೇಳಿಯೇ ಬಿಟ್ಟ "ಹಿಂದಿನ ರಾಜ ಎಲ್ಲಿ?' ಮಂತ್ರಿ 'ಹೀಗ್ ಹೀಗೆ ' ಅಂತ ಹೇಳಿದ. ಇವನಿಗೆ ಸ್ವಲ್ಪ ಭಯವಾಯ್ತು . ಆದರೂ ಸಾವರಿಸಿಕೊಂಡು 'ನನ್ನ ಆ ಕಾಡಿನ ಮಧ್ಯೆ ಒಮ್ಮೆ ಕರೆದುಕೊಂಡು ಹೋಗಿ' ಅಂದ. ಸರಿ ಕರೆದುಕೊಂಡು ಹೋದರು. ಅವ ಎಲ್ಲಾ ನೋಡಿದ . ಬಂದ ಮೇಲೆ ಮಂತ್ರಿಗೆ ಹೇಳಿದ 'ಆ ಕಾಡಿನ ನಡುವೆ ಒಂದು ಅರಮನೆ ಕಟ್ಟಿಸಿ ಹಾಗು ಕಾಡಿಗೆ ಹೋಗುವ ಹಾದಿಯಲ್ಲಿ ಅಲ್ಲಲ್ಲಿ ಒಂದಷ್ಟು ತಂಗುದಾಣ ಕಟ್ಟಿಸಿ ಹಾಗೂ ಬಾವಿ ತೋಡಿಸಿ ' ಅಂದ. ಮತ್ತೆ ಒಂದು ವರ್ಷ ಹಾಗೆ ಚೆಂದ ರಾಜ್ಯ ಆಳಿದ. ಒಂದು ವರ್ಷ ಆಯ್ತು. ಇವನೂ ಹೊರಡಲು ತಯಾರಾದ. ಮಂತ್ರಿ ಹೇಳಿದ 'ಮಹಾಪ್ರಭು, ಇನ್ನು ಮುಂದೆ ನೀವೇ ನಮ್ಮಮಹಾರಾಜರು .. ಇಲ್ಲಿಯವರೆಗೆ ಇದ್ದವರೆಲ್ಲ ಒಂದಷ್ಟು ದಿನ ರಾಜ ಅನ್ನೋ ಅಹಂನಿಂದ, ಒಂದಷ್ಟು ದಿನ ಮೋಜಿನಿಂದ, ಸ್ವಾರ್ಥದಿಂದ, ಕಡೆ ಕಡೆಗೆ ಸಾವು ಬಂತಲ್ಲಾ ಅನ್ನೋ ಭಯದಿಂದ ಬದುಕಿದರು . ಆದರೆ ಮುಂದಾಲೋಚನೆಯಿಂದ ನಿಮ್ಮನ್ನ ನೀವು ಕಾಪಾಡಿಕೊಂಡಿದಲ್ಲದೆ ನಮ್ಮನ್ನು ಚೆಂದ ನೋಡಿಕೊಂಡ್ರಿ .. ಇನ್ನೂ ನಮ್ಮ ರಾಜ್ಯಕ್ಕೆ ಭಯ ಇಲ್ಲ.. ನಿಮ್ಮನ್ನ ಬದಲಿಸೋ ಅಗತ್ಯ ಇಲ್ಲ ' ಅಂದನು.
ಇದು ಕಥೆ .....
ಮತ್ತೇನು ಹೇಳೋ ಅಗತ್ಯ ಇಲ್ಲ ಅಲ್ಲವೇ.......
ಪುಟ್ಟಿನ tutionಯಿಂದ ಕರ್ಕೊಂಡ್ ಬರಬೇಕಿತ್ತು. ಹಾಗೆ ಕೆಲ್ಸ ಸ್ವಲ್ಪಇತ್ತು ಅಂತ ಮಂಜು, ಕಾರ್ತಿ , ನಾನು ಮೂವರು ಹೊರಟ್ವಿ . ಕೆಲಸ ಮುಗಿಸಿ ಅವಳ tution ಸೆಂಟರ್ ಹತ್ತಿರ ಬಂದ್ರೂ ಅವಳಿನ್ನು ಹೊರಗೆ ಬಂದಿರಲಿಲ್ಲ . ಮಂಜು ನಾನು ಹೊರಗೆ ಮಾತಾಡ್ತಾ ನಿಂತಿದ್ವಿ ..ಕುಲಪುತ್ರ ಡ್ರೈವರ್ ಜಾಗದಲ್ಲಿದ್ದ . 
ಅಷ್ಟರಲ್ಲಿ ಒಂದು ಫೋನ್ ಬಂತು ಅವನಿಗೆ ..... 
'ಹೇಳ್ ಮಚ್ಚಿ'
'____"
'ಏ ಸಕತ್ easy ಮಚ್ಚಿ , ಈರುಳ್ಳಿ, ಬೆಳ್ಳುಳ್ಳಿ, ಜಿಂಜರ್ , ಕೊತ್ತಂಬರಿ ಎಲ್ಲಾ ಮಿಕ್ಸಿಗೆ ಹಾಕ್ಕೋ , ಆಮೇಲೆ ಆಯಿಲ್,ತುಪ್ಪ ಹಾಕಿ ಅದೇ ಅದೇನೋ ಪಲಾವ್ ಮಸಾಲೆ ಇರುತ್ತಲ್ಲ ಅದೆಲ್ಲ ಹಾಕು ಮಚ್ಚಿ, ಫ್ರೈ ಆದ ಮೇಲೆ ಮಿಕ್ಸಿಲಿ ಇರೋದೆಲ್ಲ ಹಾಕು, ಸ್ವಲ್ಪ ನೀರ್ ಹಾಕು ಉಪ್ಪ್ ಹಾಕಿ ಅಕ್ಕಿ ಹಾಕು ಕುಕ್ಕರ್ ಕವರ್ ಮಾಡು ಅಷ್ಟೇ"
'____'
ಏ , questions ಎಲ್ಲಾ ಕೇಳ್ಬೇಡ '
ಅಷ್ಟರಲ್ಲಿ ಪುಟ್ಟಿ ಬಂದ್ಳು
'ಸರಿ ಸಿಗ್ತೀನಿ ಬೈ"
ಮಂಜು ಕೇಳಿದ್ರು 'ಅದ್ಯಾರ್ ಮಗನೆ"
'ಏ ಫ್ರೆಂಡ್ ಅಪ್ಪ'
ಸರಿ ಹೊರಟ್ವಿ ..
ಮತ್ತೆ ಮಗನ ಫೋನ್ 'ಅಪ್ಪ ಸ್ವಲ್ಪ ರಿಸೀವ್ ಮಾಡು'
ಮಂಜು ಹಲೋ ಅನ್ನೋಷ್ಟರಲ್ಲಿ 'ಲೋ, ಪುದಿನ ಇದೆ ಕಣೋ' ಅಂತಂತೆ ಒಂದು ಹುಡುಗಿಯ ವಾಯ್ಸ್ ...
ಅಪ್ಪ ಮಗನ ಕಿವಿ ಹತ್ತಿರ ಸೆಲ್ ಹಿಡಿದ್ರೆ 'ಅದೇನೆನಿದೆ ಎಲ್ಲಾ ಹಾಕು ಮಚ್ಚಿ, ಖಾಲಿ ಆಗಿಲ್ಲ ಅಂದ್ರೆ ನಾಳೆ ಮಂಡ್ಯಕ್ಕೆ ತಗೊಂಡ ಬಾ ಎಲ್ಲಾ ಮುಗಿಸೋವಾ ಬೈ ಕಣೆ '
ಇವನು ಮಂಡ್ಯಕ್ಕೆ ಇಂಜಿನಿಯರ್ ಆಗೋಕೆ ಹೋಗ್ತಾನೋ ಕುಕರಿ ಕ್ಲಾಸ್ ತೆಗೆದಿದ್ದಾನೋ??!!!
