Sunday 9 November 2014

ಅವನು ಮತ್ತು ನಾನು  ....


ನೆನ್ನೆ ಸಂಜೆ...ಅವನ ನೋಡಲೇ ಬೇಕೆನಿಸಿತು..ಮಾತನಾಡಲೇ ಬೇಕೆನಿಸಿತು..ಅವನ ಮೆಚ್ಚಿನ ನಸುಗೆಂಪು ಬಣ್ಣದ ಸೀರೆ ಉಟ್ಟು ಹೊರಟೆ...ಅವನಿಗೆ ಸ್ವಲ್ಪ ದೂರದಲ್ಲಿ ಅವನ ಮುಂದೆ ಕುಳಿತೆ...ಸಂಜೆಗೆಂಪಿನ ನಡುವೆ...ಮೌನದ ಮಧ್ಯೆ ನಾ ಅವನೆದುರು ಕುಳಿತಾಗ..ಅವನೆಷ್ಟು ಬಾರಿ ನನ್ನ ಕೈ ಸ್ಪರ್ಶಿಸಲು ಹವಣಿಸಿದನೋ..ಅದೆಷ್ಟು ಬಾರಿ ಹಿಂದೆಗೆದುಕೊಂಡನೋ ಗೊತ್ತಿಲ್ಲ....ಗಂಟೆಯೇ ಉರುಳಿತೇನೋ..ಇನ್ನೇನು "ಹೊರಟೆ "ಎನ್ನುವಾಗ...ಅವನ ಅಲೆಗಳು ನನ್ನ ಪಾದ ಸೋಕಿದವು...ಆಹ್...ಕಾದಿದ್ದು ಸಾರ್ಥಕ ಆಯಿತು ಅನಿಸಿತು....ದೂರದ ಊರಿನಲ್ಲಿರುವ ನನ್ನವನು..."ಇಲ್ಲಿ ಮಳೆ ಗೆಳತಿ"ಅಂತ ಸಂದೇಶ ಕಳುಹಿಸಿದ....:)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...