Friday 11 March 2016

ಹೀಗೊಂದು ಕಥೆ.... 
ಒಂದು ರೈಲಿನ ಫಸ್ಟ್ ಕ್ಲಾಸ್ ಬೋಗಿಯಲ್ಲಿ ಒಬ್ಬ ಶ್ರೀಮಂತ ತನ್ನ ಹೆಂಡತಿ ಮಗುವಿನ ಜೊತೆ ಹೋಗ್ತಾ ಇದ್ದ. ಜೊತೆಗೆ ಒಂದಿಬ್ಬರು ಆಳುಗಳು ಕೂಡ. ಸಿರಿವಂತನಾದರೂ ಸಂಯಮಿ, ವಿಚಾರವಂತ. ತನ್ನ ಸಹಪ್ರಯಾಣಿಕರ ಜೊತೆ ಹೊಂದಿಕೊಂಡು ಪ್ರಯಾಣ ಮುಂದುವರೆಸಿದ್ದ. ಸುಮಾರು ನಡು ರಾತ್ರಿ, ರೈಲು ಕಾಡುಕಣಿವೆಗಳ ನಡುವೆ ಸಾಗ್ತಾ ಇತ್ತು. ಮಗು ಎಚ್ಚರಗೊಂಡಿತು. ಶ್ರೀಮಂತನ ಹೆಂಡತಿ ಮಗುವನ್ನ ಕಿಟಕಿಯ ಬಳಿ ಕುಳಿತು ರಮಿಸುತ್ತಾ ಬಾಟಲಿಯಲ್ಲಿ ಹಾಲು ಕುಡಿಸ ತೊಡಗಿದಳು. ಕೈ ಕಾಲು ಆಡಿಸುತ್ತಾ ಹಾಲು ಕುಡಿಯುತ್ತಿದ್ದ ಮಗುವಿನ ಕೈ ತಗುಲಿ ಬಾಟಲಿ ಕಿಟಕಿಯಿಂದ ಹೊರಗೆ ಬಿದ್ಹೊಯ್ತು !! ಮಗು ಅಳೋಕೆ ಶುರು ಮಾಡ್ತು!! ಶ್ರೀಮಂತ ತಕ್ಷಣ ಚೈನ್ ಎಳೆದ. ಗಾಡಿ ನಿಲ್ತು. ಅವನು ಅವನ ಆಳುಗಳು ಹಳಿಗಳ ಬಳಿ ಹಿಂದಕ್ಕೆ ಹೋಗಿ ಬಾಟಲಿ ಹುಡುಕಿ ತಂದ್ರು. ತೊಳೆದು ಬಾಟಲಿಯಲ್ಲಿ ಮಗುವಿಗೆ ಹಾಲು ಹಾಕಿ ಕೊಟ್ರು. ಅಷ್ಟರಲ್ಲಿ ಅಲ್ಲಿಗೆ ಬಂದ ರೈಲು ಅಧಿಕಾರಿ ಅನಗತ್ಯವಾಗಿ ಸಣ್ಣ ವಿಷಯಕ್ಕೆ ತೊಂದರೆ ಕೊಟ್ಟ ಎಂಬ ತಪ್ಪಿಗೆ ಒಂದಷ್ಟು ಫೈನ್ ಹಾಕಿ ದುಡ್ಡು ವಸೂಲಿ ಮಾಡಿ ಹೋದರು. ಸಹಪ್ರಯಾಣಿಕನೊಬ್ಬ ಹೇಳ್ದ 'ದುಡ್ಡಿರೋರೆ ಹೀಗೆ, ಅರ್ಥವೇ ಆಗೋದಿಲ್ಲ ಹಣದ ಮದ..ಒಂದೈವತ್ತು ರೂಪಾಯಿ ಕೂಡ ಬಾಳದ ಆ ಬಾಟ್ಲಿಗೆ ಸುಮ್ಸುಮ್ನೆ ಅಷ್ಟೊಂದೆಲ್ಲ ದಂಡ ಕಟ್ತಾರೆ. ಹೋದರೆ ಹೋಯ್ತು ಅಂತ ಸುಮ್ಮನಿದಿದ್ರೆ ಆಗ್ತಾ ಇತ್ತು' ಅಂದ. ಆ ಸಿರಿವಂತ ಒಂದು ಕಟ್ಟು ಹಣ ತೆಗೆದ ಆ ಪ್ರಯಾಣಿಕನ ಮುಂದೆ ಹಿಡಿದು 'ಸರ್, ಇದರಲ್ಲಿ ೫೦೦೦ ಇದೆ. ಹೋಗಿ ಒಂದು nipple ತಂದ್ಬಿಡಿ ಮತ್ತೆ' ಅಂದ. 'ಹಣ ಎಷ್ಟು ಹೋಯ್ತು, ಎಷ್ಟು ಬಂತು ಅನ್ನೋದು ಮುಖ್ಯವಲ್ಲ, ಆ ಹೊತ್ತಿನ ಉಪಯೋಗ ಅಷ್ಟೇ ಮುಖ್ಯ! ನನ್ನ ಮಗುವಿಗೆ ಈ ಸರಿ ರಾತ್ರಿಯಲ್ಲಿ ಈ ಕಾಡಿನ ನಡುವೆ nippleಸಿಗೋದು ಎಷ್ಟು ದುರ್ಲಭ ಅಲ್ವೇ . ಅದಕ್ಕೆ ಹಾಗೆ ಮಾಡಿದೆ .. ಹಣದ ಮದ ಅಲ್ಲ ' ಅಂದ ...
ಮೊನ್ನೆ ಅನಗತ್ಯ ಅಗತ್ಯಗಳ ವಿಷಯದ ಬಗ್ಗೆ ನಾನು ಮಂಜು ಮಾತಾಡ್ತಾ ಇದ್ದಾಗ ಮಂಜು ಹೇಳಿದ ಕಥೆ :)))
ಪುಟ್ಟಿ ಹೇರ್ ಡ್ರೆಸ್ ಮಾಡಿಸಬೇಕು ಅಂದ್ಲು..ಅದೇನೋ ಲೇಸರ್ ಕಟಿಂಗ್ ಅಂತೆ !! ಸರಿ ಅಂದೆ , ಅವರಪ್ಪ 'ತುಂಬಾ ಶಾರ್ಟ್ ಬೇಡ . ಹೆಣ್ಣುಮಗಳಿಗೆ ಜಡೆ ಸ್ವಲ್ಪ ಉದ್ದ ಇದ್ರೆ ಚೆಂದ.. ' ಅಂದ್ರು. ಸರಿ ಕರ್ಕೊಂಡ್ ಹೋಗಿ ಟ್ರಿಮ್ ಮಾಡಿಸಿಕೊಂಡು ಬಂದೆ . ಮಗ ಬಂದ 'ಏನೇ ಪುಟ್ಟಿ ಅವತ್ತಿಂದ ಹೇಳ್ತಾ ಇದ್ಯಲ್ಲ ತಲೆಕೂದ್ಲು ಕಟ್ ಮಾಡಿಸ್ದಾ' ಅಂದ.'ಹೊಂ ಕಣೋ ಕಾರ್ತಿ, ನೋಡು' ಅಂತ ಮುಂದೆ ನಿಂತ್ಳು.. '೨೫೦ ರೂಪಿಸ್ ಗೊತ್ತ , ಚೆನ್ನಾಗಿಲ್ವಾ ಕಾರ್ತಿ' ... '೨೫೦ ರೂಪಿಸಾ, ನಾ ೪ ತಿಂಗಳು ಕಟಿಂಗ್ ಮಾಡಿಸ್ತಾ ಇದ್ದೆ ಕಣೆ. ಅಪ್ಪ ಆಗಿದ್ರೆ ೫ ತಿಂಗ್ಳು ಕಟಿಂಗ್ ಮಾಡಿಸ್ತಾ ಇತ್ತು. ನೀವ್ ಹುಡುಗೀರ್ಗೆ ಬುದ್ದಿನೇ ಇಲ್ಲ ಕಣೆ, ಸುಮ್ಸುಮ್ನೆ ದುಡ್ಡು ಖರ್ಚು ಮಾಡ್ತೀರಾ' 'ಹೋಗೋಲೋ , ನಿನ್ ಹೆಂಡ್ತಿ ಬಂದಾಗ ಇದೆಲ್ಲ ಹೇಳ್ಕೋ , ಅಪ್ಪ ಬಂದಾಗ ಹಿಂಗೆಲ್ಲ ಹೇಳಿ ಬೈಸಿದ್ರೆ ನಾ ಇನ್ ಮೇಲೆ ನಿನ್ ತಲೆಗೆ ಎಣ್ಣೆ ಹಾಕಿ ಕೊಡೋದಿಲ್ಲ ಅಷ್ಟೇ'...' ಲೇ ಪುಟ್ಟಿ ಸ್ವಲ್ಪ ಎಣ್ಣೆ ಹಾಕೇ .. ಪ್ಲೀಸ್ ಕಣೆ ಈವತ್ತು ಬಿಸಿಲಲ್ಲಿ ವಾಲಿಬಾಲ್ ಆಡಿ ತಲೆ ಎಲ್ಲ ಡ್ರೈ ಆಗೋಗಿದೆ ಹೆಣ್ ಮಕ್ಳೇ ಚೆಂದ ಕಣೆ "..
ನಾವು ಚಿಕ್ಕವರಿದ್ದಾಗ ಶಾಲೆಗೇ ಹೋಗುವಾಗ ನಡೆದೇ ಹೋಗ್ತಾ ಇದ್ದಿದ್ದು. ಕೆಲವು ಸಾರಿ ಅಪ್ಪನ ಸ್ಕೂಟರ್ ಅಥವಾ ಮಾಮನ ಸೈಕಲ್ ಕೂಡ ನಮ್ಮನ್ನ ಹೊತ್ತೊಯ್ಯುತ್ತಿತ್ತು . (ಮತ್ತೊಂದಷ್ಟು ದೊಡ್ಡವರಾದ ಮೇಲೆ ನಮಗೆ ಒಂದು ಪುಟ್ಟ ಸೈಕಲ್ ಕೊಡಿಸಿದರು. ಬಹುತೇಕ ನನ್ನ ಪ್ರೌಡಶಾಲೆ ಮತ್ತು ಪದವಿಪೂರ್ವ ಕಲಿಕೆಯೆಲ್ಲ ಸೈಕಲ್ ಅಲ್ಲೇ ಕಳೆಯಿತು. ಆದ್ರೂ ಶಾಲೆ ಮುಗಿಯೋದನ್ನೇ ಕಾಯ್ತಾ ಇದ್ದು ಗೆಳೆಯಗೆಳತಿಯರ ಜೊತೆ ಹರಟೆ ಹೊಡೆಯುತ್ತಾ ಒಬ್ಬೊಬ್ಬರ ಮನೆಯ ಮುಂದೆ ಒಂದೆರಡು ನಿಮಿಷ ಕಳೆದು ಮತ್ತೆ ಮನೆ ಸೇರೋವಾಗ ಇದ್ದ ಸಂತಸ ಪ್ರಾಯಶಃ ಹೇಳಲಸಾಧ್ಯ.) ತುಂಬಾ ದೂರ ಇರೋ ಕೆಲವು ಮಕ್ಕಳು ಜಟಕಾದಲ್ಲಿ ಬರ್ತಾ ಇದ್ರು ಮತ್ತೊಂದಷ್ಟು ಅನುಕೂಲವಾಗಿರೋ ಮಂದಿ ಆಟೋದಲ್ಲಿ ಕಳಿಸ್ತ ಇದ್ರು. ಇಷ್ಟೆಲ್ಲದರ ನಡುವೆ ಒಂದಷ್ಟು ಜನ ಹೆಂಗಸರು (ಶಾಂತ ಆಂಟಿ, ಸರಳಕ್ಕ, ಹೀಗೆ ) ಒಂದಷ್ಟು ಮಕ್ಕಳ ಕರೆದುಕೊಂಡು ಅವರ ಶಾಲೆಯ ಬ್ಯಾಗು ಮತ್ತು ಊಟ ಹೊತ್ತುಬಂದು ಶಾಲೆಯ ಬಳಿ ಬಿಟ್ಟು ಹೋಗ್ತಾ ಇದ್ರು ಮತ್ತೆ ಸಂಜೆ ಬಂದು ಕರೆದುಕೊಂಡು ಹೋಗ್ತಾ ಇದ್ರು. ಕೆಲವರು ಮಧ್ಯಾಹ್ನದ ಊಟವನ್ನ ಕೂಡ ಬಿಸಿಬಿಸಿಯಾಗಿ ಅದೇ ಹೆಂಗಸರ ಬಳಿ ಕಳಿಸ್ತಾ ಇದ್ರು. ಆ ಹೆಂಗಸರು ಎಲ್ಲ ಮಕ್ಕಳ ಬ್ಯಾಗು ಹೊತ್ತು ನಡೆಯೋದು ನೋಡೋವಾಗ ಒಮ್ಮೊಮ್ಮೆ ಪಾಪ ಅನಿಸ್ತ ಇರ್ತಿತ್ತು. ಅವರಿಗೆ ಒಂದಷ್ಟು ಸಂಬಳ ನೀಡಲಾಗುತ್ತಿತ್ತು.
