Thursday 13 July 2017

ಭಾನುವಾರ ಅಂದ್ರೆ ನಮ್ ಮನೆದೇವ್ರು ನಾನೂ ಊರು ಸುತ್ತೋಕೆ ಹೋಯ್ತಿವಿ .. ಮಕ್ಕಳು ಮನೆಯಲ್ಲೇ ಇರ್ತಾರೆ . ಆವತ್ತು ರಜ ಅಂತ ತಡವಾಗಿ ಏಳ್ತಾರೆ . ಈ ಮಂಜು ಮನೆಯಲ್ಲಿದ್ರೆ ಮಕ್ಕಳಿಗೆ ಬೇಗ ಏಳಿ ಅಂತ "ಭಜನೆ"ಮಾಡ್ತಾರೆ ಅಂತಲೇ ಸುತ್ತೋಕೆ ಹೋಗೋದು.. (ಇವರಿಗೇನೋ ನಿದ್ರೆ ಬರೋದಿಲ್ಲ ಅವಾದ್ರೂ ಒಂದಷ್ಟು ಮಲಗಲಿ ಅಂತ) 
ನೆನ್ನೆ ಚುಂಚನಗಿರಿಗೆ ಹೋಗೋದು ಅಂತ ನಮ್ ಮನೆದೇವ್ರು ಹೇಳಿದ್ರು ..ಬಸ್ ಅಲ್ಲೇ ಹೋಗೋಣ ಅಂದ್ರು ( ನನಗೆ ಈ ಬಸ್ ಪಯಣ ಅಂದ್ರೆ ಆಗ್ಬರಕ್ಕಿಲ್ಲ .. ಒಸಿ ಹಂಗೆಯಾ ಒಂದ್ ತರಾ nauseated ತರ ).. ಗಾಡಿ ಓಡಿಸ್ತಾ ಇದ್ರೆ ನಿನ್ನ ಮುಖ ನೋಡದೆ ರಸ್ತೆನೇ ನೋಡ್ತಾ ಓಡಿಸಬೇಕು ಅದ್ಕೆ ಕಣಮ್ಮ ಅಂತ ಕಿವಿ ಮೇಲೆ ನಮ್ಮ ಬೃಂದಾವನ ತೋಟವನ್ನೇ ಇಟ್ರು !! ನಾನೂ ಒಂದ್ ಚೂರು ಓಡಿಸ್ತೀನಿ ನಿನಗೆ ಜಾಸ್ತೀ ಆಯಾಸ ಆಗೋದಿಲ್ಲ ಕಣಪ್ಪ ಅಂತ ಮಸ್ಕ ಹೊಡೆದರೆ ....... ನೀ ಗಾಡಿ ಓಡಿಸಿದರೆ ನಾವು ಬಾಲಗಂಗಾಧರಸ್ವಾಮಿನ (ತೀರಿ ಹೋದ ಮಠಾಧೀಶರು) ನೋಡಬೇಕು ಅಷ್ಟೇ , ನಾ ಓಡಿಸಿದರೆ ನಿರ್ಮಲಾನಂದ ಸ್ವಾಮಿಗಳನ್ನ(ಈಗಿನ ಮಠಾಧೀಶರು) ನೋಡಬಹುದು .. Choice is yours ಅನ್ನೋದೇ .... 
ಅದೇನ್ ಪುಣ್ಯ(!!!) ಮಾಡಿ ಕಟ್ಕೊಂಡ್ ಬಿಟ್ನೋ ಕಾಣೆ ))))))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...