Friday 4 September 2015

ಕಲಾಂ ಸರ್ ಇನ್ನಿಲ್ಲ. ಸ್ವಾಮಿ ವಿವೇಕಾನಂದ ಅವರನ್ನ ಬಿಟ್ಟು ಮನಕ್ಕೆ ತುಂಬಾ ಸ್ಫೂರ್ತಿ ನೀಡಿದ ವ್ಯಕ್ತಿ ಅಂದ್ರೆ ಕಲಾಂ ಸರ್ . ಅವರನ್ನ ಮತ್ತೆ ರಾಷ್ಟ್ರಪತಿ ಹುದ್ದೆಗೆ ಆರಿಸಲಿ ಅಂತ ಹರಕೆ ಕೂಡ ಹೊತ್ತ ಮೂರ್ಖ ಮನಸ್ಸು ನಮ್ಮ ಕೆಲವರದು . ಆದರೆ ಇಂದಿನ ಭಾರತಕ್ಕೆ ಅವರಂತಹ ರಾಷ್ಟ್ರಪತಿ ಬೇಕಿರಲಿಲ್ಲವೇನೋ,ಹರಕೆ ಹಾರೈಕೆ ಫಲಿಸಲೇ ಇಲ್ಲ. 
ಬದುಕಲ್ಲಿ ಕರ್ತವ್ಯಕ್ಕೆ ಇರೋ ನಾ ಮಹತ್ವ ಅರಿತದ್ದು ಕಲಾಂ ಸರ್ ಅವರಿಂದಲೇ . ಕೈಲಾಗುವಾಗ ಅಂದಿನ ಕೆಲಸ ಮುಗಿಸಬೇಕು. ನಾಳೆ ನನ್ನ ಅರ್ಧ ಉಳಿದ ಕೆಲಸದಿಂದ ಮತ್ಯಾರಿಗೋ ತೊಂದರೆಯಾಗೋದು ಬೇಡ ಎಂದು ಕಲಿತದ್ದು ಅವರ ಮಾತುಗಳಿಂದಲೇ. ದೇಶ ಅಂದ್ರೆ ಅಭಿಮಾನದ ಬೀಜ ಬಿತ್ತಿದ್ದು ವಿವೇಕಾನಂದರಾದರೆ ಅದು ಮರವಾಗೋದಕ್ಕೆ ನೀರೆರೆದದ್ದು ಈ ಕಲಾಂ ಸರ್ .
ಕಲಾಂ ಸರ್ ಅವರನ್ನ ಒಮ್ಮೆ ಒಬ್ಬ ಸಂದರ್ಶಕ ಕೇಳಿದರಂತೆ ;ನಿಮ್ಮ ಅತಿ ಮೆಚ್ಚಿನ ಆವಿಷ್ಕಾರ ಯಾವುದು ಅಂತ .. ಎಲ್ಲಾ ಊಹಿಸಿದ್ದು ಕ್ಷಿಪಣಿಗಳ ಬಗ್ಗೆ ಹೇಳುತ್ತಾರೆ ಎಂದು . ಆದ್ರೆ ಕಲಾಂ ಸರ್ ಹೇಳಿದ್ದೆ ಬೇರೆ . 'ಒಮ್ಮೆ ನಾನೊಂದು ಆಸ್ಪತ್ರೆಗೆ ಆಸ್ಪತ್ರೆಗೆ ಬೇಟಿಯಿತ್ತಾಗ , ಅಲ್ಲಿನ ಮಕ್ಕಳಿಗೆ prosthetic(ಕೃತಕ ಕಾಲುಗಳನ್ನ)ಅಳವಡಿಸಲಾಗಿತ್ತು. ಆ ಸುಮಾರು ೪ ಕೆಜಿ ತೂಕದ ಕಾಲು ಎಳೆದುಕೊಂಡು ಮಕ್ಕಳು ಓಡಾಡುವುದ ಕಂಡಾಗ ಅಲ್ಲಿನ ವೈದ್ಯರನ್ನ ಕೇಳಿದೆ . ಅವರು' ಸದ್ಯಕ್ಕೆ ಇರೋದು ಇಂತಹದೆ ಸರ್' ಎಂದರು . ನಮ್ಮ ರಾಕೆಟ್ ತಂತ್ರಜ್ಞಾನ ಉಪಯೋಗಿಸಿ ಸುಮಾರು ೪೦೦ ಗ್ರಾಂ ತೂಕದ ಕಾಲುಗಳನ್ನ ನಮ್ಮ ಟೀಂ ತಯಾರು ಮಾಡಿದ್ವಿ . ಈಗ ಆ ಮಕ್ಕಳು ಆಟ ಆಡ್ತಾರೆ , ಸೈಕಲ್ ಕೂಡ ತುಳಿತಾರೆ ' ಅಂತ ಹೇಳೋವಾಗ ಅವರ ಕಣ್ಣಲ್ಲಿ ಇದ್ದದ್ದು ಬರಿ ಮುಗ್ದಮಗುವಿನ ನಗು ಅಂತೆ .
ಮೊದಲೆಲ್ಲ ಕಾಂಪೌಂಡ್ ಗೋಡೆಗಳ ಮೇಲೆ ಗಾಜಿನ ಚೂರುಗಳನ್ನ ಹಾಕ್ತ ಇದ್ರು . ಯಾರೂ ಬರದೆ ಇರ್ಲಿ ಅನ್ತ. ಅದರ ಬಗ್ಗೆ ಕೂಡ ಅವರಿಗೆ ಸಹಮತ ಇರಲಿಲ್ಲ DRDO ಗೋಡೆಯ ಮೇಲೆ ಗಾಜಿನ ಚೂರುಗಳನ್ನ ಹಾಕೋಕೆ ಬಿಡದ ಅವರು ಕೊಟ್ಟ ಕಾರಣ 'ಹಕ್ಕಿಗಳು ಹೆದರುತ್ತವೆ !"..
ಕಲಾಂ ಮಾನವೀಯ ಮುಖದ ಬಗ್ಗೆ ನೂರಾರು ಕಥೆಗಳಿವೆ . ಆದರೆ ಕಲಾಂ ಸರ್, ನೀವು ನೆನಪಾಗೋದು ನಿಮ್ಮ ಮಾನವೀಯತೆ ಹಾಗು ದೇಶಪ್ರೇಮದ ಪ್ರತೀಕವಾಗಿ .
rather than verbal tribute I promise you to pay my tribute by my making my Kids good citizens and patriotic ... Thanks for building our nation as a Strong One Sir.........

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...