ಇದೆಲ್ಲ ಈಗ್ಯಾಕೆ ನೆನಪಾಯ್ತು ಅಂದ್ರ? ನನ್ನ ಮಕ್ಕಳನ್ನ ನಾನೇ ಡ್ರಾಪ್ ಮಾಡೋದು, ಒಂದಷ್ಟು ದಿನ ವ್ಯಾನ್ ಹೇಳಿದ್ದೆವು . ಇವರ ಸ್ಪೋರ್ಟ್ಸ್, extra curricular activities ಮುಗಿಸೋವರೆಗೂ ವ್ಯಾನ್ ಅವರು ಕಾಯೊಕೆ ಆಗದಿದ್ದಾಗ ನಾವೇ ಡ್ರಾಪ್ ಮಾಡೋಕೆ ಶುರು ಮಾಡಿದ್ವಿ ಮೊನ್ನೆ ಪುಟ್ಟಿ ಡ್ರಾಪ್ ಮಾಡೋಕೆ ಹೋದಾಗ ಒಂದು ಮಾರುತಿ ವ್ಯಾನ್ ಅನ್ನ ಒಂದ್ ಹೆಣ್ಣು ಮಗಳು ಡ್ರೈವ್ ಮಾಡ್ತಾ ಮಕ್ಕಳನ್ನ ಪಿಕ್ ಇದ್ರು .ಸುಮ್ಮನೆ ಹಾಗೆ 'ಹಾಯ್' ಅಂತ ಹೇಳಿ ಮಾತನಾಡಿಸಿದೆ. ' ಅಪ್ಪನ ಮನೆಯಲ್ಲೇ ಡ್ರೈವಿಂಗ್ ಕಲಿತ್ತಿದ್ದೆ ಮೇಡಂ, ನನ್ನ ಮಕ್ಕಳನ್ನ ಮಾತ್ರ ಡ್ರಾಪ್ ಮಾಡ್ತಾ ಇದ್ದೆ. ಹೆಂಗೂ ನಾನು ಕೆಲಸ ಮಾಡ್ತಾ ಇಲ್ಲ ಹಂಗೆ ಬರೋ ದಾರಿಯಲ್ಲಿ ಒಂದಷ್ಟು ಮಕ್ಕಳನ್ನ ಕೂರಿಸಿಕೊಂಡು ಬಂದ್ರೆ ಮಕ್ಕಳ ಖರ್ಚಿಗೆ ಕಾಸಾಗುತ್ತೆ ಅಂತ ೨-೩ ವರ್ಷದಿಂದ ಹೀಗೆ ಮಾಡ್ತಾ ಇದ್ದೆ ಅಷ್ಟೇ. ಇನ್ನೇನು ಈ ವರ್ಷ ಮಗಳಿಗೆ ಈ ಶಾಲೆ ಮುಗಿತದೆ ನೋಡೋಣ. ಮಕ್ಕಳು ಚಿಕ್ಕವರಿದ್ದಾಗ ಅವರ ಫ್ರೆಂಡ್ಸ್ ನಮ್ಮ ಗಾಡಿಯಲ್ಲಿ ಬಂದ್ರೆ ಖುಷಿ ಪಡ್ತಾ ಇದ್ರು. ಈಗ ಅವರಮ್ಮ "ವ್ಯಾನ್ ಆಂಟಿ" ಅಂದ್ರೆ ನೊಂದ್ಕೊಳ್ತಾರೆನೋ !ಎಷ್ಟು ದಿನ ನಡೆಯುತ್ತದೋ ಅಷ್ಟ್ ದಿನ ಮಾಡ್ತೀನಿ. ಆಮೇಲೆ ಮಾಡೋಲ್ಲ ಮೇಡಂ. ನಮ್ಮ ಮನೆಯವರೂ __ ಫ್ಯಾಕ್ಟರಿಲಿ ಕೆಲಸ ಮಾಡ್ತಾರೆ . ಕೊರತೆ ಅಂತೇನಿಲ್ಲ . ಮಕ್ಕಳಿಗೆ ಬೇಸರ ಆಗೋದಾದ್ರೆ ನಾ ಯಾಕೆ ಮಾಡ್ಲಿ! ' ಅಂದ್ರು.
ಅದ್ಯಾಕೋ ಮನಸ್ಸು ನಡು ಮಧ್ಯಾಹ್ನದ ಆಗಸ ..ಪ್ರಖರ ಬೆಳಕಿದ್ದರೂ ಸುಡು ಬಿಸಿಲ ಬೇಗೆಯಂತೆ ..... ಅಂದಿನ ಸರಳಕ್ಕ ಇಂದಿನ ಈ ಹೆಣ್ಣು ಮಗಳು ಅಂದಿನ ನನ್ನ ಅಮ್ಮ, ಇಂದಿನ ನಾನು ....ಕಾಲ ಬದಲಾದರೂ ಹೆಣ್ಣು ಅಂದಿಗೂ ಇಂದಿಗೂ ಎಲ್ಲಾ ಬಲಹೀನತೆಯ ನಡುವೆಯೂ ಸಬಲೆಯೆ ಎನ್ನುವಂತೆ, ಆದರೂ ಪ್ರೀತಿ, ಭಾವನೆಗಳ ಮುಂದೆ ಅಬಲೆಯಾಗುವಳೇನೋ ಅನಿಸುವಂತೆ .. But Still am always proud of being a woman...:))
ಮೊನ್ನೆ ಹೋದ ಶನಿವಾರ ದೇವಸ್ಥಾನಕ್ಕೆ ಹೋಗಿದ್ದೆ. ೯ನೆ ತಾರೀಕು ಗ್ರಹಣ ಅಂತ ಬರೆದಿದ್ರು. ಒಂದಷ್ಟು ರಾಶಿಯ ಹೆಸರು ಹಾಕಿ ದೋಷ, etc, etc ಬರೆದು ದೋಷ ಪರಿಹಾರಕ್ಕೆ ಶಾಂತಿ ಪೂಜೆ,ಇತ್ಯಾದಿ ಇತ್ಯಾದಿ ಬರೆದಿದ್ದರು. ದೇವರು ಅನ್ನೋ ಶಕ್ತಿಯನ್ನ ತುಂಬಾನೇ ನಂಬುವ ನನಗೆ ಈ ಗ್ರಹಣ ದೋಷ-ಪರಿಹಾರ ಅಂತದರಲ್ಲಿ ನಂಬಿಕೆ ಇಲ್ಲ. ಅದೊಂದು ಪ್ರಾಕೃತಿಕ ವಿದ್ಯಾಮಾನ ಅಂತ ಅರಿವಿದೆ. ದಿನಾ ದೇವರಿಗೆ ಹೂ ಹಾಕಿ ಪೂಜೆ ಮಾಡುವುದು, ಮನಸ್ಸಾದಾಗ ದೇವಸ್ಥಾನಗಳಿಗೆ ಹೋಗೋದು, ನನ್ನ ಇಷ್ಟದ ಕೆಲಸಗಳು. ಅದು ನನ್ನ ಖುಷಿಗಾಗಿ. ಅದೇನೋ ಒಂದ್ ತರ ಸೆಕ್ಯೂರ್ ಅನಿಸುತ್ತದೆ. ಮನಸ್ಸಿಗೆ ಶಾಂತಿ ಅನಿಸುತ್ತದೆ. 
ಆದರೂ ದೇವಸ್ಥಾನದಲ್ಲಿ ಕುಳಿತಾಗ ಕಣ್ಣಿಗೆ ಕಾಣುವ ಈ ಗ್ರಹಣ ದೋಷ-ಪರಿಹಾರ ಇತ್ಯಾದಿಗಳ ಪೋಸ್ಟರ್ರಲ್ಲಿ ನನ್ನ ರಾಶಿ ಕಂಡರೆ ಏನೂ ಅನಿಸದ ನನಗೆ... ಅಪ್ಪಿತಪ್ಪಿ ಮಂಜುವಿನ ಅಥವಾ ಮಕ್ಕಳ ರಾಶಿ ಅಲ್ಲಿ ಕಂಡರೆ ಅದ್ಯಾಕೋ ಒಂದ್ ತರ ತಲ್ಲಣ ಅನಿಸಿಬಿಡುತ್ತದೆ!! ಅವರ ಹೆಸರಲ್ಲಿ ಒಂದಷ್ಟು ಕಾಣಿಕೆ ಹಾಕಿ ಒಳ್ಳೆಯದು ಮಾಡಪ್ಪ ಅಂತ ಕೇಳಿ, ಒಂದು ಅರ್ಚನೆಯನ್ನೂ ಮಾಡಿಸಿ ಬಿಡುತ್ತೇನೆ !!! ಹಾಗೆ ಮಾಡಿದರೆ ಏನೋ ಒಂದ್ ತರ ಸೆಕ್ಯೂರ್ ಅನಿಸೋ ಹಾಗೆ!!
ಮನಸ್ಸಿನ ಈ ವೈಪರಿತ್ಯದ ಬಗ್ಗೆ ನನಗೆ ಅಚ್ಚರಿ ! ನನ್ನ ರಾಶಿಯ ದೋಷದ ಬಗ್ಗೆ ಇರದ ಕಾಳಜಿ ಅಥವ ಭಯ ಅದ್ಯಾಕೆ or rather ಅದ್ಹೇಗೆ ನಾವು ಪ್ರೀತಿಸುವವರ ರಾಶಿಯ ದೋಷದ ಬಗ್ಗೆ ಉಕ್ಕಿ ಬರುತ್ತದೆ ? ಹಾಗಾದರೆ ನನ್ನದು ಮೂಢನಂಬಿಕೆಯಾ ? ಅಥವ ನನಗೆ ಏನೂ ಆಗದು ಅನ್ನೋ ವಿಶ್ವಾಸವೋ? ಅಥವ ನನಗೆ ಏನಾದ್ರೂ ಪರವಾಗಿಲ್ಲ ಅನ್ನೋ taken for granted ಫೀಲಾ?? ಅಥವ ಏನೇ ಅದರೂ ನಾನೇ ನೋಡಬೇಕು, ನೋಡಿಕೊಳ್ಳಬೇಕು ಅನ್ನೋ ಸ್ವಾರ್ಥವೋ? ಅಥವಾ ಅವರಿಗೆ ಏನಾದ್ರೂ ಆದ್ರೆ ನೋಡೋ ಶಕ್ತಿ ಇಲ್ಲ ಅನ್ನೋ ನನ್ನ ದೌರ್ಬಲ್ಯವೋ !? ಗೊತ್ತಿಲ್ಲ ... ಆದರು ಒಂದಷ್ಟು ಕಾಣಿಕೆ ಹಾಕಿ ಒಳ್ಳೆಯದು ಮಾಡಪ್ಪ ಅಂತೀನಿ... ಆಮೇಲೆ ಮನಸ್ಸು ಒಂದ್ ತರ ನೀಲಿ ಬಾನಿನಂತೆ.. ಏನೂ ಆಗೋದೇ ಇಲ್ಲ ಅನ್ನುವಂತೆ . ಅವರು safe ಅನಿಸೋ ಹಾಗೆ!
ಓ ಮನಸ್ಸೇ ನೀನೆಷ್ಟು ವಿಚಿತ್ರ !!
ಬೆಳಿಗ್ಗೆ ಬೆಳಿಗ್ಗೆ ಡೈನಿಂಗ್ ರೂಂ ಅಲ್ಲಿ ಟ್ಯೂಬ್ ಪಕಪಕ ಅಂತಾ ಇತ್ತು. ಪುಟ್ಟಿಗೆ ಹೇಳ್ದೆ ಮೇಲೆ ರೂಂ ಅಲ್ಲಿ ಇರೋ ಟ್ಯೂಬ್ ತಂದುಕೊಡು ಮಗ, ಅದನ್ನೇ ಹಾಕ್ತೀನಿ ಸಂಜೆ ಬೇರೆ ತಂದ್ರಾಯ್ತು' ಅಂತ 'ಎಲ್ಲ ನನ್ನ ಕೈಲೇ ಮಾಡ್ಸು, ನಿನ್ ಮಗ ಮಲಗಿರಲಿ ' ಅಂತ ಗೊಣಗ್ತಾನೆ ಹೋದ್ಲು!! ತಂದು ಕೊಟ್ಳು. ಫಿಟ್ ಮಾಡಿದೆ .
ಪುಟ್ಟಿನ ಡ್ರಾಪ್ ಮಾಡೋಕೆ ಹೋಗ್ತಾ ಇದ್ದೆ ಎಂದಿನಂತೆ 'peak hour'.. ಎಂದಿನ ಅದೇ ಮುಖಗಳು, ಮುಗುಳ್ನಗೆಗಳು, ಕೈ ತೋರಿಸಿ ಶಾಲೆಯ ರಸ್ತೆಯಲ್ಲಿ ಗಾಡಿ ತಿರುಗಿಸುವಾಗ ಮುಂದೆ ಬಂದ ಇನ್ನೊಂದು ಗಾಡಿಯ ಪರಿಚಿತ ವ್ಯಕ್ತಿ 'ನೀವೇ ಫಸ್ಟ್ ಹೋಗಿ ಮ್ಯಾಮ್ , ಹ್ಯಾಪಿ ವುಮನ್'ಸ ಡೇ" ಅಂದ್ರು . ನಕ್ಕು ಗಾಡಿ ತಿರುಗಿಸಿದೆ..
