Monday 29 July 2013






















ನಿನ್ನೊಡಲ ನೋಡುತ್ತಾ 

ನನ್ನನೇ ನಾನು ತೆರೆದುಕೊಳ್ಳುತ್ತಾ...
ನನ್ನಂತೆ ನೀನೋ ..

ನಿನ್ನಂತೆ ನಾನೋ..
ಅರಿಯದೆ ಹೋಗುತ್ತಿದ್ದೇನೆ ಕಾವೇರಿ...

ನಿನ್ನೊಳಗೆ ನನ್ನ ನೋಡಿದಾಗ...
ನಾನು ನೀನು ಬೇರೆಯಲ್ಲ ಅನಿಸಿದ್ದೇಕೆ...
ನಿನ್ನ ಕಲರವ
ನನ್ನದೇ ನಗು ಅನಿಸಿದ್ದೇಕೆ...
ನಡುವೆಲ್ಲೋ ನಿನ್ನ ಮೌನ
ನನ್ನೊಳಗಿನ ಸುಪ್ತ ಗಾನ ಅನಿಸಿದ್ದೇಕೆ...
ಅಲ್ಲೆಲೋ ನೀನು ಧುಮ್ಮಿಕ್ಕುವಾಗ
ನನ್ನೊಳಗಿನ ಭಾವನೆಗಳ ಮಹಾಪೂರ ಅನಿಸಿದ್ದೇಕೆ ..
ನೀನು ಕಡಲಿನೊಡನೆ ಬೆರೆಯಲು ಸರಸರನೆ ಹರಿವಾಗ...
ನಲ್ಲನೆಡೆಗಿನ ನನ್ನ ನಡೆಯು ನೆನಪಾದುದ್ದೇಕೆ...
ಶರಧಿಯೊಡಲ ಸೇರಿದೊಡನೆ ನಿನ್ನ ನೀನು ಮರೆತಾಗ
ನನ್ನ ಅವನ ಮಿಲನ ನೆನೆದು ಕೆಂಪಾದುದ್ದೇಕೆ ..
ಅರಿಯದೆ ಹೋಗುತ್ತಿದ್ದೇನೆ ಕಾವೇರಿ...


ನಿನ್ನೊಡಲ ನೋಡುತ್ತಾ
ನನ್ನನೇ ನಾನು ತೆರೆದುಕೊಳ್ಳುತ್ತಾ...
ನನ್ನಂತೆ ನೀನೋ ..
ನಿನ್ನಂತೆ ನಾನೋ..
ಎನಿಸುವಾಗ.....

ನನ್ನ ಕೊಡುಕೊಳ್ಳುವಿಕೆಯ ಪರಿ..
ನಿನ್ನ
ಏನು ಬಯಸದೆ ಪ್ರೀತಿ ಹರಿಸುವ ಪರಿ
ಮನದಲೆಲ್ಲೋ ಮಿಂಚಿನಂತೆ ಹೊಳೆದು...
ನೀನೆಲ್ಲಿ...ನಾನೆಲ್ಲಿ
ಅನಿಸಿದ್ದು ಸುಳ್ಳಲ್ಲ ಕಾವೇರಿ...:)))

ಮೊನ್ನೆ ತಲಕಾಡಿನ ಕಾವೇರಿಯ ತಟದಲ್ಲಿ ಅವಳೊಡನೆ ನಡೆದ ನನ್ನ ಮೌನ ಸಂಭಾಷಣೆ...:)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...