Monday 13 April 2015

ಹೀಗೊಂದು ಹೀಗೊಂದು  ಕೇಳಿದ ಕಥೆ .........
ಅದೊಂದು ಮಾಘ ಮಾಸದ ಇರುಳು....ಹೊಸ ಜೀವವೊಂದನ್ನು ಕಾಣೋ ಆಸೆಯಿಂದ ಆತ ಮತ್ತು ೬ ವರ್ಷದ ಪ್ರಣವ ಕಾದು ಕುಳಿತ್ತಿದ್ದಾರೆ ...ಒಂಬತ್ತು ತಿಂಗಳಿಗೆ ಇನ್ನು ಎರಡು ತಿಂಗಳು ಬಾಕಿ ಇದ್ದಂತೆ ಹೊರಬರಲು ಹವಣಿಸಿದ ಜೀವ. ಆಪರೇಷನ್ ಕೊಠಡಿಯಿಂದ ಹೊರ ಬಂದ ವೈದ್ಯನ ಮೊಗದಲ್ಲಿ ನೋವಿನ ಭಾವ...'ಏನು ಹೇಳಲಾರೆ ಮಾಧವ ..ಬದುಕಬಹುದು ಬದುಕದೆಯೂ ಇರಬಹುದು, ಬದುಕಿದರೂ ಮಾತಾಡದೆಯೋ, ಕಣ್ಣು ಕಾಣದೆಯೋ, ಕಿವಿ ಕೇಳದೆಯೋ ಇಲ್ಲ ಮಾನಸಿಕ ಅಂಗವೈಕಲ್ಯದಿಂದಲೋ ಬದುಕಬಹುದು. ಒಂದೂಮುಕ್ಕಾಲು ಕೆ ಜಿ ತೂಕ ಇದ್ದಾಳೆ ಅಷ್ಟೇ"..ಪ್ರಣವನ ಕಣ್ಣ ತುಂಬಾ ಕಂಬನಿ. 'ಅಪ್ಪ, ಪುಟ್ಟಿನ ನೋಡೋಣ ಬಾ' ಎನ್ನೋ ಅವನ ಮುಗ್ಧ ಕರೆಗೆ ಕರಗಿ ಹೋದ ಮಾಧವ..'ಎಷ್ಟೆಲ್ಲಾ ಕನಸು ಕಟ್ಟಿದ್ದೆವು ಮೂರು ಜನ ಪುಟ್ಟಿಗಾಗಿ' ಕಣ್ಣು ತುಂಬಿ ಬಂತು.
ಆ ಮನೆಯಲ್ಲಿ ಅವರು ಮೂವರೇ, ಮಾಧವ, ರಾಧೆ, ಮತ್ತು ಪ್ರಣವ . ..ಪುಟ್ಟಿ ಬರುತ್ತಾಳೆ ಅಂದಾಗ ಆದ ಸಂಭ್ರಮ ಎಷ್ಟು......ಈಗ ಮೂವರ ಮನದಲ್ಲೂ ದುಗುಡ...
ರಾಧೆ ಕಂಗೆಡಲಿಲ್ಲ ಅಳಲು ಇಲ್ಲ..ನನ್ನ ಮಗಳು ಬದುಕುತ್ತಾಳೆ ಅನ್ನೋ ನಂಬಿಕೆ...ದೈವಗಳ ಮೇಲೆ, ವೈದ್ಯರ ಮೇಲೆ ,ತನ್ನ ಮೇಲೆ ನಂಬಿಕೆ ಅವಳಿಗೆ..ಮಗುವನ್ನ ‘incubator ಅಲ್ಲಿ ಇಡಲಾಯ್ತು..ಎಷ್ಟು ಪುಟ್ಟ ಕಂದ..ಒಂದು ಸಣ್ಣ ಮುತ್ತಿಗೆ ನೋವು ಅನುಭವಿಸುವಂತೆ ಅನಿಸುತ್ತಿತ್ತು..ತಬ್ಬಿ ಹಾಲೂಡಿಸುವ ರಾಧೆಯ ಆಸೆ ಕಣ್ಣ ನೀರಿನೊಡನೆ ಕರಗಿ ಹೋಗುತ್ತಿತ್ತು ..ಎತ್ತಿಕೊಂಡು ಎದೆಗೊತ್ತಿಕೊಳ್ಳುವ ಮಾಧವನ ಬಯಕೆ ಬಾಡಿಹೋಗುತ್ತಿತ್ತು .
