Monday 25 April 2011

ಕಿರುಹಣತೆ










ಅಳಲಾರೆ ಗೆಳೆಯ ನಾನು ಹಾಗೆ ಸುಮ್ಮನೆ...
ಪ್ರೀತಿಸಿದವನ ಮುಂದಲ್ಲದೆ ಮತ್ತೊಬ್ಬರ ಮುಂದೆ...
ಪ್ರೀತಿಯ ಮುಂದೆ ನಾನು ತುಂಬಾ ಅಬಲೇ...
ಅಳಲಾರೆ ಗೆಳೆಯ ನಾನು ಹಾಗೆ ಸುಮ್ಮನೆ...
ಪ್ರೀತಿಸುವವನ ಮುಂದಲ್ಲದೆ ಇನ್ನೊಬ್ಬರ ಮುಂದೆ..
ನನ್ನೆಲ್ಲ ಅಭಿಮಾನ ತೊರೆದು
ಪ್ರೀತಿಸುವವನ ಮುಂದೆ ನಾನು ತುಂಬಾ ನಿರಭಿಮಾನಿ...
ನನ್ನ ಕಂಬನಿ ನಾನು ಅಬಲೇ ಎಂದಲ್ಲ...ನಾನು ನಿರಭಿಮಾನಿ ಎಂದಲ್ಲ...
ನನ್ನ ಕಣ್ಣಿನ ಹನಿ ನಿನ್ನ ಅನುಕಂಪಕ್ಕಾಗಿ ಅಲ್ಲ ...ನಿನ್ನ ಸೆಳೆಯಲು ಅಲ್ಲ...
ಪ್ರೀತಿಯ ಬಿಟ್ಟು ಬೇರೇನು ನೀಡಲಾಗದ ನನ್ನ ಅಸಹಾಯಕತೆಗಾಗಿ...
ನಾ ನಿನಗೆ ನೀಡುವ ಪುಟ್ಟ ಪ್ರೀತಿಗೆ....
ನೀ ನನಗೆ ನೀಡುವ ಪರಿಪೂರ್ಣ ಒಲವಿನ ಕಿರುಹಣತೆಗಾಗಿ....
ಸಂಬಂದಗಳ ಪರಿವೆ ಇಲ್ಲದೆ ಬೆಳೆದ ನಮ್ಮ ಪ್ರೀತಿಯ ರೀತಿಗಾಗಿ!!!!!!......

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...