Monday 27 July 2015

ಒಬ್ಬ ಕವಿಯ, ಲೇಖಕನ, ಸಾಹಿತಿಯ ಧನ್ಯತೆ ಎಲ್ಲಿ ಸಿಗಬಹುದು..?ಮೆಚ್ಚುಗೆ, ಕೀರ್ತಿ,ಹಣ...???
೧೯೨೦ ರಲ್ಲಿ ಕವಿ ಟಾಗೋರ್ ಇಂಗ್ಲೆಂಡ್ ಅಲ್ಲಿ ಇದ್ದರು. ಒಂದು ಪತ್ರ ಅವರಿಗೆ ಬಂತು..ಅದು ಇಂಗ್ಲಿಷ್ ಮಹಿಳೆಯೊಬ್ಬಳ ಪತ್ರ......ಒಕ್ಕಣೆ ಹೀಗಿತ್ತು.......
ಪ್ರಿಯ ರವಿಂದ್ರನಾಥ್ ಸರ್,
ನೀವು ಲಂಡನ್ನಲ್ಲಿ ಇದ್ದೀರಂತೆ , ನಿಮಗೆ ಪತ್ರ ಬರೆಯಬೇಕೆಂದು ಬಹಳ ದಿನಗಳಿಂದ ಅನ್ಕೊಂಡೆ . ಧೈರ್ಯ ಬಂದಿರಲಿಲ್ಲ..ಆದ್ರೆ ಈವತ್ತು ಬರೆಯಲೇಬೇಕು ಎಂದು ಬರೆಯುತ್ತ ಇದ್ದೇನೆ ..ಈ ಪತ್ರ ನಿಮ್ಮ ಕೈ ಸೇರಿದರೆ ನನ್ನ ಪುಣ್ಯ. ಯಾಕೆ ಅಂದ್ರೆ ನಿಮ್ಮ ವಿಳಾಸ ಕೊಡ ನಂಗೆ ಸರಿಯಾಗಿ ಗೊತ್ತಿಲ್ಲ..ನಿಮ್ಮ ಹೆಸರಿನ ಬಲದಿಂದ ಸೇರುತ್ತೆ ಅನ್ನೋ ನಂಬಿಕೆಯಿಂದ ಬರಿತಾ ಇದ್ದೇನೆ..
ಎರಡು ವರ್ಷದ ಹಿಂದೆ ನನ್ನ ಮಗ ಯುದ್ಧ ಭೂಮಿಗೆ ಹೊರಟಿದ್ದ . ಆಗ ನಾವಿಬ್ಬರು ಮುಳುಗೋ ಸೂರ್ಯನ ಸಮಕ್ಷಮದಲ್ಲಿ ಸಾಗರವ ನೋಡುತ್ತಾ ಮೌನವೇ ಮಾತಾಗಿ ನಿಂತಿದ್ದೆವು. .ಆಗ ನನ್ನ ಕವಿಮಗ ತನಗೆ ತಾನೆ ಎಂಬಂತೆ ಈ ಮಾತು ಹೇಳಿದ "When I go from hence ,let this be my parting words"
ಯುದ್ದಕ್ಕೆ ಹೋದ..ಅವನು ಮತ್ತೆ ಬರಲಿಲ್ಲ....
ಬಂದಿದ್ದು ಅವನ ಪಾಕೆಟ್ ಬುಕ್. ತೆರೆದು ನೋಡಿದೆ. ಅಕ್ಕರೆಯಿಂದ ಬರೆದ ಅದೇ ವಾಕ್ಯ ನನ್ನ ಸೆಳೆಯಿತು. ಕೆಳಗೆ ನಿಮ್ಮ ಹೆಸರು ಇತ್ತು....ನನಗೆ ನನ್ನ ಮಗನ ಮನಸೂರೆಗೊಂಡ ಈ ಕವನ ಇಡಿಯಾಗಿ ಓದೋ ಆಸೆ ದಯವಿಟ್ಟು ಆ ಕವಿತೆ ಇರೋ ಪುಸ್ತಕದ ಹೆಸರ ತಿಳಿಸುವಿರಾ?......ಹೀಗಂತ ಕೇಳೋದು ತಪ್ಪು ಅಲ್ಲ ತಾನೇ.?"
ಪತ್ರ ಬರೆದ ಮಹಿಳೆ ಸುಸಾನ್ ಓವೆನ್ ಅನ್ನುವವರು ..ವಿಖ್ಯಾತ ಕವಿ ವಿಲ್ಫ್ರೆಡ್ ಓವೆನ್ (Wilfred Oven)ನ ತಾಯಿ........(ಈ ಮೇಲಿನ ಪದ್ಯದ ಸಾಲು ಟಾಗೋರ್ ರ ಗೀತಾಂಜಲಿಯದು )
ಓದಿದ ಟಾಗೋರ್ ರ ಸ್ತಂಭಿಭೂತರಾದರು .
ಒಬ್ಬ ಕವಿಗೆ ಇದಕ್ಕಿಂತ ಮತ್ತೇನು ಬೇಕು ಅಲ್ವ ....
Felt Like sharing:))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...