Monday 29 July 2013

'ತೇನ ವಿನಃ ಮಾಧವಾ'


'ತೇನ ವಿನಃ ಮಾಧವಾ' ಎಂದಳು ರಾಧೆ....
ರಾಧೆಯ ಕೊರಳಿಗೆ ಕೃಷ್ಣನ ಮುರಳಿ ಮಾರ್ದನಿಸಿತು ............
ಗೋಕುಲ ಬಿಟ್ಟು ಹೊರಟ ಕೃಷ್ಣನ ಬೀಳ್ಕೊಡಲು ಇಡಿ ನಂದನವೇ ಕಣ್ತುಂಬಿ ನಿಂತಿತ್ತು..... 

ಎಲ್ಲರ ನಡುವೆಯೂ 
ಕಣ್ಣಲ್ಲೇ ಬೆರೆತ ರಾಧಾಮಾಧವರ 
ಕಣ್ಣುಗಳಲ್ಲಿ ಕಂಡೂ ಕಾಣದ ಮಿಂಚು...
ತುಟಿಗಳಲ್ಲಿ ಇದ್ದೂ ಇರದ ನಗು .....
ಮನದ ಮೂಲೆಯಲ್ಲಿ ನೆನಪುಗಳ ಯಮುನೆ.... 
ನೆನಪು ಮುಗಿಯಲಿಲ್ಲ....
ಕಂಬನಿ ಆರಲಿಲ್ಲ....
ಅಂತಿಮ ಮಿಲನದ ಅಂತಿಮ ವಿದಾಯದ ......

ಏನು ಹೇಳದೆ ಎಲ್ಲ ಹೇಳಿದ ಕೃಷ್ಣ ಅವನ ದಾರಿ ಹಿಡಿದು ಹೊರಟೇಬಿಟ್ಟ ...
ಏನು ಕೇಳದೆ ಎಲ್ಲ ತಿಳಿದ ರಾಧೆ ಮಧುವನದಲ್ಲಿ ಉಳಿದು ಹೋದಳು .....
ಅವನ ಪ್ರೇಮದ ಕಣ್ಣೀರಿನ ಒಡತಿಯಾಗಿ ....
ಚಿರಪ್ರೇಮಿಯಾಗಿ....
ರಾಧೆಯಾಗಿ....

ಮತ್ತೆಂದೂ ಸಿಗಲೇ ಇಲ್ಲ
ಕೃಷ್ಣ ರಾಧೆಗೆ
ಮತ್ತೆಂದೂ ವಿದಾಯವಿರಲಿಲ್ಲ
ರಾಧೆಮುರಳಿಯ ರ ಪ್ರೀತಿಗೆ..:)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...