Monday 14 November 2016

ಈವತ್ತು ಪೂರ ಖಾನದಾನ್ ಒಟ್ಟಿಗೆ ಸೇರೊದು ಅಂತ ಪ್ಲಾನ್ ಆಗಿತ್ತು . ಬೆಳಿಗ್ಗೆ ಬೆಳಿಗ್ಗೆ ಅತ್ತೆಗೆ ವಾರಗಿತ್ತಿಯರಿಗೆ ಕರೆ ಮಾಡಿ ಮಂಜು ಬರ್ತಾರೆ ಕರ್ಕೊಂಡ್ ಹೋಗೋಕೆ ರೆಡಿ ಆಗಿರಿ ಅಂತ ಹೇಳಿ ಮುಗಿಸಿದೆ . ಇದ್ದಬದ್ದ ಆಪೀಸ್ ಕೆಲಸ ಬೇಗ ಮುಗಿಸೋಣ ಅದಕ್ಕೆ ಮೊದಲು ಮಂಜುಗೆ ಕರೆ ಮಾಡಿಬಿಡೋಣ ಅಂತ ಮಾಡಿದೆ. ಮೊಬೈಲ್ ಅಲ್ಲಿ ಇರೋ ಅಂಕಿ, ಇನ್ನೇನು ನಂಬರ್ ಒತ್ತೊದಲ್ಲ ಏನಲ್ಲ ಅಂತ ಎಂದಿನಂತೆ ಕರೆ ಕೊಟ್ಟೆ. ಒಂದಷ್ಟು ರಿಂಗ್ ಆದ ನಂತರ 'ಹಲೋ ಹೇಳಿ' ಅಂತ ಹೇಳ್ತು ಒಂದು ಹೆಣ್ಣು ದನಿ . ಬೆಚ್ಚಿ ಬಿದ್ದ ಹಾಗೆ ಆಯ್ತು . ಒಂದು ಕ್ಷಣ ಏನೇನೋ ಯೋಚನೆ, ಯಾಕೆ ಏನಾಯ್ತು ಮಂಜುಗೆ ಅಂತೆಲ್ಲ.. ಮತ್ತೆ 'ಮಂಜು' ಅಂದೆ . 'ಯಾರು ಹೇಳಿ' ಅಂದ್ರು . ನಾನು ಸಾರೀ ಮಾ , ರಾಂಗ್ ನಂಬರ್ ಅನಿಸುತ್ತೆ ಸಾರಿ ' ಅಂತ ಕಟ್ ಮಾಡಿದೆ. ಎಲ್ಲೋ ಏನೋ ತಪ್ಪಾಗಿ ರಾಂಗ್ ನಂಬರ್ಗೆ ಹೋಗಿದೆ ಅಂತ ಹೇಳಿ ಮತ್ತೆ ಕರೆ ಮಾಡಿದೆ . ಮತ್ತೆ ಅದೇ ಹೆಣ್ಣು ದನಿ !!. 'ಏನ್ ಹೇಳಿ" ಅಂದ್ರು . ಯಾಕೋ ಸರಿ ಇಲ್ಲ ಅಂತ ಮತ್ತೆ ಕ್ಷಮೆ ಕೇಳಿ ಲ್ಯಾಂಡ್ಲೈನ್ ಇಂದ ಕರೆ ಮಾಡಿದೆ . ಮತ್ತೆ ಆ ಸಂಖ್ಯೆಗೇ ಹೋಗಬೇಕೆ ... ಅದೇ ಹೆಣ್ಣು ಮಗಳ ದನಿ... ನಾ ಮಾತಾಡಲೇ ಇಲ್ಲ ಮಾತಾಡಿದ್ರೆ ಎಲ್ಲಿ ಏನು ಆಟ ಆಡ್ತಾ ಇದ್ದಾರೆ ಅಂತ ತಿಳಿತಾರೋ ಅಂತ ಹಾಗೆ ಫೋನ್ ಕಟ್ ಮಾಡಿ ಸುಮ್ಮನಾಗಿಬಿಟ್ಟೆ . ಮಂಜುನೆ ಮಾಡಿದಾಗ ಮಾತಾಡಿದ್ರೆ ಆಯ್ತು ಬಿಡು ಅಂತ . ....
ಎಷ್ಟೋ ಸಾರಿ ನನಗೇ ಹಾಗೆ ಕೆಲವೊಮ್ಮೆ ಕರೆ ಬಂದಾಗ, ಅದೆಷ್ಟ್ ಸಾರಿ ಬೈಕೊಂಡಿದ್ದೆ . ಯಾವೋ ತರಲೆಗಳು ಬೇಕ್ಬೇಕಂತ ತಲೆ ತಿಂತಾವೆ ಅಂತೆಲ್ಲ ಬೈಕೊಳ್ತಾ ಇದ್ದೆ .. ಅಲ್ಲಾ , ಅಲ್ಪಸ್ವಲ್ಪ ತಿಳಿದಿರೋ ನನ್ನಿಂದ ಹಿಂಗೆಲ್ಲ ತಪ್ಪಾಗುತ್ತೆ ಅಂದ್ರೆ , ಪಾಪ ಏನೂ ತಿಳಿದೇ ಏನೋ ಅರ್ಜೆಂಟ್ ಅಂತ ಕರೆ ಮಾಡಿ ನನ್ನ ನಂಬರ್ಗೆ ಬಂದಿರಬಹುದೆಂದು ಅಂದುಕೊಳ್ಳದೆ 'ನೋಡ್ಕೊಂಡ್ ಫೋನ್ ಮಾಡೋದಲ್ವ' ಅಂತ ರೇಗಿದ್ದು ಕೂಡ ಇದೆ !!! ಅನುಭವಿಸಿದ್ರೆ ಮಾತ್ರ ಅರಿವಾಗೋದು ಅನ್ನೋದು ನಿಜವೇನೋ .....!!!!.

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...