ನಾ ಹುಟ್ಟಿದಾಗ ಅಪ್ಪ 'ಮಹಾಲಕ್ಷ್ಮಿ ಹುಟ್ಟಿದ್ಳು' ಅಂದ್ರಂತೆ , ಅಮ್ಮ ನನ್ನನ್ನ- ತಮ್ಮನನ್ನ ಹೆಣ್ಣು ಗಂಡು ಎಂದು ಬೇದ ತೋರಿಸಲೇ ಇಲ್ಲ .ಸೈಕಲ್ ಏರಿದರೆ ಸಿದ್ದಗಂಗೆ ಮಠ, ಗೂಳೂರು, ದೇವರಾಯನದುರ್ಗಾ ಸುತ್ತಿ ಬರ್ತಾ ಇದ್ವು . ಪ್ರೊಫೆಷನಲ್ ಕೋರ್ಸ್ಗೆ ಮೈಸೂರಲ್ಲಿ ಸೀಟ್ ಸಿಕ್ಕಾಗ ಕೂಡ ಅಮ್ಮ ಹಿಂಜರಿಕೆಯಿಲ್ಲದೆ ಕಳಿಸಿದ್ಲು..
ಗ್ಯಾಸ್ ಮುಗಿದಾಗ ಮತ್ತೊಂದು ಸಿಲಿಂಡರ್ ಮತ್ತೆ ಹಾಕೋದಕ್ಕಾಗಲಿ , ಐರನ್ ಬಾಕ್ಸ್ ಪಿನ್ ಸರಿಮಾಡೋದಕ್ಕಾಗಲಿ, ಮಕ್ಕಳ ಮೀಟಿಂಗ್ಗಾಗಲಿ, ಬಿಲ್ಲುಗಳನ್ನ ಕಟ್ಟೋದಕ್ಕಾಗಲಿ ನಾನು ಹೇಗೆ ಹಿಂಜರಿವುದಿಲ್ಲವೋ ಹಾಗೆ ಅಡುಗೆ ಮಾಡೋದಕ್ಕಾಗಲಿ, ಮನೆ ಕ್ಲೀನ್ ಮಾಡೋದಕ್ಕಾಗಲಿ ಮಂಜು ಎಂದೂ ಹಿಂದೆಮುಂದೆ ನೋಡಿಲ್ಲ .. ಮಂಜು ನಾನು ಅಫೀಷಿಯಲ್ ಕೆಲಸಗಳಿದ್ದರೆ ಜೊತೆಯಲ್ಲೇ ಹೋಗೋದು -ವ್ಯವಹಾರ ಇಬ್ಬರಿಗೂ ತಿಳಿದಿದ್ದರೆ ಒಳ್ಳೆಯದು ಎಂದು...
ಇನ್ನು ಪುಟ್ಟಿ ಬಯಸಿ ಬಯಸಿ ಪಡೆದ ಹೆಣ್ಣು ಮಗಳು ..
ನನ್ನ ಸುತ್ತ ಇರೋ ಯಾರೂ ಹೆಣ್ಣು ಅಂತ ಹೀಗಳೆದಿಲ್ಲ , ಬದಲಿಗೆ ಗೌರವಿಸಿದ್ದಾರೆ (And i know not all are treated this way (((...)
ಇವರಿಬ್ಬರು ನನ್ನ ವಾರಗಿತ್ತಿಯರು ... And i confidently say that we have held our head up-high taking pride in taking care of the the kids and family with all love and affection:)))
ಅಭಿಮಾನ, ಗೌರವದಿಂದ ಬದುಕೋ ಪ್ರತಿ ಹೆಣ್ಣಿಗೂ ನಮನ .. She does not need a day... she needs a place and she will show who she is...:)))))) And for me, i am proud of being a woman..........I also thank each and everyone for making me feel proud:)))))

Sunday 6 March 2016

ಒಂದೆರಡು ಕವಿತೆಗಳು

ಕವಿತೆಯಾಗುವ
ಬಯಕೆಯಿತ್ತು ಗೆಳತಿ ....
ಕಥೆಯಾಗುವ ಆಸೆಯಿರಲಿಲ್ಲ ...
ಎಂದ ಅವಳ ಕಂಗಳಲ್ಲಿ
ಕವಿತೆ ಕರಗಿ ಕಥೆ ಮಡುಗಟ್ಟಿತ್ತು ....


ಪ್ರೀತಿ ಸಿಗದೆಂದು ಅರಿತ ಮೇಲು
ಪ್ರೀತಿಸುವುದು
ರಾಧೆಯಾದಂತೆ ಅಲ್ಲವೇ ನಲ್ಲ
ಮನದ ನೋವಿಗೆ ಮುಸುಕೆಳೆದು
ಮೊಗದಲ್ಲಿ ನಲಿವ ಅರಳಿಸುವ
ಕಲೆ ಬಲ್ಲವಳವಳು
ನೀನೆ ಅವಳಿಗೆಲ್ಲ....:


ಶಿಶಿರದಲ್ಲಿ ಎಲೆಗಳ ಉದುರಿಸಿ
ವಿರಹಿಯಂತೆ ನಿಂತಿದ್ದ
ಮನೆಯ ಮುಂದಿನ ಹೊಂಗೆ
ಈಗ
ಹಸಿರುಟ್ಟು
ಅಣಿಯಾಗುತ್ತಿದ್ದಾಳೆ
ಅಭಿಸಾರಿಕೆಯಂತೆ ...............
ವಸಂತನೆಂಬ ಇನಿಯನ
ಆಗಮನಕೆ ....

ಮೊನ್ನೆ ಮೊನ್ನೆ ನೆಟ್ಟ
ಪುಟ್ಟ ಬೀಜದ ಬಸಿರಿನಿಂದ
ಇಂದಾಗಲೇ ಮೊಳಕೆಯೊಡೆದ ಹಸಿರು....
ಅಷ್ಟು ಪುಟ್ಟ ಬೀಜದ ಒಡಲೊಳಗೆ
ಆ ಬೃಹತ್ ವೃಕ್ಷದ ಉಸಿರು
ಅಡಗಿಸಿದ ನಿನ್ನ ರಹಸ್ಯವನ್ನೊಮ್ಮೆ
ಹೇಳಿ ಬಿಡೇ ಪ್ರಕೃತಿ.....!!

Wednesday 2 March 2016

ಯಾವುದೇ ವಸ್ತು ಬಹಳಷ್ಟು ಕಾಲ ಉಪಯೋಗಿಸದೆ ಇರಿಸಿದರೆ ಹಾಳುಗುತ್ತದೆ (With exceptions). ಮಾನವನ ದೇಹದಲ್ಲಿ ಕೂಡ ಹಾಗೆ ಕೆಲವು vestigial organs ಇವೆ. ಅಪೆಂಡಿಕ್ಸ್ ಅದಕ್ಕೆ ಒಂದು ಉದಾಹರಣೆ. (ಸಣ್ಣ ಕರುಳು ಹಾಗು ದೊಡ್ಡ ಕರುಳಕೂಡಿಸುವ ಒಂದು ಪುಟ್ಟ ಚೀಲ). ಮಾನವನ ವಿಕಾಸವಾದ ಹಾಗೆ, ಆಹಾರ ಪದ್ಧತಿ ಬದಲಾದ ಹಾಗೆ ಅದರ ಅಗತ್ಯ ನಶಿಸುತ್ತ ಹೋಯ್ತು... ಅದು ಅನಗತ್ಯವಾಗುತ್ತಾ ಹೋಗುವುದರ ಜೊತೆಗೆ ಕೆಲವೊಮ್ಮೆ ಅನಾರೋಗ್ಯಕ್ಕೂ ಈಡು ಮಾಡುವ ಅಂಗ ಎನಿಸಿಕೊಂಡು ಬಿಟ್ಟಿತು!!
ಮಾನವನ ಮಿದುಳು ಕೂಡ ಹಾಗೆ. ಒಂದಷ್ಟು ದಿನ ಉಪಯೋಗಿಸದೆ ಬಿಟ್ಟರೆ, ಅಥವ ಒಂದಷ್ಟು ವಿಷಯಕ್ಕೆ ಮೌಲ್ಡ್ ಆಗಿಬಿಟ್ಟರೆ ಮತ್ಯಾವುದಕ್ಕೂ ತೆರೆದುಕೊಳ್ಳೋದನ್ನ ನಿಲ್ಲಿಸಿ ಬಿಡುತ್ತದೆ. ಹೊಸ ವಿಷಯಗಳಿಗೆ ಮನಸ್ಸನ್ನ ತೆರೆದುಕೊಳ್ತಾ ಹೋದ್ರೆ ಮನಸ್ಸು ಕೂಡ ದೇಹದಂತೆ ಪ್ರೌಢವಾಗುತ್ತಾ ಹೋಗುತ್ತದೆ . ಗೌರವಾರ್ಹ ಎನಿಸಿಕೊಳ್ಳುತ್ತದೆ. ದೇಹಕ್ಕೆ ವಯಸ್ಸಾದ ಹಾಗೆ ಮಿದುಳಿಗೂ ವಯಸ್ಸಾಗುತ್ತದೆ. ವಯಸ್ಸಾದ ಹಾಗೆ ದೇಹಕ್ಕೆ ಹೇಗೆ ಆರೈಕೆ ನೀಡುತ್ತೆವೆಯೋ ಹಾಗೆಯೇ ಮನಸ್ಸಿಗೆ ಕೂಡ ಆರೈಕೆ ನೀಡುವ ಅಗತ್ಯ ಇದೆ . ಜಾಗೃತಗೊಳಿಸುವ ಅಗತ್ಯವಿದೆ. ಬಹುಷಃ ಒಳ್ಳೆಯ ಓದುವಿಕೆಯಿಂದ ಹಾಗು ಪ್ರಕೃತಿಯ ಒಡನಾಟದಲ್ಲಿ ಸಿಗುವ ಮಾನಸಿಕ ಆರೋಗ್ಯ ಮತ್ತೆಲ್ಲೂ ಸಿಗದೇನೋ. ದಿನಕ್ಕೆ ಹತ್ತಿಪ್ಪತ್ತು ನಿಮಿಷಗಳ ಏಕಾಂತ, ಒಂದರ್ಧ ಅಥವ ಒಂದು ಗಂಟೆಯ ಓದು ದಿನಚರಿಯ ಭಾಗವಾದರೆ ನಿಜಕ್ಕೂ ಯಾವುದೇ ಔಷಧಗಳ ಅಗತ್ಯ ಬೀಳದೇನೋ ..A Dose of self awareness and cognition can make us grow with elegance-both physically and emotionally ........
