Wednesday 26 November 2014

ಒಮ್ಮೆ ನಾರದ ಮುನಿಗಳು ಹಾಗೆ ಲೋಕ ಸಂಚಾರ ಮಾಡುವಾಗ ಅವರ ಕಣ್ಣಿಗೆ ಒಂದು ಪುಟ್ಟ ಸುಂದರ ಹಕ್ಕಿ ಕಣ್ಣಿಗೆ ಬಿತ್ತಂತೆ.....ಆ ಹಕ್ಕಿಯ ಸೌಂದರ್ಯಕ್ಕೆ ಬೆರಗಾದ ಅವರ ಆಂತರ್ಯಕ್ಕೆ ಅದರ ಸಾವು ಅದರ ಹಿಂದೆ ಹೊಂಚು ಹಾಕುತ್ತ ಇದ್ದಿದ್ದು ಕಾಣಿಸಿತಂತೆ..........ಸರಿ ನಾರದರು ತಮ್ಮ ದಿವ್ಯ ತಪೋಬಲದಿಂದ ಆ ಹಕ್ಕಿಯ ಉಳಿಸಲು ಉಪಾಯ ಮಾಡಿದರಂತೆ....ಆ ಹಕ್ಕಿಯ ಹೊತ್ತು ,ಒಂದು ದೊಡ್ಡ ಬೆಟ್ಟದ ಗವಿಯ ಒಳಗೆ ಹೊಕ್ಕು ಅಲ್ಲಿ ಆ ಹಕ್ಕಿಯ ಬಿಟ್ಟರಂತೆ.....ಆದರೆ ಆ ಗುಹೆಯಲ್ಲಿ ವಾಸವಿದ್ದ ಒಂದು ಕಾಳಸರ್ಪಕ್ಕೆ ಹಕ್ಕಿ ಆಹಾರ ಆಯ್ತಂತೆ......ಗುಹೆಯ ಬಳಿ ಬಂದ ಯಮಧರ್ಮ 'ಗುರುವರ್ಯ , ನಿಮ್ಮಿಂದ ತುಂಬಾ ಉಪಕಾರವಾಯ್ತು....ಕಾಳಸರ್ಪದಿಂದ ಹಕ್ಕಿಯ ಸಾವು ಎಂದಿತ್ತು ..ಆ ಸರ್ಪ ಹಕ್ಕಿಯ ಹುಡುಕಿ ಇಷ್ಟು ದೂರ ಬರುವ ಬಗ್ಗೆ ಹೇಗೆ ಎಂದು ನಾ ಚಿಂತಿಸುವಾಗ....ನೀವು ಆ ಕೆಲಸ ಮಾಡಿದಿರಿ ಉಪಕಾರವಾಯ್ತು " ಎಂದ.......
ನಾರದರಿಗೆ ಈಗ ನಗು ಬಂತು...'ಅಲ್ಲ ಕಾಲಜ್ಞಾನಿ ಆದ ನಾನೇ ಹೀಗೆ ಲೌಕಿಕವಾಗಿ ಚಿಂತಿಸಿದೆನಲ್ಲ" ಅನಿಸಿತು..................ಕಥೆ ಇಷ್ಟೇ..........
ಆದರೆ......ಅರಿಯಲಾರದ್ದು ಏನು ಅಂದ್ರೆ.........'ಬದುಕಿನ ಮೊದಲ ಪುಟ ಬರೆದವ ಕೊನೆಯ ಪುಟದ ಕೊನೆಯ ಸಾಲು ಬರೆದು ಬಿಟ್ಟಿರುತ್ತಾನೆ ಅಲ್ವೇ..........ಬರಿ ನಡುವಿನ ಪುಟಗಳ 'ನೆಪ ಮಾತ್ರಕ್ಕೆ 'ತುಂಬುವ ಹೊಣೆ ನಮ್ಮದು ಅಲ್ವೇ....'................:)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...