But the way they spoke ಹುಡುಗಹುಡುಗಿ ಅನ್ನೋ prejudice ಇಲ್ಲದೆ was great.........::)))))
ನೆನ್ನೆ ಸಂಜೆ ಶಾಲೆಯಿಂದ ಬಂದ ಪುಟ್ಟಿ ಸ್ವಲ್ಪ ಸಪ್ಪೆ ಇದ್ಲು . 'ಯಾಕ್ ಮಗ ಏನಾಯ್ತು?' ಅಂದೆ , 'ಏನಿಲ್ಲಾ ಮಾ , __ ಇದ್ಲಲ್ಲ ಅವಳು ಈವತ್ತು ಬೇರೆ ಫ್ರೆಂಡ್ಸ್ ಹತ್ರ ನಾ ಯಾವಾಗ್ಲೋ ಅವಳ ಹತ್ತಿರ ಹೇಳಿದ್ದ 'ನನ್ನ ವಿಷ್ಯ (!!)' ಎಲ್ಲಾ ಹೇಳ್ತಾ ಇದ್ಲಮ್ಮ , ಎಷ್ಟ್ ಫ್ರೆಂಡ್ ಗೊತ್ತ ನಾನೂ ಅವ್ಳು , ಅವ್ಳೇ ಹಿಂಗೆಲ್ಲ ಮಾಡ್ತಾಳೆ , ಅದ್ಕೆ ಯಾರು ಫ್ರೆಂಡ್ಸ್ ಬೇಡ ಅಂತ determine ಮಾಡಿಬಿಟ್ಟಿದ್ದೀನಿ .......' ಹೇಳ್ತಾನೆ ಹೋದ್ಲು ..'ಹೋಗ್ಲಿ ಬಿಡು ಮಗ , ಏನ್ ಗೊತ್ತಾ ಫ್ರೆಂಡ್ಸ್ ಬೇಡ ಅನ್ನೋದು ತಪ್ಪು ...ನಮ್ಮ ಲಿಮಿಟ್ಸ್ ಅಲ್ಲಿ ನಾವಿದ್ರೆ ಚೆಂದ ಫ್ರೆಂಡ್ಸ್ ಆಗಿದ್ದಾಗ ಕೂಡ ಎಷ್ಟ್ ಬೇಕೋ ಅಷ್ಟೇ ಹೇಳಬೇಕು ಮಗ . ಅತಿಯಾದರೆ ಯಾವುದು ಚೆನ್ನಾಗಿರಲ್ಲ. ....etc, etc 'ಅಂದೆ . ಬೇಸರದಲ್ಲಿ ಇದ್ದದ್ದಕ್ಕೋ ಏನೋ ಸುಮ್ಮನೆ ಕೇಳ್ತಾ ಇದ್ಲು ... ಬೆಳಿಗ್ಗೆ ಎದ್ದು ಸ್ಕೂಲ್ಗೆ ತಯಾರಿ ನಡೆಸ್ತಾ ಇದ್ಲು .. ನಾ ಮತ್ತೆ ಸಪ್ಪೆ ಇದ್ದಾಳೆ ಅಂತ ನೆನ್ನೆ ಹೇಳಿದ್ದೆ ಹೇಳೋಕೆ ಹೋದೆ ...' ಏ ಹೋಗಮ್ಮ , ಅವಳು ರಾತ್ರಿನೇ ಮೆಸೇಜ್ ಮಾಡಿದ್ಲು .. ನಾವೇನು ಸಿಟ್ಕೊಂಡು ಮಾತಾಡಿಸಲ್ಲ ಅನ್ಕೊಂಡಾ V r friends u kno !!!!!! ಹೋಗ್ತಾ ಮೋರ್ ಹತ್ರ ಗಾಡಿ ನಿಲ್ಸು ... ಒಂದೆರಡು ಡೈರಿ ಮಿಲ್ಕ್ ತಗೋಬೇಕು ..................!!!'
ಕೆಲವೊಮ್ಮೆ ಕೆಲವು ಮಾತುಗಳು ಎಂಥಹ ಬಿಗು ವಾತಾವರಣವನ್ನೂ ತಿಳಿಗೊಳಿಸುತ್ತದೆ ... ನೆನ್ನೆ ಹಾಗೆ ಮಂಜು ತಂದೆಯ ವರ್ಷಾಬ್ಡಿ ... ಡ್ಯೂಟಿ ಮುಗಿದ ಮೇಲೆ ಮಕ್ಕಳನ್ನ ಮನೆಯಲ್ಲೇ ಬಿಟ್ಟು ಮಂಜು ನಾನು ಅತ್ತೆ ಮನೆಗೆ ಹೋದ್ವಿ ..... ಅತ್ತೆ ಎಂದಿನಂತೆ ಗಂಡನ ನೆನಪಲ್ಲಿ ಸ್ವಲ್ಪ ಎಮೋಷನಲ್ ಆಗಿದ್ರು ... 
ಮಂಜು 'ಇದ್ಯಾಕಕ್ಕ ಹಿಂಗಿದ್ದೀಯ ' .... 'ಏನಿಲ್ಲ ಕಣೋ ನಿಮ್ಮಪ್ಪ ನೆನಪಾದ್ರು ' ... 'ನೀನೊಂದು ಈಗ ಬರ್ತಾ ಆ ಕಡೆಯಿಂದಾನೆ(ಸ್ಮಶಾನ) ಬಂದೆ .. ಯಾವ್ದೋ ನ್ಯೂ admissionuu, (ಸ್ಮಶಾನದಲ್ಲಿ ಹಳ್ಳ ತೊಡ್ತಾ ಇದ್ರು ). ರಾತ್ರಿ ಮಾವ ಅವರಿಗೆಲ್ಲ ಕ್ಲಾಸ್ ತಗೊಳ್ತಾರೆ ಬಿಡು ... ಹೆಂಗು ITI ಲೆಕ್ಚರರ್ ಅಲ್ವ ..ಹೊಸದಾಗಿ ಬಂದವರಿಗೆಲ್ಲ ಫೈಲ್ (metal filing) ಮಾಡೋಕೆ ಕೊಡ್ತಾರೆ ಬಿಡು , ನೀ ಯಾಕ್ ಟೆನ್ಶನ್ ಆಗ್ತೀಯ ... ' 
ಒಂದ್ ಕ್ಷಣದಲ್ಲಿ ಮನೆಯ ವಾತಾವರಣ ಬದಲಾಗಿ ಹೋಯ್ತು ... ಮಕ್ಕಳೆಲ್ಲ 'ಹೋ ' ಅಂತ ನಗೋಕೆ ಶುರು ಮಾಡಿದ್ರು ... and HIS sense of Humor has kept me smiling and healthy always:)))))
