Friday 14 August 2015



ಎಣ್ಣೆಗಾಯಿ ಮಾಡೋದಕ್ಕೆ ಬದನೆ ಕಾಯಿ ಹೆಚ್ಚುತ್ತಾ ಇದ್ದೆ .. ಚೆಂದ ಚೆಂದ ನೇರಳೆ ಬಣ್ಣದ ಪುಟ್ಟ ಬದನೆಕಾಯಿಗಳು. ಮಗಳು ಪಕ್ಕಇದ್ಲು 'ಏನಾದ್ರೂ ಮಾಡಿಕೊಡ್ಲ ಅಮ್ಮ' ಅಂತ ಹಿಂದೆ ಮುಂದೆ ಸುತ್ತುತ್ತಾ ಇದ್ಲು .... Usually ತಿಂದ ತಟ್ಟೆ ಕೂಡ ಎತ್ತದ ಮಗಳು ಅಮ್ಮನಿಗೆ ಸ್ವಲ್ಪ ಹುಷಾರಿಲ್ಲ ಅಂದ್ರೆ ಬಂದು ಏನಾದ್ರೂ ಮಾಡಿಕೊಡ್ತೀನಿ ನನಗೂ ಕೆಲ್ಸ ಹೇಳು ಅಂತ ಹಿಂದೆ ಬೀಳ್ತಾಳೆ ... ಅವಳು ಮಾಡದೆ ಇದ್ರೂ ಆ concern makes me feel happy.... ' ಏನಿಲ್ಲ ಮಗ ಇಷ್ಟೇ ಆಯ್ತಲ್ಲ ನೀ ನಡಿ ನಾ ಮಾಡಿ ಬರ್ತೀನಿ ' ಅಂದೆ ... ಹಾಗೆ slab ಮೇಲೆ ಕಾಲು ಆಡಿಸ್ತಾ 'ಕಥೆ' ಹೇಳ್ತಾ ಕೂತಿದ್ಲು .... ಬದನೆ ಕಾಯಿ ಹೆಚ್ಚುತ್ತಿದ್ದೆನಲ್ಲ ... ಮೇಲೆಲ್ಲಾ ಅಷ್ಟು ಚೆಂದ ಕಾಣೋ ಬದನೆಯ ಒಳಗೆ ಹುಳುಕು !!!! ಮಗಳು ಕೇಳಿದ್ಲು ... 'ಅಲ್ಲ ಕಣಮ್ಮ ಈ ಕಾಯಿ ಮೇಲೆಲ್ಲಾ ಎಷ್ಟ್ ಚೆನ್ನಾಗಿದ್ಯಲ್ಲ ... ಇದರೊಳಗೆ ಹುಳ ಹೆಂಗ್ ಹೋಯ್ತು' ..... 'ಹೂವಾಗಿದ್ದಾಗ ಸೇರಿಹೋದ ಹುಳು ಇರಬೇಕು ಮಗ' ಅಂದೆ .....
ಹೌದಲ್ಲವೇ .... ಸಣ್ಣವರಿದ್ದಾಗ ಕಲಿತ ಒಳಿತು ಕೆಡುಕು .... ಕಡೆಯವರೆಗೂ ಇರುತ್ತದೆ though we may change in few circumstances ಸಂಸ್ಕಾರ ಅನ್ನೋದು ಬದಲಾಗೊಲ್ಲ ಅಲ್ಲವೇ ..... ....... ಮನಸ್ಸು ಒಂದ್ ತರ ಸಿಹಿ ಸಿಹಿ ... ನಮ್ಮನ್ನ ಬೆಳೆಸಿದ ಹಿರಿಯರ ನೆನೆದು .........:))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...