ಪುಟ್ಟಿಬೆಳಿಗ್ಗೆ ಬೆಳಿಗ್ಗೆ ಪಾಠ ಓದ್ತಾ vestigial organs ಅಂದ್ರೆ ಏನಮ್ಮ ಅಂದ್ಲು... ಅನುಪಯುಕ್ತವಾದ ಅಂಗ ಅಂತ ಹೇಳೋಕೆ ಯಾಕೋ ಸರಿ ಅನಿಸಲಿಲ್ಲ ....ಉಪಯೋಗಿಸದೆ ಉಪಯುಕ್ತವಲ್ಲದಂತಾದ ಆರ್ಗನ್ ಮಗ ಅಂದೆ ... and then the story turned towards the brain ashte:))))))))))
ಒಂದೂರು. ಅಲ್ಲಿ ಒಬ್ಬ ರಾಜ. ಅವನು ಪ್ರೀತಿಯಿಂದ ಒಂದು ಗಿಡುಗ ಹಕ್ಕಿಯ ಸಾಕಿರ್ತಾನೆ . ತುಂಬಾ ಪ್ರೀತಿಸ್ತಾ ಇರ್ತಾನೆ. ಅದೂ ಕೂಡ ಇವನನ್ನ ಅಷ್ಟೇ ಪ್ರೀತಿಸ್ತಾ ಇರ್ತದೆ. ಒಂದು ದಿನ ರಾಜ ಬೇಟೆಗೆ ಹೋಗ್ತಾನೆ. ಎಂದಿನ ಅದೇ ಕಾಡು ಹಾದಿ. ಒಂದಷ್ಟು ದೂರ ಹೋದ ಮೇಲೆ ಎಲ್ಲಾ ಕಥೆಗಳಲ್ಲಿ ಆಗುವಂತೆ ರಾಜ ಹಾದಿ ತಪ್ಪಿ ಎಲ್ಲರಿಂದ ಬೇರೆ ಆಗ್ತಾನೆ. ಹಕ್ಕಿ ಮಾತ್ರ ಅವನೊಟ್ಟಿಗೆ ಉಳಿತದೆ. ಹಾಗೆ ಹಾದಿ ಹುಡುಕ್ತಾ ಹುಡುಕ್ತಾ ರಾಜನಿಗೆ ದಣಿವಾಗಿ ಬಾಯಾರುತ್ತಾನೆ. ಪ್ರೀತಿಯ ಹಕ್ಕಿಗೆ ಹೇಳ್ತಾನೆ 'ಎಲ್ಲಾದರು ನೀರು ಇದ್ಯಾ ನೋಡು ಇಲ್ಲಾ ಅಂದ್ರೆ ಈ ಬಾಯಾರಿಕೆಯಿಂದ ನಾ ಸತ್ ಹೋಗ್ತೀನಿ". ಸರಿ ಹಕ್ಕಿ ನೀರು ಹುಡುಕೋದಕೆ ಹಾರುತ್ತೆ. ರಾಜ ಹಾಗೆ ಬರ್ತಾ ಇರುವಾಗ ಒಂದೆಡೆ ಬಂಡೆಯ ಸಂಧಿಯಿಂದ ಹನಿ ನೀರು ತೊಟ್ತಾ ಇರುತ್ತೆ. ರಾಜ ಅಲ್ಲೇ ಇದ್ದ ಒಂದು ಎಲೆಯನ್ನ ಒಂದು ಸಣ್ಣ ಬಟ್ಟಲಂತೆ ಮಾಡಿ ಆ ನೀರನ್ನ ಹಿಡಿಯುತ್ತಾನೆ. ಒಂದಷ್ಟು ಸಂಗ್ರಹಿಸಿ ಇನ್ನೇನು ಕುಡಿಯಬೇಕೆಂದಾಗ ಅವನ ಪಕ್ಷಿಮಿತ್ರ ಆ ಎಲೆಯನ್ನ ಬಡಿದು ಬೀಳಿಸುತ್ತಾನೆ!! "ನಾ ಸಾಯೊ ಅಷ್ಟು ಬಾಯರಿರುವಾಗ ನಿನ್ನದೇನು ಹುಡುಗಾಟ' ರಾಜ ಬೈತಾನೆ. ಮತ್ತೆರಡು ಬಾರಿ ಹಿಡಿದು ಕುಡಿಯಲು ಹೋದಾಗ ಮತ್ತೆ ಇದೇ ಆದಾಗ ರಾಜ ಬಾಯರಿದ್ದ ಸಂಕಟದ ಜೊತೆಗೆ ಹಕ್ಕಿಯ ವರ್ತನೆಗೆ ಕೋಪಗೊಂಡು ಖಡ್ಗ ಬೀಸುತ್ತಾನೆ. ಹಕ್ಕಿ ಗಾಯಗೊಂಡು ಕೆಳಗೆ ಬೀಳುತ್ತದೆ!! ಹಕ್ಕಿ ಬಿದ್ದಾಗ ಅದು ಬೀರಿದ ನೋಟಕ್ಕೆ ನೊಂದ ರಾಜ ಇದ್ಯಾಕೆ ಹೀಗೆ ಅಡ್ತು, ತಾಳು ನೀರಿನ ಒರತೆ ಯಾವುದು ನೋಡೋಣ' ಅಂತ ಬಂಡೆಯನ್ನೇರಿ ಹೋಗ್ತಾನೆ. ಅಲ್ಲೊಂದು ವಿಷಸರ್ಪ ವಿಷವನ್ನ ಕಕ್ಕುತ್ತಾ ಕುಳಿತಿರುತ್ತದೆ !!! ರಾಜ ತನ್ನ ನಡವಳಿಕೆ ತಾನೇ ನೊಂದು ನಾಚಿ ಹಕ್ಕಿಯ ಬಳಿ ಕ್ಷಮೆ ಯಾಚಿಸುತ್ತಾನೆ ... ಇದು ಕಥೆ..ಓದಿದ ಮೇಲೆ ಹಂಚಿಕೊಳ್ಳಬೇಕು ಅನಿಸ್ತು
ಕೆಲವೊಮ್ಮೆ ಅದೆಷ್ಟೇ ತಿಳುವಳಿಕೆ ಇದ್ರೂ, ಅದೆಷ್ಟೇ ದೊಡ್ದವರಾದ್ರು , ಸಣ್ಣ ಸಣ್ಣ ಮಾತುಗನ್ನ ವಿಷಯಗಳನ್ನ ಅರ್ಥ ಮಾಡಿಕೊಳ್ಳೋಕೆ ಸೋತು ಹೋಗ್ತೀವಿ .. ದುಡುಕಿ ಮತ್ತೆ ಹಿಂದಕ್ಕೆ ಬರಲಾರದ ಹಾದಿ ತಲುಪಿಬಿಡ್ತೀವಿ ಅಥವ ಹಿಂದಕ್ಕೆ ಪಡೆಯಲಾಗದ ಗೆಳೆತನವನ್ನ ಕಳೆದುಕೊಂಡು ಬಿಡ್ತೀವಿ ಅಲ್ವೇ ...
ಅಮ್ಮನಾಗುವುದೆಂದರೆ.. 
ಹೇಳದಿದ್ದರೂ ಅರಿತು, 
ಕೇಳದಿದ್ದರೂ ನೀಡಿ,
ಅಳುವಿಗೆ ಹೆಗಲಾಗಿ 
ನಗುವಿಗೆ ದರ್ಪಣವಾಗಿ 
ಸೋತಾಗ ಸೆರಗಿನಾಸರೆಯಿತ್ತು
ಗೆದ್ದಾಗ ಒಟ್ಟಿಗೆ ಬೀಗಿ
ಹಾದಿ ತಪ್ಪಿದಾಗ ಬೈದು
ಬೈಸಿಕೊಂಡರೂ ಅವಳೇ ಸೋತು..
ಸೋತರೂ ಸೋಲದಂತೆ .
ನೊಂದರೂ ನೋಯದಂತೆ ..
ಬೊಗಸೆ ಬರಿದಾಗದಂತೆ
ಪ್ರೀತಿ ಒಸರುತ್ತಲೇ ..ಒಸರುತ್ತಲೇ .
ಅಮ್ಮನಾಗಿಬಿಡುವುದು ... !!!
ಚಿಕ್ಕವರಿದ್ದಾಗ ಬಸ್, ರೈಲು, ಅಥವಾ ಕಾರಲ್ಲಿ ಹೋಗೋವಾಗ ಗಿಡಮರಗಳು, ರಸ್ತೆ , ಅಲ್ಲೆಲೋ ಕಾಣುವ ವಿಂಡ್ಮಿಲ್, ಎಲ್ಲಾ ಹಿಂದಕ್ಕ್ಕೆ ಹೋದಂತೆ ಅನಿಸ್ತಾ ಇತ್ತು. ಹಾಗೆಲ್ಲ ಅದು ಹಿಂದೆ ಹೋದಂತೆ ಅದೇನೋ ವಿಸ್ಮಯ !! ಅದ್ಯಾಕೆ ಹಾಗೆ ಹಿಂದಕ್ಕೆ ಹೋಗ್ತಾ ಇದೆ ಅಂತ. 'ನಾವ್ ಮುಂದಕ್ಕೆ ಹೋಗ್ತಾ ಇದೀವಲ್ಲ ಅದಕ್ಕೆ ಹಾಗೆ ಅನಿಸುತ್ತೆ ಮಗ ' ಅಂತ ಅಮ್ಮ ಹೇಳಿದ್ರೂ ಅದೇನೋ ಅರ್ಥವಾಗದಂತೆ. ಒಂದಷ್ಟು ದೊಡ್ಡವರಾಗಿ ವಿಜ್ಞಾನ ಓದ್ತಾ ಓದ್ತಾ ಮನಸ್ಸು ಅದಕ್ಕೆ ತೆರದುಕೊಳ್ತಾ ಹೋಯ್ತು.
ಚಾಮುಂಡಿ ಬೆಟ್ಟಕ್ಕೆ ಹೋಗ್ತಾ, ಕಾರ್ ಡ್ರೈವ್ ಮಾಡ್ತಾ ಮಾಡ್ತಾ, ಮಂಜು ಅಂದೆಂದೋ ಲೂನಾದಲ್ಲಿ ಚಾಮುಂಡಿಬೆಟ್ಟಕ್ಕೆ ಕರ್ಕೊಂಡು ಹೋಗಿದ್ದನ್ನ ಸ್ವಾರಸ್ಯವಾಗಿ ರೋಮ್ಯಾಂಟಿಕ್ ಆಗಿ ಹೇಳ್ತಾ ಇದ್ರೆ ಬೆಟ್ಟದಿಂದ ಇಳಿಯುವಾಗ ಸಿಗುವ ಅದೇ ಗಿಡಮರಗಳಂತೆ ಹಿಂದಕ್ಕೆ ಹೋದ ಕೆಲವು ಸಮಯಗಳೂ ಬರುವಂತಿದ್ದರೆ ಎನಿಸಿದ್ದು ಸುಳ್ಳಲ್ಲ !! And then he said 'ನಾ ರೆಡಿ !!ಲೂನದಲ್ಲಿ ತಾನೇ ಕರ್ಕೊಂಡ್ ಹೋಗ್ತೀನಿ ಬಿಡು!! ಆಗ ಕೂಡ ಎಲ್ರೂ 'ಇದೇನ್ ಹಿಂಗ್ ಸುತ್ತುತ್ತವೆ ಇವೆರಡು ಅಂತ ನಮ್ಮನ್ನೇ ನೋಡ್ತಿದ್ರು !! ಈಗ್ಲೂ ನಮ್ಮನ್ನೇ ನೋಡ್ತಾರೆ ಇವ್ರಿಗೇನ್ ಬಂತು "ಈಗ" ಲೂನಾದಲ್ಲಿ ಸುತ್ತೋಕೆ ಅಂತ'!!! And I smile as ever:)))))))))))))
ಮನೆ ಅಂದ ಮೇಲೆ ಮಾತು ಬರುತ್ತೆ ಹೋಗುತ್ತೆ . ಸಣ್ಣ ಮಾತುಗಳು ಅತ್ತೆ ಸೊಸೆಯರ ನಡುವೆ ಇದ್ದೆ ಇರುತ್ತದೆ ..ಅದಕ್ಕೆ ನಮ್ಮ ಮನೆಯೂ ಹೊರತಲ್ಲ...ಬಹಳಷ್ಟು ಸಾರಿ ನಾವು ಮೂರೂ ಜನ ಸೊಸೆಯಂದಿರು ಅಯ್ಯೋ ಅವರ ಬುದ್ದಿ ಗೊತ್ತಲ್ಲ ಮತ್ತ್ಯಾಕೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಅಂತ ಸುಮ್ಮನಾಗಿ ಬಿಡ್ತೀವಿ , ಆದ್ರೂ ಕೆಲವೊಮ್ಮೆ ಮನಸ್ಸಿನ ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಮ್ಮೆ ವಯಸ್ಸಿಗೆ ಬಂದ ಮಕ್ಕಳಿರುವ ನಾವು ಅನಿಸಿಕೊಳ್ಳೋದಾ ಅನ್ನೋ ಸಿಟ್ಟಿಗೆ ಏನಾದ್ರು ಅಂದು ಬಿಡೋದು ಉಂಟು . ಮೊನ್ನೆ ಅತ್ತೆ ಬಂದಿದ್ರು ಏನೋ ಸಣ್ಣ ಪುಟ್ಟ ಮಾತುಗಳು ಬಂದ್ವು ಅಲ್ಲಿ ಅಂತ ಬೇಸರಗೊಂಡಿದ್ದರು.. ಅವರಮ್ಮನಿಗೆ ಒಂದಷ್ಟು ಸಮಾಧಾನ ಬುದ್ದಿ ಹೇಳಿದ ಮೇಲೆ , ಅತ್ತೆ ಮಲಗಲು ಹೋದ ಮೇಲೆ ಮಂಜು ಹೇಳಿದ್ರು "ಅವ್ರ ಕಥೆ ಗೊತ್ತಲ್ವ ಸುನಿ ನಿನಗೆ.. ೨೫ ವರ್ಷದಿಂದ ನೋಡ್ತಾನೆ ಬಂದಿದ್ದೀಯ, ನಿಮ್ಮ ಮೂರು ಜನರ(ವಾರಗಿತ್ತಿಯರು) ಬಗ್ಗೆ ಒಂದ್ ಮಾತು ಇಲ್ಲ .. ನಮಗೆಲ್ಲ ತಾಯಂದಿರು ನೀವು...'