ನಾವು ಈಗಿರೋ ಮನೆಗೆ ಬಂದು ಸುಮಾರು ಹತ್ತು ವರ್ಷ ಆಯ್ತು . ಇಲ್ಲಿಯವರೆಗೂ ನೀರಿಗೆ ಕೈ ಬೆರಳಿನಲ್ಲಿ ಎಣಿಸೋ ಅಷ್ಟ್ ಸಾರಿ ಮಾತ್ರ ತೊಂದರೆ ಆಗಿದೆ. ಹಾಗಾದಾಗ corporaterಗೆ ಒಂದ್ ಫೋನ್ ಮಾಡಿದ್ರೆ ಲಾರಿ ಅಲ್ಲಿ ಕಳಿಸಿಬಿಡ್ತಾರೆ . ಹಾಗಾಗಿ ನೀರಿಗೆ ಬರ ಅನ್ನೋದು ಇಲ್ಲ . ರೋಡ್ ಅಲ್ಲಿ drainage ಇಲ್ಲ . ಬೆಳಿಗ್ಗೆ ಎದ್ರೆ ಇಡೀ ರಸ್ತೆ ಬಾಗಿಲು ತೊಳೆದ ನೀರಿನಿಂದ ಮಿನಿ ಕಾವೇರಿಯಂತೆ ಹರಿಯುತ್ತದೆ . ಪೈಪ್ ಹಿಡಿದು ನಿಂತರೆ ಕಿಟಕಿ ಬಾಗಿಲು ಬಿಟ್ಟು ಗೋಡೆಯನ್ನೂ ತೊಳೆದು ಬಿಡ್ತಾರೆ ... ಬಂದ ಹೊಸದರಲ್ಲಿ ನನಗೂ ಬಹಳ ಬೇಸರ ಅಗ್ತಾ ಇತ್ತು ಇಷ್ಟೊಂದ್ ನೀರು ವೇಸ್ಟ್ ಅಲ್ವ ಅಂತ ಒಂದೆರಡು ಸಲ ನಮ್ಮ ಮನೆ ಮುಂದೆ ನೀರು ನಿಲ್ಲುತ್ತದೆ , ಎಲ್ಲರಿಗೂ ತೊಂದರೆ ಅಲ್ವ ಅಂತ ಹೇಳಿಯೂ ಇದ್ದೆ.. .ನನ್ನ ಒಂದ್ ತರ ವಿಚಿತ್ರವಾಗಿ ನೋಡಿದ್ರು 'ಆರು ಹೆತ್ತೋಳಿಗೆ ಮೂರು ಹೆತ್ತೋಳು ಹೇಳೋಕೆ ಬಂದ್ಲಾ !!? ಅನ್ನೋ ಹಾಗೆ. ಮಂಜು ನನ್ನನ್ನೇ ಬೈದ್ರು .. ನೀನೇನು ೨೪ ಘಂಟೆ ರಸ್ತೆ ಅಲ್ಲೇ ಇರೋ ಹಾಗೆ , ಸುಮ್ಮನೆ ಇದ್ದು ಬಿಡು ಅಂತ ... ಈಗ ಅಭ್ಯಾಸ ಆಗಿಬಿಟ್ಟಿದೆ .ಒಮ್ಮೊಮ್ಮೆ ಅನಿಸುತ್ತದೆ .. ಒಂದ್ ನಾಲ್ಕ್ ದಿನ ನೀರ್ ಬರಬಾರದು ಆಗ ನೀರಿನ "ಬೆಲೆ' ತಿಳಿಯುತ್ತದೆ ಅಂತ ... ಈ ತರದ ಜನರ ನಡುವೆಯೂ ಒಂದಷ್ಟು ಹಿರಿಯ ತಲೆಗಳಿರುವ ಮನೆಯವರು ಮೊದಲೇ ಕಸ ಗುಡಿಸಿ ಅಮೇಲೆ ಸ್ವಲ್ಪ ನೀರು ಬಾಗಿಲಿಗೆ ಹಾಕಿ ಒಂದ್ ರಂಗೋಲೆ ಹಾಕಿ ಬಿಡ್ತಾರೆ .... ಏನೇ ಹೇಳಿ ಹಿರಿ ತಲೆಗಳಿಗೆ ಇರೋ ಅಷ್ಟು ಯಾವುದೇ ವಸ್ತುವಿನ ಬೆಲೆ ಬಹಳಷ್ಟು namma ಇಂದಿನ ಜನರೇಶನ್ ಜನಕ್ಕೆ ಇರೋದಿಲ್ಲ ... ವಿಪರ್ಯಾಸ ಅಂದ್ರೆ ಅವರ ಕಾಲದಲ್ಲಿ ಅವರೆಲ್ಲ ಯಾವುದಕ್ಕೂ ಕಡಿಮೆ (ಬರ) ಇಲ್ಲದೆ ಬದುಕಿದವರು .. ಆದರೂ ಈಗಲೂ ಕೂಡ ಹಿತಮಿತವಾಗೆ ಬದುಕುತ್ತಾರೆ ...... ಬದುಕುವುದು ಹೀಗೆ ಅಂತ ತಿಳಿಸುತ್ತಾರೆ ........
ಒಂದು ಅಜ್ಜಿ ತಾತ .. ಸುಮಾರು ೧೦ ವರ್ಷದಿಂದ ನೋಡ್ತಾನೆ ಬಂದಿದ್ದೀನಿ.... ತಾತ ___ ಕೆಲ್ಸದಿಂದ ನಿವೃತ್ತರಾಗಿ ಮನೆಯಲ್ಲೇ ಸಣ್ಣ ಪುಟ್ಟ ಓಡಾಟ , ಮನೆಗಳನ್ನ ತೋರಿಸೋದು , ಇತ್ಯಾದಿ ಮಾಡಿದ್ರೆ ಅಜ್ಜಿ ಮಗನ ಜೊತೆ ಸಾಂಬಾರ್ ಪುಡಿ ಮಾಡಿ ಮಾರೋ ಕೆಲ್ಸ ಮಾಡ್ತಾ ಇತ್ತು. ಸೊಸೆ ಎಲ್ಲೋ ಕೆಲಸಕ್ಕೆ ಹೋಗ್ತಾ ಇದ್ಲು . ಮಗ ರಾತ್ರಿ ಪಾಳಿಯಲ್ಲಿ ಯಾವ್ದೋ ಸ್ಕೂಲ್ ನೋಡಿಕೊಳ್ಳೋ ಕೆಲ್ಸ ಕೂಡ ಮಾಡ್ತಾ ಇದ್ದ. ಇದ್ದ ಒಬ್ಬ ಮಗಳನ್ನ ಕೇರಳದ ಊರಿಗೆ ಮದ್ವೆ ಮಾಡಿ ಕೊಟ್ಟಿದ್ರು ... ಒಂದ್ ದಿನಾ ಕೂಡ ಕುಳಿತ ಜೀವವೇ ಅಲ್ಲ ಆ ಅಜ್ಜಿ .. ಮನೆಯ ಎಲ್ಲಾ ಕೆಲಸದ ಜೊತೆ ಸಾಂಬಾರ್ ಪುಡಿ ಮಾಡೋಕೆ ಮಗನಿಗೆ ಸಾಥ್ ನೀಡ್ತಾ ಇತ್ತು. ಬೆಳಿಗ್ಗೆ ನಾ ಏಳ್ತಾ ಇದ್ದಿದ್ದೆ ಆ ಅಜ್ಜಿ ಕಸ ಗುಡಿಸೋ ಸದ್ದಿಗೆ .. ನೆನ್ನೆ ಅಜ್ಜಿ ಕಾಣಲಿಲ್ಲ . ಏನೋ ಹುಷಾರಿಲ್ಲವೇನೋ ಅನ್ಕೊಂಡೆ . ಬೆಳಿಗ್ಗೆ ಮಂಜು ಡ್ಯೂಟಿಗೆ ಹೊರಟಾಗ ಗೇಟ್ ಹಾಕಿ ಒಳಬರುವಾಗ ಸೊಸೆ ಕಸಗುಡಿಸ್ತಾ ಇದ್ಲು . ಕೇಳಿದೆ 'ಅಜ್ಜಿಗೆ ಹುಷಾರಿಲ್ವ " .. ಮಗ ಹೇಳಿದ 'ಇಲ್ಲ __ ಆಸ್ಪತ್ರೆಗೆ ಸೇರಿಸಿದ್ದೀವಿ . ಶುಗರ್ ಜಾಸ್ತಿ ಆಗಿದೆ ಅಂದ್ರು ... ಒಳಗೇ ರಕ್ತದಲ್ಲಿ ಏನೋ ಆಗಿದೆ ಅಂತೆ ..etc, etc ' ಅಂದ . ರಿಪೋರ್ಟ್ ಕೊಟ್ಟ .. ನೋಡಿದೆ. 'ಸಂಜೆ ಮಂಜು ಬಂದ ಮೇಲೆ ಹೋಗಿ ಬರ್ತೀವಿ ಅಂದೆ . .....
