Thursday 23 March 2017

ಪಕ್ಕದ ಮನೆಯಲ್ಲಿ ಹಿರಿಯ ದಂಪತಿಯಿದ್ದಾರೆ . ಆ ಹಿರಿಯಾಕೆ ಬೆಳಿಗ್ಗೆ ನಾ ಬಾಗಿಲಿಗೆ ನೀರು ಹಾಕುವಾಗಲೋ ಅಥವ ಸಂಜೆ ಗಿಡಗಳನ್ನ ನೋಡುವಾಗಲೋ ಹೊರಗಿದ್ದರೆ ಮಾತನಾಡಿಸ್ತಾರೆ. ಊಟ ಆಯ್ತಾ ಸುನಿತಾ ಅನ್ನೋದ್ರಿಂದ ಹಿಡಿದು ಸಮಯ ಸಿಕ್ಕಾಗ ಕೆಲವೊಂದು ಅಡುಗೆಗಳನ್ನೂ ಮಾಡೋದು ಹೇಳಿಕೊಡ್ತಾರೆ .. ಮೊನ್ನೆ ಸಂಜೆ "ಮಹಿಳಾ ದಿನ ಅಂತೆ , ಆ FM ಅಲ್ಲಿ ಹೇಳ್ತಾ ಇದ್ರು ಹಾಡುಗಳೂ ಬರ್ತಾ ಇದೆ ಅಂದ್ರು .. 'ಹೊಂ ಮಾ, ಈವತ್ತು ಮಹಿಳಾ ದಿನ ಅಂತೆ ' ಅಂದೆ ... 'ಅಯ್ ಏನ್ ಹಾಕೊಂಡ್ರೆ ಏನು, ಏನ್ ಕೇಳಿದ್ರೆ ಏನು ಬಿಡಿ ಸುನೀತಾ, ಒಂದ್ ದಿನ ಅಷ್ಟೇ .. ಹೆಣ್ ಮಕ್ಲಿಗೆ , ಹೆಂಗಸರಿಗೆ ಮರ್ಯಾದೆ ಕೊಡದ ಕಡೆ ದೇವ್ರು ಸಾಥ್ ಕೊಡಲ್ಲ 'ಅಂದ್ರು .. ನಕ್ಕು 'ಇದ್ಯಕ್ಕಮ್ಮ ಹಿಂಗಂತೀರಾ ' ಅಂದೆ
'ಕೇಳ್ಕೊಳಿ, ಈ ಮಹಾಭಾರತದ ಭೀಷ್ಮ..ರಾಮಾಯಣದ ಜಟಾಯು ಇಲ್ವಾ , ಇವೆರಡು ಪಾತ್ರಗಳ ಸಾವು ಒಂದ್ ತರ ಒಂದೇ ತರ (same to same ಅಂದ್ರು) !!! ಜಟಾಯು ತಾಯಿಯಂತಹ ಸೀತೆಗಾಗಿ ಹೋರಾಡ್ತಾ ಹೋರಾಡ್ತಾ ಪೆಟ್ಟಾಗಿ ರಾಮನ ಬರುವುವಿಕೆಗಾಗಿ ಕಾಯ್ತಾನೆ , ರಾಮ ಬಂದಾಗ ಅವನ ತೊಡೆಯ ಮೇಲೆ ತಲೆಯಿಟ್ಟು ಪ್ರಾಣ ಬಿಡ್ತಾನೆ .. ಅವನ ಸಾವು ಭಗವಂತನ ತೊಡೆಯ ಮೇಲೆ ಆಗುತ್ತೆ ... ಭೀಷ್ಮ ಮಗಳಂತಹ ದ್ರೌಪದಿಯ ವಸ್ತ್ರಾಪಹರಣದ ಕಾಲದಲ್ಲಿ ಮೌನವಾಗಿ ಕಣ್ ಮುಚ್ಚಿ ಕುಳಿತುಕೊಳ್ತಾನೆ . ಮಹಾಭಾರತದ ಯುದ್ಧದಲ್ಲಿ ಕಡೆಗೆ ತನ್ನ ಸಾವಿಗೆ ತಾನೇ ಸಮಯ ಗೊತ್ತು ಮಾಡಿಕೊಂಡು ಶರಶ್ಯಯೆಯಲ್ಲಿ ಮಲಗಿ ಸಾವಿಗೆ ಕಾಯ್ತಾ ತನ್ನ ತಪ್ಪುಗಳಿಗೆ ಮರುಗುತ್ತಾ, ಪಶ್ಚಾತಾಪ ಪಡ್ತಾ ಸಾಯ್ತಾನೆ ಕಡೆಗೆ...ಯತ್ರ ನಾರ್ಯಸ್ತು ....... ಕೇಳಿಲ್ವಾ ' ಅಂದ್ರು
ಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು .... :)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...