Wednesday 27 April 2011

ಅಂತರ

ಅಂತರವಿದ್ದರು.
ನಿರಂತರ ಪ್ರೇಮ ನೀಡುವ ನಿನ್ನ ಪರಿ ...
ಬೆರಗು ತರುತ್ತದೆ ಗೆಳೆಯ.....
ನಸುಗತ್ತಲ ಮುಗಿಲ ನೋಡುತ್ತಾ ...
ನಿನ್ನ ಪಿಸುನುಡಿಯ ಅನುಭೂತಿ ಪಡೆಯುತ್ತಾ...
ನಿನ್ನ ಬೆಚ್ಚನೆಯ ಸ್ಪರ್ಶದ ಮುದ ಅನುಭವಿಸುತ್ತ...
ಪರಿಪೂರ್ಣ ಸಾಂಗತ್ಯದ ಕನಸು ಕಾಣುತ್ತ.....
ಮನದಾಳದ ಮೌನದಲ್ಲಿ.......
ಜೀವವೀಣೆಯ ಝೆ0ಕಾರದಲ್ಲಿ ...
ಇಲ್ಲದಿದ್ದರೂ ಇರುವಿಕೆಯ ಕಡಲಲ್ಲಿ ಮುಳುಗೆಳುತ್ತಾ..........
ಕಾಯುವೆ....ಕನವರಿಸುವೆ.....
ದಿಗಂತದ ಅಂಚಿನ ಜೀವಗಾನದ ಮಿಡಿತಕ್ಕಾಗಿ......
ನಿನಗಾಗಿ.....ನಿನ್ನ ಒಲವಿಗಾಗಿ......

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...