Monday 17 November 2014

ಸುಮಾರು 17 ವರ್ಷದ ಹಿಂದೆ, ಕಾರ್ತಿಗೆ ಆಗ ಆರು ತಿಂಗಳು ಇರಬೇಕು , ಹರ್ಬರ್ಟ್ ಅಂಬ್ರೋಸ್ ಮನೆಗೆ ಬಂದ 'ಸುನೀತಾ, ನಾ ಹೋಗ್ತೀನಿ ಅಮ್ಮ , ಸನ್ನೀ ದೊಡ್ಡದು ಆದ ಮೇಲೆ ಮೇಲೆ ನೀನು ಹೌಸ್ಮ್ಯಾನ್ ಶಿಪ್ ಮಾಡು ..ಬಿಡಬೇಡ , ನೀನು ಚೆನ್ನಾಗಿ ಇರಬೇಕು , ಮಂಜುನ ಸಾಯಂಕಾಲ ಇನ್ ಮೇಲೆ ಕರ್ಕೊಂಡ್ ಹೋಗೊಲ್ಲ ..ನಿನಗೆ ಬೈಯೋಕೆ ನಾವಿಬ್ಬರು ಸಿಗೋಲ್ಲ ಅಮ್ಮ.. But still You Both Remain in me always , Lov u Guys'ಅಂದ. ಅದೇ ಕೊನೆ ಅವನನ್ನ ನೋಡಿದ್ದು . ಆಗಾಗ ನನ್ನ ಮಂಜುವಿನ ಮಾತಿನ ನಡುವೆ ಬರುತ್ತಿದ್ದ ಹರ್ಬರ್ಟ್ ಮನದಲ್ಲೇ ಉಳಿದಿದ್ದ
ಮೊನ್ನೆ ಗೆಳಯನೊಬ್ಬ fone ಮಾಡಿದ್ದ.ಮಾತಿನ ನಡುವೆ ಹರ್ಬರ್ಟ್ ಬಂದ 'ಹೇಯ್ ಸುನಿ, ಹರ್ಬರ್ಟ್ ಹೋಗ್ಬಿಟ್ಟನಂತೆ' ಅಂದ. 'ಏನೂ' ಕಿರುಚಿದ್ದೆ ..'ಹೂ ಸುನಿ ಹೋಗ್ಬಿಟ್ಟ ಅಂತೆ, accident ಆಯ್ತಂತೆ .... ' ಮುಂದೆ ನನಗೆ ಏನೂ ಕೇಳೋದು ಬೇಡ ಅನಿಸಿತ್ತು ...
ಓದುವಾಗ ನನಗಿಂತ ೩ ವರ್ಷ ಸೀನಿಯರ್ ಈ ಹರ್ಬರ್ಟ್..ವಯಸ್ಸಲಿ ಇನ್ನು ಸ್ವಲ್ಪ ಹೆಚ್ಚೇ ಏನೋ. ಮಲೇಸಿಯದ ಒಂದು ಕುಗ್ರಾಮದ ಹುಡುಗ .ಅಲ್ಲಿಂದ ಬಂದು ಇಲ್ಲಿ ಮೆಡಿಕಲ್ ಓದುತ್ತಾ ಇದ್ದ.. ಮೂರನೇ ವರ್ಷದಲ್ಲಿ ಇದ್ದಾಗಲೇ ಕಲಿತ ವಿದ್ಯೆಗೆ ಸಾರ್ಥಕ್ಯ ಹುಡುಕೋಕೆ ಹೊರಡುತ್ತಿದ್ದ. ಗದ್ದೆಯ ಕೆಲಸದ ಜನಕ್ಕೆ ಹುಷಾರಿಲ್ಲ ಅಂದ್ರೆ ಥಟ್ ಅಂತ ಹೆಲ್ಪ್ ಮಾಡ್ತಾ ಇದ್ದ .. 'ಹರ್ಬರ್ಟ್'ಅಂದ್ರೆ ಸಾಕು, 'ಏನು ಅಮ್ಮ ಸುನಿತಾ , ಏನು ಮಾಡಿದ್ದೀರಾ?ನಾನು ಇದ್ದೀನಿ ಬಿಡಿ ಅಮ್ಮ ಬೇಜಾರು ಬೇಡ ' ಅಂತೆಲ್ಲ ಸಾಂತ್ವಾನ ಹೇಳ್ತಾ ಇದ್ದ .. ಸಂಜೆ ಆದ್ರೆ ಸಾಕು 'ಮಂಜು ರೆಡಿನ' ಅಂತಿದ್ದ . 