ದಿನಗಳು ಉರುಳಿದವು....ಎಲ್ಲರ ಆಶ್ಚರ್ಯಕ್ಕೆ ಪುಟ್ಟಿಗೆ ಈಗ ಎರಡು ತಿಂಗಳು...ಅಮ್ಮನ ಕಣ್ಣಿರೋ, ವೈದ್ಯರ ಆರೈಕೆಯೋ, ಅಪ್ಪ ಮಗನ ಪ್ರಾರ್ಥನೆಯ ಫಲವೋ..ಪುಟ್ಟಿ ಈಗ ಮೊದಲ ಬಾರಿ ಅಮ್ಮನ ತೋಳು ಸೇರಿದಳು...ರಾಧೆಯ ಕಣ್ಣುಗಳಲ್ಲಿ ಸಂಭ್ರಮ ..ಅಪ್ಪ ಮಗನೆ ಆರತಿ ಬೆಳಗಿ ಅಮ್ಮಮಗಳ ಮನೆ ತುಂಬಿಸಿಕೊಂಡರು......
ಈವತ್ತು ಪುಟ್ಟಿಗೆ ಐದು ವರ್ಷ...ಪುಟ್ಟ ಕಣ್ಣು ಪಿಳಿಪಿಳಿ ಬಿಡುತ್ತ, ಪುಟ್ಟ ಬಾಯಿಂದ ವಟಗುಟ್ಟುವ ಪುಟ್ಟಿ ಅಮ್ಮ, ಅಪ್ಪ, ಅಣ್ಣನ ಮುದ್ದು .....
ವೈದ್ಯರ ಮಾತಿಗೆ ಸವಾಲೆಂಬಂತೆ ಬೆಳೆದವಳು..ಅಮ್ಮನ ಹಾರೈಕೆ, ಅಪ್ಪನ ಪರಿಶ್ರಮ, ಅಣ್ಣನ ಪ್ರೀತಿ ಅವಳನ್ನ ಉಳಿಸಿಬಿಟ್ಟಿತು..
ಇಂದು ಅದೇ ಮಾಘ ಮಾಸ...ಮುಸ್ಸಂಜೆ ಹೊತ್ತಲ್ಲಿ ಅಮ್ಮ ಮಗಳು ಮನೆಯ ಮುಂದಿನ ಮೆಟ್ಟಿಲ ಮೇಲೆ ಕುಳಿತಿದ್ದಾರೆ ..ಪುಟ್ಟಿ ಕೇಳಿದಳು "ಅಮ್ಮ ನಿನಗೆ ಆ ಮಣ್ಣಿನವಾಸನೆ ಬಂತಾ??" .."ಹೂಂ ಪುಟ್ಟಿ ಮಳೆ ವಾಸನೆ ಅಲ್ವೇ ಪುಟ್ಟಿ... ನನಗೂ ಇಷ್ಟ ಪುಟ್ಟಿ ".. .
"ಅಲ್ಲ ಅಮ್ಮ..ಇದು ನಿನ್ನ ಹತ್ತಿರ ಬರೋ ಪರಿಮಳ...ನಿನ್ನ ಮಡಿಲಲ್ಲಿ ನಿನ್ನ ಎದೆಯಲ್ಲಿ ತಲೆ ಇಟ್ಟಾಗ ಸಿಗುವ ಪರಿಮಳ...."