ಇಲ್ಲಿ ನಾ ಹೇಳೋಕೆ ಹೊರಟಿರೋದೆ ಬೇರೆ .. ಅಜ್ಜಿ ಇರೋವರೆಗೂ ಒಂದೂ ಕೆಲಸಕ್ಕೆ ಚ್ಯುತಿ ಇಲ್ಲದಂತೆ ಹೋಗ್ತಾ ಇದ್ದ ಮನೆ , ಅವಳ absence ಅಲ್ಲಿ ಅವಳ presenz ಹುಡುಕ ತೊಡಗಿತು. ಮಗನಿಗೆ ತನ್ನ ಸಾಂಬಾರ್ ಪುಡಿಯ ಕೆಲಸಕ್ಕೆ , ಸೊಸೆ ಕೆಲಸಕ್ಕೆ ಹೋಗೋಕೆ ಮೊದಲು ಆಗ್ತಾ ಇದ್ದ ಆಗಬೇಕಾದ ಕೆಲಸಗಳಿಗೆ, ಮೊಮ್ಮಗನ ಕಾಲೇಜ್ಗೆ ಎಲ್ಲದರಲ್ಲೂ ಅವಳ ಇಲ್ಲದಿರುವಿಕೆ ಕಾಣತೊಡಗಿತು . ಬಹುಶಃ ಎಲ್ಲಕ್ಕಿಂತ ಹಿಂಸೆ ಪಟ್ಟ ಜೀವ ಅಂದ್ರೆ ತಾತ .. ಬೆಳಿಗ್ಗೆ ಎದ್ದಾಗಿಂದ ಸಂಜೆವರೆಗೂ ಮಾತಾಡ್ತಾನೋ, ಬೈಸಿಕೊಳ್ತಾನೋ, ಕಣ್ಣ ಮುಂದೆ ಕಾಣ್ತಾ ಇದ್ದ ಮಡದಿ; ಕುಡಿದು ಬಂದಾಗ, ಕೆಮ್ಮುವಾಗ, ಊಟಕ್ಕಿಟ್ಟು ಬೈತಾನೋ ಅಳ್ತಾನೋ ಬೆನ್ನಿಗೆ ಬೆನ್ನಾಗಿ ನಿಂತ ಅಜ್ಜಿ ಇಲ್ಲದ್ದು ತಾತನಿಗೆ ಹಿಂಸೆ ಅನಿಸಿಬಿಟ್ಟಿತು .. ಮಗ ಸೊಸೆಯನ್ನ ತನ್ನ ಹೆಂಡತಿಯ ಸ್ಥಿತಿಗೆ ಅವರೇ ಕಾರಣ ಅನ್ನೋ ಹಾಗೆ ಬೈತಾ ಅಸಹಾಯಕನಾಗಿದ್ದ...
ಇರೋವರೆಗೆ ಯಾರಿಗೂ ಕಾಣದ , ಯಾರಿಗೂ ಹೇಳದೆ ತನ್ನ ನೋವನ್ನ ತಾನೇ ನುಂಗಿಕೊಂಡು ಎಲ್ಲರಿಗೂ ಆಸರೆಯಾಗೋ ಅನೇಕ ಜೀವಿಗಳು ನಮ್ಮ ಜೊತೆಯಲ್ಲೇ ಇರ್ತಾರೆ ಮೌನ ಮಂದಾಕಿನಿಯ ಹಾಗೆ ... ಅವರು ಹೇಳೋದಿಲ್ಲ ಅಂತ ಅವರು ಅಳೋದಿಲ್ಲ ಅಂತ ಅವರನ್ನ ಸುಮ್ಮನೆ ನಿರ್ಲಕ್ಷಿಸುತ್ತಾ ಹೋಗುತ್ತೇವೆ ....... ಅವರ ಇಲ್ಲದಿರುವಿಕೆ ಅರಿವಿಗೆ ಬಂದಾಗ ಅವರ ಇರುವಿಕೆಯ ಮಹತ್ವ ತಿಳಿಯುತ್ತದೆ . ಅಷ್ಟರಲ್ಲಿ .......... ಕಾಲ ಇರೋದಿಲ್ಲ ......... ಯಾಕೋ ಆ ತಾತ ಅಂತಹ ಅನೇಕ ಅಸಹಾಯಕರನ್ನ ಕಣ್ಣ ಮುಂದೆ ತಂದಿತು . ಅಜ್ಜಿ ಅಲ್ಲೆಲ್ಲೋ ಬಾನಲ್ಲಿ ತೇಲೋ ಮಳೆ ಸುರಿಸೋ ಮೋಡದಂತೆ ..............
ಸುಮಾರು ೨೫ ವರ್ಷಗಳ ಹಿಂದೆ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯ 'ಹೋಟೆಲ್ ಪರಾಸ್ ' ಅಂದ್ರೆ ತುಂಬಾನೇ ಫೇಮಸ್ಸು . ಮಂಜು ನಾನು ಆಗ ಇನ್ನು ಓದ್ತಾ ಇದ್ವಿ.. ಆಗ ನಾವಿಬ್ಬರು ಒಳ್ಳೆ ಗೆಳೆಯರಾಗಿದ್ವಿ ಅಷ್ಟೇ .. ವಾರಕ್ಕೆ ಒಂದು ದಿನ ಕಾಲೇಜ್ ಮುಗಿದ ಮೇಲೆ ಅಲ್ಲಿ ಹೋಗಿ ಒಂದಷ್ಟು ಹೊತ್ತು ಕೂತು 'ಕಷ್ಟಸುಖ' ಮಾತಾಡಿ ಮತ್ತೆ ನಮ್ಮ ನಮ್ಮ ದಾರಿ ಹಿಡಿತಾ ಇದ್ವಿ , ಮತ್ತೆ ಒಂದು ವರ್ಷದ ನಂತರ ಪ್ರೇಮಿಗಳಾಗಿ ಹೋಗಿ ಕೂರ್ತಾ ಇದ್ವಿ .. (ಅದೇನ್ ಮಾತಾಡ್ತಾ ಇದ್ವೋ ಗೊತ್ತಿಲ್ಲ , ಅಂದು ಶುರು ಮಾಡಿದ ಮಾತು ಇಂದೂ ಮುಗಿದಿಲ್ಲ !!)... ಮತ್ತೆ ಯಾವಾಗ್ಲೋ ಒಮ್ಮೊಮ್ಮೆ ಹೋದದ್ದು ಬಿಟ್ರೆ ಅಲ್ಲಿಗೆ ಹೋಗೆ ಇರಲಿಲ್ಲ . ಮೈಸೂರು ಬೆಳಿತು... ಬೇಕಾದಷ್ಟು ಹೋಟೆಲ್ಗಳು ಬಂದ್ವು .. ಮಕ್ಕಳು ಕೂಡ 'ಅದೇನ್ ಅದೂ ಒಂದು ಹೋಟೆಲಾ' ಅಂತಾರೆ ಅಂತ ಅಲ್ಲಿಗೆ ಹೋಗೆ ಇರಲಿಲ್ಲ .. ನೆನ್ನೆ ಯಾಕೋ ಬಹಳ ವರ್ಷಗಳ ನಂತರ ಪಾರಸ್ ಗೆ ಹೋಗಬೇಕು ಅಂತ ಮಂಜು ಕರ್ಕೊಂಡ್ ಹೋದ್ರು .. ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಾದ ಜಾಗ ...ಮಂಜು 'ಏನಮ್ಮ, ನಿನ್ fav ಮಸಾಲೆ ಪುರಿ ಹೇಳಲಾ' ಅಂದ್ರು .. ಸುಮ್ಮನೆ ನಕ್ಕು ಬಿಟ್ಟೆ. ಅಂದು ನಾವು ಹೋಗುತ್ತಿದ್ದಾಗ ಇದ್ದ ಒಬ್ಬ ಸರ್ವರ್ ಈಗಲೂ ಇದ್ದಾರೆ.. ವಿಶ್ವಾಸದಿಂದ ಮಾತಾಡಿಸಿದರು .. ಅವರ ಮಕ್ಕಳಿಗೆ ಮದುವೆ ಮಾಡಿದ್ದು ಹೇಳಿದ್ರು , ಮತ್ತೊಬ್ಬಳು M Comಮಾಡ್ತಾ ಇರೋದನ್ನ parttime ಕೆಲಸ ಮಾಡೋದನ್ನ ಹೇಳಿದ್ರು ..ನಮ್ಮ ಮಕ್ಕಳ ಬಗ್ಗೆ ಕೇಳಿದ್ರು ...ಮನಸ್ಸು ಒಂದ್ ತರ ನೀಲಿ ನೀಲಿ .. ಬರುವಾಗ ಮಂಜು ಹೇಳಿದ್ದು 'ಸರ್, ಮೊಮ್ಮಕ್ಕಳನ್ನ ಕರ್ಕೊಂಡ್ ಬನ್ನಿ ಸರ್ ಮನೆಗೆ ' ಅದಕ್ಕೆ ಅವರು ಕೊಟ್ಟ ಉತ್ತರ 'ಸರ್ ನೀವು ಮೊಮ್ಮಕಳನ್ನ ಕರ್ಕೊಂಡ್ ಬರಬೇಕು ಸರ್ ನಮ್ಮ ಹೋಟೆಲ್ಗೆ "....:)))))))))
ಈ ಆಷಾಡದ ಮಳೆಯ
ತುಂಟತನಕ್ಕೆ ಮಿತಿಯೇ ಇಲ್ಲ ನಲ್ಲ ..