ಹಾಗೆ ಮಾತಾಡ್ತಾ ಮಾತಾಡ್ತಾ .... 'ದಿನಾ ಅದೇ ಬಾವಿಯಲ್ಲಿ ನೀರ್ ತೆಗಿತಾ ಇದ್ರೆ ಬಾವಿಯ ಆಳ ಗೊತ್ತಿರುತ್ತದೆ ಕಣಮ್ಮ! ಹಗ್ಗ ಇಷ್ಟಕ್ಕೆ ನಿಂತರೆ ಬಿಂದಿಗೆ ಮುಳುಗುತ್ತೆ ,ನೀರು ಸಿಗ್ತದೆ ಅಂತ ! ಹೊಸದಾಗಿ ಬಾವಿ ಹತ್ರ ಬಂದವ್ರಿಗೆ ನೀರಿನ ಆಳ ತಿಳಿಯೋದಿಲ್ಲ ! ನೀನೂ ತಿಳ್ಕೋ ಬದುಕೋದು ಹೇಗೆ ಅಂತ !! ನಿನ್ ಮಕ್ಕಳು ನಿನ್ನನ್ನ ಹುಟ್ಟಿದಾಗಿಂದ ನೋಡಿರ್ತಾರೆ. ನೀ ಬೇಸರಗೊಂಡು ಮಾತಾಡಿದ್ರೆ ನಿನ್ ಮಕ್ಕಳಿಗೆ ನಮ್ಮಮ್ಮ ಹಿಂಗೆ ಅಂತ ಗೊತ್ತಿರುತ್ತೆ ಆದ್ರೆ ಸೊಸೆ ಅಥ್ವ ಅಳಿಯ ನಿನ್ನ ಆಗಷ್ಟೇ ನೋಡ್ತಾ ಇರ್ತಾರೆ, ಅವ್ರು ಬೇರೆ ಕಡೆಯಿಂದ ಬಂದು ನಿನ್ನ ಮನೆಗೆ ಸೇರ್ತಾರೆ... ಮಾತಾಡುವಾಗ ಸ್ವಲ್ಪ ತಡೆದು ಮಾತನಾಡು.. ಅಷ್ಟರಲ್ಲಿ ನಿನಗೇ ಗೊತ್ತಾಗಿರುತ್ತೆ ಆ ಮಾತು ಅಗತ್ಯನಾ ಇಲ್ವಾ ಅಂತ .. 'ನನ್ನ' ಮನೆ ಇದು 'ಹೀಗೆ' ಇರಬೇಕು ಅಂತ ಅನ್ಕೊಬೇಡ..!!! ನಿನ್ನ ಕಾಲ, ನಿನ್ನ ಬದುಕು, ನೀ ಬದುಕ ನೋಡೋ ರೀತಿಯಲ್ಲೇ ಎಲ್ಲಾರೂ ನೋಡಬೇಕು ಅಂದಾಗಲೇ ಇದೆಲ್ಲ ಬರೋದು.... ಅಂತೆಲ್ಲ ಹೇಳ್ತಾ ಹೋದ್ರು !!! "ಅಯ್ಯೋ ಶಿವ, ಒಂದ್ ಪುಸ್ತಕ ಓದೋದಿಲ್ಲ(ಓದಿಲ್ಲ) ಆದ್ರೂ ಈ ಪಾಟಿ ಬುದ್ದಿ ಎಲ್ಲಿರುತ್ತೋ ಕಾಣೆ'!!!
ಮನಸ್ಸು ಒಮ್ಮೆಮ್ಮೆ ಮಳೆಯ ನಂತರ ಮೂಡೋ ಕಾಮನಬಿಲ್ಲಿನ ಚಿತ್ತಾರದ ಬಾನಿನಂತೆ... ಪಾಠ ಕಲಿಯೊದಕ್ಕೆ ಪುಸ್ತಕವೇಕೆ ಇಂತಹ ಜೀವದ ಗೆಳೆಯನಿದ್ದರೆ ಅನ್ನೋ ಹಾಗೆ :))))
'ಹಿಂದೆ ನಾನೊಬ್ಳು ಅಮ್ಮ ಅಂತ ಕೂತಿದ್ದೀನಿ ಅನ್ನೋ concern ಇಲ್ಲ ಅಲ್ವ... ಹೆಂಗ್ ಗಾಡಿ ಓಡಿಸ್ತೀಯ ನೋಡು ..ಯಾವ್ದೋ ಹುಡುಗಿನ ಕೂರಿಸಿಕೊಂಡು ಓಡಿಸೋ ಹಂಗೆ ...ನನ್ ಗಂಡ ಕುಡಿದ ನೀರು ಅಲುಗೋದಿಲ್ಲ ಹಂಗ್ ಕರ್ಕೊಂಡ್ ಹೋಗ್ತಾನೆ ಗೊತ್ತಾ "
ಮಾ, ಹುಡುಗಿ ಕೂತ್ರೆ ಹಿಂಗೆಲ್ಲ ಓಡಿಸೋದಿಲ್ಲ ಅದು responsibility .. ನೀ ಕೂತ್ರೆ ಅದು confidence... ಬೇಕಾದ್ರೆ ಅಪ್ಪನ್ನ ಕೇಳು(!!!) ನೀ ಆರಾಮಾಗಿ ಕೂತ್ಕೋ" 
ಎಂತಹ ಮಗ ಹುಟ್ಬಿಟ್ಟ ಶಿವನೇ
ನನಗೆ ಒಂದ್ ತರ amnesia.ಜೊತೆಗೆ ಒಂದಷ್ಟು ಸಂಕೋಚ .. ಗುರುತು ಹಿಡಿಯೋದು ಸ್ವಲ್ಪ ನಿಧಾನ . ಮಂಜುಗೆ ಫ್ರೆಂಡ್ಸ್ ಹೇಳ್ತಾರೆ 'ಅಕ್ಕ ಸಿಕ್ಕಿದ್ರು ಮಂಜಣ್ಣ , ಅದ್ಯಾಕೋ ನಾ ನಕ್ಕರೂ ನಗಲಿಲ್ಲ ' ಮಂಜು 'ಅಯ್ಯೋ ಅವ್ಳು ಹಂಗೆ , ನಾ ಇಲ್ಲದಿದ್ದರೆ ಅವ್ಳು ಅವಳದೇ ಲೋಕದಲ್ಲಿ ಇರ್ತಾಳೆ ಬಿಡಣ್ಣ " ಅಂತ ಹೇಳಿ ಮನೆಗೆ ಬಂದು ಇಂತಹವರು ಸಿಕ್ಕಿದ್ರು , ನಿನ್ನ ನೋಡಿದ್ರಂತೆ, ಹೇಳ್ತಾ ಇದ್ರು ಅಂತ ಹೇಳಿದಾಗ 'ಹೊಂ ಅದ್ಯಾರೋ ನಕ್ರು ಮಂಜು ನನಗೆ ತಕ್ಷಣ ಗುರುತು ಸಿಗಲಿಲ್ಲ ನೋಡು' ಅಂದ್ರೆ ನಿನ್ನ ಕಥೆ ಹೊಸದ ಅನ್ನೋ ಹಾಗೆ ಲುಕ್ ಕೊಟ್ಟು ಸುಮ್ಮನಾಗ್ತಾರೆ ಮಂಜು. ಮೊದಲೆಲ್ಲ ತಪ್ಪು ತಿಳಿತಾ ಇದ್ದವರಿಗೆ ಈಗ ಗೊತ್ತಾಗಿಬಿಟ್ಟಿದೆ ಇವ್ಳಿಗೆ ಹಿಂಗ್ ಒಂದ್ ಕಾಯಿಲೆ ಅಂತ!! ಜಾಸ್ತಿ ತಪ್ಪು ತಿಳಿಯೋದಿಲ್ಲ !!
ಮೊನ್ನೆ ಶನಿವಾರ ಕಾರ್ತಿ 'ಮಾ, ಟ್ಯಾಂಕ್ ಹತ್ತಿರ ಬಾ ಪಿಕ್ ಮಾಡೋಕೆ " ಅಂತ ಫೋನ್ ಮಾಡ್ದ . ನಾ ಹೋದೆ. ಬಸ್ ನಿಲ್ತು. ನಾ ನಿಂತಿದ್ದೆ . ಸರಿ ಒಂದ್ ಹುಡುಗ ನನ್ನ ಕಡೆ ನೋಡಿ ನಗ್ತಾ ಬರ್ತಾ ಇದ್ದ. ಎಂದಿನ ಹಾಗೆ ನನ್ನದು ಬ್ಲಾಂಕ್ ಲುಕ್. ಅವನ ಪಕ್ಕ ಕಾರ್ತಿ ಕೂಡ ಇದ್ದಿದ್ದು ರಸ್ತೆ ತಿರುವಿನಲ್ಲಿ ಇದ್ದ ನನಗೆ ಕಾಣ್ತಾ ಇರಲಿಲ್ಲ . ಒಂದಷ್ಟು ಮುಂದೆ ಬಂದ ಮೇಲೆ ಆ ಹುಡುಗ ಕಾರ್ತಿ ಜೊತೆನೇ ಬರ್ತಾ ಇದದ್ದು ಗೊತ್ತಾಯ್ತು. ಅಷ್ಟರಲ್ಲಿ ಆ ಹುಡುಗ ಆ ಕಡೆ ರಸ್ತೆ ದಾಟಿ ಆಗ್ಹೋಯ್ತು . ಮಗನ ಜೊತೆ ವಾಪಸ್ ಬರ್ತಾ 'ಮಗ ಆ ಹುಡುಗ ನಗ್ತಾ ಬಂತು ನನಗೆ ಗುರ್ತೆ ಸಿಗಲಿಲ್ಲ! ಯಾರ್ ಮಗ ಅದು? ಪಾಪ ಏನ್ ತಿಳ್ಕೊಳ್ತೋ ಏನೋ' ಅಂದೆ 'ಅದು ಆಕಾಶ್ ಅಲ್ವ ಮಾ, ಮೊನ್ನೆ ನೀನೆ ಒಬ್ಬಟ್ಟು ಹಾಕಿ ಕೊಟ್ಟಿದ್ದಲ್ಲ ಅವ್ನು ಮನೆಗೆ ಬಂದಾಗ " ಅಂದ. ನೆನಪಿಗೆ ಬರಲಿಲ್ಲವಾದ್ರು ಸಾರಿ ಹೇಳ್ಬಿಡು ಮಗ ಗೊತ್ತಾಗಲಿಲ್ಲ ಅಂದೆ. 'ಅಯ್ಯೋ ಬಿಡಮ್ಮ ನನ್ ಫ್ರೆಂಡ್ಸ್ ಹಂಗೆಲ್ಲ ಅಂದ್ಕೊಳ್ಳೋದಿಲ್ಲ ' ಅಂದ 'ಅದ್ಯಾಕೋ ಮರೆವು ಮಗ. ಒಂದೊಂದ್ ಸಾರಿ ಬೇಜಾರ ಆಗುತ್ತೆ ಈ ಮರೆವಿನ ಮೇಲೆ .. ಅದೆಷ್ಟ ತಪ್ಪು ತಿಳಿತಾರೋ ಅಲ್ವ" 'ಮಾ, ಅದು ಕಾಯಿಲೆ ಅಲ್ಲ ಮಾ boon!! ಮನಸ್ಸಿಗೆ ಏನ್ ಇಷ್ಟ ಅಷ್ಟನ್ನ ಮಾತ್ರ ಉಳಿಸಿಕೊಂಡು ಉಳಿದದ್ದನ್ನ ಮರೆತು ಬಿಡೋ boon ! PCನಲ್ಲಿ ಅನಗತ್ಯ ಮೆಮೊರಿ ತುಂಬ್ತಾ ಹೋದ್ರೆ PC ಸ್ಲೋ ಆಗೋದಿಲ್ವ ಡಿಲೀಟ್ ಮಾಡಿದ್ರೆ ಚೆನ್ನಾಗ್ ಕೆಲಸ ಮಾಡೋದಿಲ್ವ ಹಂಗೆ ಬೇಡದ್ದು ತುಂಬಿಕೊಂಡರೆ ಭಾರ ಜಾಸ್ತಿ ಆಗುತ್ತೆ!! ಯಾರೋ ಮಾತಾಡಿಸಿಲ್ಲ ಅಂದ್ರೆ ಒಹ್ ಇವ್ರು ಅವ್ರಲ್ವ ನನ್ನ ಮಾತೇ ಅಡ್ಸಿಲ್ಲ ನೋಡು ಅಂತ ನೊಂದ್ಕೊತೀಯ ..ಈಗ ಅವೆಲ್ಲ ತಲೆನೋವೇ ಇಲ್ಲ ..! ಸುಮ್ಸುಮ್ನೆ ಅದ್ಯಾಕ್ ಟೆನ್ಶನ್ ಮಾಡ್ಕೊತೀಯ ಸುಮ್ನಿರು !!!!!! :))))))
ಹೀಗೊಂದು ವಾಟ್ಸಪ್ ಕಥೆಯ ಭಾವಾನುವಾದ ... ಹಂಚಿಕೊಳ್ಳಬೇಕು ಅನಿಸ್ತು :)))))
ಪುಟ್ಟನಿಗೆ ಹೂಗಳು ಅಂದ್ರೆ ಪ್ರಾಣ. ಅದರಲ್ಲೂ ಗುಲಾಬಿ ಅಂದ್ರೆ ತುಂಬಾನೇ ಇಷ್ಟ. ಹೂ ಅಂಗಡಿಯಲ್ಲಿ ಸಾಲಕ್ಕೆ ಹೂ ತಂದು ಸರ್ಕಲ್ಗಳ ಬಳಿ , ರಸ್ತೆಯ ಬದಿಯಲ್ಲಿ ಮಾರಿ ಒಂದಷ್ಟು ದುಡ್ಡು ತಂದು ಅಮ್ಮನಿಗೆ ಕೊಡ್ತಾ ಇದ್ದ. 
