Monday 27 July 2015

ಒಂದಷ್ಟು ಕಥೆಗಳು ಅದೆಷ್ಟು ಪ್ರಭಾವ ಬೀರುತ್ವೆ ಅಂದ್ರೆ ಓದಿದ್ದು ಖಂಡಿತಾ ಹಂಚಿಕೊಳ್ಳಲೇ ಬೇಕು ಅನ್ನೋ ಅಷ್ಟು ... ಇಲ್ಲೊಂದು ಅಂತಹದೇ ಕಥೆ ಇದೆ ..ಗೆಳೆಯರೊಬ್ಬರು ಕಳಿಸಿದ್ದು. ಅದರ ಅನುವಾದ ಇದು .. ಒಂದ್ ಸಾರಿ ಓದಿಬಿಡಿ ..
ಶಿವ ಪಾರ್ವತಿ ಅವರ ಮಕ್ಕಳ ಜೊತೆ ಕೈಲಾಸದಲ್ಲಿ ಸಂತಸವಾಗಿ ಇರ್ತಾರೆ . ಎಲ್ಲಾ ಕಡೆ ಪ್ರೀತಿ, ನೆಮ್ಮದಿ, ನಗುವಿನ ಹೊಳೆಯೇ ಇರುತ್ತದೆ. ಧರ್ಮ ಇನ್ನು ತಲೆ ಎತ್ತಿ ಮೆರೆಯುತ್ತಾ ಇರ್ತಾನೆ. ಭೂಮಿ ಸಮೃದ್ಧವಾಗಿರುತ್ತದೆ .
ಆದರೆ ಸಿಕ್ಕೆಲ್ಲಾ ಉಪಯೋಗಿ ವಸ್ತುಗಳನ್ನ ಮನುಷ್ಯ ಬೇಕಾಬಿಟ್ಟಿ ಉಪಯೋ(ಬೋ!!!)ಗಿಸಿ ಭೂಮಿ ಮೇಲೆ ಮಳೆ ಇಲ್ಲದಂತೆ ಆಗುತ್ತದೆ .. ವರುಣ ವಾಯು ಕೋಪಿಸಿಕೊಂಡುಬಿಡ್ತಾರೆ .. ಭೂಮಿ ಮೇಲೆ ಬರ ಶುರುವಾಗಿ ಬಿಡುತ್ತದೆ. ಪ್ರಾಣಿ ಪಕ್ಷಿಗಳಿಗೆ ಆಹಾರ ಇಲ್ಲದಂತಾಗುತ್ತದೆ .. ಎಲ್ಲೆಲ್ಲು ಹಾಹಾಕಾರ .. ಇತ್ತ ಕೈಲಾಸದಲ್ಲೂ ಹಾಗೆ ಆಗುತ್ತದೆ . ಹಸಿವೆ ತಾಳದ ಶಿವನ ಸರ್ಪ ವಾಸುಕಿ ಗಣಪನ ಇಲಿಯನ್ನ ಹಿಡಿದು ನುಂಗಿಬಿಡುತ್ತದೆ . ಇದನ್ನ ಕಂಡ ಕಾರ್ತಿಕೇಯನ ನವಿಲು ಸರ್ಪವನ್ನ ಹಿಡಿದು ತಿಂದುಬಿಡುತ್ತದೆ , ನವಿಲನ್ನ ಪಾರ್ವತಿಯ ಸಿಂಹ ತಿಂದುಬಿಡುತ್ತದೆ ... ಪಾರ್ವತಿಯ ಮಾತೃ ಹೃದಯ ಮಕ್ಕಳ ಈ ಪರಿಯ ದೌರ್ಜನ್ಯ ಕಂಡು ಮರುಗುತ್ತದೆ . ಪಾರ್ವತಿಯ ನೋವಿಗೆ ಶಿವನ ತಪಸ್ಸು ಭಂಗವಾಗುತ್ತದೆ ..
ಶಿವ 'ದೇವಿ , ಹಸಿವಿನ ತೃಪ್ತಿ ಒಂದೇ ಧರ್ಮ ಕಾಪಾಡುವ ಸಾಧನ .. ಭೂಮಿಯಲ್ಲಿ ನೆಮ್ಮದಿ ಬೇಕೆಂದರೆ ಮೊದಲು ಹಸಿವು ತೃಪ್ತವಾಗಬೇಕು ' ಅಂತಾನೆ
'ಆದರೆ ...ಈ ಪರಿಯ ಹಾಹಾಕಾರ , ನಾ ನೋಡಲಾರೆ .' ಅಂತಾಳೆ ಪಾರ್ವತಿ.
ಶಿವ ಹೇಳ್ತಾನೆ 'ಪಾರ್ವತೀ, ಹಸಿವು ಪ್ರಕೃತಿದತ್ತ .. ಬರ ಮಾನವ ನಿರ್ಮಿತ .... ಇದನ್ನ ಎಲ್ಲಿಯರೆಗೂ ಮಾನವ ಅರಿಯನೋ ಅಲ್ಲಿಯವರೆಗೂ ಈ ಪ್ರಕೃತಿ ಮುನಿಸು ಅತಿವೃಷ್ಟಿ ಅನಾವೃಷ್ಟಿ ಇದ್ದೇ ಇರುತ್ತದೆ .. 'ಬುದ್ದಿ 'ಇರುವ ಮಾನವನಿಗೆ ಹೇಳುವವರಾರು ಹೇಳು '.... ಪಾರ್ವತಿ ನಿರುತ್ತರಳಾಗ್ತಾಳೆ ...
ಹೌದು ಅಲ್ವೇ , ಹಸಿವು ಪ್ರಕೃತಿದತ್ತ , ಬರ ಮಾನವ ನಿರ್ಮಿತ .... ಪರಿಹಾರ ......!!!!???

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...