Monday 25 April 2011

ಮಳೆಯಾಗುತ್ತಿದೆ.
ಹನಿ ಹನಿಯದೂ ಒಂದೊಂದು ಕತೆ ..
ಜಗದ ದನಿಗೆ ಕಿವುಡಾಗಿ....ಕತೆ ಕೇಳುತ್ತಿದ್ದೇನೆ ...
ನೊಸಲ ತಾಕಿದ ಹನಿಯು ನೀನಿಟ್ಟ ಸಿಂದೂರದ ....
ಕಣ್ಣಂಚ ತಾಕಿದ ಹನಿ ಕಂಬನಿಯೊಡನೆ ಕೂಡಿ ನಿನ್ನ ಸಾಮಿಪ್ಯ ಬಯಸುವ 
ತುಟಿಯಂಚ ತಾಕಿದ ಬಿಂದು ಮುತ್ತಿನ ಮತ್ತಿನ.....
ಒಡಲ ತಾಕಿದ ಹನಿ ನಮ್ಮ ಮಿಲನದ......
ಕತೆಗಳನ್ನು ಹೇಳುತ್ತಿವೆ.
ಕತೆ ಕೇಳುತ್ತಿರುವ ಮನ
ಮಳೆಗೆ ಬಿರಿದ ಇಳೆಯಂತೆ...
ಒಲವಿನ ವೀಣೆ ನುದಿಸುತ್ತಿದೆ....
ಮೌನವಾಗಿ...ನಿನಗಾಗಿ....ನಿನ್ನ ಪ್ರೀತಿಗಾಗಿ....
ಪ್ರೀತಿಯ ಮಳೆಯಾಗಿ...ಹಿತವಾಗಿ..ಸೊಗಸಾಗಿ.

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...