ಒಂದೆರಡು ಹನಿಯುದುರಿಸಿ 
ನೆನಪುಗಳ 'ನೆನೆಸಿ' ಒಣಗುವ ಮೊದಲೇ ಹೊರಟುಬಿಡುತ್ತವೆಯಲ್ಲ.... :))))


ಈ ಆಷಾಡದ ಮಳೆಗೆ 
ನಿನ್ನ ನೆನಪಿನ ಹೊತ್ತಗೆ 
ಬೇಡವೆಂದರೂ ಪುಟ ತಿರುಗಿಸಿ 
ನನ್ನ ಕೆಣಕುವುದು ಏಕೆ ನಲ್ಲ ..... :))))
ಮೆಟ್ಟಿಲುಗಳ ಮೇಲೆ ಕುಳಿತು ಚಂದಿರ ಮೂಡುವುದ ದಿಟ್ಟಿಸುತ್ತಿದ್ದಾಳೆ ಅವಳು... 
ಅಮವಾಸೆಯ ಮರುದಿನದ ಬಾಲಚಂದಿರ ಕಂಡೂ ಕಾಣದಂತೆ ನಗುತ್ತಿದ್ದಾನೆ... 
ಚಂದಿರನಿಗೊಂದು ಗುಟ್ಟು ಹೇಳಿ ಅವನಿಗೆ ಹೇಳಿಬಿಡು ಎನ್ನುತ್ತಾಳೆ...
ಅದೆಷ್ಟೋ ವರುಷಗಳಿಂದ ಚಂದಿರ ಇವರಿಬ್ಬರ ರಾಯಭಾರಿಯಾಗಿದ್ದಾನೆ.. 
ಇಲ್ಲಿ ಕಂಡ ಚಂದಿರ ಅಲ್ಲೂ ಮಿನುಗುತ್ತಾನೆ ...
ಗುಟ್ಟನೆಲ್ಲ ಒಳಗೆ ಇಟ್ಟು ನಗುತ್ತಾನೆ ಅವರಿಬ್ಬರಿಗೆ ಮಾತ್ರ ಹೇಳುವಂತೆ :)))))..
ಚಿಕ್ಕವರಿದ್ದಾಗ ಸಿನಿಮಾ ನೋಡೋದೇ ವಾರಾಂತ್ಯದ ಮನೋರಂಜನೆ .. ಈಗಿನ ಹಾಗೆ ಅದೆಷ್ಟೋ ಸಿನಿಮಾಗಳು ಬರ್ತಾ ಇರ್ಲಿಲ್ಲ .. ಸಿನಿಮಾಗೆ ಹೋಗೋದೇ ಒಂದು ದೊಡ್ಡ ವಿಷ್ಯ ಅನ್ನೋ ಹಾಗೆ ಎಲ್ಲರಿಗೂ ಹೇಳ್ತಾ ಇದ್ವಿ .. ರಾಜಕುಮಾರ್ ಅಂದ್ರೆ ಬಹಳನೇ ಇಷ್ಟ .. ಯಾವುದೇ ಸಿನಿಮಾಕ್ಕೆ ಕರ್ಕೊಂಡ್ ಹೋಗದೆ ಇದ್ರೂ ಪರವಾಗಿಲ್ಲ ಆದ್ರೆ ರಾಜಕುಮಾರ್ ಸಿನಿಮಾ ತಪ್ಪಿಸ್ತಾ ಇರಲಿಲ್ಲ..ಅದು ಬಿಟ್ರೆ ತುಮಕೂರಿನ ಗುಬ್ಬಿ ವೀರಣ್ಣ ನಾಟಕ ಮಂಡಳಿಯಲ್ಲಿ ಬರ್ತಾ ಇದ್ದ ನಾಟಕಗಳು, ವರ್ಷಕ್ಕೆ ಒಮ್ಮೆ ಇಡೋ ಗಣಪತಿಯ ಪೆಂಡಾಲ್ ನಲ್ಲಿ ನಡೆಯೋ ಕಾರ್ಯಕ್ರಮಗಳು , ಗೂಳೂರಿನ ಗಣಪತಿ ,ಸಿದ್ದಗಂಗೆಯ ಶಿವರಾತ್ರಿ ಜಾತ್ರೆ ಇವೇ ನಮಗೆ ಸಂಭ್ರಮ ತರೋ ಮನೋರಂಜನೆಗಳಾಗಿದ್ವು ..
ಬಹುಶಃ ೧೯೮೫ ಅನಿಸ್ತದೆ .. ಆಗಷ್ಟೇ ಬಿಡುಗಡೆ ಆಗಿದ್ದ 'ಕವಿರತ್ನ ಕಾಳಿದಾಸ' ಸಿನಿಮಾ ನೋಡಲೇ ಬೇಕು ಅಂತ ಹಠ ಮಾಡಿ ಅಮ್ಮನ್ನ ಹೊರಡಿಸಿದ್ದೆ .. ಆಗೆಲ್ಲ ಮಧ್ಯಾಹ್ನ ೩ ಗಂಟೆಗೆ ಚಿತ್ರ ಶುರು ಅಗ್ತಾ ಇತ್ತು . ತುಮಕೂರಿನ ಮಾರುತಿ ಚಿತ್ರಮಂದಿರ..ಒಂದು ಗಂಟೆಗೆ ಹೋದ್ರೂ ಟಿಕೆಟ್ ಸಿಗಲಿಲ್ಲ .. ನನ್ನ ಸಪ್ಪೆ ಮೂತಿ ನೋಡಲಾಗದೆ ಪಾಪ ಅಮ್ಮ ಜೀವನದಲ್ಲಿ ಮೊದಲ ಸಲ ಬ್ಲಾಕ್ ಅಲ್ಲಿ ಟಿಕೆಟ್ ತಗೊಂಡ್ರು .. ನನಗೆ ನೆನಪಿರೋ ಹಾಗೆ ೩೦ ರೂಪಾಯಿ ಕೂಟ್ಟರು ಅನಿಸುತ್ತೆ ಒಂದು ಟಿಕೆಟ್ಗೆ .. ಇನ್ನ ಸಮಯ ಇತ್ತು ಅಂತ ಅಲ್ಲೇ ತಿನ್ನೋಕೆ ಕೊಡಿಸಿ ಇನ್ನೇನು ಸಿನಿಮ ಶುರು ಆಗುತ್ತೆ ಅನ್ನೋವಾಗ ಬಾಗಿಲ ಬಳಿ ಹೋದ್ವಿ .. ಭಯಂಕರ ಜನ... ಅಮ್ಮ ಟಿಕೆಟ್ ಕೊಟ್ಳು ಬಾಗಿಲ ಹತ್ತಿರ .. ಅವನು ಮುಖ ನೋಡಿದ.. 'ನೋಡೋಕೆ ಓದಿದವರ ಹಂಗೆ ಕಾಣ್ತೀರ ಮೋಸ ಯಾಕ್ರಮ್ಮ ಮಾಡ್ತೀರ 'ಅಂದ . ಅಮ್ಮ 'ಯಾಕಪ್ಪ ಏನ್ ಆಯ್ತು?? ".. 'ನೆನ್ನೆ ಮ್ಯಾಟಿನಿ ಟಿಕೆಟ್ ಈವತ್ತು ತಂದ ಕೊಡ್ತಾ ಇದ್ದಿರಲ್ಲಮ್ಮ !!'ಅಂದ .. ನಾವು ಪೆಚ್ಚುಪೆಚ್ಚು .. ಪಾಪ ಅಮ್ಮ ಅದ್ಯಾಕೆ ದುಡ್ಡು ಇಟ್ಟಿದ್ರೋ ಏನೋ, ಅದೇ ಕೊನೆ ನಾ ಇನ್ಯಾವತ್ತು ಸಿನಿಮಾಕ್ಕೆ ಹಠ ಮಾಡಲಿಲ್ಲ ...!!


