Sunday 9 November 2014

ಹೀಗೊಂದು ಕಥೆ...:))))
ಒಂದೂರು..
ಒಬ್ಬ ರಾಜಾ..
ರಾಜನ ಬಳಿ ಒಬ್ಬ ಮೂರ್ಖ ಸೇವಕನಿದ್ದ......
ಇವನ ಮೂರ್ಖತನಕ್ಕೆ ಬೇಸತ್ತ ರಾಜ ಒಮ್ಮೆ ಒಂದು ದೊಣ್ಣೆ ಕೊಟ್ಟು ಹೇಳಿದ...
"ನಿನಗಿಂತ ಮೂರ್ಖರು ಯಾರಾದ್ರೂ ಸಿಕ್ಕಿದ್ರೆ ಇದನ್ನು ಕೊಟ್ಟು ಬಿಡು ಅಲ್ಲಿಯವರೆಗೂ ನನ್ನ ಮುಂದೆ ಬರಬೇಡ" ಅಂತ......
ಕೆಲ ವರ್ಷಗಳ ನಂತರ ರಾಜ ಖಾಯಿಲೆ ಬಿದ್ದ.....
ಸಾವು ಖಚಿತ ಅನ್ನೋ ಹಾಗೆ ಆದ...
ಅವನ ಮೂರ್ಖ ಸೇವಕ ಬಂದ..."ನೀವು ಎಲ್ಲೋ ಹೋಗುತ್ತಿರಂತೆ?" ಅಂದ..
'ಹೌದು' ಎಂದ ರಾಜ..'ಎಲ್ಲಿಗೆ' ಅಂದ...
'ಬಹಳ ದೂರ ಪ್ರಯಾಣ" ಅಂದ ರಾಜ.....
"ಎಷ್ಟು ದಿನಗಳು ?ಒಂದು ವಾರ??" ಕೇಳಿದ ಸೇವಕ..'ಇಲ್ಲ' ಅಂದ ರಾಜ
"ಒಂದು ತಿಂಗಳು??'.ಕೇಳಿದ ಸೇವಕ..'ಇಲ್ಲ' ಅಂದ ರಾಜ
'ಒಂದು ವರ್ಷ' .ಕೇಳಿದ ಸೇವಕ 'ಇಲ್ಲ ಇನ್ನು ಬರುವುದು ಸಾದ್ಯವೇ ಆಗದೇನೋ ' ಅಂದ ರಾಜ
'ಏನು ವ್ಯವಸ್ಥೆ ಮಾಡಿಕೊಂಡಿರುವಿರಿ ನಿಮ್ಮ ಪ್ರಯಾಣಕ್ಕೆ, ನಿಮ್ಮ 'ಅಲ್ಲಿನ' ಇರುವಿಕೆಗೆ'? ಅಂದ ಸೇವಕ......
ಈಗ ರಾಜ ದಂಗು ಬಡಿದು ಹೋದ...ಮೂರ್ಖ ಎನಿಸಿಕೊಂಡ ಸೇವಕನ ಪ್ರಶ್ನೆಗೆ.......
'ಹೌದಲ್ಲವೇ ಏನು ಮಾಡಿದ್ದೇನೆ ನಾನು..
ಸ್ವಾರ್ಥಕ್ಕೆ ಯುದ್ಧಗಳು, ವಂಶ ಬೆಳೆಸಲಿಕ್ಕಾಗಿ ಪತ್ನಿಯರು..ಜನಕ್ಕಾಗಿ ಏನು ಮಾಡಿದೆ ನಾನು ??"....
ಈಗ ಸೇವಕ ಹೇಳಿದ..."ನೀವು ಕೊಟ್ಟ ಈ ಕೋಲು ಈಗ ನಿಮಗೆ ಬೇಕಾಗುತ್ತದೆ ತಗೋಳಿ ...ನನಗೆ ಇದರ ಉಪಯೋಗ ಸಾಕು "ಅಂದ...!!!!!!!!!!!!!
ಹೌದಲ್ಲವೇ...ಜೀವನದ ತುತ್ತತುದಿ ಮುಟ್ಟಿದಾಗ ನಾವು ತೆಗೆದುಕೊಂಡು ಹೋಗೋದು ಬರಿ ನಾವು ಮಾಡೋ ಕೆಲಸ (ಕರ್ಮ!!) ಫಲ ಮಾತ್ರ ಅಲ್ಲವೇ...ಅದಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳದೆ ಹೋದರೆ ನಾವು ಶತಮೂರ್ಖರೆ ಹೌದಲ್ಲವೇ...!!!!

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...