Monday 27 July 2015

ಒಂದು ಅಜ್ಜಿ ತಾತ .. ಸುಮಾರು ೧೦ ವರ್ಷದಿಂದ ನೋಡ್ತಾನೆ ಬಂದಿದ್ದೀನಿ.... ತಾತ ___ ಕೆಲ್ಸದಿಂದ ನಿವೃತ್ತರಾಗಿ ಮನೆಯಲ್ಲೇ ಸಣ್ಣ ಪುಟ್ಟ ಓಡಾಟ , ಮನೆಗಳನ್ನ ತೋರಿಸೋದು , ಇತ್ಯಾದಿ ಮಾಡಿದ್ರೆ ಅಜ್ಜಿ ಮಗನ ಜೊತೆ ಸಾಂಬಾರ್ ಪುಡಿ ಮಾಡಿ ಮಾರೋ ಕೆಲ್ಸ ಮಾಡ್ತಾ ಇತ್ತು. ಸೊಸೆ ಎಲ್ಲೋ ಕೆಲಸಕ್ಕೆ ಹೋಗ್ತಾ ಇದ್ಲು . ಮಗ ರಾತ್ರಿ ಪಾಳಿಯಲ್ಲಿ ಯಾವ್ದೋ ಸ್ಕೂಲ್ ನೋಡಿಕೊಳ್ಳೋ ಕೆಲ್ಸ ಕೂಡ ಮಾಡ್ತಾ ಇದ್ದ. ಇದ್ದ ಒಬ್ಬ ಮಗಳನ್ನ ಕೇರಳದ ಊರಿಗೆ ಮದ್ವೆ ಮಾಡಿ ಕೊಟ್ಟಿದ್ರು ... ಒಂದ್ ದಿನಾ ಕೂಡ ಕುಳಿತ ಜೀವವೇ ಅಲ್ಲ ಆ ಅಜ್ಜಿ .. ಮನೆಯ ಎಲ್ಲಾ ಕೆಲಸದ ಜೊತೆ ಸಾಂಬಾರ್ ಪುಡಿ ಮಾಡೋಕೆ ಮಗನಿಗೆ ಸಾಥ್ ನೀಡ್ತಾ ಇತ್ತು. ಬೆಳಿಗ್ಗೆ ನಾ ಏಳ್ತಾ ಇದ್ದಿದ್ದೆ ಆ ಅಜ್ಜಿ ಕಸ ಗುಡಿಸೋ ಸದ್ದಿಗೆ .. ನೆನ್ನೆ ಅಜ್ಜಿ ಕಾಣಲಿಲ್ಲ . ಏನೋ ಹುಷಾರಿಲ್ಲವೇನೋ ಅನ್ಕೊಂಡೆ . ಬೆಳಿಗ್ಗೆ ಮಂಜು ಡ್ಯೂಟಿಗೆ ಹೊರಟಾಗ ಗೇಟ್ ಹಾಕಿ ಒಳಬರುವಾಗ ಸೊಸೆ ಕಸಗುಡಿಸ್ತಾ ಇದ್ಲು . ಕೇಳಿದೆ 'ಅಜ್ಜಿಗೆ ಹುಷಾರಿಲ್ವ " .. ಮಗ ಹೇಳಿದ 'ಇಲ್ಲ __ ಆಸ್ಪತ್ರೆಗೆ ಸೇರಿಸಿದ್ದೀವಿ . ಶುಗರ್ ಜಾಸ್ತಿ ಆಗಿದೆ ಅಂದ್ರು ... ಒಳಗೇ ರಕ್ತದಲ್ಲಿ ಏನೋ ಆಗಿದೆ ಅಂತೆ ..etc, etc ' ಅಂದ . ರಿಪೋರ್ಟ್ ಕೊಟ್ಟ .. ನೋಡಿದೆ. 'ಸಂಜೆ ಮಂಜು ಬಂದ ಮೇಲೆ ಹೋಗಿ ಬರ್ತೀವಿ ಅಂದೆ . .....
