Saturday 16 April 2016

'ಇನ್ನೇನು ಅಷ್ಟೆಲ್ಲಾ ಕಷ್ಟ ಪಟ್ಟು ಅಷ್ಟು ದೂರದಿಂದ ಬಂದ್ರು ಸಿಕ್ಕೋದು ಒಂದು ಕಪ್ಪು ಚಹಾ ನಿನ್ನ ಅರ್ಧ ಘಂಟೆ.....' ಕೋಪಗೊಂಡ ಗೆಳೆಯ 
'ಆ ಅರ್ಧ ಘಂಟೆ ನನ್ನ ಬದುಕಿನ ಸುಂದರ ಕ್ಷಣಗಳು , ನಿನ್ನ ಕೋಪ , ನಿನ್ನ ಪ್ರೀತಿಯಷ್ಟೇ ಇಷ್ಟ ನನಗೆ , ಮತ್ಯಾವಾಗ ಬರ್ತೀಯಾ ?!!??' 
'ನಾ ಬರೋದಿಲ್ಲ'
'ಹೌದಾ ......!!!'
'..."
ಈ ಜಗಳ ಅವನು ಬಂದು ಹೋದಾಗೆಲ್ಲ ನಿರಂತರ ...ಅವನು ಬರುವುದ ನಿಲ್ಲಿಸಲಾರ... ಅದೆಷ್ಟೋ ವರುಷಗಳ ಮೊಹರು ಇದೆ ಅವರ ಗೆಳೆತನದ ಮೇಲೆ...... ಗೆಳೆತನ ಅಂದ್ರೆ ಹಾಗೆ ........ ಇದ್ದೂ ಇಲ್ಲದ ಹಾಗೆ ಇಲ್ಲದೆಯೂ ಇದ್ದ ಹಾಗೆ .............
ನಿನ್ನೂರ 
ಮಲ್ಲಿಗೆಯ ಮಾಲೆ 
ಇಲ್ಲಿ ಕಂಪ ಬೀರುವಾಗ 
ಅದೇಕೋ 
ಕಾವೇರಿ ನೆನಪಾಗುತ್ತಾಳೆ ಗೆಳತಿ 
ಅಲ್ಲೆಲ್ಲೋ ಹುಟ್ಟಿ
ಮತ್ತೆಲ್ಲೋ ಹರಿದು
ಅಲ್ಲೆಲ್ಲಾ ಹಸಿರ ಪಸರಿಸಿ
ನಗುವ ಚೆಲ್ಲಿ ಸಾಗರನ ಸೇರುವಾಗ
ಹೆಣ್ಣ ನೆನಪಿಸುತ್ತಾಳೆ ಗೆಳತಿ .......
ಎಲ್ಲಿಯ ನಿನ್ನೂರ ಮಲ್ಲಿಗೆ , ಎಲ್ಲಿಯ ಕಾವೇರಿ , ಎಲ್ಲಿಯ ಹೆಣ್ಣು ಎನಿಸಿ
ನನ್ನದು ಹುಚ್ಚುತನ ಎನಿಸಿ ನಸುನಗೆ ಉಕ್ಕುವಾಗ ..........
ನಿನ್ನೂರ ಮಲ್ಲಿಗೆ ಮತ್ತದೇ ನಗೆಯ ಬೀರಿ
ಎಲ್ಲಾ ಒಂದೇ ಎನ್ನುವಂತೆನಿಸುತ್ತದೆ ಗೆಳತಿ ...
ನಿನ್ನೂರ ಮಲ್ಲೆ, ನನ್ನೂರ ಕಾವೇರಿ,
ನೀನೂ ನಾನೂ ,
ಮತ್ತೆಲ್ಲಾ ಮರೆತು ನಗುವ ಹೆಣ್ಣು ಜೀವಗಳು ......
ಅದೇ ಕಂಪಲ್ಲವೇ ಗೆಳತಿ ............. :)))
'ಇವನು ನನ್ನ ಫಸ್ಟ್ ಫ್ರೆಂಡ್ ಕಣ್ ಮಗ ಮತ್ತು ಬೆಸ್ಟ್ ಫ್ರೆಂಡ್ ಕೂಡ '.... ಆ ಕಿವಿಯಿಂದ ಈ ಕಿವಿಯವರೆಗೆ ನಗುತ್ತ ಮಕ್ಕಳ ಹತ್ತಿರ ಹೇಳಿದೆ .... ಅವನೂ ಅಷ್ಟೇ ಸಂತಸದಿಂದ ನಕ್ಕ.
