Monday 29 July 2013

ಒಂದೆರಡು ಕಿರು ಕಥೆಗಳು 

ಹೇಳದೆ ಉಳಿದ ಅವಳ  ಕಥೆ...
ಅವಳು ಆ ಮರದ ಅಡಿಯಲ್ಲಿ ನೆರಳು ಬೆಳಕಿನಾಟವ ನೋಡುತ್ತಾ ನಿಂತಳು...ಅಂದು ಅವಳು ಅವನಿಗಾಗಿ ಬಂದಿರಲಿಲ್ಲ...ಆದರೂ ಅವನು ಅವಳ ಮನದ ಮೂಲೆಯಲ್ಲೇ ಇದ್ದ... ಅವನೊಡನೆ ಇದ್ದ, ಇಲ್ಲದ ಸಮಯ ನೆರಳು ಬೆಳಕಿನಂತೆ ಅವಳ ಮನದಲ್ಲಿ ಉಳಿದು ಹೋಗಿತ್ತು.....ಆ ಮರ ಅದಕ್ಕೆ ಸಾಕ್ಷಿಯಾಗಿತ್ತು ......

ಅವಳ ಮನೆಯ ಮನದ ಬಾಗಿಲಿಗೆ ಎರಡು ಆಯ್ಕೆಗಳಿವೆ ಎಂದು ಇದೆ ಅವಳಿಗೆ ಗೊತ್ತಿತ್ತು..ಒಂದು ಅವಳು ಒಳಗೇ ಉಳಿದು ಬಾಗಿಲು ಹಾಕಿಕೊಳ್ಳುವುದು..ಮತ್ತೊಂದು ಅವನನ್ನು ಕ್ಷಮಿಸಿ ಒಳ ಬರಮಾಡಿಕೊಂಡು ಬಾಗಿಲು ಹಾಕುವುದು ..ಅವಳು ಎರಡನೆಯದ ಆಯ್ದುಕೊಂಡಳು ..ಏಕೆಂದರೆ ಬದುಕು ಅವಳಿಗೆ ಕ್ಷಮಿಸುವುದ ಕಲಿಸಿತ್ತು .....:)))

ಎಲ್ಲಿಂದಲೋ ಬಂದ ಬಾಣ ಅವಳೆದೆಗೆ ನಾಟಿದಾಗ ತುಟಿ ಕಚ್ಚಿ ನೋವ ತಡೆದುಕೊಂಡ ಅವಳ ಜೀವ, ಬಿಲ್ಲು ಹಿಡಿದ ಕೈಗಳ ಹಿಂದಿನ ಮೊಗ ಕಂಡಾಗ ಉಸಿರಾಡುವುದ ಮರತೆ ಬಿಟ್ಟಿತು..................!!!!!

ಹೀಗೊಂದು ಕಥೆ...............
ಅವನು: ಅಳ್ತಾ ಇದ್ದೆಯಾ???
ಅವಳು: ಇಲ್ಲ, ಕಣ್ಣಲಿ ಧೂಳು....
ಕಣ್ಣೀರ ಅರಿಯದವನ ಮುಂದೆ, ಅವಳು ಏನು ಹೇಳಲು ಇಚ್ಛಿಸಲಿಲ್ಲ.....!!

ವಿಪರ್ಯಾಸ..!!!
ಕಥೆಯ ಬರೆದು ಮುಗಿಸಿದ ಅವಳು ನಿಟ್ಟುಸಿರಬಿಟ್ಟು ಹೊರೆ ಕಳಚಿದಂತೆ ನಿದ್ರೆಯ ಮೊರೆ ಹೋದಳು...
ಕಥೆ ಓದಿ ಮುಗಿಸಿದ ಇವ ನಿಟ್ಟುಸಿರಬಿಟ್ಟು ಹೊರೆ ಹೊತ್ತಂತೆ ನಿದಿರೆ ಬಾರದೆ ಮಗ್ಗುಲು ಬದಲಿಸಿದ.....!!!!


ಒಲ್ಲದ ಗಂಡನಿಗೆ ಮೊಸರಲ್ಲೂ (ಮೊಸರನ್ನ)ಕಲ್ಲು ಅನ್ನೋದು ಒಂದು ಗಾದೆ............
ದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಒಲೆ ಉರಿ ಹಾಕುವ ಹೆಂಡತಿಯ ಬಗ್ಗೆ ಕಾಳಜಿಯಿಂದ ಆವ ಮನೆಗೆ ಸೋಲಾರ್ ಹಾಕಿಸಿದ......
ಎಂದೂ ಯಾವುದನ್ನೂ positive ಆಗಿ ನೋಡದ ಅವಳು '"ಅಯ್ಯೋ ಸೌದೆ ರೇಟ್ ಅಷ್ಟ ಆಗಿದೆ ಪುಗಸಟ್ಟೆ ಬಿಸಿ ನೀರು ಸಿಗುತ್ತೆ ಅಂತ ಸೋಲಾರ್ ಹಾಕಿಸಿದ ಅಷ್ಟೇ"ಅಂದ್ಲು...........!!!!!


'ಸೂರ್ಯ ಮುಳುಗಿ ಹೋದ,. ಕತ್ತಲು ಆಯಿತು,....ಹೋ...ಎಲ್ಲ ಮುಗಿದು ಹೋಯ್ತು,'....ಅಂದ ಆವ...
'ಏನ್ ಮುಗಿತು ಮಹಾರಾಯ್ರೆ,......ನಾವು ಮಲಗಿ ನಾಳೆ ಮತ್ತೆ ಏಳೋದ್ರಲ್ಲಿ ಸೂರ್ಯ ಬಂದಿರ್ತಾನೆ,.....ಕತ್ತಲು ಹರಿದು ಬೆಳಗು ಮೂಡಿರುತ್ತೆ , ಹಕ್ಕಿಗಳು ಚಿಲಿಪಿಲಿ ಅಂತಾವೆ,....ಎಲ್ಲ ಎಂದಿನಂತೆ ನಡೆದಿರುತ್ತೆ,......ಏಳೋದ್ದಕ್ಕೆ ನಮಗೆ ಮನಸ್ಸಿರಬೇಕು ಅಷ್ಟೇ'.....ಅಂದ್ಲು ......

ಬದುಕು ಅಷ್ಟೇ ಅಲ್ವೇ............ನಮ್ಮ ಬದುಕು ನಮ್ಮ ಕೈಲಿ.....:))))


ಅವಳು ಅತ್ತುಕರೆದು ರಂಪ ಮಾಡಲಿಲ್ಲ, ...ಮೊಗ ತಿರುಗಿಸಿ ಹೋಗಲಿಲ್ಲ, .....ಧಡ್ ಎಂದು ಕದವ ಮುಚ್ಚಲಿಲ್ಲ,.. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಅವನನ್ನು ಒಬ್ಬ ಸಾಧಾರಣ ದಾರಿಹೋಕನ ಹಾಗೆ ನೋಡಿದ ಅವಳ ನೋಟ ಅವನನ್ನ ನಡುಗಿಸಿ ಬಿಟ್ಟಿತು.......ಕಥೆ ಮುಗಿದೇ ಹೋಯಿತು......................

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...