ಆವತ್ತು ಕೂಡ ಅಂಗಡಿಯ ಬಳಿ ಹೋದಾಗ ಯಾರೋ ಮಾತಾಡ್ತಾ ಇದ್ರು . ನಾಳೆ ವ್ಯಾಲೆಂಟಿನ್ ಡೇ ಕಣೋ ಮಗ , ೩ ರೂಪಾಯಿ ಗುಲಾಬಿ 10-20 ರೂಪಾಯಿಗೆ ಹೋಗ್ತದೆ! ಒಳ್ಳೆ ಕಮಾಯಿ ನಾಳೆ' ಮರುದಿನ ಎಂದಿನಂತೆ ಪುಟ್ಟ ಅಂಗಡಿಯವನ ಬಳಿ ಹೋಗಿ ದಿನಕ್ಕಿಂತ ಹೆಚ್ಚು ಹೂ ಪಡೆದಾಗ ಅಂಗಡಿಯಾತ ರೇಗಿಸಿದ 'ಏನ್ ಪುಟ್ಟ ನೀ ಯಾರಿಗೆ ಕೊಡ್ತೀಯ ಇಷ್ಟೊಂದು ಹೂವ ತಗೊಂಡ್ ಹೋಗ್ತಾ ಇದ್ದೀಯ!' ನಸುನಾಚಿದ ಪುಟ್ಟ 'ಹೋಗಣ್ಣೊ' ಅಂತ ಹೂ ಪಡೆದು ಓಡಿದ. ಅಂದು ಹೂವು ಎಂದಿಗಿಂತ ಹೆಚ್ಚೇ ಮಾರಾಟವಾಯ್ತು . ಪುಟ್ಟ ಅಂಗಡಿಯಾತನಿಗೆ ಹೂವಿನ ದುಡ್ಡು ಕೊಟ್ಟು, ಮೇಲೆ ಉಳಿದ ದುಡ್ಡನ್ನ ತೆಗೆದುಕೊಂಡು 'ಅಣ್ಣೋ , ಆ ಗುಲಾಬಿ ಕೊಡು " ಅಂದ. ನಕ್ಕ ಹೂವಿನವ ಒಂದೆರಡು ಹೂ ಕೊಟ್ಟು ಕಳಿಸಿದ. ಪುಟ್ಟ ಮನೆಗೆ ಹೋಗ್ತಾ ಬಟ್ಟೆ ಅಂಗಡಿಗೆ ಹೋದ . ಅಂಗಡಿಯವ ಕೇಳಿದ 'ಏನ್ ಪುಟ್ಟ ಬೆಳಿಗ್ಗೆನೆ ಹೂವಿನ ದುಡ್ಡು ಕೊಟ್ನಲ್ಲ" ಪುಟ್ಟ 'ಅಣ್ಣ, ಆ ಗುಲಾಬಿ ಬಣ್ಣದ ಅಂಗಿ ಎಷ್ಟು' ಅಂದ 'ಯಾಕೋ ಪುಟ್ಟ , __ ರೂಪಾಯಿ , ನೀ ಬೇಕಾದ್ರೆ ಒಂದ್ ೫೦ ರೂಪಾಯಿ ಕಮ್ಮಿ ಕೊಡು' ಅಂದ. ಪುಟ್ಟ ಆ ಅಂಗಿಯನ್ನ ಪ್ಯಾಕ್ ಮಾಡಿಸಿಕೊಂಡು ಮನೆಗೆ ಓಡಿದ . 'ಅಮ್ಮೋ, ಪುಟ್ಟಿ ಎಲ್ಲಿ ' ಇಲ್ಲೇ ಎಲ್ಲೋ ಅಡ್ತಾವ್ಲೇ ಕಣ್ಲ ಮಗ, ಯಾಕ್ಲಾ ' ಅಂದ್ಲು ಅಮ್ಮ. ಪುಟ್ಟಿನ ಹುಡುಕಿಕೊಂಡ್ ಬಂದ ಪುಟ್ಟ ದಡಬಡ ಅವಳ ಅಂಗಿ ತೆಗೆದು ತಂದಿದ್ದ ಹೊಸ ಅಂಗಿ ಹಾಕಿಸಿ ಅಮ್ಮನಿಗೆ ತಾ ತಂದ ಗುಲಾಬಿ ಕೊಟ್ಟು 'Yappy valentine's day ' ಅಂದ ನಗುತ್ತಾ . ಹಂಗಂದ್ರೆನ್ಲ ಮಗ ಅಂದ ಅಮ್ಮನ ಕಣ್ಣಲಿ ಖುಷಿ ಕಂಡರೆ.. ಪುಟ್ಟಿ ಹೊಸ ಅಂಗಿಯನ್ನ ತೊಟ್ಟು ನಗ್ತಾ ಇತ್ತು :))))
'ಅಕ್ಕ ನೀವು ಹೇಗೆ Valentine's Day ಮಾಡ್ತೀರ" ಅಂತ ಒಂದ್ ಪುಟ್ಟ ಹುಡುಗಿ ಕೇಳಿದಳು'...
"ಮಂಜು ಈವತ್ತು ಯಾಕೋ ಕೆಲ್ಸ ಮಾಡೋಕೆ ಬೇಜಾರು!"
'ಎಷ್ಟ್ ಆಗುತ್ತೆ ಅಷ್ಟ್ ಮಾಡಿ ಉಳಿದದ್ದು ಆಫೀಸ್ನಲ್ಲಿ ಹೇಳಿಬಿಡು ಜಾಸ್ತಿ ಟೆನ್ಶನ್ ಮಾಡಿಕೊ ಬೇಡ. ಆದ್ರೆ 11ಗಂಟೆಗೆ ಬರ್ತೀನಿ , ಇಲ್ಲ ಅಂದರೆ 3ಗಂಟೆಗೆಲ್ಲ ಬಂದ್ಬಿಡ್ತೀನಿ. ಏನಾದ್ರೂ ಬರ್ಕೊತಾ, ಓದ್ತಾ ಇರು, ಏನೂ ಮಾಡೋಕೆ ಹೋಗ್ ಬೇಡ,..ಆಮೇಲೆ ಎಲ್ಲಾದರು ಕರ್ಕೊಂಡ್ ಹೋಗ್ತೀನಿ"
"ಈವತ್ತು ಒಬ್ರು ಫ್ರೆಂಡ್ ಬರ್ತಾರೆ, ನಾ ಅವರನ್ನ ನೋಡೋಕೆ ಹೋಗಬೇಕು ಮಂಜು ".
"೩ ಗಂಟೆ ಮೇಲೆ ಎಲ್ಲಿಗೆ ಬೇಕಾದರು ಕರ್ಕೊಂಡ್ ಹೋಗ್ತೀನಿ ಆಯ್ತಾ ಮಹರಾಯ್ತಿ , ಮುಖ ಹಂಗೆ ಸಪ್ಪೆ ಮಾಡ್ಕೋ ಬೇಡ ."
"ಒಂದು ಬುಕ್ ರಿಲೀಸ್ , ನಾ ಹೋಗ್ ಬೇಕಲ್ಲಾ ... "
'ಯಾರಾದ್ರೂ ಜೊತೆ ಇದ್ರೆ ಹೋಗು ಇಲ್ಲ ಅಂದ್ರೆ ನಾನೇ ಬರಬೇಕ ಹೇಳು".
"ಈವತ್ತು ಕೆಲಸ ಜಾಸ್ತಿ ಮಂಜು "
'ಟೆನ್ಶನ್ ಬೇಡ, ಸಂಜೆ ನಾನೇ ಏನಾದ್ರೂ ಕುಕ್ ಮಾಡ್ತೀನಿ ಬಿಡು"....
'ಮಗಳಿಗೆ ಹುಷಾರಿಲ್ಲ, ಡಾಕ್ಟರ್ ತೋರಿಸೋಕೆ ನಾ ಇರಬೇಕೇನಮ್ಮ "
'ಬೇಡ ಮಂಜು, ಇದೇನು ದೊಡ್ಡ ವಿಷ್ಯ ನಾ ಕರ್ಕೊಂಡ್ ಹೋಗ್ತೀನಿ ಬಿಡು '
'ಮಗನ ಕಾಲೇಜ್ ಪೇರೆಂಟ್ಸ್ ಮೀಟಿಂಗ್ ಅಂತೆ'
' ನಾ ಹೋಗ್ತೀನಿ ಬಿಡಪ್ಪ ನೀ ಯಾಕೆ ರಜ ಹಾಕ್ತತೀಯ "
'ಆ ನೀರಿನ ಬಿಲ್ ಸ್ವಲ್ಪ ಕ್ಲಾರಿಫಯ್ ಮಾಡಬೇಕಲ್ಲಮ್ಮ '
' ನಾ ಹೋಗ್ತೀನಿ ಬಿಡು ಮಂಜು"
ಬದುಕಿನ ಕಪ್ಪು ಬಿಳುಪಿನ ಅನೇಕ ಪುಟಗಳನ್ನ ತಿರುಗಿಸಿ, ಬಣ್ಣದ ಪುಟಗಳನ್ನ ನೋಡಿ, ಏಳುಬೀಳುಗಳ ದಾಟಿ... ಬದುಕಿನ ಈ ಹಂತದಲ್ಲಿರುವಾಗ.... ..
ಪ್ರೀತಿ ಅಂದ್ರೆ ಬರೀ ಅರಿತುಕೊಳ್ಳುವಿಕೆ ಮತ್ತು ಹಂಚಿಕೊಳ್ಳುವಿಕೆ ಅಷ್ಟೇ ....
ಜಗಳವೇ ಇಲ್ಲ , ಭಿನ್ನಾಭಿಪ್ರಾಯವೇ ಇಲ್ಲಾ ಅಂತಲ್ಲ ....ಎಲ್ಲದರ ನಡುವೆಯೂ being for HIM or for Her
ನನಗೆ ಪ್ರತಿ ದಿನವೂ Valentine's Day...ಮೇಲೆ ಹೇಳಿದ ರೀತಿಯಲ್ಲೇ
ನಾ ಅವನಿಗೆ ... ಅವನು ನನಗೆ smile emoticon
ಅಂದು ಸಣ್ಣವಳಿದ್ದಾಗ 
ಕಾಲಿಗೆ ಚುಚ್ಚಿದ್ದ ಸಣ್ಣ ಮುಳ್ಳ ತೆಗೆಯಲು 
ಅಮ್ಮನ ಸೆರಗಿನೊಳಗೆ ಕೈ ಹಾಕಿ
ಸರದಲ್ಲಿ ಚುಚ್ಚಿದ್ದ ಪಿನ್ನು ಹುಡುಕಿದರೆ
ಮಗಳ ಮುದ್ದು ಕಾಲು ನೋಯುವುದೆಂದು 
ಕಣ್ಣ ಹನಿ ಬೀಳುವ ಮೊದಲೇ
ಅವಳ ಮನವ ಎತ್ತಲೋ ತಿರುಗಿಸಿ
ಕಾಲಿನ ಮುಳ್ಳು ತೆಗೆಯುತ್ತಿದಳು ಅಮ್ಮ ..
ಈಗಲೂ ಹಾಗೆ .....
ಮನೆಗೆ ಹೋದ ಮಗಳ
ಕಣ್ಣ ಹನಿ ಬೀಳುವ ಮೊದಲೇ
ಅವಳ ಮನವ ಎತ್ತಲೋ ತಿರುಗಿಸಿ
ಮನದ ಮುಳ್ಳು ತೆಗೆಯುತ್ತಾಳೆ ಅಮ್ಮ
ಅಮ್ಮನ ಸೆರಗಲ್ಲಿ ,ಸರದಲ್ಲಿ
ಈಗಲೂ ಪಿನ್ನುಗಳು ಸಿಗುತ್ತವೆ
ಮುಳ್ಳು ತೆಗೆವ ಪಿನ್ನು .....
ಅಮ್ಮ ಹಾಗೆ ಇದ್ದಾಳೆ ...
ಈಗಲೂ....ಹಾಗೆಯೇ ......
