Friday 4 September 2015

ನಾವು ಈಗಿರೋ ಮನೆಗೆ ಬಂದು ೧೦ ವರ್ಷ ..ಚೆಂದದ ಪುಟ್ಟ ಮನೆ, ಚೆಂದದ ಬಡಾವಣೆ ..ಅದ್ ಹೇಗೆ ೧೦ ವರ್ಷ ಆಯ್ತೋ ಗೊತ್ತಿಲ್ಲ ಅನಿಸೋ ಹಾಗೆ . ಇರೋ ಮನೆಗಳವರೆಲ್ಲ ಮನೆಯ ಮುಂದೆ ಒಂದಷ್ಟು ಗಿಡಗಳನ್ನ ಹಾಕಿಕೊಂಡಿದ್ದಾರೆ .. ಮನೆಯ ಹತ್ತಿರ ಇರೋ ಗ್ರಾಮೀಣ ಭಾಗದಿಂದ ಹಸುಗಳನ್ನ ಮೇಯೋಕೆ ಬಿಟ್ ಬಿಡ್ತಾರೆ .. ಹಸುಗಳಿಗೆ ಊಟ ಸಿಕ್ಕರೆ ಸಾಕು ಅನ್ನೋ ಹಾಗೆ ಆಗಿರುತ್ತದೇನೋ . ಪಾಪ ಸಿಕ್ಕ ಹಸುರಿಗೆಲ್ಲ ಬಾಯಿ ಹಾಕೋ ಆಸೆ .ಮನೆಯವರಿಗೆ ತಾವು ಹಾಕಿದ ಗಿಡದ ಮೇಲೆ ಆಸೆ. ಒಂದು ದೊಡ್ಡ ದೊಣ್ಣೆ ಹಿಡಿದು ಕೆಲವೊಮ್ಮೆ ಹೆದರಿಸಿ ಕೆಲವೊಮ್ಮೆ ಹೊಡೆದು ಓಡಿಸ್ತಾರೆ . ಅದೇನ್ ಹಸುವಿನ ಯಜಮಾನನ ತಪ್ಪೋ , ಇಲ್ಲಾ ರಸ್ತೆಯಲ್ಲಿ ಗಿಡ ಹಾಕಿ ಹಸುವಿಗೆ ಹೊಡೆಯೋರ ತಪ್ಪೋ , ಇಲ್ಲ ಏನೂ ಗೊತ್ತಿಲ್ಲದೇ ಹಸುರು ಕಂಡ ಕೂಡಲೇ ಬಾಯೋ ಹಾಕೋ ಹಸುವಿನ ತಪ್ಪೋ, ಗೊತ್ತಾಗೋದಿಲ್ಲ .. ನಾನೂ ಒಂದಷ್ಟು ಹೂವಿನ ಗಿಡ ಹಾಕಿದ್ದೀನಿ , ನೀರೂ ಹಾಕ್ತೀನಿ , ಆದ್ರೆ ಹಸು ಬಂದ್ರೆ ನಮ್ಮ ಮನೆಯಲ್ಲಿ ಯಾರೂ ಓಡಿಸೋದಿಲ್ಲ . ತಿಂದರೆ ತಿನ್ನಲಿ ಅನ್ಕೊಂಡ್ ಸುಮ್ಮನಾಗ್ತೀವಿ. ಈ ಮನೆಗೆ ಬಂದ ಹೊಸದರಲ್ಲಿ ಬಕೆಟ್ ಅಲ್ಲಿ ನೀರು ಇಡ್ತಾ ಇದ್ವಿ . ಅಕ್ಕಪಕ್ಕದವರು ಬೈಕೊಳ್ತಾ ಇದ್ರು . ಈಗ ಬೇಸಿಗೆಯಲ್ಲಿ ಬಿಟ್ಟು ಬೇರೆ ಸಮಯದಲ್ಲಿ ನೀರಿಡೋದಿಲ್ಲ.. ಇದು ಪೀಠಿಕೆ
ವಿಷ್ಯ ಏನಪ್ಪಾ ಅಂದ್ರೆ , ಶುಕ್ರವಾರ ಪೂಜೆಗೆ ತಂದ ಹಣ್ಣೆಲ್ಲಾ ಕಳಿತಿತ್ತು ಅಂತ ಬೆಳಿಗ್ಗೆ ಬೆಳಿಗ್ಗೆ ಎಂದಿನಂತೆ ಬಂದ ಹಸುಗೆ ಕೊಡೋಕೆ ಹೋದೆ . ಆಗಷ್ಟೇ ಮುಂದಿನ ಮನೆಯಾತ ದೊಡ್ಡ ದೊಣ್ಣೆಯಿಂದ ಹೂಡೆದಿದ್ರು . ಆ ಕಡೆ ಮನೆಯಿಂದ ಮತ್ತೊಬ್ಬರು ಓಡಿಸ್ತಾ ಇದ್ರು .. ದಿನಾ ಕೈಯಿಂದಲೇ ಹಣ್ಣು ತಿಂದು ಹೋಗ್ತಾ ಇದ್ದ ಹಸು ಈವತ್ತು ಇನ್ನೇನು ತಿವಿದೆ ಬಿಟ್ಟಿತು ಅನ್ನೋ ಹಾಗೆ ಬೆದರಿಹೋಯ್ತು . ಹಣ್ಣು ಅಲ್ಲೇ ಹಾಕಿ ಒಳಗೆ ಬಂದೆ. ಮತ್ತೆ ಮಂಜು ಹೇಳಿದ್ದು 'ಬುದ್ದಿ ಇರೋ ಮನುಷ್ಯನೇ ಎಷ್ಟೋ ಸಮಯದಲ್ಲಿ ತಿಳಿದೂತಿಳಿದೂ ಅಕಾರಣವಾಗಿ ನೋಯಿಸ್ತಾನೆ . ಇನ್ನು ಬುದ್ದಿ ಇರದ ಪ್ರಾಣಿ ಬೆದರಿ ತನ್ನ ರಕ್ಷಣೆಗೆ ಅಂತ ಹಾಗೆ ಆಡಿದೆ, ಹೆದರಕೊ ಬೇಡ .. ಗೊತ್ತಾಯ್ತಲ್ಲ ಇನ್ ಮೇಲೆ ಹಣ್ಣು ಇಟ್ಟು ಬಂದ್ ಬಿಡು ಅದೇ ತಿನ್ಕೊಂಡ್ ಹೋಗ್ಲಿ, etc, etc '...
ನಿಜವೇನೋ .. ಬುದ್ದಿ ಇರೋ ಮನುಷ್ಯನ ಎಷ್ಟೋ ತಪ್ಪುಗಳನ್ನ ಕ್ಷಮಿಸೋ ನಾವು ಪ್ರಾಣಿಗಳ ಮೇಲೆ ಪ್ರತಾಪ ತೋರಿಸೋದು ಅದೆಷ್ಟ್ ಸರಿನೋ ಗೊತ್ತಿಲ್ಲ ...ಮನಸ್ಸು ಮೋಡ ಕವಿದ ಬಾನು ..

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...