Monday 11 April 2011








ನಿನಗಾಗಿ ಕಾಯುವ ನನ್ನ ಹೆಗಲ ಮೇಲೆ ..
ಮತ್ತೊಂದು ಹಗಲು  ಇನ್ನೊಂದು ಇರುಳು 
ಕಳೆದು ಹೋಗಿದೆ ಗೆಳೆಯ.......
ವರುಷಗಳೇ ಉರುಳಿದರು  ಕಾಯುವಿಕೆ ಬದಲಾಗದು .....
ನೀನು ಬರಲಾರೆಯೆಂದು ನನಗೆ ತಿಳಿದಿದ್ದರೂ...
ನಾನು ಕಾಯುತ್ತಿರುವೆ ಎಂದು ನಿನಗೆ ಅರಿವಿದ್ದರೂ...
ನಮಗಿಬ್ಬರಿಗೂ
ಅದು ಕಾಯುವಿಕೆಯಲ್ಲ..ವಿರಹವಲ್ಲ...ಮೋಹವಲ್ಲ...
ಅದು ಪ್ರೀತಿ ಪ್ರೇಮಕ್ಕು ಮೀರಿದ ಸುಂದರ ಅನುಬಂಧ ಎಂದು.....
ಅದಕ್ಕೆ ಬಂಧವಿಲ್ಲ...ಮುಪ್ಪಿಲ್ಲ......
ಆದರೂ ನಾನು ಕಾಯುವೆ ಗೆಳೆಯ........
ಸಾವಿನಾಚೆಯ ಬದುಕಿನ ಮಿಲನಕ್ಕಾಗಿ..ಮೌನವಾಗಿ........
 ಗೊತ್ತು....

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...