.ಈಗ ತುಂಬಿ ಬಂತು ರಾಧೆಯ ಕಣ್ಣು..ವರ್ಷಗಳಿಂದ ಹಿಡಿದಿಟ್ಟ ಎಲ್ಲ ದುಖ ಮಗಳ ಮಾತಿಂದ ಮಳೆಯ ಜೊತೆ ಹರಿದು ಹೋದಂತೆ, ಮಗಳ ಬದುಕುಸಾವಿಗಾಗಿ ಹೆದರಿ ಕಾಯ್ದ ಆ ನೀಳರಾತ್ರಿಗಳ ನೋವು ಕರಗಿ ಹೋದಂತೆ ಅತ್ತಳು ರಾಧೆ...ಮುದ್ದು ಮಗಳ ಕೈ ಅಮ್ಮನ ಕಣ್ಣ ಒರೆಸುತ್ತಿತ್ತು...:))ಮುಂಬಾಗಿಲ ಬಳಿ ಅಪ್ಪ ಮಗ ಹನಿ ತುಂಬಿದ ಕಣ್ಣಿನೊಡನೆ ಮುಖದ ತುಂಬಾ ನಗುವಿನೊಡನೆ ನಿಂತಿದ್ದರು...:)))

Saturday 4 April 2015

ಮದುವೆಯಾದ ಹೊಸದರಲ್ಲಿ ಹೊಸ ಮನೆ ಮಾಡಿ ಗಂಡನೊಡನೆ ಸಂಸಾರ ಹೂಡಿದಾಗ ಏನೋ ಸಂಭ್ರಮ , ಕಲಿತ ಅಡುಗೆಯೆಲ್ಲ ಮಾಡಿ ಬಡಿಸಿ ಹೊಗಳಿಸಿ ಕೊಳ್ಳೋ ಖುಶಿ. ಇರೋ ಇಬ್ಬರಿಗೆ ಎಷ್ಟು ಅನ್ನ ಮಾಡಬೇಕೆಂಬ 'ಚಿಕ್ಕಪುಟ್ಟ' ವಿಷಯಕ್ಕೆ ಗಮನ ನೀಡಲು ಮರೆವ ವಯಸ್ಸು ಹುಮ್ಮಸ್ಸು .... ಒಂದು ದಿನ ಅನ್ನ ಉಳಿತು ಹೊರ ಹಾಕಿದೆ .. ಮತ್ತೊಂದು ದಿನ ಕೂಡ ಹೀಗೆ, ... ಮರು ದಿನ ಕೂಡ ಹೀಗೆ .. ಅಂದು ರಾತ್ರಿ ಕೂಡ ಹಾಗೆ , ಅನ್ನ ಉಳಿದಿತ್ತು ಹೊರ ಹಾಕ ಹೊರಟೆ ... ಗಂಡ 'ಒಂದ್ ನಿಮಿಷ ಬಾ ಇಲ್ಲಿ'.. ಹೋದೆ , ಪಕ್ಕ ಕುಳಿತೆ ...ಕೈ ಹಿಡಿದ " ಸುನಿ, ಅನ್ನಕ್ಕೆ ಇಡೋವಾಗ ಅಕ್ಕಿ ಹಾಕ್ತೀಯ ಅಲ್ವ, ಹಾಕಿದ ಮೇಲೆ ನಿನ್ನ ಕೈ ಹಿಡಿಯಲ್ಲಿ ಒಂದ್ ಹಿಡಿ ಅಕ್ಕಿ ಮತ್ತೆ ಅಕ್ಕಿಯ ಡಬ್ಬಕ್ಕೆವಾಪಸ್ಸು ಹಾಕು , ನಾಲ್ಕು ದಿನ ಅಕ್ಕಿ ಹಿಂದಕ್ಕೆ ಹಾಕಿದ್ರೆ ಐದನೇ ದಿನಕ್ಕೆ ಅನ್ನ ಆಗುತ್ತೆ ...