Thursday 23 March 2017

ಸಂಜೆ ಹೂ ತರೋಣ ಅಂತ ಕೆ ಆರ್ ಮಾರುಕಟ್ಟೆಗೆ ಹೋಗಿದ್ವಿ . ಹೂ ತೆಗೆದುಕೊಂಡು ವಾಪಸ್ಸು ಬರ್ತಾ ಇದ್ವಿ ... ನಮ್ಮ ವಿ ವಿ ಪುರಂ ಕಡೆ ಬಂದಾಗ ಒಂದು 'ಟೈಗರ್' (ಈ ನೋ ಪಾರ್ಕಿಂಗ್ ಅಲ್ಲಿ ನಿಲ್ಲಿಸಿದ ಗಾಡಿಗಳನ್ನ ಹೊತ್ತೊಯ್ಯುವ ವಾಹನ !!) ನಮ್ಮ ಮುಂದೆಯಿಂದಾನೇ ಹೋಯ್ತು ... ನಮ್ಮ ಮನೆದೇವ್ರು ಶುರು ಮಾಡಿದ್ರು ' ನಮ್ ಜನಕ್ಕೆ ಬುದ್ದಿನೇ ಇಲ್ಲ. ಇಲ್ಲೇ ಬರುತ್ತೆ ಅಂತ ಗೊತ್ತಿದ್ದೂ ಗಾಡಿ ಅದ್ಯಾಕ್ ಹಂಗೆ ನಿಲ್ಲಿಸ್ತಾರೋ ಕಾಣೆ, ಅದೇನ್ ತಲೇಲಿ ಜೇಡಿ ಮಣ್ಣು ಇದ್ಯೋ ಇಲ್ಲ ದುಡ್ಡು ಹೆಚ್ಚಾಗಿದೆಯೋ ಗೊತ್ತಿಲ್ಲ .. ಮುನ್ನೂರು ರೂಪಾಯಿ ಸುಮ್ನೆ ಬರುತ್ತಾ 'ಅಂತ ಶುರು ಮಾಡಿದ್ರು ... ನನಗೋ ಹಿಂದೊಮ್ಮೆ ನನ್ನ ತಪ್ಪಿಲ್ಲದೆ ಕೂಡ ಗಾಡಿ ಹೊತ್ತೊಯ್ದು ನನ್ನ ಮಗ ಬಂದು ಸ್ಟೇಷನ್ ಯಿಂದ ಗಾಡಿ ಬಿಡಿಸಿಕೊಂಡು ಬಂದಿದ್ದ ಗಿಲ್ಟು !! ಜೊತೆಗೆ ಮಂಜುಗೆ ಹೇಳದೆ ಉಳಿದಿದ್ದ ಗಿಲ್ಟು !! ನನ್ನನ್ನೇ ಬೈತಾ ಇದ್ದಾನೇನೋ ನನ್ನ ಗಂಡ ಅನ್ನೋ ಕಳ್ಳ ಮನಸ್ಸು :) "ಹೋಗ್ಲಿ ಬಿಡಪ್ಪ , ಕಟ್ಟವರು ಕಟ್ಕೊಳ್ತಾರೆ ನಮಗ್ಯಾಕೆ ನಾವು ಸರಿಯಾಗಿದ್ರೆ ಸಾಕಲ್ವ ' ಅಂದ್ರೆ ಬಿಡಬೇಕಲ್ಲ .... " !@#$#%## ' ಅಂತೆಲ್ಲ ಶುರು ಮಾಡಿಕೊಂಡ್ರು .... ಕಡೆಗೆ ತಡೆಯಲ್ಲಾರದೆ 'ಏನ್ ಈವಾಗ ಆ ಮಾತು ಸಾಕು.. ನಿಲ್ಲಿಸ್ತೀಯೋ ಇಲ್ಲ ಗಾಡಿಯಿಂದ ನೆಗೆದು ಬಿಡ್ಲೊ !!" ಅಂದೆ ... 'ಅಯ್ ಬುಡವ್ವ ಅದಕ್ಕ್ಯಾಕೆ ಇಷ್ಟ್ ಸಿಟ್ಕೊಳ್ತೀಯಾ ' ಅಂತ ಮಾತಿಗೆ ಬ್ರೇಕ್ ಹಾಕಿದ್ರು ....
ಕಳ್ಳ(ಳ್ಳಿಯ)ನ ಮನಸ್ಸು ಹುಳ್ ಹುಳ್ಳಗೆ ಅನ್ನೋದು ನಿಜವೇನೋ :)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...