Thursday 7 April 2011






ನನಗೆ ರಾಧೆಯಾಗುವ ಅಸೆ ಕೃಷ್ಣ..
ಸತ್ಯಭಾಮೆಯ ಪಟ್ಟ ಬೇಡ.......
ರುಕ್ಮಿಣಿಯ ಸ್ಥಾನ ಬೇಡ..........
ನಿನ್ನ ನೋವಿಗೆ ಪಾದೋದಕ ಕೊಡದ.....
ಪಟ್ಟ ಸ್ಥಾನ ಯಾವುದು ಬೇಡ.........
ನಿನ್ನ ಗೆಲುವಿಗೆ ನನ್ನ ನಗೆ ಬೆರಸಿ....
ನಿನ್ನ ಸೋಲಿನಲ್ಲಿ ನನ್ನ ಸಾಂತ್ವಾನ ಸೇರಿಸಿ....
ನಿನ್ನ ಹೆಜ್ಜೆಗೆ ನನ್ನ ಹೆಜ್ಜೆ ಕೂಡಿಸಿ.......
ಇದ್ದರೂ ಇಲ್ಲದಂತೆ.......ಇಲ್ಲದಿದ್ದರೂ ಇದ್ದಂತೆ.....
ನಿನ್ನ ಮನದೊಳಗೆ ....ನಿನ್ನ ಎದೆಯೊಳಗೆ ........ನಿನ್ನೊಳಗೆ.........
ನನಗೆ ರಾಧೆಯಾಗುವ ಆಸೆ ಕೃಷ್ಣ..........

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...