Monday 27 July 2015

ನನ್ನ ಮೊಬೈಲ್ ಮಕ್ಕಳು ತೆಗೆದುಕೊಂಡು pattern lock ಜಾಮ್ ಮಾಡಿ ಬಿಟ್ಟಿದ್ರು. ಮಗ ಬೈದ 'ಒಂದು ಮೊಬೈಲ್ ಇಟ್ಕೊಳ್ಳೋಕೆ ಬರೋಲ್ಲ ಏನಮ್ಮ್ಮ ...." ಸುಮ್ಮನೆ ಕೇಳಿಸಿಕೊಂಡೆ , ಅವನೇ ಸರಿ ಮಾಡಿ ಕೊಟ್ಟ.... 
ಮೊದಲೆಲ್ಲ ಒಂದು ಸಣ್ಣ ಕಾರಣಕ್ಕೆ ಸಿಟ್ಟುಗೊಳ್ಳುತ್ತಿದ್ದ ನಾನು ಈಗ 'ಯಾರಾದ್ರೂ ಸರಿ ಮಾಡಿಕೊಡ್ರೋ' ಅಂದೆನೇ ಹೊರತು ಹಾಗೆ ಮಾಡಿದ್ದು ಯಾರು ಅಂತಲೇ ಆಗಲಿ , ಯಾಕೆ ಅಂತಲೇ ಆಗಲಿ ಕೇಳಲಿಲ್ಲ ... ನನಗೇ ಆಶ್ಚರ್ಯ ಬಹುಶಃ,ನನ್ನ ಮನಸ್ಸು ತುಂಬಾ ರೋಸಿರಬೇಕು... ಇಲ್ಲಾ ತುಂಬಾ ಸಮಾಧಾನ ಕಲಿತಿರಬೇಕೆನೊ ...... ಇಲ್ಲಾ ಪ್ರಾಯಶಃ ನನ್ನ ಇಮೇಜ್ ಉಳಿಸಿಕೊಳ್ಳೋ ಯತ್ನವಾ?.... ಇಲ್ಲಾ ಮತ್ತೊಬ್ಬರ (ಮೈದುನ) ಮನೆಯಲ್ಲಿ ಅನಾವಶ್ಯಕ ಗೊಂದಲ ಏಕೆ ಎಂದೋ ..ಇಲ್ಲಾ ವಯಸ್ಸಿನ ಪ್ರಭಾವವ ... ಅಥವ 'ಏನ್ ಮಹಾ ಆಯ್ತು ಬಿಡು ಅನ್ನೋ ' ಮನೋಭಾವವ ??? .......ಗೊತ್ತಿಲ್ಲ ... ಆದರೂ ಅದೇಕೋ ಮನಸ್ಸು ಶಾಂತ ... ಸೋತ ಸೋಲು ಗೆದ್ದ ಗೆಲುವು ಎರಡೂ ನನ್ನದಲ್ಲದ ಹಾಗೆ........ ಮಳೆಯ ನಂತರದ ಆಗಸದ ಹಾಗೆ ......

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...