Sunday 9 November 2014

ಇದನ್ನೊಮ್ಮೆ ಓದಿಬಿಡಿ....:)))
ಒಮ್ಮೆ ಒಬ್ಬ ವ್ಯಕ್ತಿ ಒಂದು ಪತ್ರಿಕೆಯ ಓದುಗರ columnಗೆ ಒಂದು ಪತ್ರ ಬರೆದ...."ನಾನು ಸುಮಾರು ೩೦ ವರ್ಷಗಳಿಂದ ದೇವಾಲಯಗಳ ಸುತ್ತುತ್ತ ಇದ್ದೇನೆ....ಸುಮಾರು 10,000 ಮಂತ್ರಗಳ ಕೇಳಿರಬಹುದೇನೋ...ಆದ್ರು ಒಂದೂ ನೆನಪಲ್ಲಿ ಇಲ್ಲಾ...ಯಾಕೋ ಇತ್ತೀಚಿಗೆ ಇದೆಲ್ಲ ಡಂಬಾಚಾರ ಎನಿಸುತ್ತಾ ಇದೆ.....ಏನೂ ಉಪಯೋಗವಿಲ್ಲವೇನೋ ಅನಿಸುತ್ತಾ ಇದೆ...etc etc..."ಅಂತ ಬರೆದ...
ಗೊತ್ತೇ ಇದೆಯಲ್ಲ...ಒಂದೂ ಚರ್ಚೆ ಶುರು ಆಯಿತು....ಆಸ್ತಿಕರಿಗೂ ನಾಸ್ತಿಕರಿಗೂ ಸಂವಾದಗಳೇ ನಡೆದು ಹೋಯ್ತು....
ಪತ್ರಿಕೆಯವರಿಗೂ ಒಂದ ತರ ಖುಷಿ....ಪ್ರಚಾರ ಸಿಕ್ತಲ್ಲ ಅಂತ.....
ಎಲ್ಲವ ಓದುತ್ತಾ ನೋಡುತ್ತಾ ಇದ್ದ ಒಬ್ಬ ಹಿರಿಯರು ಒಂದು ಪತ್ರ ಬರೆದರು "ಅಣ್ಣ ತಮ್ಮಂದಿರೆ....ನಾನು ಸುಮಾರು ೩೦ ವರ್ಷಗಳಿಂದ ನನ್ನ ಹೆಂಡತಿ ಮಾಡಿದ ಅಡುಗೆ ತಿನ್ತಾ ಇದ್ದೀನಿ....ಅವಳು ಇಂತ ದಿನ ಇಂತದೆ ಅಡುಗೆ ಮಾಡಿದ್ಲು ಅಂತ ನನಗೆ ನೆನಪಿಲ್ಲ ...ಆದ್ರೂ ಅವಳು ಮಾಡಿ ಹಾಕಿದ್ದನ್ನ ತಿಂದು ನಾನು ನನ್ನ ದೈಹಿಕ ಆರೋಗ್ಯವ ಕಾಪಾಡಿಕೊಂಡಿದ್ದೀನಿ............ಹಾಗೆ ಈ ದೇಗುಲಗಳ ವಿಸಿಟ್ ಕೂಡ ...ಇಂತಹ ದಿನ ಇಂತಹ ದೇವಸ್ತಾನಕ್ಕೆ ಹೋದೆ...ಇದ ಕೇಳಿದೆ ಅನ್ನೋದು ಮುಖ್ಯ ಅಲ್ಲ...ನಿಮ್ಮ ಮಾನಸಿಕ ಆರೋಗ್ಯವ ..ನಿಮ್ಮ ಸನ್ನಡತೆಯ ಕಾಪಡಿದ್ದೆ ಅಂತಹ ವಿಸಿಟ್ಗಳು ಅನ್ನೋದು ನನ್ನ ಅನಿಸಿಕೆ ...ಸುಮ್ಮನೆ ವೃಥಾ ಬೇಸರ ಬೇಡ....etc etc..." ಅಂತ ಬರೆದರು......ಆಮೇಲೆ ಕಥೆ ಏನ್ ಆಯಿತೋ ಗೊತ್ತಿಲ್ಲ.....ಆದ್ರೆ ಆ ಹಿರಿಯರ ಮಾತು ಯಾಕೋ ಸತ್ಯ ಅನಿಸಿತು....:))))Felt like sharing aftr reading...

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...