Thursday 23 March 2017

ಒಬ್ಬ ರಾಜ . ಒಳ್ಳೆಯವ .. ಮೊದ್ಲೇ ರಾಜ ಅದರ ಮೇಲೆ ಲಕ್ಷ್ಮಿ ಅವನರಮನೆಯಲ್ಲಿ ಕೈ ಕಟ್ಟಿ ಕುಳಿತ್ತಿದ್ದಳು . ಚಿನ್ನ ಬಟ್ಟಲ್ಲಲ್ಲೇ ಊಟ ಮಾಡ್ತಾ ಇದ್ದ . ಆಹಾರದ ವಿಷ್ಯದಲ್ಲಿ ತುಂಬಾನೇ ಆಸಕ್ತಿ . ಹೊಟ್ಟೆ ತುಂಬಾ ರುಚಿರುಚಿಯಾಗಿ ತಿನ್ತಾ ಇದ್ದ... ಒಮ್ಮೆ ಅವನು ಒಂದು ಯುದ್ಧಕ್ಕೆ ಹೋಗಬೇಕಾಗುತ್ತೆ . ಸರಿ ಸೈನ್ಯದ ಜೊತೆಗೆ ಅವನ ಆಹಾರದ ಆಸಕ್ತಿ ತಿಳಿದಿದ್ದ ಮಂತ್ರಿ ೧೦೦ ಒಂಟೆಗಳ ಮೇಲೆ ಆಹಾರ ಸಾಮಗ್ರಿಗಳನ್ನ ಹೊರಡಿಸ್ತಾನೆ ... ಒಂದಷ್ಟು ದಿನ ಯುದ್ಧ ನಡೆಯುತ್ತದೆ .. ದುರಾದೃಷ್ಟಕ್ಕೆ ರಾಜ ಯುದ್ಧದಲ್ಲಿ ಸೋತು ಹೋಗ್ತಾನೆ . ಸೆರೆಯಾಗ್ತಾನೆ .. ಒಂದು ದ್ವೀಪದಲ್ಲಿ ಅವನನ್ನ ಇರಿಸಲಾಗುತ್ತದೆ . ಜೊತೆಗೊಬ್ಬ ಅಡುಗೆಯವ ಇರ್ತಾನೆ. ಒಂದಷ್ಟು ದಿನಗಳ ನಂತರ ಅಡುಗೆಯ ಸಾಮಗ್ರಿಗಳೆಲ್ಲ ಮುಗಿದಿರುತ್ತದೆ .. ರಾಜ ಹಸಿವು ಅಂದಾಗ ಅಡುಗೆಯವ ಉಳಿದ ಒಂಚ್ಚುರು ಅಕ್ಕಿಯನ್ನೇ ಒಲೆಯ ಮೇಲಿಟ್ಟು ದ್ವೀಪದಲ್ಲಿ ತಿನ್ನೋ ಅಂತಹ ಹಣ್ಣಿದೆಯೇನೋ ಎಂದು ಹುಡುಕಲು ಹೋಗುತ್ತಾನೆ ... ರಾಜ ಹಾಗೆ ಮರದ ಕೆಳಗೆ ಒರಗಿರ್ತಾನೆ .. ಒಂದು ನಾಯಿ ಬಂದು ಮಡಿಕೆಯನ್ನ ಉರುಳಿಸಿ ಅರೆಬೆಂದ ಅನ್ನವನ್ನೇ ತಿಂದು ಹೊರತು ಹೋಗುತ್ತದೆ ... ರಾಜ ಅದನ್ನ ಓಡಿಸುವ ಯತ್ನವನ್ನೂ ಮಾಡದೆ ನಗುತ್ತಾನೆ .... ಅಡುಗೆಯಾತ ಬಂದಾಗ ಉರುಳಿದ ತಪ್ಪಲೆ ಹಾಗು ನಗುವ ಅರಸನನ್ನ ನೋಡುತ್ತಾನೆ .. ಅರಸ ಅವನಿಗೆ 'ನೆನ್ನೆ ಮೊನ್ನೆಯವರೆಗೂ ೧೦೦ ಒಂಟೆ ಹೊರುವಷ್ಟು ಆಹಾರ ನನ್ನದಾಗಿತ್ತು .... ಈಗ ನೋಡು ಒಂದು ನಾಯಿಗೆ ಕೂಡ ಸಾಲದಂತಾಗಿದೆ ... ಬದುಕೆಂದರೆ ಇದೆ ಏನೋ ...ಒಮ್ಮೆ ಅತೀವೃಷ್ಟಿ ಮತ್ತೊಮೆ ಅನಾವೃಷ್ಟಿ .... ಎರಡನ್ನೂ ತುಲನೆ ಮಾಡಿದಾಗ ನಾನೆಷ್ಟರವನು ಎಂದರಿವಾಗಿ ನಗು ಬಂತು ' ಅಂದ . ಕಣ್ಣ ತುಂಬಾ ನೀರು ತುಂಬಿಕೊಂಡ ಅಡುಗೆಯವ ತಾ ಹುಡುಕಿ ತಂದಿದ್ದ ಹಣ್ಣುಗಳನ್ನೇ ರಾಜನಿಗೆ ನೀಡುತ್ತಾನೆ .. ಅದನ್ನೇ ಪ್ರೀತಿಯಿಂದ ತಿನ್ನುತ್ತಾನೆ ರಾಜ ...
ಓದಿದ ಮೇಲೆ ಭಾವಾನುವಾದಿಸಿ ಸುಮ್ನೆ ಹಂಚಿಕೊಳ್ಳಬೇಕು ಅನಿಸ್ತು :))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...