Monday 27 July 2015

ಕತ್ತಲ ದಿಟ್ಟಿಸುತ್ತಾ ಕುಳಿತ ಮನದಲ್ಲಿ ನುಗ್ಗಿ ಬರುತ್ತಿದ್ದ ಭಾವಗಳ ಅಲೆಯಲ್ಲಿ ತೇಲಲಾರೆ ಎಂಬಂತೆ ಮುಳುಗಿದ್ದಳು ..ಅವನ ಕೈ ಹಿಡಿದಿದ್ದ ತನ್ನ ಕೈಯಲ್ಲಿ ಅವನ ಕೈ ಇದೆಯೇನೋ ಎಂಬಂತೆ ನೋಡುತ್ತಲೇ ಇದ್ದಳು ... ನಿನ್ನ ಬದುಕಿನ ಹೊತ್ತಿಗೆಯಲ್ಲಿ ನನ್ನದೂ ಒಂದು ಪುಟ್ಟ ಪುಟ ಇದೆಯಲ್ಲವೇ ಎಂದು ಕೇಳಬೇಕೆಂದುಕೊಂಡ ಮಾತು ಮರೆತೇಬಿಟ್ಟಿದ್ದಳು ....ಮರೆತೂ ಮರೆಯಲಾರೆ ಎಂಬಂತೆ... ಮತ್ತೆಂದೂ ಸಿಗದೇನೋ ಎಂಬಂತೆ . ಮತ್ತೆ ನಾ ನಿನ್ನ ಹುಡುಕಲಾರೆ ..ಇನ್ನೆಂದೂ ಹುಡುಕಲಾರೆ ಇಲ್ಲೇ ಮನದಾಳದಲ್ಲೇ ಹುದುಗಿರುವ ನಿನ್ನ ಮತ್ತೆಂದೂ ನಾ ಹುಡುಕಲಾರೆ ....ಎಂಬಂತೆ ಕಣ್ಣ ಹನಿಯೊಂದು ಕಣ್ಣ ತುದಿಯಲ್ಲೇ ಇಂಗಿಹೋಯ್ತು .... ಅವಳ ಕಣ್ಣ ಹನಿ ನೋಡಲಾರದ ಕತ್ತಲು ಮತ್ತಷ್ಟು ಗಾಢವಾಯ್ತು ..........

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...