Wednesday 27 April 2011

ಸಾಂಗತ್ಯ

ನಿನ್ನ ನೆನಪಿನ ಸಂಪುಟದಲ್ಲಿ 
ಕಳೆದು ಹೋಗಿದ್ದೇನೆ ಗೆಳೆಯ ನಾನು..........
ಪುಟ ಪುಟದಲ್ಲೂ ..
ಪದ ಪದದಲ್ಲೂ ..
ನಿನ್ನೊಳಗಿನ ನನ್ನನ್ನು...
ನನ್ನೊಳಗಿನ ನಿನ್ನನ್ನು...
ನಮ್ಮೊಳಗಿನ ಪ್ರೀತಿಯನ್ನು..
ನಮ್ಮಿಬ್ಬರ ಸಾಂಗತ್ಯವನ್ನು ...
ಕಾಣುತ್ತಿದ್ದೇನೆ ಗೆಳೆಯ....
ಸಂಪುಟದ ತುಂಬೆಲ್ಲ ....
ಸಾಮಿಪ್ಯವನ್ನೇ ಬೇಡದ...
ಸ್ಪರ್ಷವನ್ನೇ ಕೇಳದ...
ಬಣ್ಣ ಬಣ್ಣದ ಪ್ರೀತಿಯ ಹೂಗಳು..
ಕವಿತೆಗಳು...ರಾಗಗಳು....
ಕಳೆದುಹೋಗಿದ್ದೇನೆ ನಾನು.....ನಿನ್ನ ಸಂಪುಟದಲ್ಲಿ ..
ಪ್ರೀತಿಯಲಿ..ಕವಿತೆಯಲಿ...ರಾಗದಲಿ..!!!!!

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...