ದಿನಾ ಹೀಗೆ ಹೊರಗೆ ಹಾಕಿದ್ರೆ ಐದನೇ ದಿನಕ್ಕೆ ಅನ್ನ ಇರೋಲ್ಲ ಅಲ್ವೇನೋ, ಒಂದ್ ತುತ್ತು ಕಡಿಮೆ ತಿಂದ್ರೆ ವ್ಯತ್ಯಾಸ ಆಗೋಲ್ಲ , ಒಂದ್ ತುತ್ತು ಚೆಲ್ಲಿದ್ರೆ ತುಂಬಾ ವ್ಯತಾಸ ಆಗುತ್ತೆ" ಅಂದ .... ಅಂದು ಬದುಕು ಹಾಗೆ ಇತ್ತು , ಕಣ್ಣು ತುಂಬಿತ್ತು ಆದರೆ ಮನ ಪಾಠ ಕಲಿತಿತ್ತು .... ಇಂದೂ ಕೂಡ ಅನ್ನಕ್ಕೆ ಅಕ್ಕಿ ಇಡೋವಾಗ ಒಂದ್ ಹಿಡಿ ಅಕ್ಕಿ ಡಬ್ಬಕ್ಕೆ ಹಿಂದಕ್ಕೆ ಹಾಕ್ತೀನಿ , ಅನ್ನದ ಬೆಲೆ ಅರಿತಿದ್ದೀನಿ ... ಮಕ್ಕಳಿಗೂ ಅದೇ ಹೇಳ್ತೀನಿ ..ಇವತ್ತು ಪುಟ್ಟಿ ಅನ್ನಕ್ಕೆ ಇಡೋವಾಗ ಇದೆಲ್ಲ ನೆನಪಾಯ್ತು ........
ಒಂದು ಪುಟ್ಟ ಸಂಸಾರ ಗಂಡ, ಹೆಂಡತಿ, ಮತ್ತು ಇಬ್ಬರು ಮಕ್ಕಳು , ಚೆಂದದ ಬದುಕು. ಆದ್ರೆ ಮಕ್ಕಳಿಬ್ಬರೂ ತುಂಬಾನೇ ತುಂಟರು. ಅಕ್ಕಪಕ್ಕದವಿಗೆಲ್ಲ ಇವರಿಂದ ತಲೆ ನೋವು . ದಿನಕ್ಕೊಂದು ತರಲೆ, ಅಪ್ಪ ಅಮ್ಮ ಇಬ್ಬರಿಗೂ ಇದೊಂದು ಕೊರಗಿತ್ತು. ಒಮ್ಮೆ ಅವರ ಊರಿಗೆ ಒಬ್ಬ ಸಾಧು ಬಂದ್ರು . ನೆರೆಹೊರೆಯ ಮಂದಿ ಹೇಳಿದ್ರು 'ಮಕ್ಕಳನ್ನ ಆ ಸಾಧುಗಳ ಬಳಿ ಕರ್ಕೊಂಡ್ ಹೋಗಿ, ಅವರ ತುಂಟತನಕ್ಕೆ ಏನಾದ್ರೂ ಪರಿಹಾರ ಸೂಚಿಸಬಹುದು , ಆದ್ರೆ ಇಬ್ಬರನ್ನು ಒಟ್ಟಿಗೆ ಕರ್ಕೊಂಡ್ ಹೋಗಬೇಡಿ . ಆ ಸಾಧುಗಳಿಗೂ ತೊಂದರೆ ಕೊಡುವ ಮಕ್ಕಳೇ ನಿಮ್ಮವು "ಎಂದ್ರು . ಸರಿ ಅಪ್ಪ ಅಮ್ಮ ಚಿಕ್ಕ ಮಗನನ್ನ ಕರ್ಕೊಂಡು ಸಾಧುಗಳ ಬಳಿ ಹೋದ್ರು , ಹೀಗ್ ಹೀಗೆ ಅಂತ ಹೇಳಿದ್ರು . ನಕ್ಕ ಸಾಧುಗಳು ಅಪ್ಪ ಅಮ್ಮನಿಗೆ ನೀವು ಹೊರಗೆ ಕುಳಿತಿರಿ ಅಂತ ಹೇಳಿದ್ರು . ಅವರು ಹೊರಗೆ ಹೋದ ಮೇಲೆ ಆ ಹುಡುಗನ ಹತ್ತಿರ ಕೇಳಿದ್ರು 'ನಿನಗೆ ಶಿವ ಅಂತ ಗೊತ್ತ ಗೊತ್ತ ಮರಿ"... ಆ ಹುಡುಗ ಸುಮ್ಮನೆ ಸಾಧುಗಳನ್ನೇ ನೋಡಿದ ಮಾತಾಡಲಿಲ್ಲ . ಅವರು ಮತ್ತೆ ಅದೇ ಪ್ರಶ್ನೆ ಕೇಳಿದ್ರು , ಅವನು ಉತ್ತರಿಸಲಿಲ್ಲ .. ಸುಮಾರು ನಾಲ್ಕು ಐದು ಬಾರಿ ಕೇಳಿದ ಸಾಧುಗಳು ಕೋಪದಿಂದ ಮತ್ತೆ ಕೇಳುವಷ್ಟರಲ್ಲಿ ಆ ಹುಡುಗ ಎದ್ದು ಓಡಿದ .. ಸಾಧು ಹೊರಗೆ ಬರೋ ಅಷ್ಟರಲ್ಲಿ ಹುಡುಗಓಡಿ ಆಗಿತ್ತು . ಓಡಿ ಬಂಡ ಹುಡುಗ ಮನೆಯಲ್ಲಿ ಮಂಚದ ಕೆಳಗೆ ಅವಿತು ಕುಳಿತ. ಅಲ್ಲೇ ಇದ್ದ ಅವನ ಅಣ್ಣ "ಯಾಕೋ ಪುಟ್ಟ ಏನ್ ಆಯಿತು?" ಅಂದ ಹುಡುಗ ಹೇಳಿದ 'ಹೇ ಅಣ್ಣ ನೀನು ಬಾ ಬೇಗ ಬಚ್ಚಿಟ್ಕೋ . ಆ ಶಿವ ಎಲ್ಲೋ ಕಳೆದು ಹೋಗಿದ್ದಾನಂತೆ . ಎಲ್ಲರಿಗೂ ನಮ್ಮ ಮೇಲೆ ಅನುಮಾನ ಆ ಸಾಧು ಕೂಡ ನನ್ನನ್ನೇ ಕೇಳಿದ್ರು .......... '!!!!!!!
ಮಕ್ಕಳ ಮನಸ್ಸು ......... ಆಹ್:)))

Thursday 2 April 2015

ಹೀಗೊಂದು ಕಥೆ ......