ಮಗರಾಯ ಬಾಹುಬಲಿ ಸಿನೆಮಾಗೆ DRC ಅಲ್ಲಿ ಮೊದಲೇ ಬುಕ್ ಮಾಡಿ ಹೋದ ... ಇದೆಲ್ಲ ನೆನಪಿಗೆ ಬಂತು . :)))
ಮೊನ್ನೆ ಎರಡು ದಿನ ರಜ ಅಂತ ಎಲ್ಲಾ ಅತ್ತೆ ಮನೆಗೆ ಹೋಗಿದ್ವಿ .. ಒಂದಷ್ಟು ಜನ ಸೇರಿದರೆ ಮಾತಿಗೇನು ಕೊರತೆ ಬರದು .. ..ಅತ್ತೆ ಅವರ ಕಾಲದ ಕಥೆ ಶುರು ಮಾಡಿದ್ರು ..'ನನ್ನ ಮಕ್ಳು ಅವರ ಅಪ್ಪ ಅಂದ್ರೆ ಅದೆಷ್ಟ್ ಹೆದರ್ತಾ ಇದ್ರೂ ಅಂದ್ರೆ, ಏನೇ ಕೇಳಬೇಕು ಅಂದ್ರೂ ನನ್ನೇ ಕೇಳಿ , ನಾ ಈಸ್ಕೊಡ್ತಾ ಇದ್ದೆ. ಈಗ್ನವೂ ನಿಮ್ ಮಕ್ಳು ನೋಡು ಅಪ್ಪ ಅಂದ್ರೆ ಭಯನೇ ಇಲ್ಲ . ಒಂದ್ ಸಾರಿ ಅವರಪ್ಪನ ಜೊತೆ ಒಂದು ಸರ್ಕಸ್ಗೆ ಹೋಗಿ ನನ್ ಮಕ್ಳು ಪಾಪ ಅಳ್ತಾ ಬಂದವ್ರೆ ' ...

ಮಂಜು ಕಥೆ ಮುಂದುವರೆಸಿದ್ರು 'ಮೂರು ಮಕ್ಕಳನ್ನು ಅಪರೂಪಕ್ಕೆ ಸರ್ಕಸ್ಗೆ ಕರ್ಕೊಂಡ್ ಹೋದ್ರ, ನಮಗೇ ಅದೇನ್ ಸಂಭ್ರಮ ಅಂತೀಯ . ಸರಿ ಮಾವ (ಅವರಪ್ಪನ್ನ ಮಕ್ಕಳು ಮಾವ ಅಂತಾನೆ ಕರಿತಾ ಇದ್ರು ) ನೀವ್ ನೋಡ್ತಾ ಇರಿ ಅಂತ ಹೊರಗೆ ಹೋಗಿದ್ರು . ಯಾರೋ ಒಬ್ಬ ಬಂದು ಪಾಪ್ಕಾರ್ನ್ ತಂದ..ಮುಂದೆ ಹಿಡಿದಾಗ, ಒಳಗೆ ಬಂದ್ರೆ ಇದ್ದನ್ನೂ ಅವ್ರೆ ಕೊಡ್ತಾರೇನೋ ಅಂತ ಈಸ್ಕೊಂಡ್ವಿ.. ಇನ್ನೊಬ್ಬ ಒಂದು ಐಸ್ ಕ್ರೀಂ ತಂದ, ಈಸ್ಕೊಂಡ್ವಿ.. ಮತ್ತೆ ಒಬ್ಬ ಚಾಕ್ಲೇಟ್ ತಂದ ಅದನ್ನೂ ಈಸ್ಕೊಂಡ್ವಿ... ಮೊದಲು ಐಸ್ ಕ್ರೀಂ ತಿಂದ್ಬಿಡೋಣ ಕಣೋ ಕರಗೋಗುತ್ತೆ ಅಂತ ಮೂರು ಜನ ಅಣ್ಣ ತಮ್ಮ ತಿನ್ನೋಕೆ ಶುರು ಮಾಡಿದ್ವಿ .. ಅದೇನ್ ಖುಷಿ ಗೊತ್ತಾ , ಸರ್ಕಸ್ ನೋಡ್ತಾ ಪಾಪ್ಕಾರ್ನ್ ಬಿಚ್ಚಿದ್ವಿ .. ಇನ್ನು ತಿಂತಾ ಇದ್ವಿ ಹೊರಗೆ ಹೋಗಿದ್ದ ಮಾವ ಬಂದ್ರು .. ಮಕ್ಕಳು ತಿನ್ನೋದನ್ನ ನೋಡಿ 'ಕಾಸ್ ಯಾರ್ ಕೊಟ್ರು ?' ಅಂದ್ರು .. 'ಇದಕ್ಕೆ ಕಾಸು ಕೊಡಬೇಕಾ?' ಅಂತ ಹೆದರಿ ಮುಖ ನೋಡ್ಕೊಂಡ್ವಿ . ಕೊಟ್ಟು ಹೋಗಿದ್ದವರ ಕರೆದು ಬೈದ ಮಾವ ಇನ್ನ ಕೈಯಲ್ಲೇ ಇದ್ದ ಚಾಕ್ಲೇಟ್ ವಾಪಸ್ ಕೊಡಿಸಿದ್ರು .. ಸರ್ಕಸ್ ಮುಗಿಸಿ ಮನೆಗೆ ಹೋಗೊ ಅಷ್ಟರಲ್ಲಿ ಸಹಸ್ರ ನಾಮಾವಳಿ ಆಗಿತ್ತು ..ಮತ್ತೆ ಮಾವನ ಜೊತೆ ನಾವ್ ಹೊರಗೆ ಹೋಗಿದ್ದೇ ಇಲ್ಲ '.

ಅತ್ತೆ ಹೇಳಿದ್ರು 'ಆವತ್ತು ನಮಗೆ ಕಾಲ ಹಂಗೆ ಇತ್ತು ಕಣ್ ಮಗ ಮೂರು ಮಕ್ಕಳನ್ನ ಸಾಕೋದಕ್ಕೆ ಅದೆಷ್ಟ್ ಕಷ್ಟ ಪಟ್ಟಿದ್ದೀನಿ ಗೊತ್ತಾ "....
