Wednesday 27 April 2011

ಸಾರ್ಥಕ್ಯ .........

ನೀನಂದು ಮಲಗಿದ್ದೆ...
ನಾ ನಿನ್ನ ಬದಿಯಲ್ಲಿ ಕುಳಿತು ನೀನು ಕನಸಿನಲ್ಲಿ ನಗುವುದ ಕಂಡಿದ್ದೆ...
ನಿನ್ನ ಮುಂಗುರುಳ ಸವರಿ...ನಿನ್ನ ಹಣೆಗೊಂದು ಹೂಮುತ್ತನಿತ್ತು ...
ನಿನ್ನಂದ ಕಂಡು ಕಣ್ಣೀರಾಗಿದ್ದೆ....
ಅದೇನು ಮೋಡಿಯೋ ಮರ್ಮವೋ ಅರಿಯದಾದೆ....
ನನ್ನ ಮನ ನಿನ್ನ ಬಳಿಯಿಂದ ದೂರ ಸರಿಯದಾಗಿತ್ತು....
ಮಾಡುವುದೆಲ್ಲ ಬಿಟ್ಟು ನಿನ್ನ ಬಳಿಯೇ ಇರುವ ಹಂಬಲ ಕಾಡಿತ್ತು...
ನಾನು ಅಲ್ಲೇ ನಿನ್ನ ಬಳಿ ನಿನ್ನ ಪುಟ್ಟ ಕೈ ಹಿಡಿದು ಗೋಡೆಗೊರಗಿ ಕುಳಿತು ...
ನಿನ್ನನ್ನೇ ನೋಡುತ್ತ ಎಲ್ಲ ಮರೆತು ......
ಮತೊಮ್ಮೆ ನಿನ್ನ ಪ್ರೀತಿಸ ತೊಡಗಿದೆ....
ಮಾತೃತ್ವದ ಸಾರ್ತಕ್ಯ ನೀಡಿದ ನೀನು ಮಾತ್ರ ತುಟಿಯಂಚಲ್ಲಿ ನಗುತ್ತಿದ್ದೆ.........

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...