Monday 10 July 2017

ಬಹಳ ಹಿಂದೆ ಒಂದು ಕಥೆ ಓದಿದ್ದೆ " A Glass of Milk " ಅನ್ನೋ ಇಂಗ್ಲಿಷ್ ಕಥೆ . ಒಬ್ಬ ಪುಟ್ಟ ಹುಡುಗ ಬಡತನದಲ್ಲಿ ಪುಸ್ತಕ ಮಾರಿ ಬದುಕ್ತಾ ಇರ್ತಾನೆ . ಅವನ ಓದಿಗೆ ದುಡ್ಡು ಇರೋದಿಲ್ಲ. ಒಮ್ಮೆ ಹೀಗೆ ಪುಸ್ತಕ ಮಾರೋವಾಗ ಬಹಳ ಆಯಾಸವಾಗಿ ಬಿಟ್ಟಿರುತ್ತಾನೆ . ಒಬ್ಬ ಹೆಣ್ಣು ಮಗಳು ಅವನಿಗೆ ಒಂದು ಲೋಟ ಹಾಲು ಕೊಟ್ಟು ಅವನ ಪುಸ್ತಕ ಕೊಂಡು , ಅವನಿಗೆ ಸಹೃದಯತೆ ತೋರಿರುತ್ತಾಳೆ .. ಮುಂದೆಂದೋ ಒಮ್ಮೆ ಅವಳಿಗೆ ಆರೋಗ್ಯ ತಪ್ಪಿದಾಗ ಅವಳು ಆಸ್ಪತ್ರೆ ಸೇರಿದಾಗ ಒಬ್ಬ ವೈದ್ಯ ಅವಳನ್ನ ಆರೈಕೆ ಮಾಡಿ ಕಷ್ಟ ಕಾಲದಲ್ಲಿ ಸಹಾಯ ಮಾಡ್ತಾನೆ. ಆಸ್ಪತ್ರೆಯ ಬಿಲ್ ಹಣವನ್ನ 'ಒಂದು ಲೋಟ ಹಾಲಿಗೆ " ವಜಾ ಮಾಡಲು ಹೇಳುತ್ತಾನೆ . ಇದು ಕಥೆ..
ಈಗ ಇದು ನೆನಪಾಗಲು ಕಾರಣ ಇಷ್ಟೇ ... ನಮ್ಮ ಜೊತೆ ಬೆಳೆದವರೆಲ್ಲ ಈಗ ದೊಡ್ಡವರಾಗಿದ್ದಾರೆ , ಬೇರೆ ಬೇರೆ ಕಡೆ ಇದ್ದಾರೆ , ನಮಗಿಂತ ಕಿರಿಯರೆಲ್ಲ ದೊಡ್ಡ ಹುದ್ದೆಯಲ್ಲಿದ್ದಾರೆ , ... ಇಷ್ಟು ದಿನ ಗೊತ್ತಾಗದೆ ಇದ್ದಿದ್ದು ಮಗನ admision ಅಂತ ಒಂದೆರಡು ಆಫೀಸ್ ಸುತ್ತುವಾಗ ಗೊತ್ತಾಗ್ತಾ ಇದೆ ... ಮೊನ್ನೆ ಹಾಗೆ ಒಂದು ಆಫೀಸ್ಗೆ ಹೋದಾಗ 'ಏ, ಚಿನ್ನಕ್ಕ ಅಲ್ವ " !! " ಹೇ ___ ನೀನು ಇಲ್ಲಿ so and soನ ಮಹರಾಯ ನಾ ಯಾರೋ ಅನ್ಕೊಂಡಿದ್ದೆ ' ... ಮತ್ತೆಲ್ಲ ಕೆಲಸ ನಿಮಿಷಗಳಲ್ಲಿಮುಗಿದದ್ದು ..!! ಎಂದೋ ಹಂಚಿಕೊಂಡ ಊಟ, ಎಂದೋ ಹೇಳಿಕೊಟ್ಟ ಪಾಠ , ಎಂದೋ ನೀಡಿದ್ದ ಸಾಂತ್ವನ, .... ಮತ್ತೆಂದೋ ಬೆನ್ನ ಹಿಂದೆ ಬರುತ್ತದೆ ... (ಅಪ್ಪ ಅಮ್ಮ ಮಾಡಿದ ಪುಣ್ಯ ಮಕ್ಕಳ ಕಾಯುತ್ತೆ ಅಂತ ಇದ್ರೂ ಅಮ್ಮ) ಸ್ವರ್ಗ ನರಕ ಎಲ್ಲ ಇಲ್ಲೇ ನಾವು ಮಾಡಿದ ಕೆಲಸದಲ್ಲೇ, ನಾವು ನೀಡಿದ ಪ್ರೀತಿಯಲ್ಲೇ ..... and again, as i always say, am blessed..))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...