ಪುಟ್ಟಿ SSLC ಪರೀಕ್ಷೆ ಬರಿತಾ ಇದ್ದಾಳೆ. ಡಿಸೆಂಬರ್ ಕಳೆದದ್ದೇ ಕಳೆದದ್ದು,ಒಂದಾದ ಮೇಲೆ ಒಂದು ಟೆಸ್ಟ್, prepಪರೀಕ್ಷೆಗಳು ಒಟ್ಟು ೫ prepಗಳು . ಶಾಲೆಯದು, ತಾಲೂಕು ಮಟ್ಟದ್ದು, ಜಿಲ್ಲ ಮಟ್ಟದ್ದು !! ಮುಖ್ಯ ಪರೀಕ್ಷೆಗೆ ಮೊದಲು ಇನ್ನು ಎರಡು ಪರೀಕ್ಷೆ ಇದೆ ಅಮ್ಮ ಅಂತ ಪುಟ್ಟಿ ಹೇಳೋವಾಗ ಅದ್ಯಾಕೋ ಬೇಸರ. ಕಾರ್ತಿಗೆ ಇದ್ದದ್ದು ಮೂರು preparatoryಗಳು , ಒಂದು ಬೋರ್ಡ್ದು ಮತ್ತೆರಡು ಶಾಲೆಯದು..ಮಂಜುಗೆ ಈ ಬಗ್ಗೆ ಹೇಳಿದ್ರೆ ನೀರಿನ ಹರಿವಿನ ಹಾಗೆ ನಾವೂ ಹರಿಬೇಕು ಅಂತಾರೆ. ನನ್ನ ಮಗಳಿಗೆ ಮಾತ್ರ ಎಕ್ಸಾಮ್ ಬೇಡ ಅಂದ್ರೆ ಆಗುತ್ಯೇ ಅಂತಾರೆ. ಇವೆಲ್ಲದರ ಜೊತೆಗೆ prepಪರೀಕ್ಷೆಯ ಪ್ರಶ್ನೆಪತ್ರಿಕೆ (!!) ಔಟ್ ಆಗಿದೆ ಅಂತ ಅವಳ ಶಾಲೆಯ ಮಕ್ಕಳು ಅವಳಿಗೆ ಮೆಸೇಜ್ ಹಾಕಿದಾಗ ಅದ್ಯಾಕೋ ವ್ಯವಸ್ಥೆಯ ಬಗ್ಗೆ ಬೇಸರ. ಅಗತ್ಯ ಇಲ್ಲದೆ ಮಕ್ಕಳನ್ನ ಇಷ್ಟೆಲ್ಲಾ stressಗೆ ಗುರಿ ಮಾಡುತ್ತೆವೇನೋ ಅನಿಸೋ ಹಾಗೆ. ಎಲ್ಲೋ ಒಂದು ಕಡೆ ಮಕ್ಕಳು ಕೂಡ ರೋಬೋಟ್ ಗಳಂತೆ ಅಗ್ತಾ ಇದ್ದಾರೆ ಅನಿಸೋ ಹಾಗೆ .. ನಾ SSLC ಬರೆದಾಗ ಒಂದೇ preparatory.. ಮಕ್ಕಳಿಗೆ ಉತ್ತರ ಬರೆಯೋ ಸಮಯದ ಬಗ್ಗೆ, ಪ್ರಶ್ನೆಪತ್ರಿಕೆಯ ಬಗ್ಗೆ ಹಾಗು ಪಬ್ಲಿಕ್ ಪರೀಕ್ಷೆ ಹೇಗಿರುತ್ತದೆ ಅಂತ ಅನುಭವ ಆಗಲಿ ಅಂತ ಮಾಡ್ತಾ ಇದ್ರು. ಮತ್ತೆಲ್ಲ ಪರೀಕ್ಷೆ ಅಂದ್ರೆ ನಮಗೆ ಒಂದು ಸಣ್ಣ ಹಬ್ಬದ ಹಾಗೆ . ಇಂಕು ಹಾಕೋದ್ರಿಂದ ಹಿಡಿದು, ಪೆನ್ಸಿಲ್ಲು, ಸ್ಕೇಲು, ರಬ್ಬರ್, ಕಂಪಸ್ಸು , 'ರಟ್ಟು' (ರಟ್ಟು ಅಂದ್ರೆ ಮಗ್ಳು ನಗ್ತಾಳೆ! ಮಾ ಅದು ಎಕ್ಸಾಮ್ ಪ್ಯಾಡ್ ಅಂತ) ಇತ್ಯಾದಿ ಇತ್ಯಾದಿ ಹೊಂದಿಸಿಕೊಂಡು ಹಾಲ್ ಟಿಕೆಟ್ ಹತ್ತ್ ಸಾರಿ ಜೋಪಾನ ಮಾಡಿ ... ಪರೀಕ್ಷೆ ದಿನ ಅಮ್ಮನಿಗೆ ಒಂದು ನಮಸ್ಕಾರ ಮಾಡಿ ಸೈಕಲ್ ಏರಿದರೆ ಮತ್ತೆಲ್ಲ ಬರೀ ಎಷ್ಟ್ ಅಡಿಷನಲ್ ಶೀಟ್ ತಗೊಂಡೆ, ಇದು ಸರಿನಾ , ಎಷ್ಟ್ ಮಾರ್ಕ್ಸ್ ಬರುತ್ತೆ ಅನ್ನೋ ಮಾತಷ್ಟೇ...
ಈಗ ಆ ಟ್ಯೂಷನ್ಬಗೆ ಹೋದ್ರೆ ಪ್ರಶ್ನೆ ಪತ್ರಿಕೆ ಸಿಗುತ್ತೆ , ಇಲ್ಲಿ ಎಕ್ಸಾಮ್-ಓರಿಎಂಟೆಡ್ ಪಾಠ ಮಾಡ್ತಾರೆ , ಇತ್ಯಾದಿ ಅಂತಹದೇ ಮಾತು .. ಆ ಪರೀಕ್ಷೆ ವ್ಯವಸ್ಥೆ ಇಡಿಯಾಗಿ ಬದಲಾಗಬೇಕೆನೋ ಅನಿಸೋ ಹಾಗೆ .. ಯಾವುದೇ ಅಡಚಣೆ ಇಲ್ಲದೆ ಮು೦ದೂಡಲ್ಪಡದೆ ಒಮ್ಮೆ ಪರೀಕ್ಷೆ ಮುಗಿದರೆ ಸಾಕು ಅನಿಸೋ ಹಾಗೆ ... keeping the fingers crossed and praying is the only way ....ಅನಿಸೋ ಹಾಗೆ..........
ಚಿಕ್ಕವಳಿದ್ದಾಗ ಅಮ್ಮ ಕಥೆ ಹೇಳ್ತಾ ಇದ್ರು . ಒಂದು ಪಕ್ಕ ನಾನು ಒಂದು ಪಕ್ಕ ತಮ್ಮ ಮಲಗಿ ಕಥೆ ಕೇಳ್ತಾ ಇದ್ವಿ. ಏನೇನೋ ಕಥೆಗಳು ಮಹಾಭಾರತ, ರಾಮಾಯಣ ಗಳಿಂದ ಹಿಡಿದು, ಸಾಲೊಮನ್ ಕಥೆಗಳು, ಶಕುಂತಲೆಯ ಕಥೆ, ಈಸೋಪನ ನೀತಿಕಥೆ, ಅಕ್ಬರ್ ಬೀರಬಲ್ ಕಥೆ, ತೆನಾಲಿರಾಮನ ಕಥೆ ಇನ್ನು ಅದೆಷ್ಟೋ ..ನಮ್ಮ ವಯಸ್ಸಿಗೆ ಅನುಗುಣವಾಗಿ ಕಥೆಯನ್ನ ಒಂದಷ್ಟು modify ಮಾಡಿ ಹೇಳ್ತಾ ಇದ್ಲು ಅಮ್ಮ. ದಿನಕೊಂದು ಕಥೆ, ಅಮರಚಿತ್ರ ಕಥೆ, ಬಹದ್ದೂರ್, ಪ್ಯಾಂಟಮ್ , ಹೀಗೆ ಒಂದಷ್ಟು ಚಿತ್ರಕಥೆಗಳ ಪುಸ್ತಕಗಳು . ಓದೋ ಹುಚ್ಚು ಬೆಳೆದಿದ್ದೆ ಆಗ ..ಅದೆಷ್ಟೋ ಕಥೆಗಳ ಪಾತ್ರಗಳಲ್ಲಿ ನಮ್ಮನ್ನೇ ಪಾತ್ರಧಾರಿಗಳಾಗಿಸಿಕೊಂಡು ನಾನು ತಮ್ಮ ಆಟ(ಜಗಳ )ವಾಡಿದ್ದೂ ಉಂಟು
ಅದರಲ್ಲಿ ಒಂದು ಕಥೆ ಇದು. ಒಂದೂರಲ್ಲಿ ಒಬ್ಬ ಗಂಡ ಹೆಂಡತಿ. ಒಬ್ಬರನ್ನ ಕಂಡ್ರೆ ಒಬ್ಬರಿಗೆ ಪ್ರಾಣ. ಇಬ್ಬರು ದಿನ ದುಡಿದು ಬಂದ ಹಣದಲ್ಲಿ ಚೆನ್ನಾಗಿ ಇರ್ತಾರೆ. ಒಂದ್ ಸಾರಿ ಅವ್ರ ಮದ್ವೆ ವಾರ್ಷಿಕೋತ್ಸವ ಬರುತ್ತೆ . ಆಗ ಗಂಡ ಅವನ ಹೆಂಡತಿಯ ಉದ್ದನೆಯ ಜಡೆಗೆ ಒಂದು ಚೆಂದನೆಯ ಮುತ್ತಿನ ಕ್ಲಿಪ್ ತರ್ತಾನೆ . ಇವಳು ಗಂಡನ ಗಡಿಯಾರಕ್ಕೆ ಸ್ಟ್ರಾಪ್ ತರ್ತಾಳೆ . ಇಬ್ಬರು ಬಂದು ಅವರ ಉಡುಗೊರೆಗಳ ತೋರಿಸ್ತಾರೆ. ಹೆಂಡತಿ ತಂದ ಉಡುಗೊರೆ ನೋಡಿ ಗಂಡ ಪೆಚ್ಚದರೆ ಇವನ ಉಡುಗೊರೆ ನೋಡಿ ಇವಳು ಪೆಚ್ಚಾಗುತ್ತಾಳೆ. ಇವಳು ತನ್ನ ಉದ್ದನೆಯ ಜಡೆಯನ್ನ ಮಾರಿ ಗಂಡನಿಗೆ ಗಡಿಯಾರದ ಸ್ಟ್ರಾಪ್ ತಂದಿದ್ದರೆ , ಇವನು ತನ್ನ ಗಡಿಯಾರ ಮಾರಿ ಹೆಂಡತಿ ಎಂದೋ ಆಸೆ ಪಟ್ಟ ಮುತ್ತಿನ ಕ್ಲಿಪ್ ತಂದಿರ್ತಾನೆ .. ಮತ್ತೆ ಇಬ್ಬರು ನಕ್ಕುಬಿಡ್ತಾರೆ .. ಹೀಗೆ ಇನ್ನು ಜಾಸ್ತಿ ಪ್ರೀತಿಯಲ್ಲಿ ಸುಖವಾಗಿ ಇರ್ತಾರೆ ..( ಇದು The Gift of the Magi by O. Henry ಕಥೆ) . ಅಮ್ಮನ ಬಾಯಲ್ಲಿ ಅದೆಷ್ಟೋ ಸಾರಿ ಕೇಳಿದ್ದಿನೋ ಗೊತ್ತಿಲ್ಲ . ಮನಸಲ್ಲೇ ಉಳಿದು ಬಿಟ್ಟಿದೆ .. ಸಂಜೆ ಈ ಹಾಡು ಕೇಳ್ತಾ ಇದ್ದೆ .. ಅಮ್ಮ ಹೇಳಿದ ಕಥೆ ನೆನಪಿಗೆ ಬಂತು Some memories dont die:))))https://www.youtube.com/watch?v=ty55I66-Mrk