ಕೈ ಹಿಡಿದು ಕೊಂಡ್ವಿ , ಹರಟಿದ್ವಿ , ಮಾತಾಡ್ತಾ ಮಾತಾಡ್ತಾ ಮಕ್ಕಳಿಗೆ ಹೇಳಿದೆ 'ಅಪ್ಪಂಗೆ (ಮಂಜುಗೆ) ಎರಡನೇ ಸಾರಿ ಕಾಲು ಏಟಾದಾಗ ಇವನು ಅವತ್ತು ಆಂಬುಲೆನ್ಸ್ ಕಳಿಸದೆ ಇದಿದ್ದರೆ , ನೆನಪಿಸಿಕೊಳ್ಳೋದಕ್ಕೂ ಭಯ ಆಗುತ್ತೆ . ಅಂದಿನ ನೆನಪಾದಾಗ ನಿನ್ನದೇ ನೆನಪು ಕಣೋ ಪ್ರತಾಪ್... ಹೇಗೆ ಮರೆಯೋಕೆ ಆಗುತ್ತೆ ನೀನು ಮಾಡಿದ ಸಹಾಯ 'ಅಂದೆ . (ಆಗ ಕಾವೇರಿ ಗಲಾಟೆ ಸಮಯ. ಮಂಜುಗೆ ಎರಡನೇ ಸಾರಿ ಅದೇ ಕಾಲಿಗೆ ಏಟಾದಾಗ ಇಲ್ಲಿನ ಡಾಕ್ಟರ 'ಬೆಂಗಳೂರಿನ Manipal northsideಗೆ ಹೊರಟುಬಿಡಿ. ಹೇಗೂ ಅವರೇ ಅಲ್ವ ನಿಮ್ಮನ್ನ ಮೊದಲು ನೋಡಿದ್ದು . ಅದೇ best 'ಅಂದ್ಬಿಟ್ರು ..ಆಂಬುಲೆನ್ಸ್ಗಳು ಸಿಗದೇ ಅಂದಿನ ಪರದಾಟ ನೆನೆದಾಗ ಈಗಲೂ ಭಯ ಅನಿಸುತ್ತದೆ. ಖಾಸಗಿ ಗಾಡಿಗಳನ್ನ ಬಿಡುತ್ತಲೇ ಇರಲಿಲ್ಲ. ಬಸ್ ಇಲ್ಲ, ಟ್ರೈನ್ ಇಲ್ಲ, ಮಾಡಿದ ಫೋನ್ಗಳಿಗೆ ಲೆಕ್ಕವೇ ಇಲ್ಲ!!! ಅವತ್ತೇ ನನಗೆ ತಿಳಿದಿದ್ದು ದುಡ್ಡು ಅನ್ನೋದು ಎಷ್ಟು ಅನುಪಯುಕ್ತ ಆಗಿಬಿಡಬಲ್ಲದು ಅಂತ )
ಗೆಳೆಯ ನುಡಿದ, 'ಒಯ್ ನೀನೊಂದು, ನನ್ನ ನೆನಪಿಸಿಕೊಳ್ಳೋಕೆ , ಮಕ್ಕಳಿಗೆ ಹೇಳೋಕೆ ಇದೇ ವಿಷ್ಯನಾ ನಿನಗೆ ಸಿಗೋದು?? ನೀನು ತಂದು ಕೊಡುತ್ತಿದ್ದ ಕೊಬ್ಬರಿ ಮಿಠಾಯಿ , ನಾನು ತಂದುಕೊಡುತ್ತಿದ್ದ ಆ binaca tooth paste ಒಳಗಿನ ಗೊಂಬೆ, ಅಮ್ಮನ ಮಗ್ಗುಲಲ್ಲಿ ಇಬ್ಬರೂ ಮಲಗಿ ಕಥೆ ಕೇಳಿದ್ದು , ನಿನ್ನ ಮೊಗ್ಗಿನ ಜಡೆ ಎಳೆದು ಜಡೆ ಕೈಗೆ ಬಂದಾಗ ನೀನು ಅತ್ತಿದ್ದು, ನಾನು ಜಡೆನ ಅಂಟಿಸ್ತೀನಿ ಅಮ್ಮನಿಗೆ ಹೇಳಬೇಡ ಅಂತ ಗೊಗರೆದಿದ್ದು , ಇವೆಲ್ಲ ನೆನಪಿಸಿಕೊಳ್ಳೋದು ಬಿಟ್ಟು ಏನೇನೋ ಹೇಳ್ತಿಯ ನೀನು....ಬದಲಾಗೋದಿಲ್ಲ ಬಿಡು ನೀನು' ಅಂದ .
