Sunday 30 November 2014

ಹೀಗೊಂದು ಸ್ವಗತ...:)))
"ನಾ ಹೋಗಿ ಬರಲೇ..." ...ನಿನ್ನ ಮಾತು ಕೇಳಿ ಕಣ್ತುಂಬಿ ಬಂತೇ???....ಅರಿವಾಗಲಿಲ್ಲ....ಮನದ ಮೂಲೆಯಲ್ಲೆಲ್ಲೋ ಹೇಳಲು ಆಗದ ತಳಮಳ...ಇನ್ನು ಸ್ವಲ್ಪ ಹೊತ್ತು ಇರು ಎನ್ನಲೇ....ಉಹೂ ಬೇಡ... ಹಾಗೆ ಹೇಳಿ ನಿನ್ನ ತಡೆಯಲಾರೆ ಗೆಳೆಯ ...ನಿಜ ಗೆಳೆಯ ....ನೂರಾರು ಮಂದಿ ನಿನಗಾಗಿ ಕಾಯುವಾಗ ನೀನು ನನ್ನ ಅರಸಿ ಹಂಬಲಿಸಿದ್ದು ನನಗೆ ಖುಷಿಯೇ ..ಆದರೆ ಅದನ್ನ ನಾನು advantage ಆಗಿ ತೆಗೆದುಕೊಳ್ಳಲಾರೆ ..... ನನ್ನಿಂದ ನಿನಗೆ ...ನಿನ್ನಿಂದ ನನಗೆ ಈ ನಿರ್ಮಲ ಪ್ರೀತಿ ಸ್ನೇಹದ ಹೊರತು ಇನ್ಯಾವ ಬಯಕೆಗಳು ಇಲ್ಲ...ಸ್ವಾರ್ಥಗಳು ಇಲ್ಲ....ಅದು ಬರಬಾರದು ಕೂಡ..ಗೆಳೆತನ ಬದುಕಿಗೆ ಬೆಳಕಾಗಬೇಕೇ ಹೊರತು ಹೊರೆ ಅಲ್ಲ ಅಲ್ವೇ....ನಿನಗೆ ನೆನಪಿದೆಯ ಸುಮಾರು ಒಂದು ಘಂಟೆಯ ನನ್ನ ನಿನ್ನ ಬೇಟಿಯಲ್ಲಿ ಬಂದು ಹೋಗದ topiceಇಲ್ಲ ಅಲ್ವ...ನಕ್ಕೆವು,..ಕಣ್ಣ ಹನಿ ತುಂಬಿಕೊಂಡೆವು.,..ತರ್ಲೆ ಮಾಡಿದೆವು., ಸಿಟ್ಟು ಕೂಡ ಮಾಡಿಕೊಂಡೆವು...ನನ್ನ ಅಡುಗೆ ಮನೆಯ ಸ್ಲಾಬ್ ಮೇಲೆ ಕುಳಿತು ಟೀ ಕುಡಿದೆವು....ಎಷ್ಟು ಸುಂದರ ಬಂಧ ಅಲ್ವೇ....ಆದರು ಗೆಳೆಯ......"ನಾ ಹೋಗಿ ಬರಲೇ" ಎಂದು ನೀ ಅಂದ ಒಡನೆ ತಳಮಳ ಏಕೆ...????ನೀ ಹೊರಟ ಮೇಲೆ ಖಾಲಿತನ ಏಕೆ....ಮತ್ತೆ ನೀ ಬರಬಾರದೇ ಎಂಬ ಹಂಬಲ ಏಕೆ.....???ಗೊತ್ತಿಲ್ಲ ಗೆಳೆಯ.... ಪ್ರೀತಿ ಗೊತ್ತು...ಸ್ನೇಹ ಗೊತ್ತು...ಮಕ್ಕಳ ಮಮತೆ ಗೊತ್ತು .....ಬಂಧುಗಳ ಬಂಧುತ್ವ ಗೊತ್ತು....ಆದರೆ ಅದೆಲ್ಲವ ಮೀರಿದ ಈ ಅನುಬಂಧ simply superb......ಅಂತಹ ಗೆಳೆತನಕ್ಕೆ...ಗೆಳೆಯನಿಗೆ....ಕೋಟಿ ನಮನ....:))))

1 comment:

  1. ಮನಸಿಗೆ ನೆಮ್ಮದಿ ಕೊಡುವ ಗೆಳೆಯರ ಭೇಟಿ ಇಂದ ಮನಸು ಅರಳುವುದು ಸಹಜ. ಅಂತಹ ಭೇಟಿಗಳು ಪದೇ ಪದೇ ಜರುಗಲಿ.

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...