Friday 4 September 2015

ಪ್ರೀತಂ ನಮ್ಮ ಮನೆ ಹತ್ತಿರದ ಹುಡುಗ. ಕಾರ್ತಿಯ ಗೆಳೆಯ. ಸುಮಾರು ೧೦ ವರ್ಷಗಳ ಗೆಳೆತನ ಇಬ್ಬರದು. ಶಾಲೆ ಬೇರೆಯಾದ್ರು ಸಂಜೆ ಮನೆಗೆ ಬಂದ ಕೂಡ್ಲೆ ಅವ್ನು 'ಕಾರ್' ಅಂತಲೋ ಇಲ್ಲ ಇವನು 'ಪೀಚ್ ' ಅಂತಲೋ ಒಬ್ಬರನ್ನೊಬ್ಬರು ಮಾತನಾಡಿಸದೆ ಇದ್ರೆ ಸಮಾಧಾನವೇ ಇರೋದಿಲ್ಲ ಹಾಗಿದ್ರು . ಹತ್ತನೇ ತರಗತಿ ಆದ ಮೇಲೆ ಅವನು ಡಿಪ್ಲಮೋ ಸೇರಿದ . ಇವನು ಪಿಯು ಸೇರಿದ . ಮತ್ತೆ ಕಾರ್ತಿ CET ಬರೆದಾಗ,ಮಂಡ್ಯದಲ್ಲಿ ಎಂಜಿನಿಯರಿಂಗ್ ಸೀಟ್ ಸಿಕ್ಕಾಗ ಪ್ರೀತಂ 'ಆಂಟಿ ಕಾರ್ತಿನ ಹಾಸ್ಟೆಲ್ ಗೆ ಹಾಕ್ಬೇಡಿ ' ಅಂತೆಲ್ಲ ಹೇಳ್ತಾ ಇದ್ದ . ಹೋದ ತಿಂಗಳು ಅವನು ಡಿಪ್ಲಮೋ CET ಬರೆದ . ಹಾಸನದ ಕಾಲೇಜಲ್ಲಿ ಸೀಟ್ ಸಿಕ್ತು . ಹಾಸನದಲ್ಲಿ ಅವನ ಅಜ್ಜಿ ಮನೆ ಇದೆ . ಮೊನ್ನೆ ಮೊನ್ನೆ ಹಾಸನದ ಕಾಲೇಜ್ಗೆ ಹೋಗಿ ಸೇರಿದ .
ಬೆಳಿಗ್ಗೆ ಮಗನೊಟ್ಟಿಗೆ ದೇವಸ್ತಾನಕ್ಕೆ ಹೋಗಿದ್ದೆ . ಎಂದಿನಂತೆ ಮಕ್ಕಳ ಹೆಸರಲ್ಲಿ ಅರ್ಚನೆಗೆ ಹೇಳಿದೆ . ಮಗ ಪ್ರೀತಂ ಹೆಸರೂ ಸೇರಿಸಿದ . ಮನೆಗೆ ಹಿಂದಿರುಗುವಾಗ ಹೇಳ್ದ 'ಅಮ್ಮ ಪ್ಲೀಸ್ ಅಮ್ಮ ಶನಿವಾರ ಪ್ರೀತಂ ನೋಡ್ಕೊಂಡ್ ಬರ್ತೀನಿ , ಮಗ ದಿನಾ ನನಗೆ ರೋಶನ್ ಗೆ ೫-೬ ಸಾರಿ ಫೋನ್ ಮಾಡ್ತಾನೆ . ಏನ್ ಮಾಡ್ತಿದ್ದೀಯ ಕಾರ್ ಅಂತಾನೆ . ಅಳುನೆ ಬರುತ್ತೆ ಅಮ್ಮ . ಅವನೂ ಹಂಗೆ ಅಳೋ ಹಂಗೇ ಮಾತಾಡ್ತಾನೆ .ಇನ್ನ ಮೂರು ವರ್ಷ ಹೆಂಗಿರೋದು ಗೊತ್ತಿಲ್ಲ ' ಅಂದ .
ಮನಸ್ಸೆಲ್ಲ ಆ ನೀಲಿ ಬಾನಂತೆ , ಈ ಮಕ್ಕಳು ದೂಡ್ಡವರಾಗೋದೆ ಬೇಡ . ಸ್ವಾರ್ಥ, ಮೋಸ, ವಂಚನೆಗಳಿಂದ ದೂರ ಹೀಗೆ ಇದ್ದುಬಿಡಲಿ ಅನ್ನೋ ಹಾಗೆ .... :)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...