ನಿಜ ಗೆಳೆಯ, ಅಷ್ಟೆಲ್ಲಾ ಪ್ರೀತಿ, ನಂಬಿಕೆ, ವಿಶ್ವಾಸದ ಗೆಳೆತನದ ನಡುವೆ ಇದೂ ನೆನಪಿಸಿಕೊಳ್ಳದೆ ಹೋದರೆ, ನಾನು 'human' ಅನ್ನಿಸಿಕೊಳ್ಳೋದಿಲ್ಲಾ ಅಲ್ವೇ.!!! ಏನೇ ಹೇಳು ,ನಿನ್ನನ್ನು ಹೀಗೂ ನೆನಪಿಸಿಕೊಂಡರೆ ನನಗೆ ಖುಷಿ .. .ನಿನ್ನಂತವರ ಸಂಖ್ಯೆ ಸಹಸ್ರವಾಗಲಿ ....:)))
ಅದೊಂದು ನದಿ . ನದಿಯ ಎರಡೂ ಬದಿಯಲ್ಲಿ ಪುಟ್ಟ ಹಳ್ಳಿಗಳು. ಆ ಹಳ್ಳಿಗಳ ಜನಗಳ ಜೀವಾಳ ಆ ನದಿ. ಬದುಕು ಹೀಗೆ ಸಾಗ್ತಾ ಇತ್ತು...
ಎರಡೂ ಹಳ್ಳಿಯ ಇಬ್ಬರು ಹೆಣ್ಣು ಮಕ್ಕಳು ಒಂದು ನಿರ್ದಿಷ್ಟ ಸಮಯಕ್ಕೆ ನದಿಯ ತಟದಲ್ಲಿ ಕೂರ್ತ ಇದ್ರು. ಒಬ್ಬ ಹೆಣ್ಣು ಮಗಳು ನಸುನಗುತ್ತಾ ಕಾಲುಗಳನ್ನ ನೀರಲ್ಲಿ ಇಳಿಬಿಟ್ಟು ಏನೋ ಮಾತಾಡುತ್ತ ಇದ್ರೆ, ಇನ್ನೊಬ್ಬಳು ಹಾಗೆ ಮೌನವಾಗಿ ನದಿಯ ನೋಡುತ್ತಾ ಕಾಲುಗಳನ್ನ ನೀರಲ್ಲಿ ಇಳಿಬಿಟ್ಟು ಕೂರ್ತಾ ಇದ್ಲು, ಮಾತು ಇಲ್ಲ ನಗುವೂ ಇಲ್ಲ....
ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ಇದ್ರು , ಸ್ವಲ್ಪ ಹೊತ್ತು ಕೂತು, ಮತ್ತೆ ಅವರಷ್ಟಕ್ಕೆ ಅವರು ಹಿಂದಕ್ಕೆ ಹೋಗ್ತಾ ಇದ್ರು. ಇದು ದಿನ ನಿತ್ಯದ ಕಥೆಯಾಗಿತ್ತು. ......
ಒಂದ್ ದಿನ ಇಬ್ಬರಿಗೂ ಮಾತಾಡಬೇಕೆನಿಸಿತು .
ಎಂದೂ ನಗದಾಕೆ ಮತ್ತೊಬ್ಬಳನ್ನ ಕೇಳಿದ್ಲು 'ಅಕ್ಕ ದಿನಾ ಬರ್ತೀಯಲ್ಲ ,ಈ ನದಿಯ ಹತ್ರ ಏನ್ ಮಾತಾಡ್ತೀಯ ?' ಅವಳು ಹೇಳಿದಳು, 'ನನ್ನ ನಲ್ಲ ಕಿವುಡ ಹಾಗು ಮೂಕ ಗೆಳತಿ ' .
