Monday 29 July 2013

ಪ್ರಕೃತಿಪುರುಷ


ಅವಳಿಗೆ ಸಾಗರ ತಟ ಅಂದ್ರೆ ಅದಮ್ಯ ಪ್ರೀತಿ....
ಘಳಿಗೆಗೊಮ್ಮೆ ಬಂದು ಅವನ ಸೋಕುವ ಹಂಬಲ..."ಹೇಗಿದ್ದೀಯ ಗೆಳೆಯ" ಎನ್ನುವ ಬಯಕೆ...
ಬಂದೇ ಬರುತ್ತಿದ್ದಳು....ಕೇಳೇ ಕೇಳುತ್ತಿದ್ದಳು... 
ಅಲ್ಲೊಂದು ಬಂಡೆರಾಯ ..ಅವನಿಗೆ ಇವಳ ಕೆಣಕುವ ಆಸೆ.....ಅವಳ ಕಂಡು ಹೇಳಿದ.."ನಿನ್ನ ನಾ ತಡೆಯುತ್ತೇನೆ...ನಿನ್ನ ಹೋಗಗೊಡುವುದಿಲ್ಲ"...
ಅವಳದು ಅದೇ ಸ್ಥಿರ ನಗು.."ನಾ ನಿನ್ನ ದಾಟಿ ಹೋಗಬಲ್ಲೆ...ನನಗೆ ಅವನೆಂದರೆ ಪ್ರಾಣ.."
ಅವನ ರೊಚ್ಚಿಗೇಳಿಸುವಂತ ನಗು......ಅವನೂ ಗಟ್ಟಿಯಾಗಿ ನಿಂತ.....
ಇವಳು ಅಷ್ಟು ದೂರದಿಂದಲೇ ನಗುತ್ತಾ ಆದರೆ ರಭಸವಾಗಿ....ಅವನ ತಲುಪುವ ಹುರುಪಿನಿಂದ...ಬಂದೇ ಬಂದಳು...
ಬಂಡೆ ಸ್ವಲ್ಪವು ಅಲುಗಾಡಲಿಲ್ಲ.....ಅಷ್ಟೇ ರಭಸದಿಂದ ಹಿಂದೆ ಹೋದಳು ಅವಳು......
ಬಂಡೆರಾಯ ನಕ್ಕ...ಸೋತೆಯಲ್ಲ ಎಂಬಂತೆ ನಕ್ಕ....
ಈಕೆಯ ಮೊಗದಲ್ಲಿ ಅದೇ ನಗು....ಅವನ ರೊಚ್ಚಿಗೇಳಿಸುವ ಮುಗ್ಧ..ಸುಂದರ ನಗು...."ಗೆಳೆಯ...ಒಂದೊಮ್ಮೆ ನೀನಿರುವ ಆ ಇಡಿ ಸಾಗರ ತಟ ನಿನ್ನ ಹಾಗೆ ಬಂಡೆಯಾಗಿತ್ತು...ನಿನ್ನ ನಾ ಸೋಕಿ ಹಿಂದೆ ಬಂದಾಗ...ನಿನ್ನ ಅಣುಗಳು ನನ್ನೊಡನೆ ನನ್ನೊಡಲ ಸೇರಿಕೊಂಡವು.. ಪ್ರತಿ ಬಾರಿ ನಿನ್ನ ನಾ ಸೋಕಿದಾಗ ಇದೇ ಆಗುತ್ತದೆ...ಎಲ್ಲಿಯವರೆಗೆ ನೀನು ಇಡಿಯಾಗಿ ತಟದೊಡನೆ ತಟವಾಗಿ ಸೇರಿಕೊಳ್ವೆಯೋ ಅಲ್ಲಿಯವರೆಗೂ ಹೀಗೆ ಬರುತ್ತೇನೆ...ಆಮೇಲೆ ನೀನೂ ನನ್ನ ಪ್ರೀತಿಸುತ್ತೀಯ ...ತಟದೊಡನೆ ತಟವಾಗಿ...ನಾನು ಬಂದೇ ಬರುತ್ತೇನೆ ನಿನ್ನ ಪ್ರೇಮ ಕನ್ನಿಕೆಯಾಗಿ" ಅಂದ್ಲು.....
ಪ್ರಕೃತಿ ತನ್ನ ಸೌಂದರ್ಯ..ಸ್ನೇಹ, ಪ್ರೀತಿ, determination ತ್ಯಾಗದಿಂದ ಪುರುಷನನ್ನ ಗೆಲ್ಲುತಲೇ ಹೋಗುತ್ತಾಳೆ...ಇವರ ಮಿಲನಕ್ಕೆ ಇವರ ಮಿಲನಕ್ಕೆ ಭೂಮಿ ಸುಂದರವಾಗುತ್ತಾ ರೂಪಾಂತರಗೊಳ್ಳುತ್ತಾ ನಗುತ್ತಾಳೆ ...ಬದುಕುತ್ತಾಳೆ ...ಉಳಿಯುತ್ತಾಳೆ ..........

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...