Monday 1 February 2016

ಮನೆ ಅಂದ ಮೇಲೆ ಮಾತು ಬರುತ್ತೆ ಹೋಗುತ್ತೆ . ಸಣ್ಣ ಮಾತುಗಳು ಅತ್ತೆ ಸೊಸೆಯರ ನಡುವೆ ಇದ್ದೆ ಇರುತ್ತದೆ ..ಅದಕ್ಕೆ ನಮ್ಮ ಮನೆಯೂ ಹೊರತಲ್ಲ...ಬಹಳಷ್ಟು ಸಾರಿ ನಾವು ಮೂರೂ ಜನ ಸೊಸೆಯಂದಿರು ಅಯ್ಯೋ ಅವರ ಬುದ್ದಿ ಗೊತ್ತಲ್ಲ ಮತ್ತ್ಯಾಕೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಅಂತ ಸುಮ್ಮನಾಗಿ ಬಿಡ್ತೀವಿ , ಆದ್ರೂ ಕೆಲವೊಮ್ಮೆ ಮನಸ್ಸಿನ ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಮ್ಮೆ ವಯಸ್ಸಿಗೆ ಬಂದ ಮಕ್ಕಳಿರುವ ನಾವು ಅನಿಸಿಕೊಳ್ಳೋದಾ ಅನ್ನೋ ಸಿಟ್ಟಿಗೆ ಏನಾದ್ರು ಅಂದು ಬಿಡೋದು ಉಂಟು . ಮೊನ್ನೆ ಅತ್ತೆ ಬಂದಿದ್ರು ಏನೋ ಸಣ್ಣ ಪುಟ್ಟ ಮಾತುಗಳು ಬಂದ್ವು ಅಲ್ಲಿ ಅಂತ ಬೇಸರಗೊಂಡಿದ್ದರು.. ಅವರಮ್ಮನಿಗೆ ಒಂದಷ್ಟು ಸಮಾಧಾನ ಬುದ್ದಿ ಹೇಳಿದ ಮೇಲೆ , ಅತ್ತೆ ಮಲಗಲು ಹೋದ ಮೇಲೆ ಮಂಜು ಹೇಳಿದ್ರು "ಅವ್ರ ಕಥೆ ಗೊತ್ತಲ್ವ ಸುನಿ ನಿನಗೆ.. ೨೫ ವರ್ಷದಿಂದ ನೋಡ್ತಾನೆ ಬಂದಿದ್ದೀಯ, ನಿಮ್ಮ ಮೂರು ಜನರ(ವಾರಗಿತ್ತಿಯರು) ಬಗ್ಗೆ ಒಂದ್ ಮಾತು ಇಲ್ಲ .. ನಮಗೆಲ್ಲ ತಾಯಂದಿರು ನೀವು...'
ಹಾಗೆ ಮಾತಾಡ್ತಾ ಮಾತಾಡ್ತಾ .... 'ದಿನಾ ಅದೇ ಬಾವಿಯಲ್ಲಿ ನೀರ್ ತೆಗಿತಾ ಇದ್ರೆ ಬಾವಿಯ ಆಳ ಗೊತ್ತಿರುತ್ತದೆ ಕಣಮ್ಮ! ಹಗ್ಗ ಇಷ್ಟಕ್ಕೆ ನಿಂತರೆ ಬಿಂದಿಗೆ ಮುಳುಗುತ್ತೆ ,ನೀರು ಸಿಗ್ತದೆ ಅಂತ ! ಹೊಸದಾಗಿ ಬಾವಿ ಹತ್ರ ಬಂದವ್ರಿಗೆ ನೀರಿನ ಆಳ ತಿಳಿಯೋದಿಲ್ಲ ! ನೀನೂ ತಿಳ್ಕೋ ಬದುಕೋದು ಹೇಗೆ ಅಂತ !! ನಿನ್ ಮಕ್ಕಳು ನಿನ್ನನ್ನ ಹುಟ್ಟಿದಾಗಿಂದ ನೋಡಿರ್ತಾರೆ. ನೀ ಬೇಸರಗೊಂಡು ಮಾತಾಡಿದ್ರೆ ನಿನ್ ಮಕ್ಕಳಿಗೆ ನಮ್ಮಮ್ಮ ಹಿಂಗೆ ಅಂತ ಗೊತ್ತಿರುತ್ತೆ ಆದ್ರೆ ಸೊಸೆ ಅಥ್ವ ಅಳಿಯ ನಿನ್ನ ಆಗಷ್ಟೇ ನೋಡ್ತಾ ಇರ್ತಾರೆ, ಅವ್ರು ಬೇರೆ ಕಡೆಯಿಂದ ಬಂದು ನಿನ್ನ ಮನೆಗೆ ಸೇರ್ತಾರೆ... ಮಾತಾಡುವಾಗ ಸ್ವಲ್ಪ ತಡೆದು ಮಾತನಾಡು.. ಅಷ್ಟರಲ್ಲಿ ನಿನಗೇ ಗೊತ್ತಾಗಿರುತ್ತೆ ಆ ಮಾತು ಅಗತ್ಯನಾ ಇಲ್ವಾ ಅಂತ .. 'ನನ್ನ' ಮನೆ ಇದು 'ಹೀಗೆ' ಇರಬೇಕು ಅಂತ ಅನ್ಕೊಬೇಡ..!!! ನಿನ್ನ ಕಾಲ, ನಿನ್ನ ಬದುಕು, ನೀ ಬದುಕ ನೋಡೋ ರೀತಿಯಲ್ಲೇ ಎಲ್ಲಾರೂ ನೋಡಬೇಕು ಅಂದಾಗಲೇ ಇದೆಲ್ಲ ಬರೋದು.... ಅಂತೆಲ್ಲ ಹೇಳ್ತಾ ಹೋದ್ರು !!! "ಅಯ್ಯೋ ಶಿವ, ಒಂದ್ ಪುಸ್ತಕ ಓದೋದಿಲ್ಲ(ಓದಿಲ್ಲ) ಆದ್ರೂ ಈ ಪಾಟಿ ಬುದ್ದಿ ಎಲ್ಲಿರುತ್ತೋ ಕಾಣೆ'!!!
ಮನಸ್ಸು ಒಮ್ಮೆಮ್ಮೆ ಮಳೆಯ ನಂತರ ಮೂಡೋ ಕಾಮನಬಿಲ್ಲಿನ ಚಿತ್ತಾರದ ಬಾನಿನಂತೆ... ಪಾಠ ಕಲಿಯೊದಕ್ಕೆ ಪುಸ್ತಕವೇಕೆ ಇಂತಹ ಜೀವದ ಗೆಳೆಯನಿದ್ದರೆ ಅನ್ನೋ ಹಾಗೆ :))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...