ಈಗ್ಲೂ ನಾನೇನಾದ್ರು ಫೈವ್ ಸ್ಟಾರ್ ತಗೊಂಡ್ ಹೋಗಿ ಕೊಟ್ರೆ ಮಂಜು ಕಣ್ಣಲ್ಲಿ ಅದೇನೋ ಒಂದು ಮಿಂಚು ಮಿಂಚಿ ಮರೆಯಾಗುತ್ತೆ .... ಬಹುಶಃ ಒಂದು ಚಾಕ್ಲೇಟ್ಗೆ ಹಾತೊರೆದ ಬಾಲ್ಯದ ನೆನಪಾಗುತ್ತದೆಯೇನೋ ... 


ಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು ..
ಒಂದು ಸಣ್ಣ ಹೋಟೆಲ್ . ಒಬ್ಬ ವ್ಯಕ್ತಿ ಬಂದು ಟೀ ಕುಡಿತಾನೆ . ಸ್ವಲ್ಪ ಕುಡಿದು ಮತ್ತೆಲ್ಲ ಅಲ್ಲೇ ಬಿಟ್ಟು ದುಡ್ಡು ಕೊಟ್ಟು ಹೊರಡುತ್ತಾನೆ . ಮತ್ತೊಬ್ಬ ವ್ಯಕ್ತಿ ಅಲ್ಲೇ ಇದ್ದವನು ಅದನ್ನು ನೋಡುತ್ತಾನೆ. ಎಷ್ಟ್ ಟೀ ದಂಡ ಆಯ್ತಲ್ಲ ಅಂತ ಮರುಗುತ್ತಾನೆ .. ಟೀ ದಂಡ ಆಗುತ್ತದೆ ಅಂತ ಅವನು ಕುಡಿಯೋದಿಲ್ಲ .. ಯಾಕೆ ಅಂದ್ರೆ ಅವನಿಗೆ ಪ್ರೆಸ್ಟೀಜ್ ಇದೆ...ಮತ್ತೆ ಏನೂ ಮಾಡದೆ ಮರುಗುತ್ತಲೇ ಇರುತ್ತಾನೆ.. ಮತ್ತೊಬ್ಬ ವ್ಯಕ್ತಿ ಬರುತ್ತಾನೆ ಉಳಿದ ಟೀ ನೋಡುತ್ತಾನೆ ಸ್ವಲ್ಪವೂ ಬೇಸರಿಸದೆ ಎಂಜಲು ಅಂತ ಕೂಡ ಅನ್ನದೆ ಅದನ್ನ ಕುಡಿದು ಹೊರಟೇ ಬಿಡುತ್ತಾನೆ .. ಮೊದಲು ಕುಡಿದವ ದುಡ್ಡು ಹೆಚ್ಚಾದವ ...ಕಡೆಗೆ ಕುಡಿದವ ಬಡತನದವ.. ಮಧ್ಯೆ ನೋಡುತ್ತಾ ಮರುಗುತ್ತಾ ಕುಳಿತವ ಮಧ್ಯಮ ವರ್ಗದವರ ಪ್ರತಿನಿಧಿ .. ಇಲ್ಲಿ ಟೀ ಅನ್ನೋದು ಒಂದು ಪ್ರತೀಕ ಅಷ್ಟೇ .. ಅದು ಹಣ ಆಗಿರಬಹುದು, ದಾನ ಆಗಿರಬಹುದು, ಮತ್ತೊಂದು ಆಗಿರಬಹುದು ..ಮೊದಲಿಬ್ಬರು ಹೇಗೋ ಹೊಟ್ಟೆ ತುಂಬಿಸಿಕೊಂಡರೆ .. ಈ ಮಧ್ಯಮ ವರ್ಗದವರು ತಮ್ಮತನವನ್ನೂ ಬಿಡದೆ .. ತಮ್ಮದೇ ego ಇ(ಕಟ್ಟಿ)ಟ್ಟುಕೊಂಡು, ಹೊಟ್ಟೆ ತುಂಬಾ ತಿನ್ನದೇ , ತಿನ್ನುವವರ ನೋಡುತ್ತಾ , ನಾಳೆಗೆ ನಾಳೆಗೆ ಅಂತ ಮರುಗಿ, ಮನಸಾಕ್ಷಿಗೆ (!!)ಮೆಚ್ಚುವಂತೆ ನಡೆದೆ ಎಂದುಕೊಂಡು ಬದುಕುವವರು. ಕಡೆಗೊಮ್ಮೆ ಯಾರಿಗೂ ಕಾಣದೆ ಮರೆಯಾಗಿ ಹೋಗುವವರು .....
ಅಲ್ಲೆಲೋ ಒಂದು ಕಡೆ ಎಲೆಕ್ಷನ್ ನಡಿತಾ ಇದೆ .. ಅಲ್ಲಿ ನಡೆಯೋ ಹಣ ಚೆಲ್ಲಾಟದ ಬಗ್ಗೆ ನಡೆದ ಮಾತುಗಳು ....
ಒಂದಷ್ಟು ಕಥೆಗಳು ಅದೆಷ್ಟು ಪ್ರಭಾವ ಬೀರುತ್ವೆ ಅಂದ್ರೆ ಓದಿದ್ದು ಖಂಡಿತಾ ಹಂಚಿಕೊಳ್ಳಲೇ ಬೇಕು ಅನ್ನೋ ಅಷ್ಟು ... ಇಲ್ಲೊಂದು ಅಂತಹದೇ ಕಥೆ ಇದೆ ..ಗೆಳೆಯರೊಬ್ಬರು ಕಳಿಸಿದ್ದು. ಅದರ ಅನುವಾದ ಇದು .. ಒಂದ್ ಸಾರಿ ಓದಿಬಿಡಿ ..
ಶಿವ ಪಾರ್ವತಿ ಅವರ ಮಕ್ಕಳ ಜೊತೆ ಕೈಲಾಸದಲ್ಲಿ ಸಂತಸವಾಗಿ ಇರ್ತಾರೆ . ಎಲ್ಲಾ ಕಡೆ ಪ್ರೀತಿ, ನೆಮ್ಮದಿ, ನಗುವಿನ ಹೊಳೆಯೇ ಇರುತ್ತದೆ. ಧರ್ಮ ಇನ್ನು ತಲೆ ಎತ್ತಿ ಮೆರೆಯುತ್ತಾ ಇರ್ತಾನೆ. ಭೂಮಿ ಸಮೃದ್ಧವಾಗಿರುತ್ತದೆ .
ಆದರೆ ಸಿಕ್ಕೆಲ್ಲಾ ಉಪಯೋಗಿ ವಸ್ತುಗಳನ್ನ ಮನುಷ್ಯ ಬೇಕಾಬಿಟ್ಟಿ ಉಪಯೋ(ಬೋ!!!)ಗಿಸಿ ಭೂಮಿ ಮೇಲೆ ಮಳೆ ಇಲ್ಲದಂತೆ ಆಗುತ್ತದೆ .. ವರುಣ ವಾಯು ಕೋಪಿಸಿಕೊಂಡುಬಿಡ್ತಾರೆ .. ಭೂಮಿ ಮೇಲೆ ಬರ ಶುರುವಾಗಿ ಬಿಡುತ್ತದೆ. ಪ್ರಾಣಿ ಪಕ್ಷಿಗಳಿಗೆ ಆಹಾರ ಇಲ್ಲದಂತಾಗುತ್ತದೆ .. ಎಲ್ಲೆಲ್ಲು ಹಾಹಾಕಾರ .. ಇತ್ತ ಕೈಲಾಸದಲ್ಲೂ ಹಾಗೆ ಆಗುತ್ತದೆ . ಹಸಿವೆ ತಾಳದ ಶಿವನ ಸರ್ಪ ವಾಸುಕಿ ಗಣಪನ ಇಲಿಯನ್ನ ಹಿಡಿದು ನುಂಗಿಬಿಡುತ್ತದೆ . ಇದನ್ನ ಕಂಡ ಕಾರ್ತಿಕೇಯನ ನವಿಲು ಸರ್ಪವನ್ನ ಹಿಡಿದು ತಿಂದುಬಿಡುತ್ತದೆ , ನವಿಲನ್ನ ಪಾರ್ವತಿಯ ಸಿಂಹ ತಿಂದುಬಿಡುತ್ತದೆ ... ಪಾರ್ವತಿಯ ಮಾತೃ ಹೃದಯ ಮಕ್ಕಳ ಈ ಪರಿಯ ದೌರ್ಜನ್ಯ ಕಂಡು ಮರುಗುತ್ತದೆ . ಪಾರ್ವತಿಯ ನೋವಿಗೆ ಶಿವನ ತಪಸ್ಸು ಭಂಗವಾಗುತ್ತದೆ ..