ಇಲ್ಲಿ ನಾ ಹೇಳೋಕೆ ಹೊರಟಿರೋದೆ ಬೇರೆ .. ಅಜ್ಜಿ ಇರೋವರೆಗೂ ಒಂದೂ ಕೆಲಸಕ್ಕೆ ಚ್ಯುತಿ ಇಲ್ಲದಂತೆ ಹೋಗ್ತಾ ಇದ್ದ ಮನೆ , ಅವಳ absence ಅಲ್ಲಿ ಅವಳ presenz ಹುಡುಕ ತೊಡಗಿತು. ಮಗನಿಗೆ ತನ್ನ ಸಾಂಬಾರ್ ಪುಡಿಯ ಕೆಲಸಕ್ಕೆ , ಸೊಸೆ ಕೆಲಸಕ್ಕೆ ಹೋಗೋಕೆ ಮೊದಲು ಆಗ್ತಾ ಇದ್ದ ಆಗಬೇಕಾದ ಕೆಲಸಗಳಿಗೆ, ಮೊಮ್ಮಗನ ಕಾಲೇಜ್ಗೆ ಎಲ್ಲದರಲ್ಲೂ ಅವಳ ಇಲ್ಲದಿರುವಿಕೆ ಕಾಣತೊಡಗಿತು . ಬಹುಶಃ ಎಲ್ಲಕ್ಕಿಂತ ಹಿಂಸೆ ಪಟ್ಟ ಜೀವ ಅಂದ್ರೆ ತಾತ .. ಬೆಳಿಗ್ಗೆ ಎದ್ದಾಗಿಂದ ಸಂಜೆವರೆಗೂ ಮಾತಾಡ್ತಾನೋ, ಬೈಸಿಕೊಳ್ತಾನೋ, ಕಣ್ಣ ಮುಂದೆ ಕಾಣ್ತಾ ಇದ್ದ ಮಡದಿ; ಕುಡಿದು ಬಂದಾಗ, ಕೆಮ್ಮುವಾಗ, ಊಟಕ್ಕಿಟ್ಟು ಬೈತಾನೋ ಅಳ್ತಾನೋ ಬೆನ್ನಿಗೆ ಬೆನ್ನಾಗಿ ನಿಂತ ಅಜ್ಜಿ ಇಲ್ಲದ್ದು ತಾತನಿಗೆ ಹಿಂಸೆ ಅನಿಸಿಬಿಟ್ಟಿತು .. ಮಗ ಸೊಸೆಯನ್ನ ತನ್ನ ಹೆಂಡತಿಯ ಸ್ಥಿತಿಗೆ ಅವರೇ ಕಾರಣ ಅನ್ನೋ ಹಾಗೆ ಬೈತಾ ಅಸಹಾಯಕನಾಗಿದ್ದ...
ಇರೋವರೆಗೆ ಯಾರಿಗೂ ಕಾಣದ , ಯಾರಿಗೂ ಹೇಳದೆ ತನ್ನ ನೋವನ್ನ ತಾನೇ ನುಂಗಿಕೊಂಡು ಎಲ್ಲರಿಗೂ ಆಸರೆಯಾಗೋ ಅನೇಕ ಜೀವಿಗಳು ನಮ್ಮ ಜೊತೆಯಲ್ಲೇ ಇರ್ತಾರೆ ಮೌನ ಮಂದಾಕಿನಿಯ ಹಾಗೆ ... ಅವರು ಹೇಳೋದಿಲ್ಲ ಅಂತ ಅವರು ಅಳೋದಿಲ್ಲ ಅಂತ ಅವರನ್ನ ಸುಮ್ಮನೆ ನಿರ್ಲಕ್ಷಿಸುತ್ತಾ ಹೋಗುತ್ತೇವೆ ....... ಅವರ ಇಲ್ಲದಿರುವಿಕೆ ಅರಿವಿಗೆ ಬಂದಾಗ ಅವರ ಇರುವಿಕೆಯ ಮಹತ್ವ ತಿಳಿಯುತ್ತದೆ . ಅಷ್ಟರಲ್ಲಿ .......... ಕಾಲ ಇರೋದಿಲ್ಲ ......... ಯಾಕೋ ಆ ತಾತ ಅಂತಹ ಅನೇಕ ಅಸಹಾಯಕರನ್ನ ಕಣ್ಣ ಮುಂದೆ ತಂದಿತು . ಅಜ್ಜಿ ಅಲ್ಲೆಲ್ಲೋ ಬಾನಲ್ಲಿ ತೇಲೋ ಮಳೆ ಸುರಿಸೋ ಮೋಡದಂತೆ ..............

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...