Sunday 9 November 2014

ಅವನೊಬ್ಬ ನುರಿತ ಮಕ್ಕಳ ವೈದ್ಯ. ಅಂದು ಎಂದಿಗಿಂತಲೂ ಹೆಚ್ಚು ಜನ..ಸಾಕಾಗಿ ಹೋಗಿತ್ತು ಅವನಿಗೂ....ಅಷ್ಟರಲ್ಲಿ ಬಾಗಿಲ ಬಳಿ ಸದ್ದಾಗಿತ್ತು...ತಲೆ ಎತ್ತಿ ನೋಡಿದ...ಅರೆ ಕ್ಷಣ ಮನದ ತುಂಬಾ ಮಧುರ ಭಾವನೆಗಳು...ವರ್ಷಗಳ ಹಿಂದಿನ ಅವನ ಸ್ಫೂರ್ತಿ..ಅವನ ಒಲವು...ಅವನ ಮನದ ಗೆಳತಿ..ಈಗ ಪುಟ್ಟ ಕಂದನ ಮಡಿಲಲ್ಲಿ ಹಿಡಿದು ಸೋತ ಮುಖದೊಡನೆ ನಿಂತ ತಾಯಿ...ಆ ಹೆಣ್ಣಿನ ಮೊಗದಲ್ಲಿ ನೋವು ಭಯ....ತಟ್ಟನೆ ಎಚ್ಚೆತ್ತ...ಅವನಿಗೆ ಅವನು ಮಾಡಿದ ಪ್ರಮಾಣ ನೆನಪೈತು Hippocratic oath (Hippocratic Oath: One of the oldest binding documents in history, the Oath written by Hippocrates is still held sacred by physicians: to treat the ill to the best of one's ability, to preserve a patient's privacy, to teach the secrets of medicine to the next generation, and so on. )
ಮಗುವಿನ ಬಗೆ ಕೇಳಿದ ...ನೋಡಿದ...ಟ್ರೀಟ್ ಮಾಡಿದ..."ಭಯದ ಅಗತ್ಯ ಇಲ್ಲ...ಎಲ್ಲ ಸರಿ ಹೋಗುತ್ತದೆ" ಅಂದ...ಹೆಣ್ಣು ಮಗಳ ಕಣ್ಣಲ್ಲಿ ಕೃತಜ್ಞತೆ...ಮಾತಿನ ಅಗತ್ಯವೇ ಕಾಣಲಿಲ್ಲ ಮುಂದೆ.........ಅವನ ಕರ್ತವ್ಯ...ಅವಳ ತಾಯ್ತನ ಎಲ್ಲಾ ಹೇಳಿತ್ತು....ಬದುಕು ಅಲ್ಲಿ ಮಾನವೀಯತೆಯ ಮೆರೆದಿತ್ತು....:))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...