Monday 29 July 2013
















"ಪಾರಿಜಾತಕ " ಅನ್ನುವ ಒಬ್ಬ ರಾಜಕುವರಿ..ಸೂರ್ಯ ದೇವನ ಪ್ರೀತಿಸಿದಳು .ಅವನ ಮನ ಗೆಲ್ಲಲು ಇನ್ನಿಲದಂತೆ ಯತ್ನಿಸಿದರೂ ಅವ ಒಲಿಯಲಿಲ್ಲ...ಅಗ್ನಿಪ್ರವೇಶ ಮಾಡಿ ದೇಹ ತ್ಯಾಗ ಮಾಡಿದ ಆಕೆಯ ಬೂದಿಯಿಂದ ಒಂದು ಮರ ಹುಟ್ಟಿತು..ಆ ಮರದ ಹೂವೆ ಪಾರಿಜಾತ ಪುಷ್ಪ ..ತನ್ನಿನಿಯನ ನೋಡಬಾರದು ಎಂಬಂತೆ ರಾತ್ರಿಯಲ್ಲೇ ಅರಳಿ ಬೆಳಗು ಮೂಡುವುದರಲ್ಲಿ ಕಂಬನಿಯಂತೆ ಉದುರಿ ಬೀಳುತ್ತವೆ....:))' ಅದೇಕೋ ಈ ಹೂವು ನನಗೆ ಹೊವಾಗಿ ಅಲ್ಲದೆ ಹೆಣ್ಣಾಗಿಯೇ ಕಾಣುತ್ತಾಳೆ.......:))))

ಅನುದಿನವು ನಿನ್ನ ಪ್ರೀತಿಯ ಗುಂಗಿನಲ್ಲಿ
ಸಂಜೆ ರಂಗ ಒಡಲೊಳಗೆ ಬಸಿದು...
ನಿನ್ನ ಪ್ರೇಮದ ಸುಗಂಧ ಪೂಸಿ...
ನಿಶೆಯ ಅಂಗಳದಿ ನಿಶಬ್ದವಾಗಿ ನಿನಗಾಗಿ ಅರಳಿ
ನೀನೊಲಿಯದ ಮೇಲೆ ನನಗೇನಿದೆ ಎಂದು ನೊಂದು ಬೆಂದು
ಕಣ್ಣ ಹನಿಯ ತೆರದಿ ಉದುರುವ ನನ್ನ
ನೀ ಗುರುತಿಸಲಿಲ್ಲ ನಲ್ಲ.....

ಕೆಳಗೆ ಬಿದ್ದ ಹೂವುಗಳು ಪೂಜೆಗೆ ಸಲ್ಲದೆಂದರೆಲ್ಲ......

ಯಾರು ಏನು ಅಂದರೇನು...
ಕೆಳಗೆ ಬಿದ್ದವಳಾದರೇನು...
ಎಲ್ಲರಂತ ಹೂವು ನೀನು
ಅಂದೂ
ಇಂದೂ
ಮುಂದೆಂದೂ
ನನ್ನ ಮುಡಿಯನೇರು ನೀನು
ಎಂದು
ದೇವ ಹರಸಿದನಲ್ಲ...:))))) 

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...