ಇವಳಿಗೆ ಆಶ್ಚರ್ಯ , 'ಮತ್ತೆ ನಿನ್ನ ಪ್ರೀತಿ ಹೀಗೆ ಹೇಳ್ತೀಯ'.
"ಪ್ರೀತಿಗೆ ಮಾತೇ ಬೇಕಿಲ್ಲ. ನಾವಿಬ್ಬರೂ ಹಾಗೆ ಒಬ್ಬರನ್ನೊಬ್ಬರು ತುಂಬಾನೇ ಪ್ರೀತಿಸ್ತೀವಿ . ಹೇಳದೆ ಎಲ್ಲವನ್ನು ಹೇಳಿಬಿಡ್ತಾನೆ ಅವನು. ನಾನೂ ಹಾಗೆ. ಆದರೂ , ಹೇಳದೆ ಉಳಿದ ಎಷ್ಟೂ ಮಾತುಗಳನ್ನ ಹೇಳಿಯೇ ತೀರಬೇಕು ಅನಿಸುತ್ತದೆ ಗೆಳತಿ . ಅದಕ್ಕೆ ಇಲ್ಲಿ ಬರ್ತಿನಿ. ಇವಳು, ಈ ನದಿಯ, ಹತ್ರ ಎಲ್ಲಾ ಹೇಳ್ತೀನಿ, ಅವಳೂ ಎಲ್ಲಾ ಕೇಳ್ತಾಳೆ, ಕೇಳಿದ್ದರ ಕುರುಹಾಗಿ ನೀರಲ್ಲಿ ಇಳಿಬಿಟ್ಟ ಪಾದಗಳಿಗೆ ಅಲೆಗಳಿಂದ ಸಾಂತ್ವಾನ ಹೇಳಿಸುತ್ತಾಳೆ , ನಾನು ಎಲ್ಲ ಹೇಳಿಕೊಂಡ ಸಮಾಧಾನದಿಂದ ನಗುತ್ತ ಹೋಗುತ್ತೇನೆ " ಅಂದ್ಲು .
'ಸರಿ ಅಕ್ಕ, ನೀನು ಯಾಕೆ ಮೌನಿ? ನೀ ಇಲ್ಲಿ ಬಂದು ಕೂರೋದು ಯಾಕೆ?' ಅಂದ್ಲು.
ಮೊದಲ ಬಾರಿ ಆ ಮೌನಿಯ ಮೊಗದಲ್ಲಿ ನಗು ಕಾಣಿಸಿತು.
"ನನ್ನ ನಲ್ಲ ಕೂಡ ಕಿವುಡ ಮೂಕನೆ ಕಣೆ ಆದರೆ ದೈಹಿಕವಾಗಿ ಅಲ್ಲ, ಭಾವನಾತ್ಮಕವಾಗಿ. ಅವನು ಎಂದೂ ನನ್ನ ಪ್ರೀತಿ ಬಗ್ಗೆ ಕೇಳೋದಿಲ್ಲ, ತನ್ನ ಪ್ರೀತಿಯ ಬಗ್ಗೆ ಹೇಳೋದಿಲ್ಲ . ಬದುಕಿನ ಅಗತ್ಯಗಳನ್ನೆಲ್ಲಾ ನೀಡುವ ಅವನು ನನ್ನ ಭಾವನೆಗಳ ಅಗತ್ಯಗಳಿಗೆ ಕಿವಿಗೊಡಲಾರ . ಅದಕ್ಕೆ ಇಲ್ಲಿ ಬಂದು ಇವಳ ಹತ್ರ ಎಲ್ಲಾ ಹೇಳ್ತೀನಿ . ನೀನು ಹೇಳೋಹಾಗೆ ಇವಳು ಎಲ್ಲಾ ಕೇಳಿ ನನ್ನ ಜೊತೆ ತನ್ನ ಕಣ್ಣಿ ಹರಿಸುತ್ತಾಳೆ, ನನ್ನ ಜೊತೆ ನಗ್ತಾಳೆ , ನಾನು ಯಾವತ್ತು ಒಂಟಿ, ಪ್ರೀತಿ ಸಿಗದವಳು ಅಂತ ಅನಿಸೋಕೆ ಬಿಡೋದೇ ಇಲ್ಲ ಅವಳು . ಇವಳು ಕಿವುಡಿ ಅಲ್ಲ ಕಣೆ " ಅಂದ್ಲು ........
