Thursday 7 April 2011




ಜೀವಜಲ

ಅಂಗಳದಿ ಸುರಿದ ಬೆಳದಿಂಗಳು ........
ತಿಂಗಳನ ಬೆಳಕಿನಲ್ಲಿ ತುಂತುರು ಹನಿಗಳು .....
ಮನದ ತುಂಬಾ ಪ್ರೀತಿಯ ಶರಧಿ ಉಕ್ಕಿಸುತ್ತದೆ ಗೆಳೆಯ.......
ಇವನಾರು............ಇದೇಕೆ ಈ ಪ್ರೀತಿ ....
ಮೊದಲ ನೋಟದ ಪ್ರೀತಿಯನ್ನಲು.....ನಿನ್ನ ರೂಪ ಕಣ್ಣ ತುಂಬಾ ತುಂಬಿಕೊಂದಿಲ್ಲ ....
ಮೋಹವೆನ್ನಲು ..ನಿನ್ನ ಬೆರಳ ತುದಿಯ ಸ್ಪರ್ಶ ಸುಖದ ಅರಿವಿಲ್ಲ....
ಬಂಧುತ್ವವವೇ........ಬಂಧನವೇ ಇಲ್ಲ......
ಜನುಮಗಳ ಅನುಬಂಧವೆನಲು .....ಜನ್ಮದ ತಿಳಿವಿಲ್ಲ......
ಮತ್ತೇಕೀ ವ್ಯಾಮೋಹ...ಮತ್ತೇಕೀ ಸೆಳೆತ.........
ವೇಣು ವಾದನಕ್ಕೆ ಸೋತ ರಾಧೆಯಂತೆ........
ಸಾಗರ ಸೇರುವ ಹಂಬಲಿಕೆಯ ನದಿಯಂತೆ....
ಉತ್ತರವಿಲ್ಲದ ಪ್ರಶ್ನೆಗೆ ಚಂದಿರ ಉತ್ತರಿಸಿದ......
ನಿನ್ನ ಅಂಗಳದಿ ಸುರಿದ ಬೆಳದಿಂಗಳು .....ಅಲ್ಲೂ ಇದೆ.....
ಭೋರ್ಗರೆವ ಮಳೆ ಅಲ್ಲೂ ಇದೆ.....
ಮನದ ತುಂಬಾ ಒಲವಿನ ಅಲೆಗಳು...ಅಲ್ಲೂ ಇದೆ..
ಮತ್ತೆಕಿರಬಾರದು ವ್ಯಾಮೋಹ..ಮತ್ತೆಕಿರಬಾರದು ಸೆಳೆತ....
ಹೌದಲ್ಲವೇ ಗೆಳೆಯ...............
ಭುವಿಗೆ ಸೋಕಿಯು ಸೊಕದಂತಿರುವ ಬಾನಿನಂತೆ ...
ನೀನು ಅಲ್ಲಿ ನಾನು ಇಲ್ಲಿ........ಚಂದಿರನ ರಾಯಭಾರದಲ್ಲಿ.....
ಸ್ಪರ್ಶವಿಲ್ಲದೆ, ನೋಟವಿಲ್ಲದೆ, ಒಲವಿನ ದೋಣಿಯಲ್ಲಿ.
ಇದ್ದರು ಇಲ್ಲದಂತೆ....ಇಲ್ಲದಿದ್ದರೂ ಇದ್ದಂತೆ...ಬದುಕಿನ ಪಯಣದಲ್ಲಿ
ಬದುಕಿಗೆ ಬೆಳಕಾಗಿ...ಜೀವಜಲವಾಗಿ.........

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...