Friday 3 March 2017

ನಮ್ಮ ಮನೆಯ ಒಂದೆರಡು ಮನೆಯಾಚೆ ಒಂದು ಸಂಸಾರ. ಮನೆಯ ಯಜಮಾನ ಹತ್ತಿರದ ಹಳ್ಳಿಯಲ್ಲಿ ಒಂದು ಪಡಿತರ ಅಂಗಡಿ ನಡೆಸ್ತಾರೆ, ಹೆಚ್ಚೇನೂ ಓದಿಲ್ಲದೆ ಇದ್ರೂ ಸೊಸೈಟಿ ನಡೆಸಿಕೊಂಡು ಹೋಗೋ ಅಷ್ಟು ಗೊತ್ತಿದೆ. ಹಳ್ಳಿಯಲ್ಲಿ ಒಂದಷ್ಟು ಹೊಲಗದ್ದೆ ಇದೆ ..ಅವರ ಹೆಂಡತಿ ಓದಿಲ್ಲ . ಮನೆಯನ್ನ ನೋಡಿಕೊಂಡು ಹೋಗ್ತಾರೆ. ಇಬ್ಬರು ಗಂಡು ಹುಡುಗರು . ಸುಮಾರಾಗಿ ಓದಿಕೊಂಡಿದ್ದಾರೆ . ದೊಡ್ಡವನು ತಂದೆಗೆ ಸಹಾಯಕನಾಗಿ ಅಂಗಡಿಗೆ ಹೋದ್ರೆ , ಚಿಕ್ಕವನು ಎಲ್ಲೋ ಬೇರೆ ಕಡೆ ಕೆಲಸಕ್ಕೆ ಹೋಗ್ತಾನೆ . ಅವರು ಈಗಿರುವ 20 x30 ಮನೆ ಕೊಂಡಾಗ ಮಕ್ಕಳಿಗೆ ಮದ್ವೆ ಆಗಿರಲಿಲ್ಲ. ಹಿರಿಯ ಮಗನ ಮದುವೆ ಮಾಡಿದ ನಂತರ ಮನೆಯ ಮೇಲೊಂದು ಮನೆ ಕಟ್ಟಿ, ಅದರ ಮೇಲೊಂದೆರಡು ಕೋಣೆಗಳನ್ನ ಕಟ್ಟಿ ಕೆಳಗಿನ ಮನೆಯನ್ನ ಬಾಡಿಗೆಗೆ ಕೊಟ್ಟಿದ್ರು .(ಅವ್ರ್ಗೆ ಇರ್ಬೇಕು ಅನಗಂಟ ಒಟ್ಟೊಟಿಗಿರ್ಲಿ ಬಿಡ್ರಲಾ , ಆಮ್ಯಾಕೆ ಅವ್ರಿಗ್ ಸೇರಿದ್ದು ಅಂತಾರೆ ಆ ಹಿರಿಯಾಕೆ!! ) ಕಿರಿಯನ ಮದುವೆ ಆದ ನಂತರ ಮನೆಯನ್ನ ಖಾಲಿ ಮಾಡಿಸಿಕೊಂಡು ಅವರೇ ಇಟ್ಟುಕೊಂಡ್ರು . ಮನೆಗೆ ಬಂದ ಇಬ್ಬರು ಸೊಸೆಯಂದಿರು ಕೂಡ ಸಣ್ಣವರೇ . ಒಳ್ಳೆಯ ಹೆಣ್ಣುಮಕ್ಕಳು.. ಹೊಂದಿಕೊಂಡು ಹೋಗೋ ಮಕ್ಕಳು .. ಅವಕ್ಕೆ ಈಗ ಒಂದೊಂದು ಪುಟ್ಟ ಕೂಸುಗಳು.. ಒಬ್ಬಳು ಕೆಲಸ ಮಾಡಿಕೊಂಡರೆ ಮತ್ತೊಬ್ಬಳು ಸೊಂಟಕ್ಕೆ ಇಬ್ಬರೂ ಮಕ್ಕಳನ್ನ ಇಟ್ಕೊಂಡು ತಿನ್ನಿಸೋದೋ ಆಟ ಆಡಿಸೋದೋ ಮಾಡ್ತಾಳೆ and vice-versa ..ಆ ಹಿರಿಯಾಕೆ ಕೂಡ ಮಕ್ಕಳನ್ನ ಮನೆ ಮುಂದೆ ಕೂಡಿಸಿಕೊಂಡೋ, ಎತ್ತಿಕೊಂಡೋ ಓಡಾಡ್ತಾರೆ ... ಒಂದು ದಿನಕ್ಕೂ ಹೊರಗೆ ಕೇಳೋ ಹಾಗೆ ಜಗಳ ನಡೆಸಿದ್ದಾಗಲಿ , ಅಕ್ಕಪಕ್ಕದವರೊಡನೆ ಮತ್ತೊಬ್ಬರ ಮೇಲೆ ದೂರು ಹೇಳೋದಾಗಲಿ ಕಂಡಿಲ್ಲ . ಎದುರು ಸಿಕ್ಕಾಗ ' ಆಂಟಿ , ಊಟ ಆಯ್ತಾ?' ಅಂತ ಅವರು ಮಾತಾಡಿಸಿದರೆ .. ಆ ಕೂಸುಗಳು ಆಚೆ ಈಚೆ ಓಡಾಡುವಾಗ ನಾನೂ ಮಾತನಾಡಿಸ್ತಿನಿ ಎತ್ತಿಕೊಳ್ತಿನಿ....
ಈಗ ಸಂಜೆ ಹೊರಗೆ ಬಾಗಿಲು ಕಸ ಗುಡಿಸ್ತಾ ಇದ್ದೆ .. ಆ ಹಿರಿಯಾಕೆ ದೊಡ್ಡ ಮಗನ ಮಗುವನ್ನ ನಡೆಸಿಕೊಂಡು ಹೋಗ್ತಾ ಇದ್ರು 'ಎಲ್ ಹೋಗಿದ್ದೆ ಪುಟ್ಟಿ?' ಅಂದೆ ..'ಚಿಕ್ಮಮನ್ಗೆ (ಚಿಕ್ಕಮ್ಮನಿಗೆ) ಮಾತೆ (ಮಾತ್ರೆ) ತಲೋಕೇ (ತರೋಕೆ) ಅಂತ ಹೇಳ್ತು ಮುದ್ಮುದ್ದಾಗಿ .. 'ಅವ್ಳ್ಗೆ ಉಸಾರಿಲಾ , ಇನಕಲ್ಗೋಗಿದ್ವಿ(ಇಣಕಲ್) ಮಾತ್ರೆ ತರೋಕೆ ' ಅಂದ್ರು ಆಕೆ ...
ಸುಂದರವಾಗಿ ಬದುಕೋಕೆ ವಿದ್ಯೆ ಒಂದೇ ಸಾಧನ ಅಲ್ಲ , ಕಲಿತ/ಕಲಿಸಿದ ಸಂಸ್ಕಾರ ಕೂಡ ಸಾಧನ .. ಜೊತೆಗೆ ಮನಸ್ಸು ಕೂಡ ಮುಖ್ಯ ....
ಮನಸ್ಸು ಒದ್ದೆ ಒದ್ದೆ ..... :))))))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...