ನದಿ ಹರಿಯುತ್ತಲೇ ಇತ್ತು, ಇವರ ನಗು ಅಳು ಹೊತ್ತು.......
(ನನ್ನ ಗೆಳತಿಯೊಬ್ಬಳು ಕಳಿಸಿದ ಒಂದು ಇಂಗ್ಲಿಷ್ ಕಥೆಯ ಸಂಕ್ಷಿಪ್ತಾನುವಾದ ಇದು. ಯಾಕೋ ಹಂಚಿಕೊಳ್ಳಲೇ ಬೇಕು ಅನಿಸಿತು)

Tuesday 12 April 2016

'ಇವತ್ತು ರಜ ಹಾಕ್ತಾ ಇಲ್ವಾ ' ಗಂಡ ಎಂದಿನಂತೆ ಎದ್ದು ತಯಾರಾಗುತ್ತಿದದ್ದನ್ನ ನೋಡಿ ಮುಖ ಸಪ್ಪೆ ಆಗಿತ್ತು 'ಹ್ಞೂ ಮತ್ತೆ ನನಗೂ ವಯಸಾಯ್ತಲ್ಲ .. ಈಗೆಲ್ಲ ರಜ ಯಾಕೆ ಹಾಕ್ತೀಯ ಹೇಳು .. ನಿನಗೆ ನನ್ನ ಕಂಡ್ರೆ ಇಷ್ಟಾನೇ ಇಲ್ಲಾ' ........ etc, etc ...... ' ಪುಣ್ಯಾತ್ಮ ಎಂದಿನಂತೆ ಅದೇ ನಗು ಮುಖದ ಗಂಡ ...'ಒಂದ್ ನಿಮಿಷದಲ್ಲಿ ಅದೆಷ್ಟು ಯೋಚಿಸುತ್ತೆ ನಿನ್ನ ಪುಟ್ಟ ಮನಸ್ಸು ಮಹರಾಯ್ತಿ .......ನಿಮ್ಮ ಅಮ್ಮ ಬರ್ತಾರೆ, ನಿನಗೆ ಒಂದಷ್ಟು ಫೋನ್ ಬರ್ತಾ ಇರುತ್ತೆ, ನೀ ನನ್ನ ಜೊತೆ ಇದ್ರೆ ಫೋನ್ ಬಂದಾಗೆಲ್ಲ ನಿನಗೆ ಕಂಫರ್ಟಬಲ್ ಅನಿಸೊದಿಲ್ಲ ಸುನಿ ... ಗಂಡ ರಜ ಹಾಕಿಕೊಂಡು ಇದ್ದಾನೆ .ಅವನಿಗೆ ನಾ ನ್ಯಾಯ ಒದಗಿಸಿಲ್ಲ ಅನ್ನೋ ಫೀಲ್ ನಿನಗೆ ಬರ್ತಾ ಇರುತ್ತೆ ..ಈ ಕಡೆ ಆ ಫೋನ್ ಕೂಡ ಸರಿಯಾಗಿ ಎಂಜಾಯ್ ಮಾಡೋದಿಲ್ಲ ... ನೀ ಹಾಗೆ ಅಂತ ನನಗೆ ಗೊತ್ತು ...... ಅದಕ್ಕೆ ಆರಾಮವಾಗಿ ಇರು... ಒಂದು ದಿನ ಹೆಚ್ಚಿಸಿ ಹುಟ್ಟಿದ ದಿನ ಮಾಡಿದರೆ ಆಯಸ್ಸು ಜಾಸ್ತಿ ಅಂತೆ ... ' ಅಂತ ನಕ್ಕ ...ಅಷ್ಟಿಲ್ಲದೆ ಎಲ್ಲರಂತವನಲ್ಲ ನನ ನಲ್ಲ ಅಂತರೆಯೇ ..........:)))))Life is just understanding......alve
