Thursday 23 March 2017

ನಮ್ಮ ರಕ್ಷಣಾ ಮಂತ್ರಿಯಾಗಿದ್ರಲ್ಲ ಮನೋಹರ ಪರಿಕರ್ ಅವರು ಹೇಳಿದ ಒಂದು ಕಥೆ/ಪ್ರಸಂಗ ...
ನಾನು ಗೋವಾ ರಾಜ್ಯಕ್ಕೆ ಸೇರಿದವನು. ನಮ್ಮ ಹಳ್ಳಿ ಕಲ್ಲಂಗಡಿ ಹಣ್ಣಿಗೆ ಭಾರಿ ಪ್ರಸಿದ್ಧ. ನಾ ಸಣ್ಣವನಿದ್ದಾಗ ನಮ್ಮ ಹಳ್ಳಿಯಲ್ಲಿ ಪ್ರತಿ ಸುಗ್ಗಿಯ ನಂತರ ಕಲ್ಲಂಗಡಿ ಹಣ್ಣು ತಿನ್ನುವ ಸ್ಪರ್ಧೆ ಇರ್ತಾ ಇತ್ತು .. ಮಕ್ಕಳು ತಮಗೆಷ್ಟು ಬೇಕೋ ಅಷ್ಟು ಹಣ್ಣು ತಿಂದು ಗೆಲ್ಲಬಹುದಿತ್ತು... ವರುಷಗಳ ನಂತರ, ನಾ ಮುಂಬೈಗೆ ಓದಲು ಹೋದೆ.. ಒಂದ್ ೬ ವರ್ಷಗಳ ಓದು ಮುಗಿದ ಮೇಲೆ ಹಳ್ಳಿಗೆ ಹಿಂದಿರುಗಿದೆ. .. ಅಲ್ಲಿದ್ದ ದಿನಗಳಲ್ಲಿ ನಮ್ಮೊರಿನ ಪ್ರಸಿದ್ಧ ಕಲ್ಲಂಗಡಿ ಹಣ್ಣನ್ನು ಹುಡುಕಿ ಮಾರುಕಟ್ಟೆಗೆ ಹೋಗಿದ್ದೆ . ಎಲ್ಲಿ !!ಅಂದಿನ ದೊಡ್ಡ ದೊಡ್ಡ ಹಣ್ಣುಗಳ ಸುಳಿವೇ ಇರಲಿಲ್ಲ. ಇದ್ದ ಸಣ್ಣ ಹಣ್ಣುಗಳು ನನ್ನ ಮನ ಸೆಳೆಯಲಿಲ್ಲ.
ಆ ಹಣ್ಣುಗಳು ಬೆಳೆದು ತಿನ್ನುವ ಸ್ಪರ್ಧೆ ಇಡ್ತಾ ಇದ್ದ ರೈತರ ಮನೆಗೆ ಹೋದೆ .. ಈಗೆಲ್ಲ ಅವರ ಮಕ್ಕಳದೇ ಕಾಲವಾಗಿತ್ತು... ಅವರೂ ಅಂತಹ ಸ್ಪರ್ಧೆ ನಡೆಸ್ತಾ ಇದ್ರೂ ಅದರಲ್ಲಿ ಒಂದು ದೊಡ್ಡ ವ್ಯತ್ಯಾಸವಿತ್ತು. ಹಿರಿಯ ರೈತ ತಾ ಬೆಳೆದ ದೊಡ್ಡದೊಡ್ಡ ಹಣ್ಣುಗಳನ್ನ ಸ್ಪರ್ಧೆಗೆ ಇಟ್ಟು , ಮಕ್ಕಳಿಗೆ ಹಣ್ಣು ತಿನ್ನುವಾಗ ಹಣ್ಣಿನಬೀಜಗಳನ್ನ ಕಚ್ಚದೆ ಒಂದು ಕಡೆ ಹಾಕಲು ಹೇಳ್ತಾ ಇದ್ದ. ಆ ಬಲಿತ ಬೀಜಗಳನ್ನ ಮುಂದಿನ ಬಿತ್ತನೆಗೆ ಒಣಗಿಸಿ ಇಡ್ತಾ ಇದ್ದ .. ಒಳ್ಳೆಯಹಣ್ಣುಗಳನ್ನ ಸ್ಪರ್ಧೆಗೆ ಇಡ್ತಾ ಇದ್ದ ಕಾರಣ ಅವನಿಗೆ ಒಳ್ಳೆಯ ಬಿತ್ತನೆ ಬೀಜಗಳು ಲಭ್ಯವಾಗುತ್ತಾ ಇದ್ವು.... ವ್ಯವಸ್ಸಾಯ ಯಾವಾಗ ಅಪ್ಪನಿಂದ ಮಗನಿಗೆ ಬಂತೋ, ಅವನು ಬೆಳೆದ ದೊಡ್ಡ ದೊಡ್ಡ ಹಣ್ಣುಗಳನ್ನ ಮಾರುಕಟ್ಟೆಗೆ ಕಳಿಸ್ತಾ ಇದ್ದ.. ಒಳ್ಳೆ ಹಣ ಗಳಿಸಿದ , ಸಣ್ಣ ಸಣ್ಣ ಹಣ್ಣುಗಳನ್ನ ಸ್ಪರ್ಧೆಗೆ ನೀಡ್ತಾ ಇದ್ದ ... !!! ಬರುಬರುತ್ತಾ ಬಿತ್ತನೆ ಬೀಜದ ಗುಣಮಟ್ಟ ಕಡಿಮೆಯಾದನಂತೆಲ್ಲ , ಹಣ್ಣುಗಳು ಸಣ್ಣದಾಗುತ್ತಲೇ ಹೋದವು ... ಕಡೆಗೆ ದೊಡ್ಡ ಹಣ್ಣುಗಳು ಕಣ್ಮರೆಯಾದವು !! ಇದು ನೋವಿನ ಸಂಗತಿ
ಸಂಸ್ಕಾರ ಸಂಸ್ಕೃತಿ ಕೂಡ ಹೀಗೆ.. ಅದೆಷ್ಟೋ ವರುಷಗಳ ಪರಿಶ್ರಮದಿಂದ ಬದುಕಿನ ಒಂದು ಚೆಂದದ ಭಾಗವಾಗಿರುತ್ತದೆ .... ಒಂದಿಬ್ಬರು, ಮತ್ತೊಂದಿಬ್ಬರು, ಇನ್ನೊಂದಿಬ್ಬರು ಅದನ್ನ ಮೂಲೆಗೊತ್ತುತ್ತಾ ಬಂದಂತೆ ಅದು ಮರೆಯಾಗುತ್ತಾ ಹೋಗುತ್ತದೆ .... ಹೆಗಲ ಮೇಲಿರುವ ಅಂತಹ heritage/culture ನ ನಮ್ಮ ಕಿರಿಯರ ಹೆಗಲ ಮೇಲೆ ಸರಿಸುವ ಹೊಣೆ ನಮ್ಮದೇ ಅನಿಸ್ತು ...
ಭಾವಾನುವಾದಿಸಿ ಹಂಚಿಕೊಳ್ಳಬೇಕು ಅನಿಸ್ತು :)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...