Tuesday 9 January 2018

ಹೀಗೊಂದು ಅನಿಸಿಕೆ 
ದೊಡ್ಡ ದೊಡ್ಡ ಮಾತುಗಳು ನನಗೆ ಅರಿವಾಗೋದಿಲ್ಲ, ದೊಡ್ಡ ದೊಡ್ಡ ವಿಷಯಗಳು ಅರ್ಥ ಆಗೋದಿಲ್ಲ. ಆದರೆ ಯಾರಿಗಾದರು ನೋವಾದರೆ ನನಗೂ ನೋವಾಗುತ್ತದೆ. ನನ್ನಿಂದ ನೋವಾದ್ರೆ (ತಿಳಿದೋ ತಿಳಿಯದೆಯೋ) ನನ್ನ ಬಗ್ಗೆ ಬೇಸರ ಆಗುತ್ತದೆ.ಸಾಧ್ಯವಾದಷ್ಟು ಮತ್ತೆ ನೋಯಿಸದೆ ಇರಲು ಯತ್ನಿಸುತ್ತೇನೆ. ಯಾರಿಗಾದರು ಖುಷಿ ಅನಿಸಿದರೆ, ಖುಷಿ ಪಟ್ಟರೆ ಅವರ ಜೊತೆ ನಾನೂ ನಗ್ತೀನಿ. ಸ್ನೇಹಕ್ಕೆ ವಯಸ್ಸಿನ, ಸ್ಥಾನದ, ಅಂತಸ್ತಿನ ಅಂತರ ತೋರದೆ ಬೆಲೆಕೊಡ್ತೀನಿ. ಯಾರು ಯಾವ ಸ್ಥಾನ ನೀಡಿದ್ದಾರೋ ಆ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ತೀನಿ. ಅರ್ಥವಾಗದ ವಿಷಯಗಳ ಬಗ್ಗೆ ಮಾತನಾಡೋದಿಲ್ಲ, ಕೆಲವೊಂದು ಅರ್ಥ ಆದರೂ ಕೂಡ ನಾ ಹೇಳೋದು ನಾ ಹೇಳುವವರಿಗೆ ಅರ್ಥ ಆಗದು ಅನಿಸಿದಾಗ ಹೇಳುವುದಿಲ್ಲ. ಕೆಲವೊಂದು ವಿಷಯ ಅನಗತ್ಯ ಅನಿಸಿದಾಗ ಮಾತಾಡೋದಿಲ್ಲ . ಅನಗತ್ಯವಾಗಿ ಯಾರ ವಿಷಯಕ್ಕೂ ಹೋಗುವುದಿಲ್ಲ. ಹಾಗೆ ಅನಗತ್ಯ ಆಸಕ್ತಿ ಕೂಡ entertain ಮಾಡೋದಿಲ್ಲ . ನನಗೆ ಅನಿಸಿದ ಮಾತುಗಳು, ನಾ ಕಂಡ ವಿಷಯಗಳು ಅಂತ ಒಂದಷ್ಟು ಬರೆಯೋದು ಬಿಟ್ಟರೆ, ನಾನು, ನನ್ನ ಕೆಲಸ , ನನ್ನ ಮನೆ ಇಷ್ಟೇ ನನ್ನ ಪ್ರಪಂಚ. ಇದನ್ನ ಬಿಟ್ರೆ ನನಗೆ ಮತ್ತೇನು ಇಲ್ಲ.
ಅಷ್ಟೇ ...............ನಾನು ಅಂದ್ರೆ ಅಷ್ಟೇ ....ಮತ್ತೇನು ಇಲ್ಲ. ...

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...