ಒಂದು ಪುಟ್ಟ ಸಂಸಾರ. ಅಪ್ಪ ಅಮ್ಮ, ಇಬ್ಬರು ಹೆಣ್ಣು ಮಕ್ಕಳು .... ಚೆಂದದ ಸಂಸಾರ .....ಇಬ್ಬರು ಮಕ್ಕಳೂ ಮದುವೆಯ ವಯಸ್ಸಿಗೆ ಬಂದಾಗ ಇಬ್ಬರಿಗೂ ಮಾಡುವೆ ಮಾಡಿಕೊಟ್ಟರು.. ಒಬ್ಬ ಹೆಣ್ಣು ಮಗಳನ್ನ ಮಡಿಕೆ ಮಾಡುವವನಿಗೆ , ಮತ್ತೊಬ್ಬಳನ್ನ ಒಬ್ಬ ತೋಟಗಾರಿಕೆ ಮಾಡುವವನಿಗೆ ಮದುವೆ ಮಾಡಿ ಕೊಟ್ಟರು ... ಒಂದಷ್ಟು ದಿನಗಳ ನಂತರ ಅಪ್ಪನಿಗೆ ತನ್ನ ಮಕ್ಕಳ ಸಂಸಾರದ ಸೊಬಗ ನೋಡೋ ಆಸೆ ಆಯಿತು .. ಸರಿ ಮಕ್ಕಳ ಮನೆಗೆ ಹೊರಟ . ಮೊದಲು ಮಡಿಕೆ ಮಾಡುವ ಅಳಿಯನ ಮನೆಗೆ ಹೋದ ಮಗಳು ಅಪ್ಪನಿಗೆ ಸಂಭ್ರಮದಿಂದ ಊಟ ಬಡಿಸಿ ನಗು ನಗುತ್ತ ನೋಡಿಕೊಂಡಳು .. ಅಪ್ಪ ಕೇಳಿದ "ಹೇಗಿದ್ದೀಯ ಮಗು?" ಮಗಳು ಹೇಳಿದ್ಲು 'ಚೆನ್ನಾಗಿದ್ದೀವಿ ಅಪ್ಪ, ನಿಮ್ಮ ಆಶೀರ್ವಾದ . ಮಳೆ ಬರದೆ ಹೋದ್ರೆ ಸಾಕು.. ಮಡಿಕೆ ಹಾಳಾಗದೆ ಇರಲು .. ಮಳೆ ಆಗದಂತೆ ದೇವರಲ್ಲಿ ಕೇಳಿಕೊಳ್ಳಿ ಅಪ್ಪ!!! " ಅಂದ್ಲು. ಅಪ್ಪ ಮಗಳಿಗೆ ಹರಸಿ ಮತ್ತೊಬ್ಬ ಮಗಳ ಮನೆಗೆ ಹೊರಟ
ಆ ಮಗಳೂ ಅಪ್ಪ ಬಂದ ಸಂಭಮಕ್ಕೆ ಚೆಂದ ಆಡಿಗೆ ಮಾಡಿ ಬಡಿಸಿದಳು . ನಗುನಗುತ್ತ ಪಕ್ಕ ಕುಳಿತು ಮಾತಾಡಿದಳು ... ಅಪ್ಪ ಕೇಳಿದ "ಹೇಗಿದ್ದೀಯ ಮಗು?" ಮಗಳು ಹೇಳಿದ್ಲು 'ಚೆನ್ನಾಗಿದ್ದೀವಿ ಅಪ್ಪ, ನಿಮ್ಮ ಆಶೀರ್ವಾದ . ಒಳ್ಳೆ ಮಳೆ ಬಂದ್ರೆ ಸಾಕು.. ಹಾಕಿದ ಗಿಡಗಳು ಚಿಗುರಿ ಒಳ್ಳೆ ಬೆಲೆಗೆ ವ್ಯಾಪಾರ ಆಗಲು .. ಒಳ್ಳೆ ಮಳೆ ಆಗಲಿ ಅಂತ ದೇವರಲ್ಲಿ ಕೇಳಿಕೊಳ್ಳಿ ಅಪ್ಪ !!!" ಅಂದ್ಲು........ !!!!
ಒಬ್ಬರಿಗೆ ಹಿತ ಅನಿಸುವ ಒಂದು ವಸ್ತು , ವ್ಯಕ್ತಿ, ಮಾತು, ಕೃತಿ, etc, etc......... ಮತ್ತೊಬ್ಬರಿಗೆ ಬೇದ ಅನಿಸುತ್ತದೆ ಅಲ್ವೇ .... ಅವರವರ ಉಪಯುಕ್ತತೆಗೆ ಅನುಗುಣವಾಗಿ :)))

Wednesday 1 April 2015

ಒಂದು ಸಣ್ಣ ವಿಷ್ಯ . ಓದಿದ ಮೇಲೆ ಇದೂ ಒಂದು ವಿಷ್ಯನಾ ಅನ್ನಬೇಡಿ .....
