Sunday 16 November 2014

ಅಂದೆಂದೋ ಚಕಮಕಿಯ ಕಲ್ಲ ಉಜ್ಜಿ
ಬೆಂಕಿಯ ಕಂಡುಕೊಂಡ ಮಾನವ 
ಕತ್ತಲ ಓಡಿಸಿದ 
ಭಯವ ಓಡಿಸಿದ 
ಹಸಿವ ಓಡಿಸಿದ 
ಈಗೆಲ್ಲ
ಮನಸ್ಸಿನ ಬೆಂಕಿಯಿಂದಲೇ
ಕತ್ತಲೆ ಹುಟ್ಟಿಸಬಲ್ಲ
ಭಯವ ಹುಟ್ಟಿಸಬಲ್ಲ
ಹಸಿವ ಹೆಚ್ಚಿಸಬಲ್ಲ .................
ಅದ್ಯಾಕೋ
ಒಮ್ಮೊಮ್ಮೆ
ಮಾನವ
ಬೆಂಕಿಗಿಂತ ಭಯ
ಹುಟ್ಟಿಸುತ್ತಾನೆ .....................

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...