ಮೊನ್ನೆ ರಾತ್ರಿ ಗಂಡ ಮಗಳ ಹಾರೈಕೆಯಿಂದ ಮೆಸೇಜ್ ಗಳಿಂದ ಶುರುವಾದ ಹಾರೈಕೆಗಳು ಹೊಟ್ಟೆ ತುಂಬುವಷ್ಟಾಯ್ತು.. .ಗಂಡ ನೀ ನಿನ್ನ ಕೆಲ್ಸ ಮಾಡಿಕೋ , ನಾನೂ ಈವತ್ತು ಡ್ಯೂಟಿ ಹೋಗ್ತೀನಿ , ಇಲ್ಲದೆ ಇದ್ರೆ ನಿನಗೂ ನಿನ್ನ ಫ್ರೆಂಡ್ಸ್ ಜೊತೆ ಮಾತಾಡೋಕೆ comfortable ಆಗಿರೋಲ್ಲ, ನನಗೂ ಕಷ್ಟ ಅನಿಸುತ್ತೆ ' ಅಂತ ಹೊರಟಾಗ ಸಣ್ಣ ಸಣ್ಣ ಅರ್ಥ ಮಾಡಿಕೊಳ್ಳುವಿಕೆ ಬದುಕಲ್ಲವೇ ಅನಿಸಿತು..ಅತ್ತೆ, ಅಮ್ಮ, ತಮ್ಮ, ಮಕ್ಕಳು, ಗೆಳೆಯಗೆಳತಿಯರು, ಸೋದರ ಮಾವ, ಮಕ್ಕಳ ಗೆಳೆಯ ಗೆಳತಿಯರು, ಫೇಸ್ಬುಕ್ ಹಿರಿಯರು, ಫೇಸ್ಬುಕ್ ಆಚೆಯ ಗೆಳೆಯರು, ಅದೆಷ್ಟು ಜನರು ನನ್ನ ಜೊತೆ :)))... ಅತ್ತೆ ಕರೆ ಮಾಡಿ' ಹುಟ್ಟುಹಬ್ಬದ ಶುಭಾಶಯಗಳು ಮಗ , ಎರಡು ವರ್ಷ ಅವನ ಜೊತೆ ಜಗಳ ಆಡಿ ಮಾತಾಡಿಲ್ಲ ಅಂದ್ರೆ ನಿನ್ನ ಬರ್ತ್ಡೇ ನೆನಪಲ್ಲಿ ಇಲ್ಲ ಅಂದ್ ಕೊಂಡ್ಯ .... ' ಅಂದಾಗ , ಸೋದರಮಾವ 'ರವೆ ಉಂಡೆ ಕಳಿಸ್ತಿನಿ ಚಿನ್ನಕ್ಕ 'ಅಂದಾಗ , ಅಮ್ಮ 'ನಿನ್ ತಮ್ಮ ಇಲ್ಲ , ನೀ ಬರಲ್ಲ ಅಂದ್ರೆ ನಾನೇ ಬಸ್ ಅಲ್ಲಿ ಬಂದ್ ಹೋಗ್ತೀನಿ ಮಗ ' ಅಂದಾಗ , ನನಗೆ ಈಗ ಇವರೆಲ್ಲರ ತೊಡೆಯ ಮೇಲೆ ತಲೆಯಿಟ್ಟ ನೆನಪು ... ಎಲ್ಲರ ವಿಷೆಸ್ ಬಂದರೂ, ನನ್ನ ಮಗ ನನಗೆ ವಿಶ್ ಮಾಡಲೇ ಇಲ್ಲ ಅನ್ನೋ ನೋವು.. ಮೊನ್ನೆ ಬೈದಿದ್ದೆ ಅನ್ನೋ ಸಿಟ್ಟಿಗೇನೋ ಬೆಳಿಗ್ಗೆ ತಿಂಡಿ ತಿನ್ನುವಾಗ ಕೂಡ ಒಂದೇ ಉಸಿರಿಗೆ ತಿಂದು , ಬೈದಿದ್ದ ಸಿಟ್ಟಿಗೆ ಡ್ರಾಪ್ ಕೂಡ ಮಾಡಿಸಿಕೊಳ್ಳದೆ ಹೊರಟಾಗ ನೋವಾಗಿದ್ದು ನಿಜ ,.. ಗಂಡ ಬಂದಾಗ 'ಕಾರ್ತಿ ನನಗೆ ವಿಶ್ ಮಾಡ್ಲೇ ಇಲ್ಲಾ ಮಂಜು, ಇನ್ ಅವನು ವಿಶ್ ಮಾಡಿದ್ರೆ ಮಾಡದೆ ಇದ್ರೆ ಕೂಡ ನಂಗೆ ಏನೂ ಅನಿಸೊದಿಲ್ಲ ಬಿಡು ' ಅಂತ ಕಣ್ಣು ತುಂಬಿಕೊಂಡಾಗ , ಮಗಳು 'ಇದು ಇನ್ನ ಚೈಲ್ಡ್ ಕಣಪ್ಪ, ' ಅಂದ್ರೆ ..