Monday 27 July 2015

ಅವಳು ಹೇಳಿದ ಕಥೆ ..... 
ನನಗೇ ತಿಳಿಯದೆ ತುಂಬಾ ಪ್ರೀತಿಸಿಬಿಟ್ಟೆ ಅವನನ್ನ .. ಎಂದೂ ಯಾರನ್ನೂ ಹಚ್ಚಿಕೊಳ್ಳದ ನಾ ಅವನ ಗೆಳೆತನ ಬಯಸಿದೆ, ಅವನ ಸಾಂಗತ್ಯ ಅರಸಿದೆ . ಅವನು ಬರುವ ಎಂದೊಡನೆ ಮನದ ತುಂಬಾ ಬಾನ ನೀಲಿ .. ಅವ ಬಂದ, ನನಗಾಗಿ ಅದೆಷ್ಟೇ ಶ್ರಮವಾದರೂ ಬಂದ ..ಅದೆಷ್ಟು ಮಾತು ... ಆಡಿದ ಅಷ್ಟೆಲ್ಲಾ ಮಾತುಗಳು ಮನದ ಹೊತ್ತಿಗೆಯಲ್ಲಿ ಅಳಿಸಲಾರದೆ ಉಳಿದುಬಿಟ್ಟವು .. ಮತ್ತೆ ಅವನು ಹೋಗಲೇಬೇಕಿತ್ತು.......ಹೊರಟ ... ಆಡದೆ ಉಳಿದ ಮಾತು ಮೌನದ ಮೊರೆ ಹೊಕ್ಕಿತು ...ಮೌನ ಬದುಕಿನ ಅದೆಷ್ಟೋ ವರುಷಗಳವರೆಗು ಯಾರಿಗೂ ಕಾಣದ ಕಂಬನಿಯಾಗೆ ಉಳಿದುಹೋಯ್ತು .......ಹಾಗೆ ಹಾಗೇ ಉಳಿದುಬಿಟ್ಟೆವು ಭೂಮಿಬಾನಿನಂತೆ ... ಕ್ಷಿತಿಜದ ಅಂಚಲ್ಲಿ ತಾಕಿಯೂ ತಾಕದಂತೆ .......

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...