ನಾವೆಲ್ಲಾ ಚಿಕ್ಕವರಿದ್ದಾಗ ಅಮ್ಮ ಅಜ್ಜಿ, ಚಿಕ್ಕಮ್ಮ ಎಲ್ಲಾ ಪಾತ್ರೆ ತೊಳೆಯೋದಿಕ್ಕೆ ಒಲೆಯಿಂದ ಬೂದಿ ತೆಗೆದು ತೆಂಗಿನ ನಾರಿನಿಂದ (ಜುಂಗು) ತೊಳೆದರೆ ಅದೆಷ್ಟು ಚೆಂದ ಕ್ಲೀನ್ ಆಗ್ತಾ ಇತ್ತು ಅಂತ ... ಆಮೇಲೆ ಕ್ಲೀನಿಂಗ್ ಪೌಡರ್ ಬಂತು , ಸೋಪ್ ಬಂತು, .. ಸ್ಕ್ರಬ್ಬರ್ (scrubber) ಬಂತು... ಡಿಶ್ ವಾಷರ್ ಕೂಡ ಬಂತು .... ಹೆಂಗೋ ಪಾತ್ರೆ ತೊಳೆದರೆ ಆಯಿತು ಅಷ್ಟೇ ...electronics fast ಯುಗ ಅಲ್ವೇ ...
ನೆನ್ನೆ ಲಾಯಲ್ ವರ್ಲ್ಡ್ ಗೆ ಹೋಗಿದ್ದೆ ಸಾಮಾನು ತರೋಕೆ ಸ್ಕ್ರಬ್ಬರ್(scrubber) ತಗೊಳ್ವಾಗ 'ಒಂದ್ ಹೊಸ ಪ್ರಾಡಕ್ಟ್ ತೆಂಗಿನ ನಾರಿನ scrubber)ಸಿಂಥೆಟಿಕ್ ಅಲ್ಲ ಮೇಡಂ , ನೋಡಿ ಎಷ್ಟ್ ಚೆಂದ ಇದೆ 'ಅಂತು ಆ ಹುಡುಗಿ .. ನೋಡಿದೆ ಏನ್ ಚೆಂದ ಪ್ಯಾಕಿಂಗ್ ಗೊತ್ತ, ತೆಂಗಿನ ನಾರನ್ನ ಎಷ್ಟು ಚೆಂದ ಕ್ಲೀನ್ ಮಾಡಿ, ಶೇಪ್ ಮಾಡಿ ಪ್ಯಾಕ್ ಮಾಡಿ ಇಟ್ಟಿದ್ದಾರೆ ಅಂತ ... ಜಾಸ್ತಿ ಏನಿಲ್ಲ ಬರಿ 25 ರೂಪಾಯಿ ಅಷ್ಟೇ .... ಗಂಡನ ಮುಖ ನೋಡಿದೆ 'ಅದಕ್ಕಿಂತ ಚೆನ್ನಾಗಿ ನಾನೇ ಕ್ಲೀನ್ ಆಗಿ ಮಾಡಿಕೊಡ್ತೀನಿ ಬಾ , ಅದೇ 25 ರೂಪಾಯಿಗೆ ನಿನ್ನ ಮಗಳಿಗೆ 'corn(!!!)' ತಗೊಂಡು ಹೋಗೋಣ " ಅಂದ ......ಬರ್ತಾ ದಾರಿಯಲ್ಲಿ ಹೇಳ್ದ 'ನಿನ್ನ ಮೊಮ್ಮಕ್ಕಳ ಕಾಲಕ್ಕೆ ಪಾತ್ರೆ ತೊಳೆಯೋದೆಲ್ಲ ಇರೋದೇ ಇಲ್ಲ, ಏನಿದ್ರು use and throw"............
ಬದುಕಲು ಎಷ್ಟು ದಾರಿ ಅಲ್ವೇ ...... ಹಾಗೆ 'ಕಾಲ ' ಎಷ್ಟು ಬದಲಾಯ್ತು ಅಲ್ವೇ ...... !!!!!

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...