Monday 29 July 2013

ಬಹಳ ದಿನಗಳ ನಂತರ ಬ್ಲಾಗ್  ಕಡೆ ಮತ್ತೆ ಪಯಣ ....

ಹೀಗೊಂದು ಕಥೆ...ಕತೆಯಾಗದ ಕಥೆ ..


ಪ್ರಾಯಶ ೨೦ ವರ್ಷಗಳ ನಂತರ ಅಲ್ಲವೇ ನೀನು ಕರೆ ಮಾಡಿದ್ದು....."ಹಾಯ್" ಅಂದ ನಿನ್ನ ದನಿ ಸಂತಸದ ಅಲೆ ಎಬ್ಬಿಸಿದ್ದು ಸುಳ್ಳಲ್ಲ...ಭೂಮಿ ದುಂಡು ಅಲ್ಲವೇ ಎನಿಸಿತ್ತು...
ಮತ್ತೆಲ್ಲ computer ಯುಗಕ್ಕೆ ತಕ್ಕ ಹಾಗೆ ನಡೆದು ಹೋಗಿತ್ತು.....ಪ್ರತಿದಿನ messageಗಳ ವಿನಿಮಯ...ದಿನಕ್ಕೊಂದು ಫೋನ್ ಕರೆ......'sweet nothings".....ಅದೇನು ಮಾತಾಡಿಕೊಂಡೆವೋ...ಎಷ್ಟೆಲ್ಲಾ ಬ್ಯುಸಿ ಇದ್ದರು ಅದೇನು ಹಂಚಿಕೊಂಡೆವೋ ....ಸಮಯ ಹೊಂದಿಸಿ ಮಾತಾಡಲು ಎಷ್ಟೆಲ್ಲಾ ಕಸರತ್ತು ನಡೆಸಿದೆವೋ......ಎಲ್ಲವು ಸುಂದರ...ಬಹುಷಃ ಪ್ರೇಮಿಗಳು ಹೀಗೆ ಕಾತರಿಸಿರಲಾರರು ನಮ್ಮ ಹಾಗೆ ಮಾತಾನಾಡಲು....ನಿನ್ನ ಸಂಸಾರವ ನೀ ಪ್ರೀತಿಸಿದಷ್ಟು .......ನನ್ನ ಗಂಡ ಮಕ್ಕಳ ನಾ ಪ್ರೀತಿಸುವಷ್ಟು ...ಯಾರು ಪ್ರೀತಿಸಲಾರರೆನೋ .. ...ಆದರೂ...ನಮ್ಮಿಬ್ಬರದು ಅದೆಲ್ಲವ ಮೀರಿ ಬೆಳೆದ ಸ್ನೇಹ...ಪ್ರೀತಿ...ಪೂಜೆ...ಅರಳಿ ನಗುವ ಒಲುಮೆ...ಸಾಂಗತ್ಯ ಅಗತ್ಯ ಆಗದಂತೆ ....ಗೆಳೆತನ ಹೊರೆಯಾಗದಂತೆ.... ಮನಸಾಕ್ಷಿಗೆ ಉರುಳಾಗದಂತೆ .......... ಒಲವು ದೈಹಿಕವಾಗದೆ ದೈವಿಕವಾಗೆ ಉಳಿಯಲು ನಾವಿಬ್ಬರು ಬೇಟಿಯಾಗಲೇಬಾರದೆಂದು ನಿರ್ಧರಿಸಿಬಿಟ್ಟೆವಲ್ಲವೇ ...ನಿಜ ಗೆಳೆಯ...ಅರಳಿ ನಗುವ ಗೆಳೆತನ ಮುದುಡದೆ ಇರಲು....ನಿರ್ಮಲವಾಗಿ ಹರಿಯುತ್ತಿರುವ ನಿನ್ನ ನನ್ನ "ಬದುಕ ನದಿ " ..ಕದಡದಂತೆ ಇರಲು .....ಆ ನಿರ್ಧಾರದ ಅಗತ್ಯವಿತ್ತು.......
ನೆನಪಿದೆಯೇ ಗೆಳೆಯ...ಕೊನೆಯ ಬಾರಿ ನೀ ನನ್ನ ಅಂಗಳದಲ್ಲಿ ಬೇಟಿಯಾಗಿದ್ದು.೨೦ ವರ್ಷದ ಹಿಂದೆ.....!!!!..ಮಹಡಿಯ ಮೆಟ್ಟಿಲ ಮೊದಲ ಮೆಟ್ಟಿಲ ಬಳಿ ಅಲ್ಲವೇ ನಾವು ಮಾತನಾಡಿದ್ದು...ನನ್ನ ಕಾಲ ಬೆರಳು ಮೆಟ್ಟಿಲ ಮೇಲೆ ಬರೆದ ಚಿತ್ರಕ್ಕೆ ನೀನು ನಕ್ಕು ಬಿಟ್ಟೆದ್ದೆ ಅಲ್ಲವೇ ಗೆಳೆಯ....ಇಂದು ಅದೇ ಮೆಟ್ಟಿಲ ಮೇಲೆ ಕುಳಿತು ನಿನ್ನ ನಗೆಯ ನೆನಪಿಗೆ ತಂದುಕೊಂಡೆ .......ಇಷ್ಟು ಸಾಕು ಗೆಳೆಯ ಬದುಕಿಗೆ...ಎಲ್ಲೋ ನೀನು ನಗುವೇ.....ನಿನ್ನ ಇರುವಿಕೆ...ನಿನ್ನ ಒಲವಿದೆ ಬಲವಿದೆ ಎಂಬ ಭಾವ ಸಾಕು...ಮತ್ತೆ ನನಗೂ ಗೊತ್ತು...ನೀನು ಅದೇ ಭಾವದಿ ಬದುಕುವೆ ಎಂದು....ಬದುಕು ಎಷ್ಟು ಸುಂದರ ಅಲವೇ....ನೀನಲ್ಲಿ ನಾನಿಲ್ಲಿ...ನಮ್ಮವರೊಂದಿಗೆ...ನಮ್ಮನ್ನು ಪ್ರೀತಿಸುವವರೊಂದಿಗೆ...ನಾವು ಪ್ರೀತಿಸುತ್ತ...........ನಮ್ಮ ನಮ್ಮ ಪರಿಧಿಯಲ್ಲಿ...:))


No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...