Thursday 3 September 2015

ಒಂದು ಕಥೆ :
ಪರಶುರಾಮ ಕ್ಷತ್ರಿಯರ ಮೇಲಿನ ಕೋಪಕ್ಕೆ ತಾನು ಕ್ಷತ್ರಿಯರಿಗೆ ವಿದ್ಯಾದಾನ ಮಾಡುವುದಿಲ್ಲ ಅಂತ ಶಪಥ ತೊಟ್ಟಿರುತ್ತಾನೆ . ಕರ್ಣ ಬ್ರಾಹ್ಮಣನ ವೇಷದಲ್ಲಿ ಬಂದು ಪರಶುರಾಮನ ಬಳಿ ಶಸ್ತ್ರ ವಿದ್ಯೆ ಕಲಿತಾ ಇರ್ತಾನೆ. ... ಒಂದ್ ದಿನ ಪರಶುರಾಮ ಕರ್ಣನ ತೊಡೆಯ ಮೇಲೆ ತಲೆ ಇಟ್ಟು ಮಲಗಿರ್ತಾನೆ ಒಂದು ಗುಂಗುರು ಹುಳು ಕರ್ಣನ ತೊಡೆಯ ಕಚ್ಚುತ್ತಾ ಇರುತ್ತೆ , ಗುರು ಎಚ್ಚರಗೊಂಡಾನು ಎಂದು ಕರ್ಣ ಅಲುಗಾಡುವುದೂ ಇಲ್ಲ ತೊಡೆಯಿಂದ ರಕ್ತ ಸುರಿಯುತ್ತಾ ಇರುತ್ತದೆ . ಪರಶುರಾಮ ಎಚ್ಚರಗೊಂಡಾಗ ಕರ್ಣನ ತೊಡೆಯಲ್ಲಿ ರಕ್ತ ಕಂಡು ' ನೀನು ನನಗೆ ಸುಳ್ಳು ಹೇಳಿ ವಿಧ್ಯೆ ಕಲಿತಾ ಇದ್ದೀಯ , ನೀನು ಖಂಡಿತ ಬ್ರಾಹ್ಮಣ ಅಲ್ಲ, ನೀನು ಕಲಿತ ವಿದ್ಯೆ ನಿನ್ನ ಸಮಯಕ್ಕೆ ಆಗದೆ ಇರಲಿ' ಅಂತ ಶಾಪ ಕೊಡ್ತಾನೆ .. ಮತ್ತೆ ಕರ್ಣ ತನ್ನ ಹುಟ್ಟಿನ ಬಗ್ಗೆ ತನಗೆ ಅರಿವಿಲ್ಲ ಎಂಬುದ ತಿಳಿಸಿದಾಗ ಮರುಕಗೊಂಡು ಶಿವ ಧನುಸ್ಸು ನೀಡುತ್ತಾನೆ ....ಇದು ಕಥೆ
'ನೀನು ದೊಡ್ಡವಳು ಸೋತು ಬಿಡು ಏನಾಗುತ್ತೆ 'ಅನ್ನೋ ಅಮ್ಮ .. 'ನೀನು ತಪ್ಪು ಮಾಡಿಲ್ಲ ಗೊತ್ತು ಆದರೂ ಅವರು ದೊಡ್ಡವರು ನೀನು ಚಿಕ್ಕವಳು ಅಲ್ವ ಸೋತು ಬಿಡು' ಅನ್ನೋ ಗಂಡ ;' ಅಯ್ಯೋ ಬಿಡಿ ಅಕ್ಕ ನೀವು ಸೋತರೆ ಅದು ಗೆದ್ದಂತೆ ಅಂತ ನಂಗೆ ಗೊತ್ತು ' ಅನ್ನೋ ವಾರಗಿತ್ತಿ ; 'ಬಿಟ್ ಬಿಡಮ್ಮ ಯಾಕೆ ತಲೆ ಕೆಡಿಸಿಕೊಳ್ತೀಯ ನೀನು ಏನು ಅನ್ನೋದು ನಮಗೆ ಗೊತ್ತು ' ಅನ್ನೋ ಮಕ್ಕಳು ; 'ಅದೆಲ್ಲ ಒಂದ್ ವಿಷ್ಯನಾ ಮರೆತುಬಿಡು , ನೀನು ಏನು ಅನ್ನೋದು ಗೊತ್ತು ' ಅನ್ನೋ ಗೆಳತಿಯರು... 'ಇದೊಂದು ಹೆಲ್ಪ್ ಪ್ಲೀಸ್ ' ಅನ್ನೋ ಬಂಧುಗಳು .. ಪ್ರತೀ ಹೆಜ್ಜೆಯಲ್ಲೂ ಪ್ರೀತಿಗಾಗಿ (!) ಸೋಲುತ್ತಾ , ಮನೆಯ ನೆಮ್ಮದಿಗಾಗಿ (!) ಗುಟ್ಟುಗಳ ಒಡಲೊಳಗೆ ಬಚ್ಚಿಡುತ್ತಾ ,....ಕೆಲವರ ತಪ್ಪ ಮುಚ್ಚಿಟ್ಟು , ಕೆಲವರಿಗೆ ಕಣ್ಣಿಗೆ ಒಳ್ಳೆಯವಳಾಗಿ , ಕೆಲವರ ಕಣ್ಣಿಗೆ ಕೆಟ್ಟವಳಾಗಿ , ... ಕೆಲವರ ಬದುಕಿಗೆ ಆಸರೆಯಾಗಿ, ಕೊನೆಗೊಮ್ಮೆ ಯಾರಿಗೂ ಹೇಳದೆ ಕೇಳದೆ ಹೊರಟು ಬಿಡುವುದೇ ಜೀವನದ ಸಾರ್ಥಕ್ಯವೇ ?????
ಮೇಲಿನ ಕಥೆಗೂ ನಂತರದ ಬರಹಕ್ಕೂ ಸಂಬಂಧ ಏನು ಅಂದ್ರಾ........ ಕೆಲವೊಮ್ಮೆ ಹಾಗೆ ಆಗುತ್ತೆ ..... ಕಷ್ಟ ಸಹಿಷ್ಣುತೆ ಕೂಡ ಸಂಕಷ್ಟಕ್ಕೆ ದೂಡುತ್ತದೆ .. ..ಪ್ರೀತಿ, ನೆಮ್ಮದಿ, ಸಾರ್ಥಕ ಅನ್ನೋ ನೆಪದಲ್ಲಿ ಆತ್ಮಾಭಿಮಾನಕ್ಕೆ ಧಕ್ಕೆ ಆಗುತ್ತದೆ .... But Still, the Life moves on for the sake of the Family, for the sake of the secured life, and for the sake of Social Respect(be it a man or woman)............Some say it, same cry and forget it, some just get Adjusted for it...... and Life Goes onnnnnnnnn...............Felt like sharing.....
Zindagi.................................ಬದುಕು ...........Life......

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...