Monday 25 April 2011

ಪ್ರೀತಿಯ ಕೊಂಡಿ















ಯಾಕೆ ನೀನು....ಯಾಕೆ ನಾನು..
ಆಯ್ಧವರಾಗಿದ್ದೇವೆ ಈ ಪ್ರೀತಿಯಲ್ಲಿ....
ಈ ಬಾಂಧವ್ಯದಲ್ಲಿ..
ಯಾರ ಕೈವಾಡವಿದು ...
ಉತ್ತರ ಧ್ರುವದ ನಾನು...ದಕ್ಷಿಣ ತುದಿಯ ನೀನು..
ಒಲವಿನ ಧಾರೆಯಲ್ಲಿ ...ಪ್ರೀತಿಯ ಕೊಂಡಿಯಲ್ಲಿ ..
ನಿನಗೂ ನಿನ್ನದೇ ಬಂಧಗಳು....
ನನಗೋ ನನ್ನದೇ ನಿರ್ಬಂಧಗಳು..
ನಮ್ಮ ನಡುವೆ ನಾವೇ ಎಳೆದುಕೊಂಡ ಗೆರೆಗಳು...
ಎಳೆದ ಪರೆದೆಗಳ ಹಿಂದೆ ಪ್ರೀತಿಯ ಎಳೆಗಳು...
ವಿಷ್ಮಯವೇ .....ವಿಶೇಷವೆ...ವಿಷಾದವೇ ....
ಏನು ಅರಿಯದ ಮನಸ್ಥಿತಿ ನನ್ನದು...
ನನ್ನದೊಂದು ಕೋರಿಕೆ ಒಲವೆ...
ನೀನು ನಾನು...ನಾನು ನೀನು...
ಅನಂತದಲ್ಲಿ ಲೀನವಾಗುವವರೆಗೆ....
ನಿನ್ನೊಳಗೆ ನಾನು...ನಾನ್ನೊಳಗೆ ನೀನು..
ಕೃಷ್ಣನಂತೆ ...ರಾಧೆಯಂತೆ...
ಅಗಾಧ ಪ್ರೇಮ ಸಾಗರದಂತೆ...
ಸಾಗೋಣ ..
ಒಲವಾಗಿ...ಬಲವಾಗಿ ...ಗೆಲುವಾಗಿ...
ಹೀಗೆ ಒಂದಾಗಿ ಅಗೋಚರವಾಗಿ...ನಿರಂತರವಾಗಿ.....!!!!

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...