ಗಂಡ ಬೈದ 'ಸ್ವಲ್ಪ ಸೆನ್ಸಿಟಿವಿಟಿ ಕಡಿಮೆ ಮಾಡ್ಕೋ , ಸಣ್ಣ ಸಣ್ಣ ವಿಷ್ಯಕ್ಕೆ ಯಾಕೆ ಹೀಗೆ, ಬಂದ್ ಹೇಳ್ತಾನೆ ಬಿಡು , ಅವನು ನನ್ ಮಗ' ಅಂದ .. ಸಂಜೆ ಅತ್ತೆ ಮನೆ, ಅಮ್ಮನ ಮನೆ, ದೇವಸ್ತಾನ ಎಲ್ಲ ಸುತ್ತಿ ಬರುವಾಗ ಮಗ ಎರಡು ಸಾರಿ ಫೋನ್ ಮಾಡಿದ್ದ 'ಎಲ್ಲಿದ್ದಿ ಅಮ್ಮ, ಮನೆಯಲ್ಲಿ ಏನೂ ಮಾಡಿ ಇಟ್ಟಿಲ್ಲ'ಅಂದಾಗ, ಮನಸ್ಸಿಗೆ ಮತ್ತೆ ಒಂದ್ ತರ .. ಪುಟ್ಟಿಗೆ ಅವನಿಗೆ ಎರಡು ಚಪಾತಿ ಮಾಡಿ ಕೊಡೋಕೆ ಹೇಳಿ ಫೋನ್ ಮಾಡಿದೆ ... ಮನೆಗೆ ಬಂದಾಗ ; ಶುಕ್ರವಾರ ಬಾಗಿಲು ಹಾಕಿದಂತೆ ಇದೆ ದೀಪ ಹಚ್ಚಿದಂತೆ ಕಾಣಲಿಲ್ಲ .. ಯಾಕೋ ಸೋತಂತೆ .. ಗಂಡ ಬಾಗಿಲು ತಳ್ಳಿದಾಗ ಸಣ್ಣಗೆ ಬೆಳಕಲ್ಲಿ ಸಣ್ಣಗೆ ಹ್ಯಾಪಿ ಬರ್ತ್ಡೇ ಹಾಡು , ಒಂದು ಪುಟ್ಟ ಕೇಕ್ ಕನ್ನಡ ಅಕ್ಷರಗಳಲ್ಲಿ ಬರೆದದ್ದು ... 'maa, how can i forget yr b'day maa? ಆ ಬಡ್ಡಿಮಗ ರಾತ್ರಿ ಕೇಕ್ ಕೊಡಲಿಲ್ಲ ಬೆಳಿಗ್ಗೆ ನಿನ್ ಮುಂದೆ ಇದ್ರೆ ,ನಿನ್ ಜೊತೆ ಮಾತಾಡಿದ್ರೆ ,ನಿನ್ ಹತ್ರ ಡ್ರಾಪ್ ತಗೊಂಡ್ರೆ ಎಲ್ಲಿ ವಿಷೆಸ್ ಹೇಳಿಬಿಡ್ತಿನೋ ಅಂತ ಹಾಗೆ ಹೋದೆ ....etc, etc. '.. ಆಮೇಲೆ ಇದ್ದಿದ್ದೆ ನಾ ಅತ್ತಿದ್ದು ಅವನು ತಬ್ಬಿ ಸಮಾಧಾನ ಮಾಡಿದ್ದು ಆಮೇಲೆ ಪಾರ್ಟಿ ನೆಪದಲ್ಲಿ ಅದೆಷ್ಟೋ ದುಡ್ಡು ಖರ್ಚು ಮಾಡಿಸಿದ್ದು .... .... ಇಷ್ಟೆಲ್ಲಾ ಆದ ಮೇಲೆ ಅಪ್ಪ ಮಗಳ ಡೈಲಾಗ್ 'ಚೆನ್ನಾಗಿ ನಾಟಕ ಆಡಿತೀರ ಅಮ್ಮ ಮಗ ........ ':))) Don kno how long Bt stil, i remain blesed and loved.. thanks again :)))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...