Wednesday 12 July 2017

ಒಂದ್ ಕಥೆ 
ಶ್ರೀಮಂತ ಇರ್ತಾನೆ. ತನ್ನ ಸಿರಿವಂತಿಗೆಯ ಮೇಲೆ ಅವನಿಗೆ ಬಹಳಾನೇ ಅಭಿಮಾನ.ತನ್ನ ಇಡೀ ತೋಟ ಸುತ್ತುತ್ತಾ, ತನ್ನ ಬಗ್ಗೆ ತಾನೇ ಹೆಮ್ಮೆ ಪಡೋದು ಅವನ ಹವ್ಯಾಸಗಳಲ್ಲಿ ಒಂದು ! 
ಒಮ್ಮೆ ಹೀಗೆ ಸುತ್ತುವಾಗ ತೋಟದಿಂದ ಸ್ವಲ್ಪ ಮುಂದೆ ಒಂದು ಗುಡಿಸಲಲ್ಲಿ ಒಬ್ಬ ಬಡ ರೈತ ಕುಳಿತಿರ್ತಾನೆ..ತನ್ನ ಕೈಲಿ ಹಿಡಿದ ಮುಸುಕಿನ ಜೋಳವನ್ನ ದೇವರಿಗೆ ಧನ್ಯವಾದ ಹೇಳಿ ತಿಂತಾ ಇರ್ತಾನೆ..ಬಂದ ಸಿರಿವಂತನಿಗೆ ಸಾಮಾನ್ಯ ಔದಾರ್ಯದಿಂದ ಔಪಚಾರಿಕವಾಗಿ 'ತಿನ್ನುವೆಯಾ" ಏನು ಕೇಳುತ್ತಾನೆ .. 
ಶ್ರೀಮಂತ ನಕ್ಕು ಬಿಡ್ತಾನೆ. 'ಅಲ್ಲ ಇರೋದೇ ಒಂದು ಮುಸುಕಿನ ಜೋಳ!! ಅದನ್ನ ನನಗೆ ಬೇಕಾ ಅಂತ ಕೇಳೋದಲ್ಲದೆ ದೇವರಿಗೆ ಕೃತಜ್ಞತೆ ಬೇರೆ ಹೇಳ್ತೀಯಲ್ಲ, ಇನ್ನು ನನ್ನ ಹಾಗಿದ್ದರೆ ದೇವರಿಗೆ ಮಂದಿರವನ್ನೇ ಕಟ್ಟಿಸ್ತಾ ಇದೆಯೇನೋ' ಅಂತಾನೆ.
ರೈತ ಸುಮ್ಮನೆ ನಗ್ತಾನೆ.ಹಾಗೂ ಹೇಳ್ತಾನೆ 'ಈವತ್ತು ನನ್ನ ಕನಸಲ್ಲಿ ದೇವರು ಬಂದಿದ್ದ , ಈ ಕಣಿವೆಯ ಅತಿ ಸಿರಿವಂತ ಸತ್ತು ಹೋಗ್ತಾನೆ ಅಂತ ಹೇಳಿದ" ಅಂತಾನೆ.
ಸಿರಿವಂತ ರೈತನಿಗೆ 'ಕನಸುಗಳು ಅವಿವೇಕಿಗಳಿಗೆ ಮಾತ್ರ ಬೀಳೋದು' ಅಂತ ಸಿಡುಕಿ ಹೇಳಿ ಹೋಗ್ತಾನೆ...
ಆದ್ರೂ ಮನದ ಮೂಲೆಯಲ್ಲೆಲ್ಲೋ ಭಯವಾಗಿ ತನ್ನ ವೈದ್ಯನನ್ನ ಕರೆಯಿಸಿ ಪರೀಕ್ಷೆ ಮಾಡಿಸುತ್ತಾನೆ. ವೈದ್ಯ ಎಲ್ಲಾ ಸರಿಯಿದೆ ಏನೂ ಭಯವಿಲ್ಲ ಅಂತ ಹೇಳ್ತಾನೆ.
ಸಿರಿವಂತ ರಾತ್ರಿ ಇಡೀ ನಿದ್ರೆ ಬಾರದೆ ಹೊರಳಾಡ್ತಾನೆ. ನಸುಕು ಆಗುವುದು ಯಾವಾಗ ಅಂತ ಕಾಯ್ತಾನೆ .ಬೆಳಿಗ್ಗೆ ಬೆಳಿಗ್ಗೆ ಎದ್ದು ರೈತನ ಕನಸಿನ ಬಗ್ಗೆ ತನ್ನಲ್ಲೇ ನಗುತ್ತಾ ಎಂದಿನ ಕೆಲ್ಸ ಶುರು ಮಾಡಲು ಹೊರಡುತ್ತಾನೆ ...
ತೋಟದ ಒಬ್ಬ ಕೆಲಸದವ ಬಂದು 'ಸ್ವಾಮಿ, ನಮ್ಮ ತೋಟದ ಆಚೆ ಮೂಲೆಯಲ್ಲಿದ್ದ ಆ ರೈತ ಸತ್ತು ಹೋದ 'ಅಂತಾನೆ !!!!
ಸಿರಿವಂತನಿಗೆ ಅದ್ಯಾಕೋ ತನ್ನ ಬಗ್ಗೆ ನಾಚಿಕೆ ಎನಿಸುತ್ತದೆ ...
ಸಿರಿವಂತಿಕೆ ಅಂದ್ರೆ ........ ಬರೀ ಹಣವೇ ಅಲ್ಲ!!ಸಿರಿವಂತಿಕೆ ಅಂದ್ರೆ ನಮ್ಮ ಸಹಜೀವಿಗಳ ಜೊತೆ ನಾವು ಹೊಂದಿರೋ ಬಾಂಧವ್ಯ ಕೂಡ ಏನೋ
ಭಾವಾನುವಾದಿಸಿ ಹಂಚಿಕೊಳ್ಳಬೇಕು ಅನಿಸ್ತು ))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...