ಶಿವ 'ದೇವಿ , ಹಸಿವಿನ ತೃಪ್ತಿ ಒಂದೇ ಧರ್ಮ ಕಾಪಾಡುವ ಸಾಧನ .. ಭೂಮಿಯಲ್ಲಿ ನೆಮ್ಮದಿ ಬೇಕೆಂದರೆ ಮೊದಲು ಹಸಿವು ತೃಪ್ತವಾಗಬೇಕು ' ಅಂತಾನೆ
'ಆದರೆ ...ಈ ಪರಿಯ ಹಾಹಾಕಾರ , ನಾ ನೋಡಲಾರೆ .' ಅಂತಾಳೆ ಪಾರ್ವತಿ.
ಶಿವ ಹೇಳ್ತಾನೆ 'ಪಾರ್ವತೀ, ಹಸಿವು ಪ್ರಕೃತಿದತ್ತ .. ಬರ ಮಾನವ ನಿರ್ಮಿತ .... ಇದನ್ನ ಎಲ್ಲಿಯರೆಗೂ ಮಾನವ ಅರಿಯನೋ ಅಲ್ಲಿಯವರೆಗೂ ಈ ಪ್ರಕೃತಿ ಮುನಿಸು ಅತಿವೃಷ್ಟಿ ಅನಾವೃಷ್ಟಿ ಇದ್ದೇ ಇರುತ್ತದೆ .. 'ಬುದ್ದಿ 'ಇರುವ ಮಾನವನಿಗೆ ಹೇಳುವವರಾರು ಹೇಳು '.... ಪಾರ್ವತಿ ನಿರುತ್ತರಳಾಗ್ತಾಳೆ ...
ಹೌದು ಅಲ್ವೇ , ಹಸಿವು ಪ್ರಕೃತಿದತ್ತ , ಬರ ಮಾನವ ನಿರ್ಮಿತ .... ಪರಿಹಾರ ......!!!!???
ಒಬ್ಬ ಕವಿಯ, ಲೇಖಕನ, ಸಾಹಿತಿಯ ಧನ್ಯತೆ ಎಲ್ಲಿ ಸಿಗಬಹುದು..?ಮೆಚ್ಚುಗೆ, ಕೀರ್ತಿ,ಹಣ...???
೧೯೨೦ ರಲ್ಲಿ ಕವಿ ಟಾಗೋರ್ ಇಂಗ್ಲೆಂಡ್ ಅಲ್ಲಿ ಇದ್ದರು. ಒಂದು ಪತ್ರ ಅವರಿಗೆ ಬಂತು..ಅದು ಇಂಗ್ಲಿಷ್ ಮಹಿಳೆಯೊಬ್ಬಳ ಪತ್ರ......ಒಕ್ಕಣೆ ಹೀಗಿತ್ತು.......
ಪ್ರಿಯ ರವಿಂದ್ರನಾಥ್ ಸರ್,
ನೀವು ಲಂಡನ್ನಲ್ಲಿ ಇದ್ದೀರಂತೆ , ನಿಮಗೆ ಪತ್ರ ಬರೆಯಬೇಕೆಂದು ಬಹಳ ದಿನಗಳಿಂದ ಅನ್ಕೊಂಡೆ . ಧೈರ್ಯ ಬಂದಿರಲಿಲ್ಲ..ಆದ್ರೆ ಈವತ್ತು ಬರೆಯಲೇಬೇಕು ಎಂದು ಬರೆಯುತ್ತ ಇದ್ದೇನೆ ..ಈ ಪತ್ರ ನಿಮ್ಮ ಕೈ ಸೇರಿದರೆ ನನ್ನ ಪುಣ್ಯ. ಯಾಕೆ ಅಂದ್ರೆ ನಿಮ್ಮ ವಿಳಾಸ ಕೊಡ ನಂಗೆ ಸರಿಯಾಗಿ ಗೊತ್ತಿಲ್ಲ..ನಿಮ್ಮ ಹೆಸರಿನ ಬಲದಿಂದ ಸೇರುತ್ತೆ ಅನ್ನೋ ನಂಬಿಕೆಯಿಂದ ಬರಿತಾ ಇದ್ದೇನೆ..
ಎರಡು ವರ್ಷದ ಹಿಂದೆ ನನ್ನ ಮಗ ಯುದ್ಧ ಭೂಮಿಗೆ ಹೊರಟಿದ್ದ . ಆಗ ನಾವಿಬ್ಬರು ಮುಳುಗೋ ಸೂರ್ಯನ ಸಮಕ್ಷಮದಲ್ಲಿ ಸಾಗರವ ನೋಡುತ್ತಾ ಮೌನವೇ ಮಾತಾಗಿ ನಿಂತಿದ್ದೆವು. .ಆಗ ನನ್ನ ಕವಿಮಗ ತನಗೆ ತಾನೆ ಎಂಬಂತೆ ಈ ಮಾತು ಹೇಳಿದ "When I go from hence ,let this be my parting words"
ಯುದ್ದಕ್ಕೆ ಹೋದ..ಅವನು ಮತ್ತೆ ಬರಲಿಲ್ಲ....
ಬಂದಿದ್ದು ಅವನ ಪಾಕೆಟ್ ಬುಕ್. ತೆರೆದು ನೋಡಿದೆ. ಅಕ್ಕರೆಯಿಂದ ಬರೆದ ಅದೇ ವಾಕ್ಯ ನನ್ನ ಸೆಳೆಯಿತು. ಕೆಳಗೆ ನಿಮ್ಮ ಹೆಸರು ಇತ್ತು....ನನಗೆ ನನ್ನ ಮಗನ ಮನಸೂರೆಗೊಂಡ ಈ ಕವನ ಇಡಿಯಾಗಿ ಓದೋ ಆಸೆ ದಯವಿಟ್ಟು ಆ ಕವಿತೆ ಇರೋ ಪುಸ್ತಕದ ಹೆಸರ ತಿಳಿಸುವಿರಾ?......ಹೀಗಂತ ಕೇಳೋದು ತಪ್ಪು ಅಲ್ಲ ತಾನೇ.?"
ಪತ್ರ ಬರೆದ ಮಹಿಳೆ ಸುಸಾನ್ ಓವೆನ್ ಅನ್ನುವವರು ..ವಿಖ್ಯಾತ ಕವಿ ವಿಲ್ಫ್ರೆಡ್ ಓವೆನ್ (Wilfred Oven)ನ ತಾಯಿ........(ಈ ಮೇಲಿನ ಪದ್ಯದ ಸಾಲು ಟಾಗೋರ್ ರ ಗೀತಾಂಜಲಿಯದು )
ಓದಿದ ಟಾಗೋರ್ ರ ಸ್ತಂಭಿಭೂತರಾದರು .
ಒಬ್ಬ ಕವಿಗೆ ಇದಕ್ಕಿಂತ ಮತ್ತೇನು ಬೇಕು ಅಲ್ವ ....
Felt Like sharing:))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...