Saturday 5 December 2015

ಬಲು ಅಪರೂಪಕ್ಕೆ ನೆನ್ನೆ ಮಗಮಗಳಿಗೆ ಇಬ್ಬರಿಗೂ ಮಂಜು ಚೆನ್ನಾಗಿ ಬೈದಿದ್ದರು. ಹಳೆಯ ಎಂದೋ ಬೈಯದೆ ಉಳಿದಿದ್ದ ವಿಷಯವನ್ನೆಲ್ಲ ತೆಗೆದು ಬೈದ್ರು .. ಸಂಜೆ ಎಂದಿನಂತೆ ಊಟ ಆಯ್ತು . ಎಲ್ಲಾ ಸ್ವಲ್ಪ ಕಡಿಮೆ ತಿಂದ್ರು , ಕಡಿಮೆ ಮಾತಾಡಿದ್ರು , ಮತ್ತೆ ಮಲಗಿದರು. ಬೆಳಿಗ್ಗೆ ಮಂಜು ಎದ್ರು . ಟೀ ಕುಡಿದು ಡ್ಯೂಟಿಗೆ ಹೋದ್ರು. ಪುಟ್ಟಿ ಎದ್ದು ರೆಡಿ ಆಗೋವಾಗ 'ಅಪ್ಪ ಏನಾದ್ರು ಅಂತ ಮಾ' ಅಂದ್ಲು. 'ಇಲ್ಲಾ ಮಗ, ಆದರೂ ಅಪ್ಪನಿಗೆ ಬೇಜಾರಾಗಿದೆ ಬಿಡು. ನೀವು ಸ್ವಲ್ಪ ರೆಕ್ಟಿಫ್ಯ್ ಮಾಡಿಕೊಳ್ಳಿ , ಸುಮ್ಸುಮ್ನೆ ಅಪ್ಪನ ತನಕ ಯಾಕೆ ಬೇಡದ್ದು'. ಅಂದೆ. 'ಹ್ಞೂ ಮಾ, ಸರಿ '.. ಶಾಲೆಗೆ ಹೋದ್ಲು. ಆಮೇಲೆ ಕಾರ್ತಿ ಕೇಳ್ದ 'ಅಪ್ಪ ಏನಾದ್ರೂ ಅಂತೆನಮ್ಮ ?' 'ಇಲ್ಲ ಮಗ, ಆದರೂ ನೀ ನಿನ್ನ ರೆಕ್ಟಿಫ್ಯ್ ಮಾಡ್ಕೊಬೇಕಲ್ವ, ನೀ ದೊಡ್ಡೋನು' ಅಂದೆ . ಅವನು 'ಸರಿ ಮಾ , ಸಾರಿ ' ಅಂದ. ಮಂಜು ಸಂಜೆ ಡ್ಯೂಟಿಯಿಂದ ಬಂದ್ರು . ಬಂದಿದ್ದೆ ಕೇಳಿದ್ರು 'ಪುಟ್ಟಿ ಕಾರ್ತಿ ಏನಾದ್ರು ಹೇಳಿದ್ರಾ ?' 'ಯಾಕಪ್ಪ?' ಅಂದೆ . 'ಅಲ್ಲ ನೆನ್ನೆ ಬೈದಿದ್ದಕ್ಕೆ ಏನಾದ್ರು ಹೇಳಿದ್ರಾ ಅಂತ ಕೇಳ್ದೆ' ಅಂದ್ರು.. 'ನೆನ್ನೆ ನೀ ಬೈದದಕ್ಕೆ ಖುಷಿಯಾಗಿದೆ ಅಂದ್ರು !!' ಅಂದೆ ನಗ್ತಾ . 'ನೀನೊಂದು , ತುಂಬಾ ಬೈದ್ ಬಿಟ್ಟೆ ಮಕ್ಕಳನ್ನ, ಅದ್ಯಾಕೋ ಸಿಟ್ ಬಂದಿತ್ತು ಸಾರಿ. " ಅಂದ್ರು... ಸಂಜೆ ಮಕ್ಕಳಿಬ್ಬರು ಬಂದ ಮೇಲೆ ಮೂರು ಜನಕ್ಕೂ ಮಾತಾಡೋಕೆ ಒಂದ್ ತರ ..'ಸಾರಿ ಕೃತು, ಸಾರಿ ಕಾರ್ತಿ ' ಅಂತ ಮಂಜು ಹೇಳಿದ ಕೂಡ್ಲೇ 'ಅಪ್ಪೋ ನೀನೆನಪ್ಪ ನೀ ಬೈದೆ ಮತ್ತೇನು ಎದುರು ಮನೆಯವರು ಬೈತಾರ?; ಅಂತ ಇವರಿಬ್ಬರು. 'ಆ ಮಗ ಯಾಕ್ ಬೈತಾನೆ ನಿಮ್ನ ಏನಿಲ್ಲ ಅವನಿಗೆ ' ಅಂತ ಮಂಜು ...
ಅಲ್ಲೆಲ್ಲೋ ಮೋಡ ಕರಗಿದಂತೆ... ನಗುವಿನ ಮಳೆ ಸುರಿದಂತೆ ......
Be it sorrows after happiness r or vice versa.........Life is ..........ಮೋಡ and ಮಳೆ:))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...