'ಸುನಿತಾ ಬೈಬೇಡ, ಬರಿ ಒಂದೇ ಒಂದು ರೌಂಡ್ ಅಷ್ಟೇ manju is safe in my hands' ಅಂತ ಇದ್ದ .. ಕೋಪ ಗೊಂಡರೆ ನಗಿಸುತ್ತಾ ಇದ್ದ.. ಸಂಜೆ ಇಬ್ಬರು ಹೋಗಿ ಅದೇನು ಮಾತಾಡಿಕೊಂಡು ಬರ್ತಾ ಇದ್ರೊ ... ವಾರಕ್ಕೊಮ್ಮೆ ಟೆರೇಸ್ ಮೇಲೆ ಹೋಗಿ ಇಬ್ಬರೂ ಸಣ್ಣದೊಂದು ಪಾರ್ಟಿ ಮಾಡಿದರೆ ಇಬ್ಬರಿಗೂ ಸಮಾಧಾನ.. ಹೆಸರಿಗೆ ನನ್ನ ಗೆಳೆಯ ಆದರೂ ಮಂಜು ಮತ್ತು ಹರ್ಬರ್ಟ್ ಗೆಳೆತನ ಹಂಚಿಕೊಂಡಿದ್ದೆ ಹೆಚ್ಚು .. ಗೆಳೆತನಕ್ಕೆ ಭಾಷೆ, ವಿದ್ಯೆ, ಹಣ, ವಯಸ್ಸು ಯಾವುದು ಅಡ್ಡಿಯಾಗದು ಅನ್ನೋದನ್ನ ತೋರಿಸಿದ್ದ .
ಅಂದು ಹೋದ ಹರ್ಬರ್ಟ್ ನನ್ನ ಅವನ ಕೆಲಸಗಳ ನಡುವೆ ಕಳೆದು ಹೋದ್ವಿ , ಹೋದ ಮೇಲೆ ಒಂದೆರಡು ವರ್ಷ ಕನೆಕ್ಟ್ ಆಗಿದ್ದು ಬಿಟ್ಟರೆ ಮತ್ತೆ ಮೊನ್ನೆಯೇ ಅವನ ವಿಷಯ ತಿಳಿದಿದ್ದು ..................... ಆದರೂ ...... ಆದರೂ ಅವನ ಸಾವಿಗೆ ಆದ ನೋವು ಪ್ರತಿ ದಿನ ಒಟ್ಟಿಗೆ ಇದ್ದವರ ಸಾವಿಗೂ ಆಗುತ್ತಿತ್ತೋ ಇಲ್ವೋ ಗೊತ್ತಿಲ್ಲ .... ಹಂಚಿಕೊಂಡ ಒಂದು ತುತ್ತು ಅನ್ನ , ಹಂಚಿಕೊಂಡ ಒಂದು ಹನಿ ಕಣ್ಣೀರು , ಹಂಚಿಕೊಂಡ ಪುಸ್ತಕ, ಹಂಚಿಕೊಂಡ ಹೊಸ ಅಮೆಚೂರ್ ಡಾಕ್ಟರ್ ಗಳ ಭಾವನೆ ........... ಎಲ್ಲಾ ಇನ್ನೂ  ಹಸಿರು..... ಹೇಯ್ ಹರ್ಬರ್ಟ್, Are you smiling at me?? 'ಬೇಜಾರು ಬೇಡ ಅಮ್ಮಾ ' ಅನ್ತಿದ್ದೀಯ?? U cheated us Herbert ನೀನು ನಮಗೆ ಹೇಳದೆ ಹೋದೆ ....ಆದರು U remain In us.......U remain.....

1 comment:

  1. ಅಮ್ಮ ಎಂದು ಸಭ್ಯವಾಗಿ ಮಾತನಾಡಿಸುತ್ತಿದ್ದ ಆತನ ಅಕಾಲ ಮರಣ ತಮ್ಮ ಮತ್ತು ಪತಿ ದೇವರ ಮೇಲೆ ಅದಿನ್ನೆಂತ ಪರಿಣಾಮ ಬೀರಿದ್ದೀತು ಎಂಬುದು ಊಹೆಗೂ ನಿಲುಕದ ವಿಚಾರ.

    ಅವರ ಆತ್ಮಕ್ಕೆ ಶಾಂತಿ ದೊರಕಲಿ

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...