ಮೈಸೂರಲ್ಲಿ ಬಿಸಿಲು ಯಾರ ಮೇಲಿನ ಸಿಟ್ಟಿಗೋ ಸುಡುವಂತೆ ಸುಡ್ತಾ ಇದೆ. ಹೊರಗೆ ಹೋಗೋದೇ ಕಷ್ಟ ಅನಿಸೋ ಹಾಗೆ. ಮೊನ್ನೆ ಒಂದಷ್ಟು ಕೆಲಸಗಳು ಇದ್ವು ಅಂತ ಇಬ್ಬರೂ ಹೊರಟ್ವಿ.. ಬೆಳಿಗ್ಗೆ ೧೦ ಗಂಟೆಗೇ ಬಿಸಿಲು..ಅದರ ಮೇಲೆ ಈ ಹೆಲ್ಮೆಟ್ ಬೇರೆ! ಒಂದಷ್ಟು ಆಫೀಸ್ಗಳ ಕೆಲಸ ಮುಗಿಸಿ ಹಾಗೆ ಬಂದು ನಂದಿನಿ ಪಾರ್ಲರ್ ಬಳಿ ಮಜ್ಜಿಗೆ ಕುಡಿದ್ವಿ. ಹಾಗೆ ಒಂದು ಪ್ಯಾಕೆಟ್ ಮೊಸರು ತಗೊಂಡು ದುಡ್ಡು ಕೊಟ್ರೆ ಅಲ್ಲಿನ ಹುಡುಗ ಒಂಚ್ಚೂರು ಚಿಲ್ಲರೆ ಕೊಟ್ಟು ಉಳಿದ ೮ ರೂಪಾಯಿ ಚಿಲ್ಲರೆ ಇಲ್ಲ ಅಂತ ಒಂದು ಕೂಪನ್ ಕೊಟ್ಟ. 'ಈ ಕಡೆ ಬಂದಾಗ ಏನಾದ್ರೂ ತಗೋಳಿ ಸರ್' ಅಂದ. ನನ್ ಗಂಡ 'ಲೋ ಅಣ್ಣ, ಈ ಕಡೆ ಬರೋದು ಮತ್ ಯಾವಾಗ್ಲೋ, ಅದೆಷ್ಟ್ ಇದೆ ಅಷ್ಟೇ ಚಿಲ್ಲರೆ ಕೊಡೊ ಮಹರಾಯ' ಅಂದ್ರು. ಆ ಹುಡುಗ "ಇಲ್ಲ ಸರ್ ಚಿಲ್ಲರೆ ಇಲ್ಲ' ಅಂದ. 'ಸರಿ ಇನ್ನೊಂದು ಮಜ್ಜಿಗೆ ಬರುತ್ತೆ ಅಲ್ವ ಅದ್ನೆ ಕೊಟ್ಬಿಡು' ಅಂತ ಒಂದು ಮಜ್ಜಿಗೆ ತಗೊಂಡ್ರು. ನಾನೂ ಬೈತಾ ಬಂದೆ. 'ಕೆಲಸ ಇಲ್ಲ ನಿನಗೆ, ಮನೇಲೂ ಮೊಸರು ಇತ್ತು , ಜೋರಾಗಿ ಕೇಳಿದ್ರೆ ಚಿಲ್ಲರೆ ಕೊಡ್ತಾ ಇದ್ದ ಯಾರಿಗೋ ಉಪಕಾರ ಮಾಡೋಕೆ ಹೋಗ್ತೀಯ ... etc etc" . 'ಅಯ್ಯೋ ಬಿಡು ತಾಯಿ, ಅದಕ್ಕ್ಯಾಕೆ ಇಷ್ಟ್ ಕೋಪ, ನಾನೇ ಡ್ಯೂಟಿಗೆ ಹೋಗೊ ಮೊದ್ಲು ಕುಡಿದು ಹೋಗ್ತೀನಿ' ಅಂದ್ರು. ಲಾಯಲ್ ವರ್ಲ್ಡ್ ಹತ್ತಿರ ಬಂದ್ವಿ ಸ್ವಲ್ಪ ಸಾಮಾನು ತೆಗೆದುಕೊಳ್ಳೋದಿತ್ತು. ಸರಿ ಗಾಡಿ ನಿಲ್ಸಿ ಹೆಲ್ಮೆಟ್ ಇಟ್ಟು , ಸಾಮಾನು ತೆಗೆದುಕೊಂಡು ಬಂದ್ವಿ. ಯಾವಾಗ್ಲೂ ಇರೋ ಸೆಕ್ಯೂರಿಟಿಯವರು ಹೆಲ್ಮೆಟ್ ಕೊಟ್ರು. 'ಇದ್ಯಾಕ್ ಸರ್ ಈ ಬಿಸ್ಲಾಗೆ ಬರೋಕೋದ್ರಿ ಅಮ್ಮವ್ರನ್ನೂ ಕರ್ಕೊಂಡು ? ಯಾವಾಗ್ಲೂ ಬರಂಗೆ ಸಂಜೆ ಮೇಲೆ ಬಂದಿದ್ರೆ ಆಗ್ತಿತ್ತಲ್ವ " ಅಂದ್ರು. ಮಂಜು 'ಇಲ್ಲ ಕಣಣ್ಣ ಸ್ವಲ್ಪ ಕೆಲ್ಸ ಇತ್ತು, ಹೊರಟು ಬಿಡ್ತಿವಿ ಮನೆಗೆ' ಅಂತ ಗಾಡಿ ಹತ್ತಿರ ಬಂದು ಗಾಡಿಯಲ್ಲಿ ಇದ್ದ ಮಜ್ಜಿಗೆನ ತಗೊಂಡ್ರು .' ಅವ್ರಿಗೆ ಕೊಟ್ಬಿಡ್ತಿನಿ ಸುನಿ' ಅಂದ್ರು.'ಬೇಡ ಮಂಜು, ತಪ್ ತಿಳ್ಕೊಳ್ತಾರೆನೋ' ಅಂದೆ. ಮಂಜು 'ಬಿಸ್ಲು ಕುಡ್ಕೋಳ್ಳಣ್ಣ ' ಅಂತ ಕೊಟ್ಟ ಮಜ್ಜಿಗೆನ ಆ ವ್ಯಕ್ತಿ 'ದಾವ ಆಗ್ಬಿಟ್ಟಿತ್ತು ಸರ್' ಅಂತ ನಗುತ್ತಾ ಕುಡಿದರು. ಮಂಜು ಬಂದು ಗಾಡಿ ತೆಗೆದ ಮೇಲೆ 'ಅಲ್ಲ ಅವ್ರೆನಾದ್ರು ತಗೊಳ್ಳದೆ ತಪ್ಪು ತಿಳ್ಕೊಂಡಿದ್ರೆ ಏನ್ ಮಾಡ್ತಿದ್ದೆ ಮಾರಾಯ' ಅಂದೆ . 'ಎಲ್ಲರೂ ಒಂದೇ ತರ ಇರೋದಿಲ್ಲ ಕಣಮ್ಮ. ಅವರಿಗೆ ಬದುಕು ನಡಿಬೇಕು ಅಷ್ಟೇ. ಅಮೇಲು ಏನಾದ್ರೂ ಅಂದಿದ್ರೆ ಆ ಮಗನ ಮುಂದೆ ನಾನೇ ಕುಡಿದು ಬರ್ತಾ ಇದ್ದೆ ಅಷ್ಟೇ . ದಾಹ ನನಗೂ ಅದೇ ಅವನಿಗೂ ಅದೇ' ಅಂದು ಸ್ವಲ್ಪ ಸುಮ್ಮನಿದ್ದು ಮತ್ತೆ 'ಹಂಗಂತ ಇನ್ ಮೇಲೆ ಎಲ್ಲಾ ಕಡೆ ಚಿಲ್ಲರೆ ಬೇಡ ಅಂತ ಹಿಂಗ್ ಮಾಡ್ಬಿಟ್ಟೀಯ ನಮಗಿಬ್ಬರಿಗೂ ಬರೋದು ತಿಂಗಳಿಗೆ ಒಂದ್ ಸಲ ಮಾತ್ರ ಸಂಬಳ' ಅಂತ ರೇಗಿಸಿದ ಪುಣ್ಯಾತ್ಮ... ಅದೇ ಹುಸಿಕೋಪದ ನಗೆ ತರಿಸಿದ .... ಪುಟ್ಟ ಪುಟ್ಟ ವಿಷಯ ಆದರೆ ಬದುಕಿನ ಅಗಾಧ ಪಾಠ. ... and I have learn a lot from him....:)))
ಹೀಗೊಂದು ಕಥೆ.... 
ಒಂದು ರೈಲಿನ ಫಸ್ಟ್ ಕ್ಲಾಸ್ ಬೋಗಿಯಲ್ಲಿ ಒಬ್ಬ ಶ್ರೀಮಂತ ತನ್ನ ಹೆಂಡತಿ ಮಗುವಿನ ಜೊತೆ ಹೋಗ್ತಾ ಇದ್ದ. ಜೊತೆಗೆ ಒಂದಿಬ್ಬರು ಆಳುಗಳು ಕೂಡ. ಸಿರಿವಂತನಾದರೂ ಸಂಯಮಿ, ವಿಚಾರವಂತ. ತನ್ನ ಸಹಪ್ರಯಾಣಿಕರ ಜೊತೆ ಹೊಂದಿಕೊಂಡು ಪ್ರಯಾಣ ಮುಂದುವರೆಸಿದ್ದ. ಸುಮಾರು ನಡು ರಾತ್ರಿ, ರೈಲು ಕಾಡುಕಣಿವೆಗಳ ನಡುವೆ ಸಾಗ್ತಾ ಇತ್ತು. ಮಗು ಎಚ್ಚರಗೊಂಡಿತು. ಶ್ರೀಮಂತನ ಹೆಂಡತಿ ಮಗುವನ್ನ ಕಿಟಕಿಯ ಬಳಿ ಕುಳಿತು ರಮಿಸುತ್ತಾ ಬಾಟಲಿಯಲ್ಲಿ ಹಾಲು ಕುಡಿಸ ತೊಡಗಿದಳು. ಕೈ ಕಾಲು ಆಡಿಸುತ್ತಾ ಹಾಲು ಕುಡಿಯುತ್ತಿದ್ದ ಮಗುವಿನ ಕೈ ತಗುಲಿ ಬಾಟಲಿ ಕಿಟಕಿಯಿಂದ ಹೊರಗೆ ಬಿದ್ಹೊಯ್ತು !! ಮಗು ಅಳೋಕೆ ಶುರುಮಾಡ್ತು!! ಶ್ರೀಮಂತ ತಕ್ಷಣ ಚೈನ್ ಎಳೆದ. ಗಾಡಿ ನಿಲ್ತು. ಅವನು ಅವನ ಆಳುಗಳು ಹಳಿಗಳ ಬಳಿ ಹಿಂದಕ್ಕೆ ಹೋಗಿ ಬಾಟಲಿ ಹುಡುಕಿ ತಂದ್ರು. ತೊಳೆದು ಬಾಟಲಿಯಲ್ಲಿ ಮಗುವಿಗೆ ಹಾಲು ಹಾಕಿ ಕೊಟ್ರು. ಅಷ್ಟರಲ್ಲಿ ಅಲ್ಲಿಗೆ ಬಂದ ರೈಲು ಅಧಿಕಾರಿ ಅನಗತ್ಯವಾಗಿ ಸಣ್ಣ ವಿಷಯಕ್ಕೆ ತೊಂದರೆ ಕೊಟ್ಟ ಎಂಬ ತಪ್ಪಿಗೆ ಒಂದಷ್ಟು ಫೈನ್ ಹಾಕಿ ದುಡ್ಡು ವಸೂಲಿ ಮಾಡಿ ಹೋದರು. ಸಹಪ್ರಯಾಣಿಕನೊಬ್ಬ ಹೇಳ್ದ 'ದುಡ್ಡಿರೋರೆ ಹೀಗೆ, ಅರ್ಥವೇ ಆಗೋದಿಲ್ಲ ಹಣದ ಮದ..ಒಂದೈವತ್ತು ರೂಪಾಯಿ ಕೂಡ ಬಾಳದ ಆ ಬಾಟ್ಲಿಗೆ ಸುಮ್ಸುಮ್ನೆ ಅಷ್ಟೊಂದೆಲ್ಲ ದಂಡ ಕಟ್ತಾರೆ. ಹೋದರೆ ಹೋಯ್ತು ಅಂತ ಸುಮ್ಮನಿದಿದ್ರೆ ಆಗ್ತಾ ಇತ್ತು' ಅಂದ. ಆ ಸಿರಿವಂತ ಒಂದು ಕಟ್ಟು ಹಣ ತೆಗೆದ ಆ ಪ್ರಯಾಣಿಕನ ಮುಂದೆ ಹಿಡಿದು 'ಸರ್, ಇದರಲ್ಲಿ ೫೦೦೦ ಇದೆ. ಹೋಗಿ ಒಂದು nipple ತಂದ್ಬಿಡಿ ಮತ್ತೆ' ಅಂದ. 'ಹಣ ಎಷ್ಟು ಹೋಯ್ತು, ಎಷ್ಟು ಬಂತು ಅನ್ನೋದು ಮುಖ್ಯವಲ್ಲ, ಆ ಹೊತ್ತಿನ ಉಪಯೋಗ ಅಷ್ಟೇ ಮುಖ್ಯ! ನನ್ನ ಮಗುವಿಗೆ ಈ ಸರಿ ರಾತ್ರಿಯಲ್ಲಿ ಈ ಕಾಡಿನ ನಡುವೆ nippleಸಿಗೋದು ಎಷ್ಟು ದುರ್ಲಭ ಅಲ್ವೇ . ಅದಕ್ಕೆ ಹಾಗೆ ಮಾಡಿದೆ .. ಹಣದ ಮದ ಅಲ್ಲ ' ಅಂದ ...
ಮೊನ್ನೆ ಅನಗತ್ಯ ಅಗತ್ಯಗಳ ವಿಷಯದ ಬಗ್ಗೆ ನಾನು ಮಂಜು ಮಾತಾಡ್ತಾ ಇದ್ದಾಗ ಮಂಜು ಹೇಳಿದ ಕಥೆ :)))
ಪುಸ್ತಕ ಮುಚ್ಚಿಟ್ಟು ಬರಬಾರದೆ ಎಂದ ಆವ.....
ಬರೆದು ಮುಗಿದ ಕೊಡಲೇ ಬಂದು ಬಿಡುವೆ
ಸ್ವಲ್ಪ ಕಾಯಬಾರದೆ ಎಂದಳು ...
ಕಾಯುವ ಕೆಲಸ ಅವನಿಗೂ ಬೇಸರವಂತೆ....
ಕಾಯದೆ ಇದ್ದರೂ ಕೆಲವರ ಕರೆದೊಯ್ಯುವ ..
ಕೆಲವರು ಕಾದು ಕುಳಿತಿದ್ದರೂ ಬರದೆ ಸತಾಯಿಸುವವ ಆವ
ನಾ ಅವನಿಗೆ ಹೆದರಲಾರೆ ಎಂದಳು ಅವಳು.....
ಪದೇ ಪದೇ ಹೊತ್ತಿಗೆ ಮುಚ್ಚಲು ಕರೆ ನೀಡುವವ ..
ಬರವಣಿಗೆ ಮುಗಿಯದೆ ಹೊತ್ತಿಗೆ ಮುಚ್ಚಲಾರಳಿವಳು ಎಂದರಿತು
ಮತ್ತೆ ಗಡುವು ನೀಡಿ ಹೋಗುತ್ತಾನೆ....
ಅವಳು ಮತ್ತೆ ಬರೆಯ ತೊಡಗುತ್ತಾಳೆ
ನಗುತ್ತಾ , ನಗಿಸುತ್ತಾ.........:)))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...